AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namma Metro: ಸೋರುತಿಹುದು ಮೆಟ್ರೋ ಮಾಳಿಗೆ, ಕಾಡುಗೋಡಿ ಮೆಟ್ರೋ ನಿಲ್ದಾಣದ ಮೇಲ್ಛಾವಣಿ ಸೋರಿಕೆ; ವಿಡಿಯೋ ವೈರಲ್​​

ಹೊಸದಾಗಿ ಉದ್ಘಾಟನೆಗೊಂಡಿರುವ ಈ ಮೆಟ್ರೋ ನಿಲ್ದಾಣದ ಮೇಲ್ಛಾವಣಿಯಿಂದ ಮಳೆ ನೀರು ಸೋರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Namma Metro: ಸೋರುತಿಹುದು ಮೆಟ್ರೋ ಮಾಳಿಗೆ, ಕಾಡುಗೋಡಿ ಮೆಟ್ರೋ ನಿಲ್ದಾಣದ ಮೇಲ್ಛಾವಣಿ ಸೋರಿಕೆ; ವಿಡಿಯೋ ವೈರಲ್​​
ಕಾಡುಗೋಡಿ ಮೆಟ್ರೋ ನಿಲ್ದಾಣ ಮೇಲ್ಫಾವಣಿ ಸೋರಿಕೆ
ವಿವೇಕ ಬಿರಾದಾರ
|

Updated on: May 30, 2023 | 8:18 AM

Share

ಬೆಂಗಳೂರು: ಇದೇ ವರ್ಷ ಮಾರ್ಚ್​​ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಕೆಆರ್​ ಪುರಂ-ವೈಟ್​ಫೀಲ್ಡ್​​​ (KR Puram-Whitefield) ಹೊಸ ಮೆಟ್ರೋ (Metro) ಮಾರ್ಗವನ್ನು ಉದ್ಘಾಟಿಸಿದ್ದರು. ಇದೀಗ ಎರಡು ತಿಂಗಳ ನಂತರ, ಭಾನುವಾರ (ಮೇ.29) ಸಂಜೆ ಮಳೆಗೆ ಈ ಮಾರ್ಗದ ಕಾಡುಗೋಡಿ (Kadugodi) ಮೆಟ್ರೋ ನಿಲ್ದಾಣದ ಮೇಲ್ಛಾವಣಿ ಮಳೆ ಬಂದಾಗ ಸೋರಿಕೆಯಾಗಿದೆ. ಇದರಿಂದ ಪ್ರಯಾಣಿಕರು ಹರಸಾಹಸಪಟ್ಟರು. ಈ ಮೆಟ್ರೋ ನಿಲ್ದಾಣದ ಮೇಲ್ಛಾವಣಿಯಿಂದ ಮಳೆ ನೀರು ಸೋರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ಈ ವಿಡಿಯೋವನ್ನು ವೈಟ್‌ಫೀಲ್ಡ್ ರೈಸಿಂಗ್ ಕಮ್ಯೂನಿಟ್​​ ಗ್ರೂಪ್​ವೊಂದು ಟ್ವೀಟ್​ ಮಾಡಿದೆ. ವಿಡಿಯೋದಲ್ಲಿ ಪ್ಲ್ಯಾಟ್‌ಫಾರ್ಮ್‌ ಸೇರಿದಂತೆ ಇಡೀ ಮಹಡಿ ಮಳೆ ನೀರಿನಿಂದ ತುಂಬಿರುವುದನ್ನು ನೋಡಬಹುದಾಗಿದೆ. ಇನ್ನು ಪ್ರಯಾಣಿಕರು ಪ್ಲಾಟ್​​ಫಾರ್ಮ್​​ನಲ್ಲಿ ನಿಂತ ನೀರಿನಲ್ಲಿಯಲ್ಲೇ ನಿಂತು ಮೆಟ್ರೋ ಹತ್ತುವ ಮತ್ತು ಇಳಿಯವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಣ್ಣ ಮಳೆಗೆ ಈ ಪರೀಸ್ಥಿತಿ ಉದ್ಭವವಾದರೇ ಮುಂಬರುವ ಮುಂಗಾರಿನಲ್ಲಿ ಏನು ಗತಿಯೆಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.

ಇದನ್ನೂ ಓದಿ: Namma Metro: ಗುಡ್ ನ್ಯೂಸ್; ಡಿಸೆಂಬರ್​​​ ವೇಳೆಗೆ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು

ಮೆಟ್ರೋ ನಿಲ್ದಾಣ ಜಲಾವೃತ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ಚಾಲನೆ ನೀಡಿದ್ದ ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣ ಒಂದು ಮಳೆಗೆ ಜಲಾವೃತವಾಗಿತ್ತು. ಏಪ್ರಿಲ್ 04 ರಂದು ರಾತ್ರಿ ಸುರಿದ ಮಳೆಯಿಂದಾಗಿ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ ಹೊಚ್ಚ ಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನೀರು ತುಂಬಿಕೊಂಡಿತ್ತು. ಇದರಿಂದ ಪ್ರಯಾಣಿಕರು ಹರಸಾಹಸಪಟ್ಟಿದ್ದರು.

ಮೆಟ್ರೋ ನಿಲ್ದಾಣದಲ್ಲಿ ನೀರು ತುಂಬಿಕೊಂಡಿರುವ ವೀಡಿಯೋಗಳನ್ನು ಜನಪ್ರಿಯ ನಾಗರಿಕರ ಆಂದೋಲನ ವೈಟ್‌ಫೀಲ್ಡ್ ರೈಸಿಂಗ್ ಟ್ವಿಟರ್‌ನಲ್ಲಿ ಶೇರ್ ಮಾಡಿತ್ತು. ಹೊಚ್ಚಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಒಳಗೆ ಪ್ಲಾಟ್‌ಫಾರ್ಮ್‌ನಲ್ಲಿ ಹಾಗೂ ಟಿಕೆಟಿಂಗ್ ಕೌಂಟರ್ ಬಳಿ ನೀರು ತುಂಬಿತ್ತು. ಒಂದು ಮಳೆಗೆ ಹೀಗೆ ಸಂಪೂರ್ಣ ಜಲಾವೃತವಾಗಿದೆ ಎಂದು ಪರಿಸ್ಥಿತಿಯ ಬಗ್ಗೆ ತಿಳಿಸಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ