AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಟು ಒಂದೇ- ಹಕ್ಕುಪತ್ರ ವಿತರಣೆ ಇಬ್ಬರಿಗೆ! ಸಾಲ‌ದಲ್ಲಿ ಕಟ್ಟಿದ್ದ ಮನೆ ಕಂಡವರ ಪಾಲು, ಮಾಲೀಕರ ಪಡಿಪಾಟಲು

ಕಷ್ಟಪಟ್ಟು ಕಟ್ಟಿದ್ದ ಮನೆ ಬೇರೆಯವರಿಗೆ ಮಾಡಿರುವುದನ್ನ ಕಂಡು ಸ್ಥಳೀಯರು ಆಕ್ರೋಶಗೊಂಡಿದ್ದಾರೆ. 2006 ರಲ್ಲೆ ಹಕ್ಕುಪತ್ರ ನೀಡಿ ಕಂದಾಯ ಕಟ್ಟಿದ್ದರು. ಇದೀಗ ತಹಶಿಲ್ದಾರ್, ಮತ್ತೊಬ್ಬರಿಗೆ ಹಕ್ಕುಪತ್ರ ನೀಡಿದ್ದಾರೆ.

ಸೈಟು ಒಂದೇ- ಹಕ್ಕುಪತ್ರ ವಿತರಣೆ ಇಬ್ಬರಿಗೆ! ಸಾಲ‌ದಲ್ಲಿ ಕಟ್ಟಿದ್ದ ಮನೆ ಕಂಡವರ ಪಾಲು, ಮಾಲೀಕರ ಪಡಿಪಾಟಲು
ಸೈಟು ಒಂದೇ- ಹಕ್ಕುಪತ್ರ ವಿತರಣೆ ಇಬ್ಬರಿಗೆ!
ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​|

Updated on:Aug 11, 2023 | 12:03 PM

Share

ಯಲಹಂಕ -ಬೆಂಗಳೂರು, ಆಗಸ್ಟ್ 11: ಒಂದೇ ಸೈಟಿನ ಹಕ್ಕುಪತ್ರವನ್ನು ಇಬ್ಬರಿಗೆ ಎರೆಡೆರಡು ಬಾರಿ ವಿತರಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಾಲ‌ ಸೋಲ‌ ಮಾಡಿ ಕಟ್ಟಿದ್ದ ಮನೆ ಹಾಗೂ ಸೈಟ್ (Site) ಈಗ ಕಂಡವರ ಪಾಲಾಗುತ್ತಿದೆ. ಇದು ನೈಜ ಮಾಲೀಕರ ಪಡಿಪಾಟಲು. ದಶಕದಿಂದ ವಾಸಿಸುತ್ತಿರುವ ನಿವಾಸಿಗಳ ಮನೆ ಹಾಗೂ ಸೈಟ್ ಬೇರೆಯವರಿಗೆ ಮಂಜೂರು ಮಾಡಲಾಗಿದೆ. ಒಮ್ಮೆ ಹಕ್ಕುಪತ್ರ ‌ನೀಡಿ ಮಂಜೂರು ಮಾಡಿದ್ದರು. ಇದೀಗ ಮತ್ತೊಬ್ಬರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಯಲಹಂಕ ತಾಲೂಕಿನ (Yelahanka) ಮೇಡಿ ಅಗ್ರಹಾರ ಗ್ರಾಮದ ಸರ್ಕಾರಿ ಸೈಟ್ಗಳು ಗೋಲ್ ಮಾಲ್ (Illegal Site) ಆರೋಪ ಇದಾಗಿದೆ. ಹಣಕ್ಕಾಗಿ (Money) ಅಧಿಕಾರಿಗಳೇ (Tahsildar) ಬೇರೆಯವರಿಗೆ ಹಕ್ಕುಪತ್ರ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕಷ್ಟಪಟ್ಟು ಕಟ್ಟಿದ್ದ ಮನೆ ಬೇರೆಯವರಿಗೆ ಮಾಡಿರುವುದನ್ನ ಕಂಡು ಸ್ಥಳೀಯರು ಆಕ್ರೋಶಗೊಂದಿದ್ದಾರೆ. 2006 ರಲ್ಲೆ ಹಕ್ಕುಪತ್ರ ನೀಡಿ ಕಂದಾಯ ಕಟ್ಟಿದ್ದರು. ಇದೀಗ ತಹಶಿಲ್ದಾರ್, ಮತ್ತೊಬ್ಬರಿಗೆ ಹಕ್ಕುಪತ್ರ ನೀಡಿದ್ದಾರೆ. ಹೀಗಾಗಿ ಕಟ್ಟಿರುವ ಮನೆ ಹಾಗೂ ಸೈಟ್ ‌ನಮ್ಮದು ಅಂತ ಹಕ್ಕುಪತ್ರ ಪಡೆದವರಿಂದ ಗಲಾಟೆ ಶುರುವಾಗಿದೆ.

5 ರಿಂದ 10 ಲಕ್ಷ ರೂ ಹಣ ಪಡೆದು ಅಕ್ರಮವಾಗಿ ಹಕ್ಕುಪತ್ರ ಕೊಟ್ಟಿದ್ದಾರೆ ಅಂತ ನಿವಾಸಿಗಳು ಆರೋಪಿಸುತ್ತಿದ್ದಾರೆ. ಹಕ್ಕಪತ್ರಗಳನ್ನ ಕೈಯಲ್ಲಿ ಹಿಡಿದುಕೊಂಡು ಸ್ಥಳೀಯ ನಿವಾಸಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕಷ್ಟಪಟ್ಟು 2006 ರಲ್ಲಿ 12 ಸಾವಿರ ಹಣ ಕಟ್ಟಿ, ಹಕ್ಕುಪತ್ರ ಪಡೆದಿದ್ದೇವೆ. ಆದ್ರೆ ಇದೀಗ ಬೇರೆಯವರಿಗೆ ತಹಶಿಲ್ದಾರ್ ಮತ್ತೊಂದು ಹಕ್ಕುಪತ್ರ ‌ನೀಡಿದ್ದಾರೆ ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.

Also Read: ಕೆಂಪು ಸುಂದರಿ ಟೊಮ್ಯಾಟೋ ಬೆಲೆ ಕಳೆದುಕೊಳ್ಳುತ್ತಿದೆ! ಕಾರಣವೇನು ಗೊತ್ತಾ?

ಅನ್ಯಾಯಕ್ಕೊಳಗಾದ ಸ್ಥಳೀಯ ನಿವಾಸಿಗಳಿಗೆ ಇದರಿಂದ ನ್ಯಾಯ ಕೊಡಿಸುವಂತೆ ನಿವಾಸಿಗಳು ಒತ್ತಾಯ ಮಾಡುತ್ತಿದ್ದಾರೆ. ನ್ಯಾಯ ಕೊಡಿಸದಿದಲ್ಲಿ ನಿರಂತರ ಹೋರಾಟ ನಡೆಸುವುದಾಗಿ ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಮೇಡಿ ಅಗ್ರಹಾರ ಗ್ರಾ‌‌ಮದ ನಿವಾಸಿಗಳು ಎಚ್ಚರಿಕೆಯನ್ನೂ ನೀಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:02 pm, Fri, 11 August 23

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!