chamarajanagara: ಕುದಿಯುವ ಎಣ್ಣೆಯಿಂದ ಬರಿಗೈಲಿ ಕಜ್ಜಾಯ ತೆಗೆದ ಅರ್ಚಕ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿಯಲ್ಲಿ ನಡೆದ ಜಾತ್ರೆಯಲ್ಲಿ ಸುಮಾರು 2 ಗಂಟೆಗಳ ಕಾಲ ಕಾದ ಎಣ್ಣೆಗೆ ಭಕ್ತರು ಕಜ್ಜಾಯವನ್ನು ಹಾಕುತ್ತಾರೆ. ಹಾಕಿದ ಕಜ್ಜಾಯವನ್ನು ಅರ್ಚಕರು ಕುದಿಯುವ ಎಣ್ಣೆಯಿಂದ ಬರಿಗೈಲಿ ತೆಗೆದಿದ್ದಾರೆ.

chamarajanagara: ಕುದಿಯುವ ಎಣ್ಣೆಯಿಂದ ಬರಿಗೈಲಿ ಕಜ್ಜಾಯ ತೆಗೆದ ಅರ್ಚಕ
ಎಣ್ಣೆಯಲ್ಲಿ ಕಜ್ಜಾಯ ತೆಗೆಯುವ ದೃಶ್ಯ
Edited By:

Updated on: Nov 21, 2022 | 12:47 PM

ಚಾಮರಾಜನಗರ: ಪ್ರತಿ ವರ್ಷ ಕೊನೆಯ ಕಾರ್ತಿಕ ಸೋಮುವಾರದಂದು ಸಿದ್ದಪ್ಪಾಜೀ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಅನೇಕ ಭಾಗಗಳಿಂದ ಜನರು ಬಂದು ಆರ್ಶಿವಾದ ಪಡೆದು ದೇವರ ಕೃಫೆಗೆ ಪಾತ್ರರಾಗುತ್ತಾರೆ. ಇಂದು(ನ.21) ಬೆಳ್ಳಂಬೆಳಗ್ಗೆ ನಡೆದ ಸಾವಿರಾರು ಜನರ ಸಮ್ಮುಖದಲ್ಲಿ ಅರ್ಚಕ ಸಿದ್ದರಾಜು ಎಂಬುವವರು ಕುದಿಯುವ ಎಣ್ಣೆಗೆ ಕೈ ಹಾಕಿ ಕಜ್ಹಾಯ ತೆಗೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೈನವಿರೇಳಿಸುವ ಘಟನೆಗೆ ಸಾಕ್ಷಿಯಾದ ನೂರಾರು ಭಕ್ತರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Mon, 21 November 22