AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ಕಾರನ್ನು ಇಲ್ಲಿ ನಿಲ್ಲಿಸಬೇಡಿ ಎಂದು ಕಾರಿನ ಗ್ಲಾಸ್​​ಗೆ ಅಂಟಿಸಿದ ಪತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬೆಂಗಳೂರಿನ ಜನ

ತಮ್ಮ ಮನೆಯ ಮುಂದೆ ಕಾರು ಪಾರ್ಕಿಂಗ್ ಮಾಡಬೇಡಿ ಎಂದು ಸಮಾಧಾನದಿಂದ ಮನವಿ ಮಾಡಿಕೊಳ್ಳುವ ನೋಟಿಸ್​​​ ವೈರಲ್​ ಆಗಿದೆ.

Viral Post: ಕಾರನ್ನು ಇಲ್ಲಿ ನಿಲ್ಲಿಸಬೇಡಿ ಎಂದು ಕಾರಿನ ಗ್ಲಾಸ್​​ಗೆ ಅಂಟಿಸಿದ ಪತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬೆಂಗಳೂರಿನ ಜನ
ವೈರಲ್​ ಫೋಟೋ
ಅಕ್ಷಯ್​ ಪಲ್ಲಮಜಲು​​
|

Updated on:Jun 29, 2023 | 1:44 PM

Share

ಬೆಂಗಳೂರು: ಈ ಬೆಂಗಳೂರಿನಲ್ಲಿ ಸಿಕ್ಕ ಸಿಕ್ಕಲ್ಲಿ ಪಾರ್ಕಿಂಗ್ ಮಾಡುವ ಜನರೇ ಇರುವುದು, ಇಲ್ಲಿ ಪಾರ್ಕಿಂಗ್ ಮಾಡಬೇಡಿ ಎಂದು ಬೋರ್ಡ್​ ಹಾಕಿದ್ರು, ಇದನ್ನು ಗಮನಿಸುವುದಿಲ್ಲ. ಅದು ಅನೇಕ ಬಾರಿ ಜಗಳಕ್ಕೂ ಕಾರಣವಾಗಿ, ಕೆಲವೊಂದು ಕಡೆ ಕೊಲೆಯೆ ಆಗಿದೆ. ಪಾರ್ಕಿಂಗ್ ವಿಚಾರದಲ್ಲಿ ಕಿತ್ತಾಡುವ ಜನರೇ ಹೆಚ್ಚು, ಒಂದು ಬಾರಿ ಯೋಚಿಸಿ, ತಮ್ಮ ಮನೆಯ ಮುಂದೆ ಹೀಗೆ ಪಾರ್ಕಿಂಗ್​​ ಮಾಡಬೇಡಿ ಎಂದು ಸಮಾಧಾನದಿಂದ ಹೇಳುವ ತಾಳ್ಮೆ ಈ ಬೆಂಗಳೂರಿನಲ್ಲಿ ಅನೇಕ ಜನರಿಗೆ ಇಲ್ಲ. ಈ ಕಾರಣಕ್ಕೆ ಜಗಳಕ್ಕೆ ಕಾರಣವಾಗುವುದು. ಪಾರ್ಕಿಂಗ್ ಮಾಡಿದ ವ್ಯಕ್ತಿ ನಮ್ಮ ಮುಂದೆ ಮಾತಾನಾಡಲು ಸಿಕ್ಕಿಲ್ಲ ಅಥವಾ ಮಾತನಾಡಲು ಮುಜುಗರ ಎಂದೆನಿಸಿದರೆ, ಒಂದು ವೇಳೆ ಮುಖಾಮುಖಿಯಾಗಿ ಅದು ಜಗಳಕ್ಕೆ ಕಾರಣವಾದರೆ ಎಂಬ ಆತಂಕವಿದ್ದರೆ ಹೀಗೆ ಮಾಡುಬಹುದು. ಅದು ಹೇಗೆ? ಇಲ್ಲಿದೆ ನೋಡಿ,  ಒಂದು ಟ್ವಿಟರ್​ ಪೋಸ್ಟ್, ಎಲ್ಲ ಕಡೆ ವೈರಲ್​​ ಆಗಿದೆ. ಇದಕ್ಕೆ ನೆಟ್ಟಿಗರು ಕೂಡ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಯ ಮುಂದೆ ಕಾರು ಪಾರ್ಕಿಂಗ್ ಮಾಡಬೇಡಿ ಎಂದು ಸಮಾಧಾನದಿಂದ ಮನವಿ ಮಾಡಿಕೊಳ್ಳುವ ನೋಟಿಸ್​​​ ವೈರಲ್​ ಆಗಿದೆ.

ನಮ್ಮ ಪಾರ್ಕಿಂಗ್ ಸ್ಥಳದಲ್ಲಿ ನಿಮ್ಮ ವಾಹನ ನಿಲ್ಲಿಸಬೇಡಿ ಎಂದು ಬೆಂಗಳೂರಿನ ನಿವಾಸಿಯೊಬ್ಬರಿಗೆ ನೆರೆಯವರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡಿದೆ. DevOps ಇಂಜಿನಿಯರ್ ಆಗಿರುವ ಸುಭಾಸಿಸ್ ದಾಸ್ ಅವರು ತಮ್ಮ ಕಾರಿನ ಗ್ಲಾಸ್​​ಗೆ ಅಂಟಿಸಿರುವ ನೋಟಿನ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.​

ಈ ಫೋಟೋ ಕೋರಮಂಗಲದಲ್ಲಿ ಕಂಡುಬಂದಿದೆ. ಬೆಂಗಳೂರು ಮಹಾಕಾವ್ಯದ ನಗರದ್ದು ಎಂದು ಸುಭಾಸಿಸ್ ದಾಸ್ ಟ್ವೀಟ್ ಮಾಡಿದ್ದಾರೆ. ಟ್ವಿಟರ್​ನಲ್ಲಿ ವೈರಲ್​​ ಆಗಿರುವ ನೋಟಿಸ್​​ನಲ್ಲಿ ಹೀಗೆ ಬರೆಯಲಾಗಿದೆ, ಹಾಯ್, ದಯವಿಟ್ಟು ನಿಮ್ಮ ಕಾರನ್ನು ಇಲ್ಲಿ ನಿಲ್ಲಿಸಬೇಡಿ! ನಾವು ಈ ಹಿಂದೆ ಇಲ್ಲಿ ಪಾರ್ಕಿಂಗ್ ಮಾಡಬೇಡಿ ಎಂದು ನಿಮ್ಮನ್ನು ವಿನಂತಿಸಿದ್ದೇವೆ. 2000ನೇ ಇಸವಿಯಿಂದ ನಾವು ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ ಮತ್ತು ನಮ್ಮಲ್ಲೂ 2 ಕಾರುಗಳು ಇದೆ, ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಆದ್ದರಿಂದ, ನಮಗೆ ಉತ್ತಮ ಪ್ರಮಾಣದ ಪಾರ್ಕಿಂಗ್ ಸ್ಥಳದ ಅಗತ್ಯವಿದೆ. ದಯವಿಟ್ಟು ನೀವು ಈ ಹಿಂದೆ ಪಾರ್ಕಿಂಗ್​​ ಮಾಡುತ್ತಿದ್ದ ಸ್ಪಾಟ್​​ನಲ್ಲಿಯೇ ಮಾಡಿ. ನಾವು ಒಳ್ಳೆಯವರಾಗಿರೋಣ ಮತ್ತು ಉತ್ತಮ ನೆರೆಹೊರೆಯವರಾಗಿರೋಣ ಧನ್ಯವಾದಗಳು, ಇಂತೀ ನಿಮ್ಮ ನೆರೆಹೊರೆಯವರು.

ಇದನ್ನೂ ಓದಿ: Mysore News: ಹೊಟ್ಟೆನೋವು ತಾಳಲಾರದೆ ಕೆರೆಗೆ ಹಾರಿ ಬಾಲಕಿ ಆತ್ಮಹತ್ಯೆ

ಈ ಬಗ್ಗೆ ಟ್ವಿಟರ್​ನಲ್ಲಿ​​ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಮೆಂಟ್​​ ಕೂಡ ಮಾಡಿದ್ದಾರೆ. ಇಲ್ಲಿ ಅನೇಕರ ಪಾರ್ಕಿಂಗ್​​ನಿಂದ ಅನುಭವಿಸಿದ ಕಿರಿಕಿರಿಯ ಬಗ್ಗೆ ಹಂಚಿಕೊಂಡಿದ್ದಾರೆ. ಕನಿಕಾ ಚೌಧರಿ ಬೆಂಗಳೂರು ಎಂಬುವವರು ಇದೊಂದು ಉತ್ತಮವಾಗಿದೆ ಎಂದು ಕಮೆಂಟ್​​ ಮಾಡಿದ್ದಾರೆ. ಇನ್ನೊಬ್ಬ ಟ್ವಿಟರ್​ ಬಳಕೆದಾರರಾದ ಅಂಕಿತ್ ಬೆರ್ರಿ ಅವರು ಇದೇ ರೀತಿಯ ಸಮಸ್ಯೆಯನ್ನು ನಾನು ಎದುರಿಸಿದೆ ಎಂಬ ಅನುಭವವನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:34 pm, Thu, 29 June 23

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ