ಸರವನ್ನು ಎಗರಿಸಿ ಕಳ್ಳ ಪರಾರಿ
ಕೋಲಾರ: ಮಹಿಳೆಯ ಚಿನ್ನದ ಸರವನ್ನು ಎಗರಿಸಿ ಕಳ್ಳ ಪರಾರಿಯಾಗಿರುವ ಘಟನೆ ಕೋಟೆ ಬಡಾವಣೆಯಲ್ಲಿ ನಡೆದಿದೆ. ವಾಯುವಿಹಾರಕ್ಕೆ ಬಂದಿದ್ದ ಅಖಿಲಾ ಎಂಬುವವರ 60 ಗ್ರಾಂ ಚಿನ್ನದ ಸರವನ್ನು ಕದ್ದು ಕಳ್ಳ ಪರಾರಿಯಾಗಿದ್ದಾನೆ. ಸರಗಳ್ಳನನ್ನು ಸ್ಥಳೀಯರು ಸುತ್ತುವರಿದರು ಕಳ್ಳ ತಕ್ಷಣ ಬೈಕ್ ಹಾಗೂ ಕೃತ್ಯಕ್ಕ ಬಳಸಿದ್ದ ಚಾಕು ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಕೆಂಗನಹಳ್ಳಿ ಗ್ರಾಮದಲ್ಲಿ ಹಾಡುಹಗಲೇ ಮನೆಯ ಬಾಗಿಲನ್ನು ಮುರಿದು ಕಳ್ಳತನ ಎಸಗಿದ್ದಾರೆ. ಚನ್ನಬಸವ ಅವರಿಗೆ ಸೇರಿದ ಮನೆಯಲ್ಲಿ 20 ಗ್ರಾಂ ಚಿನ್ನಾಭರಣ, 10 ಸಾವಿರ ನಗದು ಸೇರಿದಂತೆ ಮನೆಯಲ್ಲಿದ್ದ ಟಿವಿ ಕಳವು ಆಗಿದೆ. ಹಾಡುಹಗಲೇ ಕಳ್ಳತನಕ್ಕೆ ಗ್ರಾಮಸ್ಥರು ಪೋಲಿಸರ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ
ಲಸಿಕೆ ಪಡೆದಿದ್ದರೂ ಸೋಂಕು ಬಂತು; ದೊಡ್ಡ ಚರ್ಚೆ ಹುಟ್ಟುಹಾಕಿತು ವೈದ್ಯರು ಹೇಳಿದ ಧೈರ್ಯದ ಮಾತು
(CCB Police arrested three people from West Bengal who were involved in prostitution At bengaluru)