ಸಾವಿರಾರು ಕಾರ್ಮಿಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಬಿಎಂಟಿಸಿ ಸಂಸ್ಥೆ..?

ಬೆಂಗಳೂರು: ತನ್ನ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಹಾಗೂ ವಿಮೆ ಹಣಕ್ಕೆ ಬಿಎಂಟಿಸಿ ಕನ್ನ ಹಾಕಿದೆಯಾ..? ಚಾಲಕ, ನಿರ್ವಾಹಕ ಸೇರಿ ಸಿಬ್ಬಂದಿ ಕಷ್ಟಪಟ್ಟಿದ್ದ ಹಣ ಖೋತಾ ಆಗಿದೆಯಾ..? ಎಂಬ ಅನುಮಾನಗಳು ಸಿಬ್ಬಂದಿಗೆ ಕಾಡತೊಡಗಿವೆ. ಏಕೆಂದ್ರೆ ಪಿಎಫ್ ಬಾಬತ್ತಿಗೆಂದು ಸಂಬಳದಲ್ಲಿ ಕಟ್​ ಮಾಡಿದ ಹಣವನ್ನು ಬಿಎಂಟಿಸಿ ಪಿಎಫ್​​ ಸಂಸ್ಥೆಗೆ ಕಟ್ಟಿಲ್ಲ ಎನ್ನಲಾಗಿದೆ. ಮಾಹಿತಿ ಹಕ್ಕು ಮೂಲಕ ಬಿಎಂಟಿಸಿ ಸಂಸ್ಥೆಯ ಈ ವಂಚನೆ ಬಯಲಿಗೆ ಬಂದಿದೆ. ಸುಮಾರು 200 ಕೋಟಿ ರೂಪಾಯಿ ಹಣ ಪಾವತಿಸದೆ, ಬಿಎಂಟಿಸಿ ಸಂಸ್ಥೆ ಸಿಬ್ಬಂದಿಯ […]

ಸಾವಿರಾರು ಕಾರ್ಮಿಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಬಿಎಂಟಿಸಿ ಸಂಸ್ಥೆ..?
ಸಾಧು ಶ್ರೀನಾಥ್​

Updated on: Sep 16, 2019 | 12:08 PM

ಬೆಂಗಳೂರು: ತನ್ನ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಹಾಗೂ ವಿಮೆ ಹಣಕ್ಕೆ ಬಿಎಂಟಿಸಿ ಕನ್ನ ಹಾಕಿದೆಯಾ..? ಚಾಲಕ, ನಿರ್ವಾಹಕ ಸೇರಿ ಸಿಬ್ಬಂದಿ ಕಷ್ಟಪಟ್ಟಿದ್ದ ಹಣ ಖೋತಾ ಆಗಿದೆಯಾ..? ಎಂಬ ಅನುಮಾನಗಳು ಸಿಬ್ಬಂದಿಗೆ ಕಾಡತೊಡಗಿವೆ.

ಏಕೆಂದ್ರೆ ಪಿಎಫ್ ಬಾಬತ್ತಿಗೆಂದು ಸಂಬಳದಲ್ಲಿ ಕಟ್​ ಮಾಡಿದ ಹಣವನ್ನು ಬಿಎಂಟಿಸಿ ಪಿಎಫ್​​ ಸಂಸ್ಥೆಗೆ ಕಟ್ಟಿಲ್ಲ ಎನ್ನಲಾಗಿದೆ. ಮಾಹಿತಿ ಹಕ್ಕು ಮೂಲಕ ಬಿಎಂಟಿಸಿ ಸಂಸ್ಥೆಯ ಈ ವಂಚನೆ ಬಯಲಿಗೆ ಬಂದಿದೆ.

ಸುಮಾರು 200 ಕೋಟಿ ರೂಪಾಯಿ ಹಣ ಪಾವತಿಸದೆ, ಬಿಎಂಟಿಸಿ ಸಂಸ್ಥೆ ಸಿಬ್ಬಂದಿಯ ಪಿಎಫ್​, ವಿಮೆ ಹಣ ಬಳಸಿಕೊಂಡಿದೆ. ಕಳೆದ ಫೆಬ್ರವರಿ ತಿಂಗಳಿನಿಂದ ಕಾರ್ಮಿಕರ ಎಲ್​ಐಸಿ ಹಣ ಪಾವತಿಸಿಲ್ಲ. ಎಲ್ಐಸಿಯಿಂದ 35 ಸಾವಿರ ಕಾರ್ಮಿಕರಿಗೆ ಮೊಬೈಲ್ ಸಂದೇಶ ರವಾನೆಯಾಗಿದ್ದು, ಎಲ್ಐಸಿ ಪ್ರೀಮಿಯಂ ಲ್ಯಾಪ್ಸ್ ಆಗಿದೆ ಎಂದು ಕಾರ್ಮಿಕರಿಗೆ ತಿಳಿಸಿದೆ. ನಿಮ್ಮ ಸಂಸ್ಥೆಗೆ ಹಣ ಪಾವತಿಸಲು ಸೂಚಿಸಿ ಎಂದು ಎಲ್​​ಐಸಿ ಮಾಹಿತಿ ನೀಡಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us