AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಾಯುಕ್ತ ಸೋಗಿನಲ್ಲಿ ತಾಲ್ಲೂಕು ಕಚೇರಿಗೆ ದಾಳಿ, ಧಿಮಾಕಿನಲ್ಲಿ ತಹಶೀಲ್ದಾರ್ ವಿಚಾರಣೆ ಮಾಡಿದ ನಕಲಿ ಮಹಾಶಯ! ಆಮೇಲೇನಾಯ್ತು?

ಬೇಕಾದ ಮಾಹಿತಿ, ಬೇಕಾದ ದಾಖಲೆಗಳನ್ನು ಪಡೆದು, ನಂತರ ಛೇಂಬರ್ ನಲ್ಲಿದ್ದ ಚಿಕ್ಕಬಳ್ಳಾಪುರ ತಹಶಿಲ್ದಾರ್ ಗಣಪತಿ ಶಾಸ್ತ್ರಿ ಬಳಿ ಹೋದ ನಕಲಿ ಅಧಿಕಾರಿಗಳು... ಧಿಮಾಕಿನ ಶೈಲಿಯಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿಯನ್ನು ಮಾತನಾಡಿಸಿದ್ದಾರೆ. ಆ ವೇಳೆ ತಹಶೀಲ್ದಾರ್ ಗೆ ಅನುಮಾನ ಬಂದಿದೆ.

ಲೋಕಾಯುಕ್ತ ಸೋಗಿನಲ್ಲಿ ತಾಲ್ಲೂಕು ಕಚೇರಿಗೆ ದಾಳಿ, ಧಿಮಾಕಿನಲ್ಲಿ ತಹಶೀಲ್ದಾರ್ ವಿಚಾರಣೆ ಮಾಡಿದ ನಕಲಿ ಮಹಾಶಯ! ಆಮೇಲೇನಾಯ್ತು?
ಲೋಕಾಯುಕ್ತ ಸೋಗಿನಲ್ಲಿ ತಾಲ್ಲೂಕು ಕಚೇರಿಗೆ ದಾಳಿ, ಧಿಮಾಕಿನಲ್ಲಿ ತಹಶೀಲ್ದಾರ್ ವಿಚಾರಣೆ ಮಾಡಿದ ನಕಲಿ ಮಹಾಶಯ! ಆಮೇಲೇನಾಯ್ತು?
TV9 Web
| Updated By: ಸಾಧು ಶ್ರೀನಾಥ್​|

Updated on:Sep 23, 2022 | 4:05 PM

Share

ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಪವರ್ ಕೊಟ್ಟಿದ್ದೆ ತಡ, ಎಸಿಬಿ ಹೆಸರಿನಲ್ಲಿ ವಂಚನೆ ಮೋಸ ಮಾಡ್ತಿದ್ದ ಕೆಲವು ಕಿರಾತಕರು ಸಹ, ಈಗ ಲೋಕಾಯುಕ್ತ ಹೆಸರಿನಲ್ಲಿ ವಂಚನೆಗೆ ಮುಂದಾಗಿದ್ದಾರೆ. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ತಹಶೀಲ್ದರ್ ಕಚೇರಿಯೊಂದಕ್ಕೆ ಹೋಗಿ ತಾವು ಲೋಕಾಯುಕ್ತ ಅಧಿಕಾರಿಗಳು. ಆ ಕಡತ ಪರಿಶೀಲನೆ ಮಾಡಬೇಕು- ಈ ಕಡತ ಪರಿಶೀಲನೆ ಮಾಡಬೇಕು. ಅವರನ್ನು ತನಿಖೆ ಮಾಡಬೇಕು -ಇವರನ್ನು ತನಿಖೆ ಮಾಡಬೇಕು.. ಅಂತೆಲ್ಲಾ ಬಿಲ್ಡಪ್ ಮೇಲೆ ಬಿಲ್ಡಪ್ ಕೊಟ್ಟು… ಕೊನೆಗೆ ಬಂದಿದ್ದವರು ನಕಲಿಗಳು ಅಂತಾ ಪತ್ತೆ ಹಚ್ಚುತ್ತಿದ್ದಂತೆ ಆತ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಈ ವರದಿ ಓದಿ.

ಚಿಕ್ಕಬಳ್ಳಾಪುರ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ವ್ಯಕ್ತಿಯೊರ್ವ, ತಾನು ಲೋಕಾಯುಕ್ತ ಇನ್ಸ್​ಪೆಕ್ಟರ್… ತನ್ನ ಜೊತೆ ಇರುವವರು ತಮ್ಮ ಸಿಬ್ಬಂದಿ ಅಂತ ಪರಿಚಯ ಮಾಡಿಕೊಂಡು… ತಮಗೆ ಅರ್ಜೆಂಟಾಗಿ ಜಮೀನೊಂದರ ಒರಿಜಿನಲ್ ದಾಖಲೆಗಳು ಬೇಕು, ಅದಕ್ಕೆ ಸಂಬಂಧಿಸಿದ ತನಿಖೆ ಮಾಡಬೇಕು ಸರ್ವೆಯರ್ ಎಲ್ಲಿ? ತಹಶೀಲ್ದಾರ್ ಎಲ್ಲಿ? ಕೇಸ್ ವರ್ಕರ್ ಎಲ್ಲಿ? ಅಂತಾ ಬಿಲ್ಡಪ್ ಕೊಟ್ಟು, ರೆಕಾರ್ಡ ರೂಮ್ ನಲ್ಲಿ ದಾಖಲೆಗಳನ್ನು ಪಡೆದಿದ್ದಾನೆ. ನಂತರ ಎಲ್ಲೊ ಹಳ್ಳಿಯಲ್ಲಿದ್ದ ಸರ್ವೆ ಸೂಪರ್ ವೈಜರ್ ಗಳು, ಎದ್ನೊ ಬಿದ್ನೊ ಅಂತ ಕಚೇರಿಗೆ ಓಡೊಡಿ ಬಂದು ದಾಖಲೆಗಳನ್ನು ನೀಡಿ ಕಚೇರಿಗೆ ಬಂದ ವ್ಯಕ್ತಿಗೆ ಜ್ಯೂಸ್ ಕುಡಿಸಿ ಸಮಧಾನ ಮಾಡಿ ಕೇಳಿದ ದಾಖಲೆಗಳನ್ನು ನೀಡಿದ್ದಾರೆ. ಆದ್ರೆ ಕೊನೆಗೆ ಗೊತ್ತಾಗಿದ್ದು ಲೋಕಾಯುಕ್ತ ಅಧಿಕಾರಿಗಳು ಅಂತಾ ಬಂದಿದ್ದವರು ನಕಲಿ ಅಧಿಕಾರಿಗಳು ಅಂತಾ!

ಬೇಕಾದ ಮಾಹಿತಿ, ಬೇಕಾದ ದಾಖಲೆಗಳನ್ನು ಪಡೆದು, ನಂತರ ಛೇಂಬರ್ ನಲ್ಲಿದ್ದ ಚಿಕ್ಕಬಳ್ಳಾಪುರ ತಹಶಿಲ್ದಾರ್ ಗಣಪತಿ ಶಾಸ್ತ್ರಿ ಬಳಿ ಹೋದ ನಕಲಿ ಅಧಿಕಾರಿಗಳು… ಧಿಮಾಕಿನ ಶೈಲಿಯಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿಯನ್ನು ಮಾತನಾಡಿಸಿದ್ದಾರೆ. ಇದ್ರಿಂದ ಅನುಮಾನಗೊಂಡ ತಹಶೀಲ್ದಾರ್… ಲೋಕಾಯುಕ್ತ ಐಡಿ ತೋರಿಸಿ, ಹಿರಿಯ ಅಧಿಕಾರಿಗಳ ಪತ್ರ ತೋರಿಸಿ ಅಂತ ಕೇಳಿದಾಗ ತಬ್ಬಿಬ್ಬು ಆಗಿ, ತಡಬಡಾಯಿಸುತ್ತಾ… ಕಚೇರಿಯಿಂದ ಎಸ್ಕೇಪ್ ಆಗಿದ್ದಾರೆ! ಇದೀಗ ನಕಲಿ ಅಧಿಕಾರಿಗಳ ಚಲನವಲನ, ಎಸ್ಕೇಪ್ ಆಗುವ ದೃಶ್ಯ ಎಲ್ಲವೂ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಇದ್ರಿಂದ ಚಿಕ್ಕಬಳ್ಳಾಫುರ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ದೂರು ದಾಖಲು ಮಾಡಿದ್ದಾರೆ.

ಸರ್ಕಾರಿ ಕಚೇರಿಗಳು, ಸರ್ಕಾರಿ ಅಧಿಕಾರಿಗಳ ಬಳಿ ಹೋಗಿ ತಾವು ಎಸಿಬಿ ಅಧಿಕಾರಿಗಳು ಅಂತ ಪುಂಗಿ ಬಿಟ್ಟು ಎಸಿಬಿ ಹೆಸರಿನಲ್ಲಿ ವಂಚನೆ ಮಾಡ್ತಿದ್ದ ಕೆಲವು ಖದೀಮರು ಈಗ ಎಸಿಬಿ ಬದಲು ಮತ್ತೆ ಲೋಕಾಯುಕ್ತ ಹೆಸರಿನಲ್ಲಿ ವಂಚನೆ ಇಳಿದಿದ್ದಾರೆ. ಅಸಲಿ ಅಧಿಕಾರಿಗಳು ನಕಲಿ ವ್ಯಕ್ತಿಗಳಿಂದ ಹುಷಾರಾಗಿ ಇರಬೇಕಿದೆ -ಭೀಮಪ್ಪ ಪಾಟೀಲ್, ಟಿವಿ 9, ಚಿಕ್ಕಬಳ್ಳಾಪುರ

Published On - 4:03 pm, Fri, 23 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ