AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​: ಆಲಿಕಲ್ಲು ಮಳೆಗೆ ದಾಳಿಂಬೆ ಬೆಳೆ ಹಾನಿ, ಕಂಗಾಲಾದ ರೈತ ಸಹಾಯದ ನಿರೀಕ್ಷೆಯಲ್ಲಿ

ಆ ಜಿಲ್ಲೆಯ ಭೂಮಿ ಅಲ್ಲಿನ ಹವಾಮಾನ ಎಲ್ಲಾ ತೋಟಗಾರಿಕೆ ಬೆಳೆ ಬೆಳೆಯಲು ಸೂಕ್ತವಾಗಿದೆ. ಹೀಗಾಗಿಯೇ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಬೆಳೆಯುವ ಎಲ್ಲಾ ಬಗೆಯ ತೋಟಗಾಗರಿಕೆ ಬೆಳೆಯನ್ನ ಇಲ್ಲಿ ಬೆಳೆಯಲಾಗುತ್ತದೆ. ಆದರೆ, ಈ ವರ್ಷ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ದಾಳಿಂಬೆ ಬೆಳೆಸಿದ ರೈತ ಹೈರಾಣಾಗಿದ್ದು, ನಷ್ಟದ ಸುಳಿಯಲ್ಲಿ ಸಿಲುಕಿದ್ದಾನೆ.

ಬೀದರ್​: ಆಲಿಕಲ್ಲು ಮಳೆಗೆ ದಾಳಿಂಬೆ ಬೆಳೆ ಹಾನಿ, ಕಂಗಾಲಾದ ರೈತ ಸಹಾಯದ ನಿರೀಕ್ಷೆಯಲ್ಲಿ
ಬೀದರ್​ ದಾಳಿಂಬೆ ಬೆಳೆ ಹಾನಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 18, 2023 | 7:15 AM

ಬೀದರ್​: ಅಕಾಲಿಕ ಆಲಿಕಲ್ಲು ಮಳೆಗೆ ದಾಳಿಂಬೆ(Pomegranate)ಬೆಳೆಗಾರ ಕಂಗಾಲು, ಆಲಿಕಲ್ಲು ಮಳೆಯಿಂದಾಗಿ ದಾಳಿಂಬೆ ಬೆಳೆಗೆ ಅಂಟಿದ ರೋಗ, ಬೆಳೆ ಕುಂಟಿತ. ಗಿಡದಿಂದ ಕಾಯಿಗಳನ್ನ ಕಿತ್ತುಕೊಂಡು ಬಿಸಾಕುತ್ತಿರುವ ರೈತ. ಹೌದು ದಾಳಿಂಬೆ ಬೆಳೆ ಕೆಲವು ರೈತರನ್ನ ಕೈ ಹಿಡಿದರೆ ಇನ್ನೂ ಕೆಲವು ರೈತರನ್ನ ಪ್ರಪಾತಕ್ಕೆ ತಳ್ಳಿದೆ. ಜಿಲ್ಲೆಯಲ್ಲಿ ಇನ್ನೂರು ಹೆಕ್ಟರ್​ಗೂ ಅಧಿಕ ದಾಳಿಂಬೆಯನ್ನ ಇಲ್ಲಿ ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆದ ಪಕ್ಕದ ತೆಲಂಗಾಣ ಹೈದ್ರಾಬಾದ್ ರಾಜ್ಯಕ್ಕೆ ಮಾರಾಟವಾಗುತ್ತಿದ್ದು, ದಾಳಿಂಬೆಗೆ ಭಾರೀ ಪ್ರಮಾಣದ ಬೇಡಿಕೆ ಇದೆ. ಇನ್ನು ಈ ವರ್ಷ ಬೆಸಿಗೆಯ ಅವಧಿಯಲ್ಲಿಯೇ ಆಲಿಕಲ್ಲು ಮಳೆಯಾಗಿದ್ದರಿಂದ ದಾಳಿಂಬೆ ಕಾಯಿಗೆ ಹೊಡೆತ ಬಿದ್ದಿದೆ. ಇದರಿಂದ ದಾಳಿಂಬೆಗೆ ರೋಗ ಅಂಟಿಕೊಂಡಿದ್ದು, ಕಾಯಿ ಒಡೆದು ರಸ ಸೋರುತ್ತಿದೆ. ಈ ಕಾರಣ ಒಂದು ಗಿಡದಲ್ಲಿ ಹತ್ತರಿಂದ ಇಪ್ಪತ್ತು ಕಾಯಿಗಳು ಕೆಟ್ಟು ಹೋಗಿದ್ದು ಅಂತಹ ಕಾಯಿಗಳನ್ನ ಗಿಡದಿಂದ ಬಿಡಿಸಿ ಬಿಸಾಕಲಾಗುತ್ತಿದೆ. ಇದು ಸಹಜವಾಗಿಯೇ ರೈತರಿಗೆ ಭಾರೀ ನಷ್ಟವನ್ನುಂಟು ಮಾಡಿದ್ದು, ವರ್ಷದಿಂದ ಗಿಡಕ್ಕೆ ಸಿಂಪಡಿಸಿದ ಔಷಧಿ, ಅದನ್ನ ನಿರ್ವಹಣೆ ಮಾಡಿದ ಹಣ ಕೂಡ ಬಾರದಂತಾಗಿದ್ದು, ಎಕರೆಗೆ ಎರಡು ಲಕ್ಷದವರೆಗೂ ನಷ್ಟವಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ನಾನು ಐದು ವರ್ಷದಿಂದ ದಾಳಿಂಬೆ ಕೃಷಿಯಲ್ಲಿ ತೊಡಗಿಕೊಂಡಿದ್ದೇನೆ ಆದರೆ ಈ ವರ್ಷ ಮಾತ್ರ ದಾಳಿಂಬೆ, ಮಳೆಯಿಂದಾಗಿ ಕಾಯಿಗೆ ರೋಗ ಅಂಟಿಕೊಂಡಿದೆ. ಕಾಯಿಗಳು ಕೊಳತು ಹೋಗಿದ್ದು, ನಮಗೆ ಮತ್ತೆ ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ ಎಂದು ದಾಳಿಂಬೆ ಬೆಳೆಗಾರ ರೈತರು ಹೇಳುತ್ತಿದ್ದಾರೆ.

ಹಲವಾರು ರೋಗಗಳಿಗೆ ದಾಳಿಂಬೆ ಅದರ ಸಿಪ್ಪೆ ಮದ್ದಾಗಿರುವುದರಿಂದ ಜತೆಗೆ ರೋಗ ನಿರೋದಕ ಶಕ್ತಿಯನ್ನ ಹೊಂದಿರುವ ಕೆಂಪು ಮಣ್ಣು ಇರೋದ್ರಿಂದಾಗಿ ಜಿಲ್ಲೆಯಲ್ಲಿ ಬೆಳೆಸಿದ ದಾಳಿಂಬೆಗೆ ಮಾರುಕಟ್ಟೆಗೆ ಬೇಡಿಕೆ ಜಾಸ್ತಿಯಿದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಬೀದರ್ ಜಿಲ್ಲೆಯಲ್ಲಿ ದಾಳಿಂಬೆ ಬೆಳೆಯುವ ರೈತರ ಸಂಖ್ಯೆ ಕಡಿಯಿದ್ದರೂ ಕೂಡ ಇಲ್ಲಿನ ರೈತರು ದಾಳಿಂಬೆಯಿಂದ ಅತ್ಯಧಿಕ ಲಾಭ ಗಳಿಸುತ್ತಿದ್ದಾರೆ. ಆದರೆ, ಈ ವರ್ಷ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ರೈತರಿಗೆ ನಷ್ಟವನ್ನುಂಟು ಮಾಡಿದೆ. ಅದರಲ್ಲಿ ವಿಶೇಷವಾಗಿ ಜಿಲ್ಲೆಯ ಭಾಲ್ಕಿ ತಾಲೂಕಿನ ಏಣಕೂರು ಗ್ರಾಮದ ರೈತ ರಾಜಕುಮಾರ್ ಅವರು ಕಳೆದ 15 ವರ್ಷದಿಂದ ದಾಳಿಂಬೆಯನ್ನ ಬೆಳೆಸುತ್ತಿದ್ದಾರೆ. ದಾಳಿಂಬೆ ಬೆಳೆಯಿಂದಲೇ ಅತ್ಯಧಿಕ ಲಾಭವನ್ನ ಕೂಡ ಗಳಿಸುತ್ತಿದ್ದಾರೆ. ಆದರೆ, ತನ್ನ ಹದಿನೈದು ವರ್ಷದ ಅವಧಿಯಲ್ಲಿ ಈ ವರ್ಷ ಮಾತ್ರ ನನಗೆ ಮಳೆಯಿಂದಾಗಿ ದಾಳಿಂಬೆ ಬೆಳೆ ಹಾಳಾಗಿದೆ. ಹೀಗಾಗಿ ನನಗೆ ನಷ್ವವಾಗಿದ್ದು, ಈ ನಷ್ಷವನ್ನ ಯಾರು ತುಂಬುಕೊಡುತ್ತಾರೆಂದು ರೈತ ಅವಲತ್ತುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:Pomegranate Benefits: ರಕ್ತದೊತ್ತಡವಿರುವವರು ನಿತ್ಯ ಎಷ್ಟು ದಾಳಿಂಬೆ ಹಣ್ಣನ್ನು ತಿಂದರೆ ಸಮಸ್ಯೆ ಕಡಿಮೆ ಮಾಡಬಹುದು?

ಮಳೆಯಿಂದಾಗಿ ದಾಳಿಂಬೆ ಕಜ್ಜಿ ರೋಗಕ್ಕೆ ತುತ್ತಾಗಿ ಗಿಡದಲ್ಲಿ 30 ರಿಂದ 40 ಹಣ್ಣುಗಳು ಬಿಟ್ಟಿದ್ದವು. ಆದರೆ, ಈ ರೋಗದಿಂದ ಹಣ್ಣುಗಳೆಲ್ಲ ಒಡೆದುಹೋಗಿವೆ. ಇದರಿಂದ ಗಿಡದಲ್ಲಿರುವ ಎಲ್ಲ ಹಣ್ಣುಗಳನ್ನ ಕಿತ್ತು ಹಳ್ಳದಲ್ಲಿ ಸುರಿಯುವಂತಾ ಪರಿಸ್ಥಿತಿ ಎದುರಾಗಿದೆ. ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಹಣುಗಳನ್ನ ಹಳ್ಳದಲ್ಲಿ ಸುರಿದಿದ್ದೇವೆ. ನಮ್ಮ ಸಮಸ್ಯೆಯನ್ನ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಅರ್ಥ್​ಮಾಡಿಕೊಂಡರೆ ಒಳ್ಳೆಯದೆಂದು ಇಲ್ಲಿನ ರೈತರು ಎಚ್ಚರಿಸಿದ್ದಾರೆ. ಇನ್ನು ರೈತರ ನಷ್ಟಕ್ಕೆ ಸರಕಾರ ಕೂಡ ಸ್ಪಂದಿಸಬೇಕಿದೆ. ಯಾಕೆಂದ್ರೆ, ಕಳೆದ ವರ್ಷ ಕೂಡ ಬೀದರ್ ಜಿಲ್ಲೆಯಾದ್ಯಂತ ಆಲಿಕಲ್ಲು ಮಳೆ ಬಿದ್ದು ಕೋಟ್ಯಾಂತರ ರೂ ಬೆಳೆ ನಾಶವಾಗಿತ್ತು. ಆಗ ಕೂಡ ಮಳೆ ಮತ್ತು ಬಿರುಗಾಳಿ ರೈತನ ಬಾಳಲ್ಲಿ ಆಟವಾಡಿತ್ತು. ಈ ನಷ್ಟ ಪರಿಹಾರ ನೀಡುವಲ್ಲಿ ಸರಕಾರ ಕೂಡ ವಿಫಲವಾಗಿತ್ತು. ಆ ನಷ್ಟದ ಪರಿಹಾರ ಬಹುಭಾಗ ರೈತರಿಗೆ ಸಿಕ್ಕಿಲ್ಲ. ಸರಕಾರ ಸೂಕ್ತ ಸಂಧರ್ಭದಲ್ಲಿ ಪರಿಹಾರ ನೀಡಿ ರೈತನ ಕಣ್ಣೀರು ಒರೆಸುವ ಕಾರ್ಯ ಮಾಡಬೇಕಾಗಿದೆ.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್