AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನ ಮಿಡಿಯುವ ಸಂಗತಿ; ನತದೃಷ್ಟ ಜೀಪ್ ಚಾಲಕ, ತಂದೆ ರಮೇಶ್ ಶವ ಆಸ್ಪತ್ರೆಯಲ್ಲಿದ್ರೂ ಬಿ.ಎಸ್ಸಿ ಪರೀಕ್ಷೆಗೆ ಹಾಜರಾದ ಮಗ

ತಂದೆಯ ಶವ ಆಸ್ಪತ್ರೆಯಲ್ಲಿದ್ರೂ ಇಂದು ನಡೆದ ಬಿ.ಎಸ್ಸಿ ಅಂತಿಮ ವರ್ಷದ ಪರೀಕ್ಷೆಗೆ ಮೃತ ರಮೇಶ್ ಮಗ ಆರ್. ವಿಜಯ್ ಕುಮಾರ್ ಬೆಂಗಳೂರಿಗೆ ಆಗಮಿಸಿ ಪರೀಕ್ಷೆಗೆ ಹಾಜರಾಗಿದ್ದಾನೆ. ನಿನ್ನೆ ರಾತ್ರಿ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರೂ ಇಂದು ಗಟ್ಟಿ ಮನಸ್ಸು ಮಾಡಿ ತಂದೆ ಸಾವು ತನ್ನ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಬಾರದು ತಂದೆಯ ಆಸೆ ಸಂಪೂರ್ಣವಾಗಬೇಕೆಂದು ವಿಜಯ್ ಪರೀಕ್ಷೆಗೆ ಹಾಜರಾಗಿದ್ದಾನೆ.

ಮನ ಮಿಡಿಯುವ ಸಂಗತಿ; ನತದೃಷ್ಟ ಜೀಪ್ ಚಾಲಕ, ತಂದೆ ರಮೇಶ್ ಶವ ಆಸ್ಪತ್ರೆಯಲ್ಲಿದ್ರೂ ಬಿ.ಎಸ್ಸಿ ಪರೀಕ್ಷೆಗೆ ಹಾಜರಾದ ಮಗ
ಒಳ ಚಿತ್ರದಲ್ಲಿ ಜೀಪ್ ಚಾಲಕ ರಮೇಶ್
TV9 Web
| Edited By: |

Updated on:Sep 13, 2021 | 3:07 PM

Share

ಚಿಕ್ಕಬಳ್ಳಾಪುರ: ಜೀವನೋಪಾಯಕ್ಕಾಗಿ ತನ್ನ ತಂದೆ ಓಡಿಸುತ್ತಿದ್ದ ಜೀಪ್​ ಅಪಘಾತಕ್ಕೆ ತುತ್ತಾಗಿ ಛಿದ್ರಛಿದ್ರವಾಗಿತ್ತು. ಆದರೂ ಆ ಜೀಪ್​ ಚಾಲಕನ ಪುತ್ರ ತನ್ನ ಜೀವನವನ್ನು ಕಟ್ಟಿಕೊಳ್ಳಲು ಧೈರ್ಯ ತೋರಿ ಜೀವನದ ಪರೀಕ್ಷೆಗೆ ಎದೆಯೊಡ್ಡಿ, ಅಂತಿಮ ವರ್ಷದ ಬಿ.ಎಸ್ಸಿ ಪರೀಕ್ಷೆ ಬರೆದು ಅಖಂಡ ಮನೋಬಲ ತೋರಿದ್ದಾರೆ.

ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಗೇಟ್ ಬಳಿ ಲಾರಿಯನ್ನು ಓವರ್ಟೇಕ್ ಮಾಡಲು ಹೋಗಿ, ಏಕಾಏಕಿ ಜೀಪ್ಗೆ ಡಿಕ್ಕಿ ಹೊಡೆದು 8 ಜನ ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿ ಮತ್ತೊಂದು ಮನ ಮಿಡಿಯುವ ಘಟನೆ ನಡೆದಿದೆ. ಜೀಪ್ ಚಾಲಕ, ಮಾಲೀಕನಾಗಿದ್ದ ಮೃತ ರಮೇಶ್ ಮಗ ತಂದೆಯನ್ನು ಕಳೆದುಕೊಂಡ ದುಃಖದ ನಡುವೆಯೂ ಪರೀಕ್ಷೆ ಬರೆದಿದ್ದಾನೆ.

ತಂದೆಯ ಶವ ಆಸ್ಪತ್ರೆಯಲ್ಲಿದ್ರೂ ಇಂದು ನಡೆದ ಬಿ.ಎಸ್ಸಿ ಅಂತಿಮ ವರ್ಷದ ಪರೀಕ್ಷೆಗೆ ಮೃತ ರಮೇಶ್ ಮಗ ಆರ್. ವಿಜಯ್ ಕುಮಾರ್ ಬೆಂಗಳೂರಿಗೆ ಆಗಮಿಸಿ ಪರೀಕ್ಷೆಗೆ ಹಾಜರಾಗಿದ್ದಾನೆ. ನಿನ್ನೆ ರಾತ್ರಿ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರೂ ಇಂದು ಗಟ್ಟಿ ಮನಸ್ಸು ಮಾಡಿ ತಂದೆ ಸಾವು ತನ್ನ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಬಾರದು ತಂದೆಯ ಆಸೆ ಸಂಪೂರ್ಣವಾಗಬೇಕೆಂದು ವಿಜಯ್ ಪರೀಕ್ಷೆಗೆ ಹಾಜರಾಗಿದ್ದಾನೆ.

ಮಗನನ್ನು ಹೆಚ್ಚಿನ ವಿಧ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸುವ ಆಸೆಯನ್ನು ಮೃತ ರಮೇಶ ಹೊಂದಿದ್ದರು. ಚನ್ನಾಗಿ ಓದು ಮಗನೆ. ನಿನನ್ನು ಫಾರಿನ್ಗೆ ಕಳಿಸುವೆ ಎಂದು ಮೃತ ರಮೇಶ್ ಹೇಳುತ್ತಿದ್ದರಂತೆ. ಹೀಗಾಗಿ ಬಿ.ಎಸ್ಸಿ ಅಂತಿಮ ವರ್ಷದ ಮೈಕ್ರೋಬಯಾಲಜಿ ಓದುತ್ತಿರುವ ವಿಜಯ್ ತಂದೆಯ ಆಸೆಯಂತೆ ವಿಧ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ದುಃಖದಲ್ಲೇ ಪರೀಕ್ಷೆ ಬರೆದಿದ್ದಾನೆ.

ಮೃತ ರಮೇಶ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ನಿವಾಸಿ. ಬೆಂಗಳೂರು ರಸ್ತೆಯಿಂದ ಮದನಪಲ್ಲಿ ಕಡೆಗೆ ವೇಗವಾಗಿ ಮುನ್ನುಗ್ಗುತ್ತಿದ್ದ ಲಾರಿಯೊಂದು, ಓವರ್ಟೇಕ್ ಮಾಡಲು ಹೋಗಿ, ಏಕಾಏಕಿ ಜೀಪ್ಗೆ ಡಿಕ್ಕಿ ಹೊಡೆದಿದೆ. ಇದ್ರಿಂದ ಸ್ಥಳದಲ್ಲೇ 6 ಜನ ಮೃತಪಟ್ಟಿದ್ರೆ, ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮತ್ತಿಬ್ಬರು ಕೊನೆಯುಸಿರೆಳದಿದ್ರು ಇಷ್ಟೇ ಅಲ್ಲ, 9 ಜನರಿಗೆ ಗಂಭೀರವಾಗಿ ಗಾಯವಾಗಿದೆ.

ಚಿಂತಾಮಣಿಯ ನಾರಾಯಣಸ್ವಾಮಿ, ಮುನಿರತ್ನಮ್ಮ, ಜೀಪ್ ಚಾಲಕ ರಮೇಶ್, ಆಂಧ್ರ ಮೂಲದ ವೆಂಕಟಲಕ್ಷ್ಮಮ್ಮ, ಕಿತ್ತಗನೂರು ಗ್ರಾಮದ ಮುನಿಕೃಷ್ಣಪ್ಪ, ಶ್ರೀನಿವಾಸಪುರ ಮೂಲದ ನಿಖಿಲ್ ಮೃತರಾಗಿದ್ದಾರೆ.

ಇದನ್ನೂ ಓದಿ: 8 ಮಂದಿಯ ಆಹುತಿ ತೆಗೆದುಕೊಂಡ ಅಪಘಾತಕ್ಕೆ ಚಿಂತಾಮಣಿ ಆರ್​ಟಿಒ -ಜೀಪ್ ಮಾಲಿಕ ಕಾರಣ: ಸಂಸದ ಮುನಿಸ್ವಾಮಿ ಕಿಡಿಕಿಡಿ

Published On - 2:10 pm, Mon, 13 September 21

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ