ಬೆಂಗಳೂರಿನಲ್ಲಿ ಶೋ ರದ್ದಾದ ಬಳಿಕ ವಿಡಿಯೊ ಟ್ವೀಟ್ ಮಾಡಿದ ವೀರ್ ದಾಸ್; ಸಭಿಕರನ್ನು ನಂಬಿ ಎಂದ ಕಾಮಿಡಿಯನ್

ನಾನು ಈ ವಿಡಿಯೊವನ್ನು ನನ್ನ ಒಂದು ಕಾರ್ಯಕ್ರಮದ ನಂತರ ಮಾಡಿದ್ದೇನೆ. ನನಗೆ ಮಾಧ್ಯಮದಲ್ಲಿ ಅಥವಾ ಮುಖ್ಯಾಂಶಗಳಲ್ಲಿ ಕಾಣಿಸುವುದರಲ್ಲಿ ಆಸಕ್ತಿಯಿಲ್ಲ. ನಾನು ಒಬ್ಬ ಕಲಾವಿದ. ನಾನು ಸುದ್ದಿಯಲ್ಲಿ ಇರಬಾರದು.

ಬೆಂಗಳೂರಿನಲ್ಲಿ ಶೋ ರದ್ದಾದ ಬಳಿಕ ವಿಡಿಯೊ ಟ್ವೀಟ್ ಮಾಡಿದ ವೀರ್ ದಾಸ್; ಸಭಿಕರನ್ನು ನಂಬಿ ಎಂದ ಕಾಮಿಡಿಯನ್
ವೀರ್ ದಾಸ್
Edited By:

Updated on: Nov 10, 2022 | 8:59 PM

ಸ್ಟಾಂಡ್ಅಪ್ ಕಾಮಿಡಿನ್ ವೀರ್ ದಾಸ್ (Vir Das) ಅವರ ಕಾರ್ಯಕ್ರಮಗಳು ಹಿಂದೂ ಭಾವನೆಗಳನ್ನು ನೋಯಿಸುತ್ತದೆ ಮತ್ತು ಭಾರತವನ್ನು ಕೆಟ್ಟದಾಗಿ ಬಿಂಬಿಸುತ್ತದೆ  ಎಂದು ಹೇಳುವ ಬಲಪಂಥೀಯ ಸಂಘಟನೆಯ ಒತ್ತಡದ ನಂತರ ಬೆಂಗಳೂರಿನಲ್ಲಿ(Bangalore) ಪ್ರದರ್ಶನವನ್ನು ರದ್ದುಗೊಳಿಸಿದ್ದರು. ಇದಾದ ನಂತರ ವೀರ್ ದಾಸ್ ವಿಡಿಯೊವೊಂದನ್ನು ಬಿಡುಗಡೆ ಮಾಡಿ ಸಭಿಕರನ್ನು ನಂಬಿ ಎಂದು ಹೇಳಿದ್ದಾರೆ.  ನಾನು ಈ ವಿಡಿಯೊವನ್ನು ನನ್ನ ಒಂದು ಕಾರ್ಯಕ್ರಮದ ನಂತರ ಮಾಡಿದ್ದೇನೆ. ನನಗೆ ಮಾಧ್ಯಮದಲ್ಲಿ ಅಥವಾ ಮುಖ್ಯಾಂಶಗಳಲ್ಲಿ ಕಾಣಿಸುವುದರಲ್ಲಿ ಆಸಕ್ತಿಯಿಲ್ಲ. ನಾನು ಒಬ್ಬ ಕಲಾವಿದ. ನಾನು ಸುದ್ದಿಯಲ್ಲಿ ಇರಬಾರದು. ನನ್ನ ವಿಷಯದ ಬಗ್ಗೆ ಅನೇಕ ಊಹೆಗಳನ್ನು ಮಾಡಲಾಗಿದೆ. ನನ್ನ ಕಲೆ ಮತ್ತು ನನ್ನ ಪ್ರೇಕ್ಷಕರು ನನಗಾಗಿ ಮಾತನಾಡುತ್ತಾರೆ ಎಂದು ನಾನು ನಂಬುತ್ತೇನೆ. #TrustTheAudience” ಎಂದು ವೀರ್ ದಾಸ್ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯ ಒತ್ತಡದ ನಂತರ ಹೌಸ್‌ಫುಲ್ ಆಗಿದ್ದ ಬೆಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಶೋ ಆಯೋಜಕರು ಒತ್ತಾಯಿಸಿದರು. ಟಿಕೆಟ್‌ನ ಬೆಲೆ ಪ್ರತಿ ವ್ಯಕ್ತಿಗೆ ₹ 2,000-3,500 ರ ನಡುವೆ ಇತ್ತು. ಟಿಕೆಟ್ ಹೊಂದಿರುವ ಜನರಿಗೆ ಶೋ ಆಯೋಜಕರು ಮರುಪಾವತಿ ಮಾಡುತ್ತಾರೆ.

ಹಿಂದೂ ಜನಜಾಗೃತಿ ಸಮಿತಿಯು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಕಳೆದ ವರ್ಷ ಯುಎಸ್‌ನಲ್ಲಿ ವೈರಲ್ ಆದ “ಟು ಇಂಡಿಯಾಸ್” ಸ್ವಗತದಿಂದ ಭಾರಿ ಟೀಕೆ ಎದುರಿಸಿದ ಹಾಸ್ಯನಟ, ಇಂದು ಮಲ್ಲೇಶ್ವರಂನ ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮವನ್ನು ನಡೆಸಲು ಸಿದ್ಧರಾಗಿದ್ದರು.


ನಿಜವಾಗಿ ಏನಾಗುತ್ತದೆ ಎಂದರೆ, ಬಹಳಷ್ಟು ಬಾರಿ ಹಾಸ್ಯ ಕಾರ್ಯಕ್ರಮ ಬಂದಾಗ ಅದು ರದ್ದಾಗುತ್ತದೆ ಅಥವಾ ಪ್ರದರ್ಶನದಲ್ಲಿ ಏನಾಗುತ್ತದೆ ಎಂಬುದರ ಕುರಿತು ಜನರು ಊಹೆ ಮಾಡುತ್ತಾರೆ. ಪ್ರದರ್ಶನದಲ್ಲಿ ಏನಾಯಿತು ಎಂಬುದನ್ನು ಪ್ರೇಕ್ಷಕರೊಂದಿಗೆ ಯಾರೂ ಪರಿಶೀಲಿಸುವುದಿಲ್ಲ. ಇದು ನನ್ನ ಕಾರ್ಯಕ್ರಮವನ್ನು ಈಗಷ್ಟೇ ನೋಡಿದ ಪ್ರೇಕ್ಷಕರು ಎಂದು ವಿಡಿಯೊದಲ್ಲಿ ಸಭಿಕರ ಜತೆ ನಡೆಸಿರುವ ಸಂವಾದದ ವಿಡಿಯೊ ಶೇರ್ ಮಾಡಿದ್ದಾರೆ.
ವಿಡಿಯೊದಲ್ಲಿನ ಸಂವಾದದ ತುಣುಕು ಹೀಗಿದೆ.

ನಾವು ಇಂದು ರಾತ್ರಿ ಇಲ್ಲಿ ಯಾವುದಾದರೂ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡಿದ್ದೇವೆಯೇ, ”ಎಂದು ಅವರು ವಿಡಿಯೊದಲ್ಲಿ ಕೇಳುತ್ತಾರೆ.

“ಇಲ್ಲ” ಅಂತಾರೆ ಪ್ರೇಕ್ಷಕರು

“ನಾವು ಈ ರಾತ್ರಿ ಇಲ್ಲಿ ಯಾವುದೇ ನಿರ್ದಿಷ್ಟ ಸರ್ಕಾರ ಅಥವಾ ನಾಯಕನನ್ನು ಗುರಿಯಾಗಿಸಿಕೊಂಡಿದ್ದೇವೆಯೇ” ಎಂದು ಅವರು ಮತ್ತೆ ಕೇಳುತ್ತಾರೆ.

ಉತ್ತರ ಮತ್ತೆ ಅದೇ – ಇಲ್ಲ.

“ಈ ಪ್ರದರ್ಶನವು ಭಾರತವನ್ನು ಅವಮಾನಿಸಿದೆಯೇ ಅಥವಾ ನೀವು ಭಾರತೀಯರಾಗಿರಲು ನಾಚಿಕೆಪಡುವಂತೆ ಮಾಡಿದೆಯೇ?”

“ಇಲ್ಲ” ಎಂದು ಪ್ರೇಕ್ಷಕರು ಹೇಳುತ್ತಾರೆ.

Published On - 8:58 pm, Thu, 10 November 22