ಮಡಿವಾಳ ವಿಧಿವಿಜ್ಞಾನ ಲ್ಯಾಬ್​ನಲ್ಲಿ ಸ್ಫೋಟ, 5 ವಿಜ್ಞಾನಿಗಳಿಗೆ ಗಾಯ

ಬೆಂಗಳೂರು: ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಡೆಟೋನೇಟರ್ ಸ್ಫೋಟಗೊಂಡಿದೆ. 9 ಜೀವಂತ ಡೆಟೋನೇಟರ್​ಗಳ ಪರಿಶೀಲನೆ ವೇಳೆ ಈ ಸ್ಫೋಟ ಸಂಭವಿಸಿದ್ದು, 9 ಜೀವಂತ ಡೆಟೋನೇಟರ್​ಗಳ ಪೈಕಿ 1 ಡೆಟೋನೇಟರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಎಫ್​ಎಸ್​ಎಲ್​ನಲ್ಲಿದ್ದ ಐವರು ವಿಜ್ಞಾನಿಗಳಿಗೆ ಗಾಯಗಳಾಗಿವೆ. ಗಾಯಗೊಂಡ ವಿಜ್ಞಾನಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಭೇಟಿ ನೀಡಿದ್ದು, ಮಡಿವಾಳ ಎಸಿಪಿ ಕರಿಬಸವನಗೌಡ ಹಾಗೂ ಪೊಲೀಸರು ದೌಡಾಯಿಸಿದ್ದಾರೆ. 25 ಗ್ರಾಂನಷ್ಟು ಸ್ಪೋಟಕ: […]

ಮಡಿವಾಳ ವಿಧಿವಿಜ್ಞಾನ ಲ್ಯಾಬ್​ನಲ್ಲಿ ಸ್ಫೋಟ, 5 ವಿಜ್ಞಾನಿಗಳಿಗೆ ಗಾಯ
ಸಾಧು ಶ್ರೀನಾಥ್​

Updated on: Nov 29, 2019 | 5:47 PM

ಬೆಂಗಳೂರು: ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಡೆಟೋನೇಟರ್ ಸ್ಫೋಟಗೊಂಡಿದೆ. 9 ಜೀವಂತ ಡೆಟೋನೇಟರ್​ಗಳ ಪರಿಶೀಲನೆ ವೇಳೆ ಈ ಸ್ಫೋಟ ಸಂಭವಿಸಿದ್ದು, 9 ಜೀವಂತ ಡೆಟೋನೇಟರ್​ಗಳ ಪೈಕಿ 1 ಡೆಟೋನೇಟರ್ ಸ್ಫೋಟಗೊಂಡಿದೆ.

ಘಟನೆಯಲ್ಲಿ ಎಫ್​ಎಸ್​ಎಲ್​ನಲ್ಲಿದ್ದ ಐವರು ವಿಜ್ಞಾನಿಗಳಿಗೆ ಗಾಯಗಳಾಗಿವೆ. ಗಾಯಗೊಂಡ ವಿಜ್ಞಾನಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಭೇಟಿ ನೀಡಿದ್ದು, ಮಡಿವಾಳ ಎಸಿಪಿ ಕರಿಬಸವನಗೌಡ ಹಾಗೂ ಪೊಲೀಸರು ದೌಡಾಯಿಸಿದ್ದಾರೆ.


25 ಗ್ರಾಂನಷ್ಟು ಸ್ಪೋಟಕ:
ಕೆಮಿಸ್ಟ್ರಿ ವಿಭಾಗದಲ್ಲಿ 25 ಗ್ರಾಂ ಸ್ಪೋಟಕ ಸಿಡಿದಿದೆ. ಇದರ ಪರಿಣಾಮ ದಲಾಯಿ ಸೇರಿದಂತೆ ಅಲ್ಲಿದ್ದವರಿಗೆ ಗಾಯಾವಾಗಿದೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಡಿಜಿಪಿ ಪರಶಿವಮೂರ್ತಿ ತಿಳಿಸಿದ್ದಾರೆ.

ಘಟನೆಯಲ್ಲಿ ಸೀನಿಯರ್ ಸೈಂಟಿಫಿಕ್ ಅಫೀಸರ್ ಬೆರಳಿಗೆ ಗಾಯ:
ರಾಯಚೂರು ಪಶ್ಚಿಮ‌ವಲಯದಿಂದ ಸ್ಪೋಟಕ ಬಂದಿತ್ತು. ಕೆಮಿಸ್ಟ್ರಿ ಲ್ಯಾಬ್ ನಲ್ಲಿ ಅನಾಲಿಸಿಸ್ ಮಾಡವಾಗ ಘಟನೆ ನಡೆದಿದೆ. ವಾಣಿ, ನವ್ಯ, ವಿಶ್ವನಾಥ್, ಶ್ರೀನಾಥ್, ಆಂಥೋಣಿ ಪ್ರಭು ದಲಾಯತ್, ಐವರು ವಿಜ್ಞಾನಿಗಳು ಸೇರಿದಂತೆ 7 ಜನರಿಗೆ ಗಾಯಗಳಾಗಿವೆ. ಇದೇ ಮೊದಲ ಬಾರಿ ಇಂತಹ ಘಟನೆ ನಡೆದಿದೆ.

ಸೀನಿಯರ್ ಸೈಂಟಿಫಿಕ್ ಅಫೀಸರ್ ಶ್ರೀನಾಥ್ ಬೆರಳಿಗೆ ಗಾಯವಾಗಿದೆ. ಸ್ಫೋಟಕ ಟಿಎಟಿಪಿ (ಟಾಯಸಿಟನ್ ಟ್ರಯಾಪೆರಾಸೈಟ್) ಇರಬಹುದೆಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಬೇಕಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

Published On - 3:43 pm, Fri, 29 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us