AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkaballapur: ನಾಟಿ ಅಣಬೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಹೈಬ್ರೀಡ್ ಯಾರಿಗೂ ಬೇಡ, ನಾಟಿಗೇ ಮಣೆ ಈಗ!

local mushroom: ಪಕ್ಕಾ ಹಳ್ಳಿಯ ರೈತರು ಸ್ವಾಭಾವಿಕವಾಗಿ ಬೆಳೆದ ನಾಟಿ ಅಣಬೆಯನ್ನು ಬಕೇಟ್, ಬುಟ್ಟಿ, ಚೀಲಗಳಲ್ಲಿ ತುಂಬಿಕೊಂಡು ಬಂದು ಮಾರಾಟ ಮಾಡುತ್ತಿದ್ದಾರೆ. ರಸ್ತೆ ಬದಿ ಸೀರೆ ಇಲ್ಲವೇ ಹಳೆಬಟ್ಟೆಯನ್ನು ಹಾಸಿ ಅದರ ಮೇಲೆ ರಾಶಿ-ರಾಶಿ ಗುಡ್ಡೆ ಮಾಂಸದ ರೀತಿಯಲ್ಲಿ ಅಣಬೆಗಳನ್ನು ಪೇರಿಸಿಟ್ಟು ಮಾರಾಟ ಮಾಡುತ್ತಿದ್ದಾರೆ.

Chikkaballapur: ನಾಟಿ ಅಣಬೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಹೈಬ್ರೀಡ್ ಯಾರಿಗೂ ಬೇಡ, ನಾಟಿಗೇ ಮಣೆ ಈಗ!
ನಾಟಿ ಅಣಬೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಹೈಬ್ರೀಡ್ ಯಾರಿಗೂ ಬೇಡ, ನಾಟಿಗೇ ಮಣೆ ಈಗ!
TV9 Web
| Updated By: ಸಾಧು ಶ್ರೀನಾಥ್​|

Updated on: Sep 23, 2022 | 8:23 PM

Share

ಚಿಕ್ಕಬಳ್ಳಾಪುರ : ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (chikkaballapur) ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹೂವು, ಹಣ್ಣು, ತರಕಾರಿ, ರೇಷ್ಮೆ ಸೇರಿದಂತೆ ಕೃಷಿ ಬೆಳೆಗಳು ಹಾಳಾಗಿ ಕೆಲವು ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಮತ್ತೊಂದಡೆ ಅದೇ ಮಳೆಯ ಅವಕಾಶ ಪಡೆದುಕೊಂಡ ಅಣಬೆಗಳು, ಯಥೇಚ್ಛವಾಗಿ ಅಕ್ಷರಶಃ ನಾಯಿಕೊಡೆಗಳಂತೆ ( local mushroom) ಮೈದುಂಬಿ ಬೆಳೆದು, ಅಣಬೆ ಮಾರಾಟಗಾರರಿಗೆ ಸುವರ್ಣಾವಕಾಶ ಸಿಗುವಂತೆ ಮಾಡಿದೆ!

ಚಿಕ್ಕಬಳ್ಳಾಪುರದಲ್ಲಿ ಎಲ್ಲೆಲ್ಲೂ ನಾಟಿ ಅಣಬೆಯದ್ಧೇ ಹವಾ..

ಚಿಕ್ಕಬಳ್ಳಾಪುರ ನಗರದ ಸುತ್ತಮುತ್ತ ಇರುವ ಅಜ್ಜವರ ಅರಣ್ಯಪ್ರದೇಶ, ಸಾಂಬರ್‌ಗಿಡ ಕಾವಲು, ಸೂಲಾಲಪ್ಪನದಿನ್ನೆ ಸೇರಿದಂತೆ ಪಂಚಗಿರಿಗಳ ಅರಣ್ಯ ಸಾಲಿನಲ್ಲಿ ಮರದ ಕೆಳಗೆ ಯಥೇಚ್ಛವಾಗಿ ಅಣಬೆಗಳು ಬೆಳೆದು ನಿಂತಿವೆ. ಇದನ್ನು ಗಮನಿಸಿದ ಸ್ಥಳೀಯ ಕೆಲ ರೈತರು ಅಣಬೆಗಳನ್ನು ಕಿತ್ತುಕೊಂಡು ಬಂದು, ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದ ಎದುರು ಸೇರಿದಂತೆ ವಿವಿಧಡೆ ಅಣಬೆಗಳನ್ನು ಮಾರಾಟ ಮಾಡುತ್ತಿದ್ದಾರೆ.

ಗುಡ್ಡೆಮಾಂಸದ ರೀತಿಯಲ್ಲಿ ಅಣಬೆಗಳ ಮಾರಾಟ!

ಪಕ್ಕಾ ಹಳ್ಳಿಯ ರೈತರು ಸ್ವಾಭಾವಿಕವಾಗಿ ಬೆಳೆದ ನಾಟಿ ಅಣಬೆಯನ್ನು ಬಕೇಟ್, ಬುಟ್ಟಿ, ಚೀಲಗಳಲ್ಲಿ ತುಂಬಿಕೊಂಡು ಬಂದು ಮಾರಾಟ ಮಾಡುತ್ತಿದ್ದಾರೆ. ರಸ್ತೆ ಬದಿ ಸೀರೆ ಇಲ್ಲವೇ ಹಳೆಬಟ್ಟೆಯನ್ನು ಹಾಸಿ ಅದರ ಮೇಲೆ ರಾಶಿ-ರಾಶಿ ಗುಡ್ಡೆ ಮಾಂಸದ ರೀತಿಯಲ್ಲಿ ಅಣಬೆಗಳನ್ನು ಪೇರಿಸಿಟ್ಟು ಮಾರಾಟ ಮಾಡುತ್ತಿದ್ದಾರೆ. ಕೆಜಿ/ ಗ್ರಾಂಗಳ ಬದಲು ಗುಡ್ಡೆಗುಡ್ಡೆಯಾಗಿ ಮಾರಾಟ ಮಾಡುತ್ತಿದ್ದಾರೆ. ತಲಾ ಗುಡ್ಡೆ ಅಣಬೆಗೆ 50-80 ರೂಪಾಯಿಯವರೆಗೂ ಮಾರಾಟ ಮಾಡುತ್ತಿದ್ದಾರೆ. ಇನ್ನು ಹೈಬ್ರೀಡ್ ಅಣಬೆಗಳನ್ನು ತಿಂದು ಬಾಯಿ ಸಪ್ಪೆ ಮಾಡಿಕೊಂಡಿದ್ದ ಅಣಬೆ ಪ್ರಿಯರು ಇದೀಗ ನಾಟಿ ಅಣಬೆಯನ್ನು ಚಪ್ಪರಿಸುತ್ತಿದ್ದಾರೆ.

ಅಣಬೆಯಲ್ಲಿ ಏನೆಲ್ಲಾ ಮಾಡಬಹುದು

ಅಣಬೆಯಿಂದ ಪಲ್ಯ, ಸಾಂಬಾರು, ಅಣಬೆ ಪಲಾವ್, ಅಣಬೆ ಬೋಂಡಾ ಸೇರಿದಂತೆ ಇತರೆ ಖಾದ್ಯಗಳನ್ನು ತಯಾರಿಸಬಹುದು. – ಭೀಮಪ್ಪ ಪಾಟೀಲ ಟಿವಿ 9 ಚಿಕ್ಕಬಳ್ಳಾಪುರ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?