Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಟು ಒಂದೇ- ಹಕ್ಕುಪತ್ರ ವಿತರಣೆ ಇಬ್ಬರಿಗೆ! ಸಾಲ‌ದಲ್ಲಿ ಕಟ್ಟಿದ್ದ ಮನೆ ಕಂಡವರ ಪಾಲು, ಮಾಲೀಕರ ಪಡಿಪಾಟಲು

ಕಷ್ಟಪಟ್ಟು ಕಟ್ಟಿದ್ದ ಮನೆ ಬೇರೆಯವರಿಗೆ ಮಾಡಿರುವುದನ್ನ ಕಂಡು ಸ್ಥಳೀಯರು ಆಕ್ರೋಶಗೊಂಡಿದ್ದಾರೆ. 2006 ರಲ್ಲೆ ಹಕ್ಕುಪತ್ರ ನೀಡಿ ಕಂದಾಯ ಕಟ್ಟಿದ್ದರು. ಇದೀಗ ತಹಶಿಲ್ದಾರ್, ಮತ್ತೊಬ್ಬರಿಗೆ ಹಕ್ಕುಪತ್ರ ನೀಡಿದ್ದಾರೆ.

ಸೈಟು ಒಂದೇ- ಹಕ್ಕುಪತ್ರ ವಿತರಣೆ ಇಬ್ಬರಿಗೆ! ಸಾಲ‌ದಲ್ಲಿ ಕಟ್ಟಿದ್ದ ಮನೆ ಕಂಡವರ ಪಾಲು, ಮಾಲೀಕರ ಪಡಿಪಾಟಲು
ಸೈಟು ಒಂದೇ- ಹಕ್ಕುಪತ್ರ ವಿತರಣೆ ಇಬ್ಬರಿಗೆ!
Follow us
ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​

Updated on:Aug 11, 2023 | 12:03 PM

ಯಲಹಂಕ -ಬೆಂಗಳೂರು, ಆಗಸ್ಟ್ 11: ಒಂದೇ ಸೈಟಿನ ಹಕ್ಕುಪತ್ರವನ್ನು ಇಬ್ಬರಿಗೆ ಎರೆಡೆರಡು ಬಾರಿ ವಿತರಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಾಲ‌ ಸೋಲ‌ ಮಾಡಿ ಕಟ್ಟಿದ್ದ ಮನೆ ಹಾಗೂ ಸೈಟ್ (Site) ಈಗ ಕಂಡವರ ಪಾಲಾಗುತ್ತಿದೆ. ಇದು ನೈಜ ಮಾಲೀಕರ ಪಡಿಪಾಟಲು. ದಶಕದಿಂದ ವಾಸಿಸುತ್ತಿರುವ ನಿವಾಸಿಗಳ ಮನೆ ಹಾಗೂ ಸೈಟ್ ಬೇರೆಯವರಿಗೆ ಮಂಜೂರು ಮಾಡಲಾಗಿದೆ. ಒಮ್ಮೆ ಹಕ್ಕುಪತ್ರ ‌ನೀಡಿ ಮಂಜೂರು ಮಾಡಿದ್ದರು. ಇದೀಗ ಮತ್ತೊಬ್ಬರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಯಲಹಂಕ ತಾಲೂಕಿನ (Yelahanka) ಮೇಡಿ ಅಗ್ರಹಾರ ಗ್ರಾಮದ ಸರ್ಕಾರಿ ಸೈಟ್ಗಳು ಗೋಲ್ ಮಾಲ್ (Illegal Site) ಆರೋಪ ಇದಾಗಿದೆ. ಹಣಕ್ಕಾಗಿ (Money) ಅಧಿಕಾರಿಗಳೇ (Tahsildar) ಬೇರೆಯವರಿಗೆ ಹಕ್ಕುಪತ್ರ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕಷ್ಟಪಟ್ಟು ಕಟ್ಟಿದ್ದ ಮನೆ ಬೇರೆಯವರಿಗೆ ಮಾಡಿರುವುದನ್ನ ಕಂಡು ಸ್ಥಳೀಯರು ಆಕ್ರೋಶಗೊಂದಿದ್ದಾರೆ. 2006 ರಲ್ಲೆ ಹಕ್ಕುಪತ್ರ ನೀಡಿ ಕಂದಾಯ ಕಟ್ಟಿದ್ದರು. ಇದೀಗ ತಹಶಿಲ್ದಾರ್, ಮತ್ತೊಬ್ಬರಿಗೆ ಹಕ್ಕುಪತ್ರ ನೀಡಿದ್ದಾರೆ. ಹೀಗಾಗಿ ಕಟ್ಟಿರುವ ಮನೆ ಹಾಗೂ ಸೈಟ್ ‌ನಮ್ಮದು ಅಂತ ಹಕ್ಕುಪತ್ರ ಪಡೆದವರಿಂದ ಗಲಾಟೆ ಶುರುವಾಗಿದೆ.

5 ರಿಂದ 10 ಲಕ್ಷ ರೂ ಹಣ ಪಡೆದು ಅಕ್ರಮವಾಗಿ ಹಕ್ಕುಪತ್ರ ಕೊಟ್ಟಿದ್ದಾರೆ ಅಂತ ನಿವಾಸಿಗಳು ಆರೋಪಿಸುತ್ತಿದ್ದಾರೆ. ಹಕ್ಕಪತ್ರಗಳನ್ನ ಕೈಯಲ್ಲಿ ಹಿಡಿದುಕೊಂಡು ಸ್ಥಳೀಯ ನಿವಾಸಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕಷ್ಟಪಟ್ಟು 2006 ರಲ್ಲಿ 12 ಸಾವಿರ ಹಣ ಕಟ್ಟಿ, ಹಕ್ಕುಪತ್ರ ಪಡೆದಿದ್ದೇವೆ. ಆದ್ರೆ ಇದೀಗ ಬೇರೆಯವರಿಗೆ ತಹಶಿಲ್ದಾರ್ ಮತ್ತೊಂದು ಹಕ್ಕುಪತ್ರ ‌ನೀಡಿದ್ದಾರೆ ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.

Also Read: ಕೆಂಪು ಸುಂದರಿ ಟೊಮ್ಯಾಟೋ ಬೆಲೆ ಕಳೆದುಕೊಳ್ಳುತ್ತಿದೆ! ಕಾರಣವೇನು ಗೊತ್ತಾ?

ಅನ್ಯಾಯಕ್ಕೊಳಗಾದ ಸ್ಥಳೀಯ ನಿವಾಸಿಗಳಿಗೆ ಇದರಿಂದ ನ್ಯಾಯ ಕೊಡಿಸುವಂತೆ ನಿವಾಸಿಗಳು ಒತ್ತಾಯ ಮಾಡುತ್ತಿದ್ದಾರೆ. ನ್ಯಾಯ ಕೊಡಿಸದಿದಲ್ಲಿ ನಿರಂತರ ಹೋರಾಟ ನಡೆಸುವುದಾಗಿ ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಮೇಡಿ ಅಗ್ರಹಾರ ಗ್ರಾ‌‌ಮದ ನಿವಾಸಿಗಳು ಎಚ್ಚರಿಕೆಯನ್ನೂ ನೀಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:02 pm, Fri, 11 August 23

ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?