AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನ ಮಿಡಿಯುವ ಸಂಗತಿ; ನತದೃಷ್ಟ ಜೀಪ್ ಚಾಲಕ, ತಂದೆ ರಮೇಶ್ ಶವ ಆಸ್ಪತ್ರೆಯಲ್ಲಿದ್ರೂ ಬಿ.ಎಸ್ಸಿ ಪರೀಕ್ಷೆಗೆ ಹಾಜರಾದ ಮಗ

ತಂದೆಯ ಶವ ಆಸ್ಪತ್ರೆಯಲ್ಲಿದ್ರೂ ಇಂದು ನಡೆದ ಬಿ.ಎಸ್ಸಿ ಅಂತಿಮ ವರ್ಷದ ಪರೀಕ್ಷೆಗೆ ಮೃತ ರಮೇಶ್ ಮಗ ಆರ್. ವಿಜಯ್ ಕುಮಾರ್ ಬೆಂಗಳೂರಿಗೆ ಆಗಮಿಸಿ ಪರೀಕ್ಷೆಗೆ ಹಾಜರಾಗಿದ್ದಾನೆ. ನಿನ್ನೆ ರಾತ್ರಿ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರೂ ಇಂದು ಗಟ್ಟಿ ಮನಸ್ಸು ಮಾಡಿ ತಂದೆ ಸಾವು ತನ್ನ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಬಾರದು ತಂದೆಯ ಆಸೆ ಸಂಪೂರ್ಣವಾಗಬೇಕೆಂದು ವಿಜಯ್ ಪರೀಕ್ಷೆಗೆ ಹಾಜರಾಗಿದ್ದಾನೆ.

ಮನ ಮಿಡಿಯುವ ಸಂಗತಿ; ನತದೃಷ್ಟ ಜೀಪ್ ಚಾಲಕ, ತಂದೆ ರಮೇಶ್ ಶವ ಆಸ್ಪತ್ರೆಯಲ್ಲಿದ್ರೂ ಬಿ.ಎಸ್ಸಿ ಪರೀಕ್ಷೆಗೆ ಹಾಜರಾದ ಮಗ
ಒಳ ಚಿತ್ರದಲ್ಲಿ ಜೀಪ್ ಚಾಲಕ ರಮೇಶ್
TV9 Web
| Edited By: |

Updated on:Sep 13, 2021 | 3:07 PM

Share

ಚಿಕ್ಕಬಳ್ಳಾಪುರ: ಜೀವನೋಪಾಯಕ್ಕಾಗಿ ತನ್ನ ತಂದೆ ಓಡಿಸುತ್ತಿದ್ದ ಜೀಪ್​ ಅಪಘಾತಕ್ಕೆ ತುತ್ತಾಗಿ ಛಿದ್ರಛಿದ್ರವಾಗಿತ್ತು. ಆದರೂ ಆ ಜೀಪ್​ ಚಾಲಕನ ಪುತ್ರ ತನ್ನ ಜೀವನವನ್ನು ಕಟ್ಟಿಕೊಳ್ಳಲು ಧೈರ್ಯ ತೋರಿ ಜೀವನದ ಪರೀಕ್ಷೆಗೆ ಎದೆಯೊಡ್ಡಿ, ಅಂತಿಮ ವರ್ಷದ ಬಿ.ಎಸ್ಸಿ ಪರೀಕ್ಷೆ ಬರೆದು ಅಖಂಡ ಮನೋಬಲ ತೋರಿದ್ದಾರೆ.

ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಗೇಟ್ ಬಳಿ ಲಾರಿಯನ್ನು ಓವರ್ಟೇಕ್ ಮಾಡಲು ಹೋಗಿ, ಏಕಾಏಕಿ ಜೀಪ್ಗೆ ಡಿಕ್ಕಿ ಹೊಡೆದು 8 ಜನ ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿ ಮತ್ತೊಂದು ಮನ ಮಿಡಿಯುವ ಘಟನೆ ನಡೆದಿದೆ. ಜೀಪ್ ಚಾಲಕ, ಮಾಲೀಕನಾಗಿದ್ದ ಮೃತ ರಮೇಶ್ ಮಗ ತಂದೆಯನ್ನು ಕಳೆದುಕೊಂಡ ದುಃಖದ ನಡುವೆಯೂ ಪರೀಕ್ಷೆ ಬರೆದಿದ್ದಾನೆ.

ತಂದೆಯ ಶವ ಆಸ್ಪತ್ರೆಯಲ್ಲಿದ್ರೂ ಇಂದು ನಡೆದ ಬಿ.ಎಸ್ಸಿ ಅಂತಿಮ ವರ್ಷದ ಪರೀಕ್ಷೆಗೆ ಮೃತ ರಮೇಶ್ ಮಗ ಆರ್. ವಿಜಯ್ ಕುಮಾರ್ ಬೆಂಗಳೂರಿಗೆ ಆಗಮಿಸಿ ಪರೀಕ್ಷೆಗೆ ಹಾಜರಾಗಿದ್ದಾನೆ. ನಿನ್ನೆ ರಾತ್ರಿ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರೂ ಇಂದು ಗಟ್ಟಿ ಮನಸ್ಸು ಮಾಡಿ ತಂದೆ ಸಾವು ತನ್ನ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಬಾರದು ತಂದೆಯ ಆಸೆ ಸಂಪೂರ್ಣವಾಗಬೇಕೆಂದು ವಿಜಯ್ ಪರೀಕ್ಷೆಗೆ ಹಾಜರಾಗಿದ್ದಾನೆ.

ಮಗನನ್ನು ಹೆಚ್ಚಿನ ವಿಧ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸುವ ಆಸೆಯನ್ನು ಮೃತ ರಮೇಶ ಹೊಂದಿದ್ದರು. ಚನ್ನಾಗಿ ಓದು ಮಗನೆ. ನಿನನ್ನು ಫಾರಿನ್ಗೆ ಕಳಿಸುವೆ ಎಂದು ಮೃತ ರಮೇಶ್ ಹೇಳುತ್ತಿದ್ದರಂತೆ. ಹೀಗಾಗಿ ಬಿ.ಎಸ್ಸಿ ಅಂತಿಮ ವರ್ಷದ ಮೈಕ್ರೋಬಯಾಲಜಿ ಓದುತ್ತಿರುವ ವಿಜಯ್ ತಂದೆಯ ಆಸೆಯಂತೆ ವಿಧ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ದುಃಖದಲ್ಲೇ ಪರೀಕ್ಷೆ ಬರೆದಿದ್ದಾನೆ.

ಮೃತ ರಮೇಶ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ನಿವಾಸಿ. ಬೆಂಗಳೂರು ರಸ್ತೆಯಿಂದ ಮದನಪಲ್ಲಿ ಕಡೆಗೆ ವೇಗವಾಗಿ ಮುನ್ನುಗ್ಗುತ್ತಿದ್ದ ಲಾರಿಯೊಂದು, ಓವರ್ಟೇಕ್ ಮಾಡಲು ಹೋಗಿ, ಏಕಾಏಕಿ ಜೀಪ್ಗೆ ಡಿಕ್ಕಿ ಹೊಡೆದಿದೆ. ಇದ್ರಿಂದ ಸ್ಥಳದಲ್ಲೇ 6 ಜನ ಮೃತಪಟ್ಟಿದ್ರೆ, ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮತ್ತಿಬ್ಬರು ಕೊನೆಯುಸಿರೆಳದಿದ್ರು ಇಷ್ಟೇ ಅಲ್ಲ, 9 ಜನರಿಗೆ ಗಂಭೀರವಾಗಿ ಗಾಯವಾಗಿದೆ.

ಚಿಂತಾಮಣಿಯ ನಾರಾಯಣಸ್ವಾಮಿ, ಮುನಿರತ್ನಮ್ಮ, ಜೀಪ್ ಚಾಲಕ ರಮೇಶ್, ಆಂಧ್ರ ಮೂಲದ ವೆಂಕಟಲಕ್ಷ್ಮಮ್ಮ, ಕಿತ್ತಗನೂರು ಗ್ರಾಮದ ಮುನಿಕೃಷ್ಣಪ್ಪ, ಶ್ರೀನಿವಾಸಪುರ ಮೂಲದ ನಿಖಿಲ್ ಮೃತರಾಗಿದ್ದಾರೆ.

ಇದನ್ನೂ ಓದಿ: 8 ಮಂದಿಯ ಆಹುತಿ ತೆಗೆದುಕೊಂಡ ಅಪಘಾತಕ್ಕೆ ಚಿಂತಾಮಣಿ ಆರ್​ಟಿಒ -ಜೀಪ್ ಮಾಲಿಕ ಕಾರಣ: ಸಂಸದ ಮುನಿಸ್ವಾಮಿ ಕಿಡಿಕಿಡಿ

Published On - 2:10 pm, Mon, 13 September 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್