AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coriander Crop: ಆ ಬಡ ರೈತ 1 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಮೂಲಕ ಕಷ್ಟಪಟ್ಟು ಕೊತ್ತಂಬರಿ ಸೊಪ್ಪು ಬೆಳೆದಿದ್ದ, ಮುಂದೇನಾಯ್ತು?

Pesticides: ರೈತನ ಮೇಲಿನ ದ್ವೇಷವೊ... ಇಲ್ಲಾ ಜಮಿನು ವಿವಾದವೊ ಗೊತ್ತಿಲ್ಲ. ಆದ್ರೆ ಬೆಳೆದು ನಿಂತಿದ್ದ ಕೊತ್ತಂಬರಿ ಸೊಪ್ಪುವಿನ ಮೇಲೆ ಕಳೆನಾಶಕ ಸಿಂಪಡಣೆ ಮಾಡಿ, ರೈತನ ಕಣ್ಣಲ್ಲಿ ನೀರು ತರಿಸಿದ್ದು ಮಾತ್ರ ವಿಪರ್ಯಾಸ.

Coriander Crop: ಆ ಬಡ ರೈತ 1 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಮೂಲಕ ಕಷ್ಟಪಟ್ಟು ಕೊತ್ತಂಬರಿ ಸೊಪ್ಪು ಬೆಳೆದಿದ್ದ, ಮುಂದೇನಾಯ್ತು?
ಬೆಳೆದು ನಿಂತಿದ್ದ ಕೊತ್ತಂಬರಿ ಸೊಪ್ಪುವಿನ ಮೇಲೆ ಕಳೆನಾಶಕ ಸಿಂಪಡಣೆ
TV9 Web
| Edited By: ಸಾಧು ಶ್ರೀನಾಥ್​|

Updated on: Jan 27, 2023 | 2:28 PM

Share

ಆತ ಬಡ ರೈತ (Farmer), ತನಗಿರುವ ಒಂದು ಎಕರೆ ಜಮೀನಿನಲ್ಲಿ ಹನಿ ನೀರಾವರಿ ಮೂಲಕ ಕಷ್ಟಪಟ್ಟು ಕೊತ್ತಂಬರಿ ಸೊಪ್ಪು (Coriander Crop) ಬೆಳೆದಿದ್ದ. ಇನ್ನೇನು ಒಂದು ದಿನ ಬಿಟ್ಟಿದ್ರೆ… ಕಟಾವು ಮಾಡಿ ಮಾರುಕಟ್ಟೆಗೆ ಹಾಕಬೇಕಿತ್ತು. ಅಷ್ಟರಲ್ಲೆ… ಅದ್ಯಾರ ಕಣ್ಣು ಬಿತ್ತೊ ಏನೋ… ರಾತ್ರೋರಾತ್ರಿ ಕೊತ್ತಂಬರಿ ತೋಟಕ್ಕೆ ವಿಷ ಸಿಂಪಡಣೆ ಮಾಡಿದ್ದಾರೆ. ಇದ್ರಿಂದ ತೋಟದಲ್ಲಿದ್ದ ಕೊತ್ತಂಬರಿ ಸೊಪ್ಪು ಒಣಗಿ ಹೋಗಿದೆ. ಈ ಕುರಿತು ಒಂದು ವರದಿ. ಹುಲುಸಾಗಿ ಬೆಳೆದು ನಿಂತ ಕೊತ್ತಂಬರಿ ಸೊಪ್ಪಿನ ಮೇಲೆ ವಕ್ರದೃಷ್ಟಿ ಬೀರಿದ ದುಷ್ಕರ್ಮಿಗಳು (Miscreants) ಕಟಾವಿಗೆ ಬಂದಿದ್ದ ಕೊತ್ತಂಬರಿ ಸೊಪ್ಪಿನ ತೋಟಕ್ಕೆ ಕಳೆನಾಶಕ ಸಿಂಪಡಣೆ ಮಾಡಿ (Pesticides) ರೈತನ ಕಣ್ಣಲ್ಲಿ ನೀರು ಹಾಕಿಸಿರುವುದು ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಪೆಸಲಪರ್ತಿ ಗ್ರಾಮದ ಬಡ ರೈತ ಶ್ರೀನಿವಾಸ್ ತೋಟದಲ್ಲಿ.

ಹೌದು! ಶ್ರೀನಿವಾಸ್ ತನ್ನ ಒಂದು ಎಕರೆ 27 ಗುಂಟೆ ಜಮೀನಿನಲ್ಲಿ 50 ಸಾವಿರ ರೂಪಾಯಿ ಬಂಡವಾಳ ಹಾಕಿ ಹನಿ ನೀರಾವರಿ ಮೂಲಕ ಕೊತ್ತಂಬರಿ ಸೊಪ್ಪು ಬೆಳೆದಿದ್ದ, ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆ ಇತ್ತು, ಒಂದೂವರೆ ಲಕ್ಷ ರೂಪಾಯಿಗೆ ಕೊತ್ತಂಬರಿ ಸೊಪ್ಪು ತೋಟ ಮಾರಾಟ ಮಾಡಿದ್ದ. ಗುತ್ತಿಗೆ ಪಡೆದವರು ಆಗಮಿಸಿ ಕೊತ್ತಂಬರಿ ಸೊಪ್ಪು ಕೀಳುವುದಕ್ಕೂ ಮುನ್ನ ದುಷ್ಕರ್ಮಿಗಳು ತೋಟಕ್ಕೆ ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ಇದ್ರಿಂದ ಬೆಳೆದು ನಿಂತಿದ್ದ ಕೊತ್ತಂಬರಿ ಸೊಪ್ಪು ಒಣಗಿದೆ.

ಶ್ರೀನಿವಾಸ್ ತೋಟದಲ್ಲಿ ಬೆಳೆದಿದ್ದ ಕೊತ್ತಂಬರಿ ಸೊಪ್ಪುನ್ನು ಗುತ್ತಿಗೆ ಪಡೆದಿದ್ದ, ಕೊತ್ತಂಬರಿ ಸೊಪ್ಪು ವ್ಯಾಪಾರಿ ಶ್ರೀಧರ್ ಏನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ. ಒಂದು ಎಕರೆಯಲ್ಲಿ ಬಹುತೇಕ ಕೊತ್ತಂಬರಿ ಸೊಪ್ಪು ಬೆಳೆಗೆ ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ಉಳಿದ ಕೊತ್ತಂಬರಿ ಸೊಪ್ಪನ್ನು ಕೀಳುತ್ತಿದ್ದೇವೆ. ಹಾಕಿದ ಬಂಡವಾಳ ಬರಲ್ಲ. ರೈತ ಮುಂಗಡ ಹಣ ವಾಪಸ್ ಕೊಡುವುದಿಲ್ಲ ಎನ್ನುತ್ತಿದ್ದಾನೆ ಅಂತಾ ತನ್ನ ಅಳಲು ತೋಡಿಕೊಂಡಿದ್ದಾರೆ.

ರೈತನ ಮೇಲಿನ ದ್ವೇಷವೊ… ಇಲ್ಲಾ ಜಮಿನು ವಿವಾದವೊ ಗೊತ್ತಿಲ್ಲ. ಆದ್ರೆ ಬೆಳೆದು ನಿಂತಿದ್ದ ಕೊತ್ತಂಬರಿ ಸೊಪ್ಪುವಿನ ಮೇಲೆ ಕಳೆನಾಶಕ ಸಿಂಪಡಣೆ ಮಾಡಿ, ರೈತನ ಕಣ್ಣಲ್ಲಿ ನೀರು ತರಿಸಿದ್ದು ಮಾತ್ರ ವಿಪರ್ಯಾಸ.

ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

Follow Us
Web contact
Web contact

TV9 Kannada

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ