AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ವರ್ಷಗಳ ಬಳಿಕ ಚಾಮರಾಜನಗರದಲ್ಲಿ ರಾಜಕಳೆ; ಚಾಮರಾಜೇಶ್ವರನ ಸನ್ನಿಧಿಯಲ್ಲಿ ಅದ್ಧೂರಿ ರಥೋತ್ಸವ, 25 ವರ್ಷಗಳ ಬಳಿಕ ಕುಂಭಾಭಿಷೇಕ ಕಣ್ತುಂಬಿಕೊಂಡ ಭಕ್ತರು

ಸಾಮಾನ್ಯವಾಗಿ ಆಷಾಢಮಾಸದಲ್ಲಿ ಶುಭ ಕಾರ್ಯ ನಡೆಯಲ್ಲ. ಆದ್ರೆ, ಇಲ್ಲಿ ಮಾತ್ರ ಬ್ರಹ್ಮರಥೋತ್ಸವ ನಡೆಯುತ್ತೆ. ಹೀಗಾಗಿ, ಈ ಸಲದ ರಥೋತ್ಸವಕ್ಕೆ ಯಾವುದೇ ತೊಡಕು ಆಗಬಾರದೆಂದು, ಶುದ್ದಿ ಕಾರ್ಯ, ಪೂಜಾ ಕೈಂಕರ್ಯಗಳು ನೆರವೇರಿದ್ವು. ಕುಂಭಾಭಿಷೇಕದ ಮೂಲಕ 20 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಲಾಯಿತು.

5 ವರ್ಷಗಳ ಬಳಿಕ ಚಾಮರಾಜನಗರದಲ್ಲಿ ರಾಜಕಳೆ; ಚಾಮರಾಜೇಶ್ವರನ ಸನ್ನಿಧಿಯಲ್ಲಿ ಅದ್ಧೂರಿ ರಥೋತ್ಸವ, 25 ವರ್ಷಗಳ ಬಳಿಕ ಕುಂಭಾಭಿಷೇಕ ಕಣ್ತುಂಬಿಕೊಂಡ ಭಕ್ತರು
ಚಾಮರಾಜೇಶ್ವರ ದೇವಾಲಯ
Follow us
TV9 Web
| Updated By: ಆಯೇಷಾ ಬಾನು

Updated on: Jun 06, 2022 | 8:57 PM

ಚಾಮರಾಜನಗರ: ಅದು ಗಡಿಜಿಲ್ಲೆಯ ಜನರ ಆರಾಧ್ಯ ದೈವ. ಶಾಪ ವಿಮೋಚನೆ, ನವ ದಂಪತಿಗಳು ಆ ದೇವರ ದರ್ಶನ ಪಡೆದರೆ ಸಕಲವೂ ಸನ್ಮಂಗಳವಾಗುತ್ತೆ ಅನ್ನೋ ನಂಬಿಕೆ ಇದೆ. ಆದರೆ ಆ ದೇವರಿಗೆ ಕಳೆದ ಐದು ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ. ದೇವಾಲಯದಲ್ಲಿ ಧಾರ್ಮಿಕ ಕಾರ್ಯಗಳು ನಡೆದಿರಲಿಲ್ಲ. ಇದೀಗಾ ದೇವಾಲಯದಲ್ಲಿ ಐದು ವರ್ಷಗಳ ಬಳಿಕ ಧಾರ್ಮಿಕ ಕಾರ್ಯ ನಡೆದಿದೆ.

ತಿಂಗಳಲ್ಲ.. ವಾರವಲ್ಲ.. ಐದು ವರ್ಷದ ಬಳಿಕ ದೇವಾಲಯದಲ್ಲಿ ರಾಜಕಳೆ ಮರುಕಳಿಸಿದೆ. ಚಾಮರಾಜನಗರದ ಆರಾಧ್ಯ ದೈವ ಆಗಿರೋ ಚಾಮರಾಜೇಶ್ವರ ದೇಗುಲದಲ್ಲಿ ಐದು ವರ್ಷದ ಹಿಂದೆ ರಥಕ್ಕೆ ಬೆಂಕಿ ಬಿದ್ದು, ಧಾರ್ಮಿಕ ಕಾರ್ಯಗಳೆಲ್ಲ ರದ್ದಾಗಿದ್ದವು. ಆದ್ರೀಗ, 1.20 ಕೋಟಿ ವೆಚ್ಚದಲ್ಲಿ ಬ್ರಹ್ಮರಥ ಸಿದ್ಧವಾಗಿದೆ. ಹೀಗಾಗಿ, ಮೂರು ದಿನಗಳಿಂದ ದೇಗುಲದಲ್ಲಿ ಪೂಜಾ ಕಾರ್ಯ ನಡೆಯುತ್ತಿದ್ದು, ಕುಂಭಾಭಿಷೇಕ, ಗೋಪುರಕ್ಕೆ ಕಳಸ ಪ್ರತಿಷ್ಠಾಪನೆ‌ ಮಾಡಲಾಯ್ತು. ಇದನ್ನೂ ಓದಿ: ವಿಜಯಪುರ ಉಪ‌ನೋಂದಣಾಧಿಕಾರಿಗಳ ಕಚೇರಿಯಲ್ಲಿ ಲಂಚಾವತಾರ; ಸರ್ಕಾರಿ ಶುಲ್ಕಕ್ಕಿಂತಲು ಹೆಚ್ಚಿಗೆ ಹಣ ಪಡೆಯುತ್ತಿರುವ ಆರೋಪ

2017ರಲ್ಲಿ ಕಿಡಿಗೇಡಿಯೊಬ್ಬ ರಥಕ್ಕೆ ಬೆಂಕಿ ಹಚ್ಚಿದ್ದರಿಂದ ಅಂದಿನಿಂದ ಜಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ರಥಕ್ಕೆ ಬೆಂಕಿ ಬಿದ್ದಿರುವುದು ಅಪಶಕುನವಾದ್ದರಿಂದ ಹೊಸ ರಥ ನಿರ್ಮಾಣವಾಗುವರೆಗು ಜಾತ್ರೆ, ಹಾಗೂ ದೇವಾಲಯದಲ್ಲಿ ಧಾರ್ಮಿಕ ಕಾರ್ಯ ನಡೆಸದಂತೆ ತೀರ್ಮಾನ ಮಾಡಲಾಗಿತ್ತು. ನಂತರ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಆಗಮಿಕರ ಪ್ರಯತ್ನದ ಫಲವಾಗಿ 1.20 ಕೋಟಿ ರೂ.ವೆಚ್ಚದಲ್ಲಿ ನೂತನ ಬ್ರಹ್ಮ ರಥ ಸಜ್ಜುಗೊಂಡಿದ್ದು ಚಾಮರಾಜನಗರ ತಲುಪಿದೆ. ಆ ಹಿನ್ನೆಲೆಯಲ್ಲಿ‌ ಕಳೆದ ಮೂರು ದಿನಗಳಿಂದ ವಿವಿಧ ಪೂಜಾ ಕಾರ್ಯಗಳು ನೆರವೇರಿತು. ಇಂದು ದೇವಾಲಯ ಗೋಪುರಕ್ಕೆ ಕಳಸ ಪ್ರತಿಷ್ಠಾಪನೆ‌ ನಡೆಸಿ ಕುಂಭಾಭಿಷೇಕ ಮಾಡಲಾಯಿತು.

chamarajeshwara temple 1

ಕುಂಭಾಭಿಷೇಕ

ಚಾಮರಾಜನಗರ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸಾಮಾನ್ಯವಾಗಿ ಆಷಾಢಮಾಸದಲ್ಲಿ ಶುಭ ಕಾರ್ಯ ನಡೆಯಲ್ಲ. ಆದ್ರೆ, ಇಲ್ಲಿ ಮಾತ್ರ ಬ್ರಹ್ಮರಥೋತ್ಸವ ನಡೆಯುತ್ತೆ. ಹೀಗಾಗಿ, ಈ ಸಲದ ರಥೋತ್ಸವಕ್ಕೆ ಯಾವುದೇ ತೊಡಕು ಆಗಬಾರದೆಂದು, ಶುದ್ದಿ ಕಾರ್ಯ, ಪೂಜಾ ಕೈಂಕರ್ಯಗಳು ನೆರವೇರಿದ್ವು. ಕುಂಭಾಭಿಷೇಕದ ಮೂಲಕ 20 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಇನ್ನು 25 ವರ್ಷಗಳ ಬಳಿಕ ನಡೆದ ಕುಂಭಾಭಿಷೇಕ ಕಣ್ತುಂಬಿಕೊಂಡು ಭಕ್ತರು ಸಂತಸಗೊಂಡ್ರು. 5 ವರ್ಷಗಳ ಬಳಿಕ ಅದ್ಧೂರಿ ರಥೋತ್ಸವಕ್ಕೆ ಚಾಮರಾಜೇಶ್ವರನ ಸನ್ನಿಧಿ ಸಜ್ಜಾಗಿದೆ. ಜಿಲ್ಲೆಯ ಜನರಲ್ಲಿ ಇದು ಸಂತಸ ತಂದಿದ್ದು, ಮತ್ತೆ ದೇಗುಲದತ್ತ ಹೆಜ್ಜೆ ಹಾಕ್ತಿದ್ದಾರೆ. ಇದನ್ನೂ ಓದಿ: ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಕರಣ: ನೂಪುರ್ ಶರ್ಮಾಗೆ ಸಮನ್ಸ್ ಕಳಿಸಲಿದೆ ಮುಂಬೈ ಪೊಲೀಸ್

chamarajeshwara temple 2 ವರದಿ: ದಿಲೀಪ್ ಚೌಡಹಳ್ಳಿ, ಟಿವಿ9 ಚಾಮರಾಜನಗರ

ಮದುವೆ ಬಳಿಕವೂ ಚಿತ್ರರಂಗದಲ್ಲಿ ಸೋನಲ್ ಬ್ಯುಸಿ; ಇದರ ಕ್ರೆಡಿಟ್ ತರುಣ್​ಗೆ
ಮದುವೆ ಬಳಿಕವೂ ಚಿತ್ರರಂಗದಲ್ಲಿ ಸೋನಲ್ ಬ್ಯುಸಿ; ಇದರ ಕ್ರೆಡಿಟ್ ತರುಣ್​ಗೆ
VIDEO: ಅಪೀಲ್ ಮಾಡುವ ಮುನ್ನವೇ ಔಟ್ ನೀಡಿದ ಅಂಪೈರ್
VIDEO: ಅಪೀಲ್ ಮಾಡುವ ಮುನ್ನವೇ ಔಟ್ ನೀಡಿದ ಅಂಪೈರ್
Daily Devotional: ಜಪ ಮಾಡುವುದರ ಹಿಂದಿನ ರಹಸ್ಯ ಹಾಗೂ ಉಪಯೋಗ ತಿಳಿಯಿರಿ
Daily Devotional: ಜಪ ಮಾಡುವುದರ ಹಿಂದಿನ ರಹಸ್ಯ ಹಾಗೂ ಉಪಯೋಗ ತಿಳಿಯಿರಿ
ಈ ರಾಶಿಯವರ ಆದಾಯದಲ್ಲಿ ಏರಿಕೆ, ವಾಹನ ಖರೀದಿಸುವವರು ಎಚ್ಚರ!
ಈ ರಾಶಿಯವರ ಆದಾಯದಲ್ಲಿ ಏರಿಕೆ, ವಾಹನ ಖರೀದಿಸುವವರು ಎಚ್ಚರ!
ದರ್ಶನ್ ಹೆಸರು ಹೇಳಿ ವಿನೋದ್ ಪ್ರಭಾಕರ್ ಅವರ ಕೊಂಡಾಡಿದ ಶ್ರುತಿ
ದರ್ಶನ್ ಹೆಸರು ಹೇಳಿ ವಿನೋದ್ ಪ್ರಭಾಕರ್ ಅವರ ಕೊಂಡಾಡಿದ ಶ್ರುತಿ
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ