AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ಅರಣ್ಯಾಧಿಕಾರಿಯ ಪ್ರತಿಷ್ಠೆಗೆ ಜನ ಕಂಗಾಲು, ಬಡ ಗ್ರಾಮಸ್ಥರಿಗೆ ಕಾಡುಮೇಡಿನ ದುರ್ಗಮ ಹಾದಿಯೇ ಗತಿ!

ದೈನಂದಿನ ಕೆಲಸ ಕಾರ್ಯಗಳಿಗೆ ಮಹದೇಶ್ವರ ಬೆಟ್ಟಕ್ಕೆ ಕಿಲೋಮೀಟರ್ ‌ಗಟ್ಟಲೆ ಬೆಟ್ಟಗುಡ್ಡ ಹತ್ತಿ ಇಳಿದು ಸಾಗಬೇಕು. ಕಾಡು ಪ್ರಾಣಿಗಳು ದಾಳಿ ನಡೆಸುವ ಆತಂಕದಲ್ಲೇ ನಡೆಯಬೇಕು.

ಚಾಮರಾಜನಗರ: ಅರಣ್ಯಾಧಿಕಾರಿಯ ಪ್ರತಿಷ್ಠೆಗೆ ಜನ ಕಂಗಾಲು, ಬಡ ಗ್ರಾಮಸ್ಥರಿಗೆ ಕಾಡುಮೇಡಿನ ದುರ್ಗಮ ಹಾದಿಯೇ ಗತಿ!
ಅರಣ್ಯಾಧಿಕಾರಿಯ ಪ್ರತಿಷ್ಠೆಗೆ ಜನ ಕಂಗಾಲು
TV9 Web
| Updated By: ಸಾಧು ಶ್ರೀನಾಥ್​|

Updated on:Dec 28, 2022 | 2:28 PM

Share

ಚಾಮರಾಜನಗರ: ಅಧಿಕಾರಿಯೊಬ್ಬರ ಪ್ರತಿಷ್ಠೆಗೆ ಜನ ಕಂಗಾಲಾಗಿದ್ದಾರೆ. ಹಿಂದಿನ ಅಧಿಕಾರಿ ಮಾಡಿದ ಯೋಜನೆ ಈಗಿನ ಅಧಿಕಾರಿಯಿಂದ ನಿರ್ಲಕ್ಷ್ಯಕ್ಕೊಳಗಾಗಿದೆ. ಮಹದೇಶ್ವರ ಬೆಟ್ಟದಲ್ಲಿ ಜನವನ ಸಾರಿಗೆ ಸ್ಥಗಿತಗೊಂಡಿದೆ. ಮಹದೇಶ್ವರ ಬೆಟ್ಟ ಸುತ್ತಮುತ್ತಲಿನ (Chamarajanagar) ಗ್ರಾಮಸ್ಥರು ಮತ್ತೆ ಡೋಲಿ (Transportation) ಮೊರೆ ಹೋಗಿದ್ದಾರೆ. ಅರಣ್ಯದಲ್ಲಿನ ಗ್ರಾಮಸ್ಥರ ( villagers) ಅನುಕೂಲಕ್ಕೆ ಅರಣ್ಯ ಇಲಾಖೆ ಆರಂಭಿಸಿದ್ದ ಜನವನ ಸಾರಿಗೆ ಅದಾಗಿತ್ತು. ದುರ್ಗಮ ಅರಣ್ಯ ಪ್ರದೇಶದಲ್ಲಿ ಸಂಚರಿಸುವ ಸಾಮರ್ಥ್ಯವಿದ್ದ ಫೋರ್ಸ್ ಗೂರ್ಖಾ ವಾಹನ ಸೌಲಭ್ಯವನ್ನು ಅರಣ್ಯ ಇಲಾಖೆ ಕಲ್ಪಿಸಿತ್ತು.

ವಾಹನಗಳ ನಿರ್ವಹಣೆಯನ್ನು ಅರಣ್ಯ ಇಲಾಖೆಯು ಪರಿಸರ ಅಭಿವೃದ್ಧಿ ಸಮಿತಿಗಳಿಗೆ ವಹಿಸಿತ್ತು. ಇದಕ್ಕಾಗಿ ಹಿಂದಿನ ಅಧಿಕಾರಿ ಸಾಕಷ್ಟು ಹಣವನ್ನು ಮೀಸಲಿಟ್ಟಿದ್ದರು. ಮಲೈ ಮಹದೇಶ್ವರ ವನ್ಯಜೀವಿ ಧಾಮದ ಹಿಂದಿನ ಅಧಿಕಾರಿ ಏಡುಕೊಂಡಲರಿಂದ ಈ ಯೋಜನೆ ಆರಂಭವಾಗಿತ್ತು. ಜನವನ ಸಾರಿಗೆ ವಾಹನಗಳು ಅರಣ್ಯಲ್ಲಿನ ಒಂಬತ್ತು ಗ್ರಾಮಗಳ ಜನರ ಅನುಕೂಲಕ್ಕೆ ನಾಲ್ಕು ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು.

ಡಿಎಫ್ ಓ ಸಂತೋಷ್ ವಿರುದ್ಧ ಜನರ ಆಕ್ರೋಶ

ವಸೂಲಿಯಾಗುವ ಪ್ರಯಾಣ ದರದಲ್ಲಿ ವಾಹನಗಳ ನಿರ್ವಹಣೆಯನ್ನು ಅರಣ್ಯ ಇಲಾಖೆ ಪರಿಸರ ಅಭಿವೃದ್ಧಿ ಸಮಿತಿಗಳಿಗೆ ಜವಾಬ್ದಾರಿ ವಹಿಸಿತ್ತು. ರಸ್ತೆ ಹದಗೆಟ್ಟಿದೆ ಎಂದು ನೆಪ ಹೇಳಿ ವಾಹನ ನಿಲ್ಲಿಸಿರುವ ಅಧಿಕಾರಿಗಳು. ಗ್ರಾಮಸ್ಥರಿಗೆ ಮತ್ತೆ ಡೋಲಿಯೇ ಗತಿಯಾಗಿದೆ. ದುರ್ಗಮ ಕಾಡಿನ ಹಾದಿಯೇ ಇವರಿಗೆ ಹೆದ್ದಾರಿ! ಡೋಲಿಯೇ ಆ್ಯಂಬುಲೆನ್ಸ್ ಆಗಿದೆ. ಅನಾರೋಗ್ಯಪೀಡಿತರು, ಗರ್ಭಿಣಿಯರನ್ನು ಡೋಲಿ ಕಟ್ಟಿಯೇ ಹೊತ್ತೊಯ್ಯಬೇಕು. Also Read:

ಚಾಮರಾಜನಗರ: ಅರಣ್ಯಾಧಿಕಾರಿಯ ಪ್ರತಿಷ್ಠೆಗೆ ಜನ ಕಂಗಾಲು, ಬಡ ಗ್ರಾಮಸ್ಥರಿಗೆ ಕಾಡುಮೇಡಿನ ದುರ್ಗಮ ಹಾದಿಯೇ ಗತಿ!

ದೈನಂದಿನ ಕೆಲಸ ಕಾರ್ಯಗಳಿಗೆ ಮಹದೇಶ್ವರ ಬೆಟ್ಟಕ್ಕೆ ಕಿಲೋಮೀಟರ್ ‌ಗಟ್ಟಲೆ ಬೆಟ್ಟಗುಡ್ಡ ಹತ್ತಿ ಇಳಿದು ಸಾಗಬೇಕು. ಕಾಡು ಪ್ರಾಣಿಗಳು ದಾಳಿ ನಡೆಸುವ ಆತಂಕದಲ್ಲೇ ನಡೆಯಬೇಕು. ನಾವು ವಾಹನ ಕೊಟ್ಟಿದ್ದೇವೆ, ನಿರ್ವಹಣೆ ನಮ್ಮ ಜವಾಬ್ದಾರಿ ಅಲ್ಲ ಎನ್ನುತ್ತಿದ್ದಾರೆ ಅರಣ್ಯಾಧಿಕಾರಿಗಳು. ಈಗಿನ ಡಿಎಫ್ ಓ ಸಂತೋಷ್ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:26 pm, Wed, 28 December 22

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್