AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಂಡಿ ತೋಡುವಾಗ ದೇವರ ವಿಗ್ರಹ ಪತ್ತೆ! ಜಮೀನಿನಲ್ಲಿ ದೊರೆತ ಕಲ್ಲಿನ ವಿಗ್ರಹಗಳ ಬಗ್ಗೆ ಗ್ರಾಮಸ್ಥರಿಗೆ ಕುತೂಹಲ! ಪೂಜೆ ಪುನಸ್ಕಾರ

ಈ ವಿಗ್ರಹವು ಏಕಶಿಲೆ ಕಲ್ಲು ಬಂಡೆಯಲ್ಲಿ ಕೆತ್ತಲಾಗಿದ್ದು, ಜೋಡಿಯಾಗಿ ಒಂದೆಡೆ ಹರಿನಾರಾಯಣ, ಮತ್ತೊಂದೆಡೆ ಲಕ್ಷ್ಮಿ ವಿಗ್ರಹಗಳಿವೆ. ನೋಡಲು ಪುರಾತನ ವಿಗ್ರಹಗಳು ಇದ್ದಂತೆ ಕಾಣ್ತಿದೆ.

ಗುಂಡಿ ತೋಡುವಾಗ ದೇವರ ವಿಗ್ರಹ ಪತ್ತೆ! ಜಮೀನಿನಲ್ಲಿ ದೊರೆತ ಕಲ್ಲಿನ ವಿಗ್ರಹಗಳ ಬಗ್ಗೆ ಗ್ರಾಮಸ್ಥರಿಗೆ ಕುತೂಹಲ! ಪೂಜೆ ಪುನಸ್ಕಾರ
ಗುಂಡಿ ತೋಡುವಾಗ ದೇವರ ವಿಗ್ರಹಗಳು ಪತ್ತೆ! ಜಮೀನಿನಲ್ಲಿ ದೊರೆತ ಕಲ್ಲಿನ ವಿಗ್ರಹಗಳ ಬಗ್ಗೆ ಗ್ರಾಮಸ್ಥರಿಗೆ ಕುತೂಹಲ! ಪೂಜೆ ಪುನಸ್ಕಾರ
TV9 Web
| Edited By: ಸಾಧು ಶ್ರೀನಾಥ್​|

Updated on: Oct 11, 2022 | 6:07 PM

Share

ನೂತನ ಮನೆ ನಿರ್ಮಾಣ ಮಾಡಿ, ಮನೆಗೆ ವಿದ್ಯುತ್​ ಸಂಪರ್ಕಕ್ಕಾಗಿ ಅರ್ತಿಂಗ್ ಹಾಕಲು ಗುಂಡಿ ತೋಡುತ್ತಿದ್ದಾಗ ಕಲ್ಲಿನ ಬಂಡೆಯೊಂದು ಸಿಕ್ಕಿದೆ. ಅದನ್ನು ಸ್ವಲ್ಪ ಹೊರಳಿಸಿದಾಗ… ಅಲ್ಲಿ ದೇವರ ವಿಗ್ರಹಗಳ ಕೆತ್ತನೆ (Stone God Statue) ಪತ್ತೆಯಾಗಿದೆ… ಜನ ಮುಗಿಬಿದ್ದು ಪೂಜೆ ಪುನಸ್ಕಾರ ಮಾಡಿ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಈ ವರದಿ ನೋಡಿ

ಇದು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಗೌರಿಬಿದನೂರು (Gauribidanur) ತಾಲೂಕಿನ ಹೊನ್ನಪ್ಪನಹಳ್ಳಿ ಗ್ರಾಮ. ಗ್ರಾಮದ ಶಿವಕುಮಾರ್ ಎನ್ನುವವರು ತಮ್ಮ ಜಮೀನಿನಲ್ಲಿ ನೂತನವಾಗಿ ಮನೆ ನಿರ್ಮಾಣ ಮಾಡಿದ್ದು, ಮನೆಗೆ ಅರ್ತಿಂಗ್ ಹಾಕಲು ಗೋಡೆ ಪಕ್ಕದಲ್ಲೆ ಗುಂಡಿ ತೆಗೆಸುತ್ತಿದ್ದರು. ಆದ್ರೆ ಕಲ್ಲು ಬಂಡೆಯೊಂದು ಪತ್ತೆಯಾಗಿದ್ದು ಅದನ್ನು ಮೇಲೆತ್ತಿ ನೋಡಿದರೆ… ಅದರಲ್ಲಿ ಹರಿನಾರಾಯಣ ಹಾಗೂ ಲಕ್ಷ್ಮಿ ವಿಗ್ರಹಗಳ ಕೆತ್ತನೆ ಫಳಫಳ ಹೊಳೆದಿದೆ. ಇದ್ರಿಂದ ಗಾಬರಿ ಹಾಗೂ ಕುತೂಹಲ ಒಟ್ಟಿಗೇ ಉಂಟಾಗಿ, ಗ್ರಾಮಸ್ಥರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಇನ್ನು ಶಿವಕುಮಾರ್ ಮನೆಯ ಬಳಿ ಜಮೀನಿನಲ್ಲಿ, ಹರಿನಾರಾಯಣ ಹಾಗೂ ಲಕ್ಷ್ಮಿ ಕಲ್ಲಿನ ವಿಗ್ರಹಗಳು ಪತ್ತೆಯಾಗುತ್ತಿದ್ದಂತೆ ಗ್ರಾಮಸ್ಥರಿಗೆ ಅದೇನೊ ಕುತೂಹಲ, ಭಕ್ತಿಭಾವ. ಮಹಿಳೆಯರಂತೂ ಮುಗಿಬಿದ್ದು ಪೂಜಾ ಸಾಮಾಗ್ರಿಗಳ ಜೊತೆ ಸ್ಥಳಕ್ಕೆ ಆಗಮಿಸಿ ಪೂಜೆ ಪುನಸ್ಕಾರ ಮಾಡಿ ಭಕ್ತಿ ಮೆರೆಯುತ್ತಿದ್ದಾರೆ.

ಈ ವಿಗ್ರಹವು ಏಕಶಿಲೆ ಕಲ್ಲು ಬಂಡೆಯಲ್ಲಿ ಕೆತ್ತಲಾಗಿದ್ದು, ಜೋಡಿಯಾಗಿ ಒಂದೆಡೆ ಹರಿನಾರಾಯಣ, ಮತ್ತೊಂದೆಡೆ ಲಕ್ಷ್ಮಿ ವಿಗ್ರಹಗಳಿವೆ. ನೋಡಲು ಪುರಾತನ ವಿಗ್ರಹಗಳು ಇದ್ದಂತೆ ಕಾಣ್ತಿದೆ. ಇದ್ರಿಂದ ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರೆ ಅಸಲಿ ಸತ್ಯ ಏನು, ಯಾವ ಕಾಲದ್ದು ಈ ವಿಗ್ರಹ ಅಂತಾ ಗೊತ್ತಾಗುತ್ತೆ. (ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಪುರ)

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!