AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkaballapur:ಇದ್ದಕ್ಕಿದ್ದಂತೆ ಕೆರೆಯಲ್ಲಿ ಸಾವನ್ನಪ್ಪಿದ ಮೀನುಗಳು; ಕೆರೆಗೆ ವಿಷ ಪ್ರಾಶನವೊ? ನೀರೇ ವಿಷವಾಯಿತಾ? ಅನ್ನೊ ಅನುಮಾನ!

ಅದು ಚಿಕ್ಕಬಳ್ಳಾಪುರ ನಗರದ ಮದ್ಯದಲ್ಲಿರುವ ಕೆರೆ. ಹೆಬ್ಬಾಳ ನಾಗವಾರ ಸಂಸ್ಕರಿತ ತ್ಯಾಜ್ಯ ನೀರಿನಿಂದ ತುಂಬಿ ತುಳುಕುತ್ತಿದೆ. ಅದೇ ಕೆರೆಯಲ್ಲಿ ಕಲರ್ ಕಲರ್ ಮೀನುಗಳ ಸಾಕಾಣಿಕೆ ಮಾಡಲಾಗಿತ್ತು. ಆದ್ರೆ, ಕೆರೆಯಲ್ಲಿ ಸ್ವಚ್ಛಂದವಾಗಿ ಬೆಳೆದಿದ್ದ ಮೀನುಗಳು ಇದ್ದಕ್ಕಿದಂತೆ ಸತ್ತು ಮೇಲೆ ತೆಲುತ್ತಿವೆ. ಇದ್ರಿಂದ ಕೆರೆಗೆ ವಿಷ ಪ್ರಾಶನವೊ, ಇಲ್ಲ ನೀರೆ ವಿಷವಾಯಿತಾ ಅನ್ನೊ ಅನುಮಾನ ಮೂಡಿದೆ.

Chikkaballapur:ಇದ್ದಕ್ಕಿದ್ದಂತೆ ಕೆರೆಯಲ್ಲಿ ಸಾವನ್ನಪ್ಪಿದ ಮೀನುಗಳು; ಕೆರೆಗೆ ವಿಷ ಪ್ರಾಶನವೊ? ನೀರೇ ವಿಷವಾಯಿತಾ? ಅನ್ನೊ ಅನುಮಾನ!
ಚಿಕ್ಕಬಳ್ಳಾಪುರ
ಕಿರಣ್ ಹನುಮಂತ್​ ಮಾದಾರ್
|

Updated on: Jun 18, 2023 | 1:19 PM

Share

ಚಿಕ್ಕಬಳ್ಳಾಪುರ: ತುಂಬಿದ ಕೆರೆಯಲ್ಲಿ ಸತ್ತಿರುವ ಮೀನುಗಳು, ಅದನ್ನು ಹಿಡಿದು ಚೀಲಕ್ಕೆ ತುಂಬಿಕೊಳ್ಳುತ್ತಿರುವ ಯುವಕರು, ಇಂಥಹ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ(Chikkaballapur) ನಗರದ ಮುಷ್ಟೂರು ಬಡಾವಣೆಯಲ್ಲಿ. ಹೌದು, ಮುಷ್ಟೂರು ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲಾಗಿತ್ತು. ಗುತ್ತಿಗೆದಾರರು ಮೀನುಗಳನ್ನು ಹಿಡಿದು ಮಾರಾಟ ಮಾಡುವುದಕ್ಕೂ ಮೊದಲೇ ಮೀನುಗಳು ನೀರಿನಲ್ಲಿ ಸತ್ತು, ತೆಲಾಡುತ್ತಿವೆ. ಇನ್ನು ಕೆಲವು ಯುವಕರು ಸತ್ತ ಮೀನುಗಳನ್ನು ಬಿಡದೆ ಮೂಟೆಗಟ್ಟಲೆ ಹಿಡಿದುಕೊಂಡು ಹೊಗುತ್ತಿದ್ದಾರೆ.

ಕೆರೆಯ ನೀರಿಗೆ ಯಾರಾದ್ರೂ ವಿಷ ಬೆರೆಸಿದ್ದಾರಾ?, ಅಥವಾ ಹೆಚ್​ಎನ್​ ವ್ಯಾಲಿ ಹೆಬ್ಬಾಳ ನಾಗವಾರ ಸಂಸ್ಕರಿತ ತ್ಯಾಜ್ಯ ನೀರೆ ವಿಷಪೂರಿತವಾಯ್ತಾ? ತಿಳಿದು ಬಂದಿಲ್ಲ. ಆದ್ರೆ, ಕೆರೆ ನೀರಿನಲ್ಲಿ ಸಾಕಾಣಿಕೆ ಮಾಡಿದ್ದ ಮೀನುಗಳು ಸತ್ತಿರುವ ಕಾರಣ ಹತ್ತು ಹಲವು ಅನುಮಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಮೀನುಗಾರಿಕೆ ಇಲಾಖೆಯವರು ಹೇಳೊದೆ ಬೇರೆ ಬಾಂಗ್ಲಾದಲ್ಲಿ ಸೀವೇಜ್ ನೀರಿನಲ್ಲಿ ಮೀನುಗಾರಿಕೆ ಮಾಡ್ತಾರೆ, ಸಂಸ್ಕರಿತ ತ್ಯಾಜ್ಯದಲ್ಲಿ ಮೀನು ಸಾಕಾಣಿಕೆಯಿಂದ ಏನು ತೊಂದರೆಯಿಲ್ಲ. ಮೀನುಗಳ ಟೆಸ್ಟ್ ಬದಲಾಗಬಹುದು ಎನ್ನುತ್ತಾರೆ. ಆದರೆ ಮೀನುಗಳು ಯಾಕೆ ಸತ್ತಿವೆ ಎಂಬ ಕುರಿತು ಉತ್ತರ ಕೊಟ್ಟಿಲ್ಲ.

ಇದನ್ನೂ ಓದಿ:ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಮೀನುಗಾರಿಕೆ ಯಾಂತ್ರಿಕ ಬೋಟ್: 2.5 ಲಕ್ಷ ರೂ. ಹಾನಿ, ಸೂಕ್ತ ಪರಿಹಾರಕ್ಕೆ ಆಗ್ರಹ

ಚಿಕ್ಕಬಳ್ಳಾಪುರ ನಗರದ ಸುತ್ತಲೂ ಎತ್ತ ನೋಡಿದ್ರೂ, ಅಮಾನಿ ಬೈರಸಾಗರ ಕೆರೆ, ಕಂದವಾರ ಕೆರೆ, ರಂಗಧಾಮ ಕೆರೆ, ಮುಷ್ಟೂರು ಕೆರೆಗಳು ಇದ್ದು ಎಲ್ಲಾ ಕೆರೆಗಳಲ್ಲಿ ಮೀನುಗಾರಿ ನಡೆದಿದೆ. ಆದ್ರೆ, ಎಲ್ಲಾ ಕೆರೆಗಳಲ್ಲಿ ಈಗಾಗಲೆ ಎರಡು ಮೂರು ಭಾರಿ ಮೀನುಗಳು ಸತ್ತಿವೆ. ಆದರೂ ಸೂಕ್ತ ಕಾರಣ ಕಂಡು ಹಿಡಿಯುವುದರ ಬದಲು ಮೀನುಗಾರಿಕೆ ಇಲಾಖೆ ಹಾರಿಕೆ ಉತ್ತರ ಹೇಳುತ್ತಿದೆ.

ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ