AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮೊದಲ ಪತ್ನಿ ಕಣ್ತಪ್ಪಿಸಿ 2ನೇ ಮದ್ವೆಯಾದ ಭೂಪ, ಸೀಮಂತ ಕಾರ್ಯಕ್ರಮದಲ್ಲಿ ನಡೆಯಿತು ಮಾರಾಮಾರಿ!

ವ್ಯಕ್ತಿಯೋರ್ವ ಮೊದಲ ಪತ್ನಿ ಕಣ್ತಪ್ಪಿಸಿ ಎರಡನೇ ಮದುವೆಯಾಗಿದ್ದ. ಈಗ ಸೀಮಂತ ಕಾರ್ಯಕ್ರಮ ಸಹ ನಡೆಯುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಮೊದಲ ಪತ್ನಿ ಕುಟುಂಬದವರು ಸ್ಥಳಕ್ಕೆ ತೆರಳಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಎರಡು ಕುಟುಂಬದ ಮಧ್ಯೆ ಮಾರಾಮಾರಿಯಾಗಿದೆ.

ಬೆಂಗಳೂರು:  ಮೊದಲ ಪತ್ನಿ ಕಣ್ತಪ್ಪಿಸಿ 2ನೇ ಮದ್ವೆಯಾದ ಭೂಪ, ಸೀಮಂತ ಕಾರ್ಯಕ್ರಮದಲ್ಲಿ ನಡೆಯಿತು ಮಾರಾಮಾರಿ!
TV9 Web
| Edited By: |

Updated on:Feb 09, 2023 | 4:40 PM

Share

ಬೆಂಗಳೂರು:  ಮೊದಲ ಸಂಗಾತಿ ಜೀವಂತವಾಗಿದ್ದರೂ ಆಕೆಗೆ ಜೀವನಾಂಶ ಕೊಡದೇ ನ್ಯಾಯಾಲಯದ ಮೂಲಕ ವಿಚ್ಛೇದನವನ್ನು ಪಡೆಯದೇ ಗಂಡು ಎರಡನೇ ಮದುವೆಯಾಗುವುದು ಕಾನೂನಿನ ಪ್ರಕಾರ ಅಪರಾಧ. ಹೀಗಿದ್ದರೂ ಸಹ ಬೆಂಗಳೂರಿನಲ್ಲಿ ಓರ್ವ ವ್ಯಕ್ತಿ ಮೊದಲ ಹೆಂಡತಿಯ ಡಿವೋರ್ಸ್ ಕೇಸ್ ಕೋರ್ಟ್​ನಲ್ಲಿ ನಡೆಯುತ್ತಿದ್ದರೂ ಎರಡನೇ ಮದುವೆಯಾಗಿದ್ದಾನೆ. ಹೌದು…ತೇಜಸ್ ಎನ್ನುವ ವ್ಯಕ್ತಿ ಮೊದಲ ಹೆಂಡತಿ ಕಣ್ತಪ್ಪಿಸಿ ಎರಡನೇ ಮದುವೆಯಾಗಿದ್ದು, ಇಂದು(ಫೆಬ್ರವರಿ 09) ಚಂದ್ರ ಲೇಔಟ್ ನಲ್ಲಿ 2ನೇ ಹೆಂಡ್ತಿಯ ಸೀಮಂತ ಕಾರ್ಯಕ್ರಮ ಸಹ ನಡೆದಿತ್ತು. ಈ ವಿಷಯ ತಿಳಿದ ಮೊದಲ ಹೆಂಡತಿ ಕುಟುಂಬದವರು ಸೀಮಂತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಪ್ರಶ್ನಿಸಿದ್ದಾರೆ. ಈ ವೇಳೆ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾಗಿದೆ.

ಎರಡನೇ ಮದುವೆ ವಿಚಾರ ತಿಳಿದು ಸೀಮಂತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಚೈತ್ರಾ ಕುಟುಂಬ ಮಹಿಳಾ ಸಂಘಟನೆಯೊಂದಿಗೆ ಹೋಗಿದೆ. ಈ ವೇಳೆ ತೇಜಸ್ ಮೊದಲ ಪತ್ನಿ ಹಾಗೂ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ.

ತೇಜಸ್ ಹಾಗೂ ಚೈತ್ರಾ 2018 ರಲ್ಲಿ ಮದುವೆ ಆಗಿದ್ದರು. ಆದ್ರೆ, ಮದುವೆ ತೇಜಸ್​ಗೆ ಬೇರೋಬ್ಬರ ಜೊತೆ ಅಕ್ರಮ ಸಂಬಂಧ ಇತ್ತು. ಎಂದು ಚೈತ್ರ ಹಾಗೂ ಅವರ ಕುಟುಂಬದವರು ಆರೋಪಿಸಿದ್ದಾರೆ. ಅಲ್ಲದೇ ಅಕ್ರಮ ಸಂಬಂದ ಪ್ರಶ್ನೆ ಮಾಡಿದ್ದಕ್ಕೆ ಈ ಹಿಂದೆ ತೇಜಸ್, ಪತ್ನಿ ಚೈತ್ರ ಮೇಲೆ ಹಲ್ಲೆ ಮಾಡಿದ್ದ. ಈಗ ಡಿವೋರ್ಸ್ ಕೇಸ್ ಕೋರ್ಟ್ ನಲ್ಲಿ ಬಾಕಿ ಇದೆ. ಆದರೂ ತೇಜಸ್ ಮತ್ತೊಬ್ಬಳ ಜೊತೆ ಮದುವೆ ಆಗಿದ್ದಾರೆ ಎಂದು ಮೊದಲ ಪತ್ನಿ ಚೈತ್ರಾ ಕುಟುಂಬದವರು ಪ್ರಶ್ನಿಸಿದ್ದಾರೆ. ಆದ್ರೆ, ತೇಜಸ್ ಕುಟುಂಬದವರು ಚೈತ್ರಾ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ.

ಮೊದಲ ಪತ್ನಿ ಹೇಳುವುದೇನು?

ಫೋಟೋ ತೆಗೆದುಕೊಳ್ಳಲು ಹೋದಾಗ ಹಲ್ಲೆ ನಡೆಸಿದ್ದಾರೆ. ತೇಜಸ್‌ನಿಂದ 4-5 ಹೆಣ್ಣುಮಕ್ಕಳ ಜೀವನ ಹಾಳಾಗಿದೆ. ಇಡೀ ಕುಟುಂಬವನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಅನ್ಯಾಯ ಮಾಡಿದ್ದಾರೆ, ನ್ಯಾಯಬೇಕಿದೆ. ಹುಡುಗಿ ಜೊತೆ ಓಡಾಡುವ ಫೋಟೋ ಸಿಕ್ಕಿತ್ತು. ಇದರ ಬಗ್ಗೆ ಪ್ರಶ್ನಿಸಿದಾಗ ಹಲ್ಲೆ ಮಾಡಿದ್ದ. ಹಣ, ಆಸ್ತಿ ಇದೆ ಎಂದು ತೇಜಸ್‌ ದರ್ಪ ತೋರುತ್ತಿದ್ದಾರೆ. ಮೇಘನಾ ಯಾದವ್‌ ಜೊತೆ 2ನೇ ಮದುವೆ ಆಗಿರುವುದಾಗಿ ಹೇಳಿದ್ರು. ವಿಜಯನಗರದಲ್ಲಿ ಮೇಘಾಶ್ರೀ ಇದಾಳೆ. ಆಕೆಯೂ ಗರ್ಭಿಣಿ. ಬಳಿಕ ಲೇಖನಾ ಎಂಬುವವರ ಜೊತೆ ಮೂರನೇ ಮದುವೆ ಆಗಿದ್ದರು. ಲೇಖನಾ ಸೀಮಂತ ಕಾರ್ಯಕ್ರಮ ವೇಳೆ ಹೋದಾಗ ಗಲಾಟೆ ನಡೆದಿದೆ ಎಂದು ಮೊದಲ ಪತ್ನಿ ಚೈತ್ರಾ ಸ್ಪಷ್ಟಪಡಿಸಿದರು.

Published On - 4:33 pm, Thu, 9 February 23

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು