ಚಿಕ್ಕಬಳ್ಳಾಪುರ: ತಂದೆ-ಮಗನ ಜಗಳ ಬೀಡಿಸಲು ಹೋದ ಚಿಕ್ಕಪ್ಪನ ಕೊಲೆಗೆ ಯತ್ನ!

| Updated By: Rakesh Nayak Manchi

Updated on: Aug 04, 2023 | 6:37 PM

ತಂದೆ ಮತ್ತು ಮಗ ಜಗಳ ಮಾಡುತ್ತಿರುವುದನ್ನು ಬಿಡಿಸಲು ಬಂದ ಚಿಕ್ಕಪ್ಪನನ್ನೇ ಕೊಲೆ ಮಾಡಲು ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಗಾಯಾಳುವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಚಿಕ್ಕಬಳ್ಳಾಪುರ: ತಂದೆ-ಮಗನ ಜಗಳ ಬೀಡಿಸಲು ಹೋದ ಚಿಕ್ಕಪ್ಪನ ಕೊಲೆಗೆ ಯತ್ನ!
ತಂದೆ-ಮಗನ ಜಗಳ ಬೀಡಿಸಲು ಬಂದ ಚಿಕ್ಕಪ್ಪನ ಕೊಲೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ (ಸಾಂದರ್ಭಿಕ ಚಿತ್ರ)
Follow us on

ಚಿಕ್ಕಬಳ್ಳಾಪುರ, ಆಗಸ್ಟ್ 4: ಹಣಕಾಸಿನ ವಿಚಾರದಲ್ಲಿ ತಂದೆ ಮಗನ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಬಂದ ಚಿಕ್ಕಪ್ಪನನ್ನೇ ಮಹಡಿ ಮೇಲಿಂದ ತಳ್ಳಿ ಕೊಲೆ ಮಾಡಲು ಯತ್ನಿಸಿದ (Murder Attempt) ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಡಿ-ಪಾಳ್ಯಾ ಗ್ರಾಮದಲ್ಲಿ ನಡೆದಿದೆ.

ಡಿ-ಪಾಳ್ಯಾ ಗ್ರಾಮದಲ್ಲಿ ನಿವೃತ್ತ ಶಿಕ್ಷಕ ನಾರಾಯಣರೆಡ್ಡಿ ಅವರಿಗೆ ಲೋಕೇಶ ಎನ್ನುವ ಮಗನಿದ್ದಾನೆ. ಲೊಕೇಶ ಹಣಕ್ಕಾಗಿ ತಂದೆಯ ಜೊತೆ ಜಗಳ ತೆಗೆದಿದ್ದಾನೆ. ಇದರಿಂದ ಭಯಗೊಂಡ ತಂದೆ ತನ್ನ ತಮ್ಮ ರಾಮರೆಡ್ಡಿಗೆ ಕರೆ ಮಾಡಿ ರಕ್ಷಣೆಗೆ ಮನವಿ ಮಾಡಿದ್ದಾನೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವೈಪೈ ಇಂಟರ್​​ನೆಟ್ ಸಮಸ್ಯೆ, ರೈತರಿಂದ ಪ್ರತಿಭಟನೆ

ಕೂಡಲೇ ರಾಮರೆಡ್ಡಿ ತನ್ನ ಮಗ ಅಶೋಕ್ ಕುಮಾರ್ ಜೊತೆ ನಾರಾಯಣರೆಡ್ಡಿಯ ರಕ್ಷಣೆಗೆ ಮುಂದಾಗಿ ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಲೊಕೇಶ ತನ್ನ ಚಿಕ್ಕಪ್ಪ ರಾಮರೆಡ್ಡಿಯನ್ನು ಮೊದಲನೇ ಮಹಡಿಯಿಂದ ಕೆಳಗೆ ತಳ್ಳಿದ್ದಾನೆ.

ಘಟನೆಯಲ್ಲಿ ರಾಮರೆಡ್ಡಿ ತಲೆಗೆ ಗಾಯಗಳಾಗಿದ್ದು, ಎರಡೂ ಕೈಗಳಿಗೆ ಗಾಯವಾಗಿವೆ. ಹೀಗಾಗಿ ರಾಮರೆಡ್ಡಿ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ ಅಶೋಕ್ ಕುಮಾರ್, ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಕಲಂ 323, 325 ಐಪಿಸಿ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Fri, 4 August 23