AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಗಿ ಹೊಲದಲ್ಲಿ ಅರೆಬೆತ್ತಲಾಗಿ ಯುವತಿ ಶವ ಪತ್ತೆ: ಅನ್ಯರಾಜ್ಯದ ಯುವತಿಯನ್ನ ಕೊಂದಿದ್ಯಾರು..?

ರಾಗಿ ಹೊಲದಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಯುವತಿ ಶವ. ಕಲ್ಲಿನಿಂದ ಜಜ್ಜಿ ಕೊಲೆ.. ಅರೆಬೆತ್ತಲಾಗಿ ಬಿದ್ದಿದ್ದ ದೇಹ. ಅನ್ಯರಾಜ್ಯದ ಯುವತಿಯನ್ನ ಇಲ್ಲಿ ಕೊಂದಿದ್ಯಾರು..?

ರಾಗಿ ಹೊಲದಲ್ಲಿ ಅರೆಬೆತ್ತಲಾಗಿ ಯುವತಿ ಶವ ಪತ್ತೆ: ಅನ್ಯರಾಜ್ಯದ ಯುವತಿಯನ್ನ ಕೊಂದಿದ್ಯಾರು..?
ರಾಗಿ ಹೊಲದಲ್ಲಿ ಯುವತಿ ಶವ ಪತ್ತೆ
ರಮೇಶ್ ಬಿ. ಜವಳಗೇರಾ
|

Updated on:Nov 08, 2022 | 9:58 PM

Share

ಚಿಕ್ಕಬಳ್ಳಾಪುರ: ಯಾವ ಊರೋ.. ಯಾರ್ ಹೆತ್ತ ಮಗಳೋ..ಯಾರನ್ನ ನಂಬಿ ಬಂದಿದ್ಳೋ.. ಅದ್ಯಾವ ಕಿರಾತಕನ ಕೈಗೆ ಸಿಲುಕಿದ್ಳೋ ಏನೋ.. ರಾಗಿ ಹೊಲದ ಮಧ್ಯೆಯೇ ರಕ್ಕಸರ ಕೈಗೆ ಸಿಲುಕಿ ನಲುಗಿದ್ದಾಳೆ. ನೋಡಲಾಗದಂತಹ ಸ್ಥಿತಿಯಲ್ಲಿ ಶವವಾಗಿ ಬಿದ್ದಿದ್ದಾಳೆ. ಚಿಕ್ಕಬಳ್ಳಾಪುರದ(chikkaballapur) ಹಾರೋಬಂಡೆ ಗ್ರಾಮದ ಹೈವೇ ಬಳಿ ರಾಗಿ ಹೊಲದಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಯುವತಿ ಶವ (Dead Body)ಪತ್ತೆಯಾಗಿದ್ದು, ಅನ್ಯರಾಜ್ಯದ ಯುವತಿಯನ್ನ ಇಲ್ಲಿ ಕೊಂದಿದ್ಯಾರು..? ಅಪರಿಚಿತ ಯುವತಿಯ ಹತ್ಯೆ ಕಾರಣವೇ ನಿಗೂಢವಾಗಿದೆ.

ಹೊನ್ನೇನಹಳ್ಳಿಯ ವೆಂಕಟೇಶಪ್ಪಗೆ ಸೇರಿದ ರಾಗಿ ಜಮೀನಿನಲ್ಲಿ ಯುವತಿ ತಲೆಯನ್ನ ಜಜ್ಜಿಹಾಕಿರುವ ಕ್ರಿಮಿಗಳು, ಅರೆಬೆತ್ತಲಾಗಿ ಶವವನ್ನ ಎಸೆದಿದ್ದಾರೆ. ಅಪರಿಚಿತ ಯುವತಿಯ ಇದೇ ಮೃತದೇಹ ಜನರನ್ನೆಲ್ಲ ಬೆಚ್ಚಿ ಬೀಳಿಸಿದೆ. ಕಲ್ಲಿನಿಂದ ಜಜ್ಜಿ ಯುವತಿಯನ್ನ ಕೊಂದಿರುವ ಕ್ರಿಮಿಗಳು, ಅರೆಬೆತ್ತಲಾಗಿ ಶವ ಎಸೆದು ಹೋಗಿದ್ದಾರೆ.. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ಪರಿಶೀಲನೆ ಪ್ರಕಾರ, ಹತ್ಯೆಯಾದ ಯುವತಿ ಮೃತ ಯುವತಿ ನೇಪಾಳ ಅಥವಾ ಈಶಾನ್ಯ ರಾಜ್ಯಗಳ ಮೂಲದವಳು ಎನ್ನಲಾಗ್ತಿದೆ.

ಅನೈತಿಕ ಸಂಬಂಧ: ಅಡಿಕೆ ತರಲು ಪ್ರಿಯಕರನ ಮನೆಗೆ ಹೋದವಳು ಹೆಣವಾದಳು!

ಆದ್ರೆ, ಯುವತಿಯನ್ನ ಇಲ್ಲಿಗೆ ಕರೆತಂದಿದ್ದು ಯಾರು..? ಅತ್ಯಾಚಾರ ಮಾಡಿ ಕೊಂದು ಹಾಕಿದ್ದಾರಾ..? ಇಲ್ಲ ಬೇರೆ ಯಾವುದಾದ್ರೂ ಕಾರಣಕ್ಕೆ ಹತ್ಯೆ ನಡೆದಿದೆಯಾ ಅನ್ನೋ ಪ್ರಶ್ನೆಗಳು ಎದ್ದಿವೆ.. ಸದ್ಯ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಶವವಾಗಿರುವ ಯುವತಿ ಕೈಯಲ್ಲಿ ವಾಚ್ ಇದೆ. ಚಪ್ಪಲಿಯೂ ಅಲ್ಲೇ ಬಿದ್ದಿದೆ. ಆದ್ರೆ, ವಿವಾಹವಾದ ಕುರುಹುಗಳು ಇಲ್ಲ. ಸದ್ಯ, ಮೃತದೇಹವನ್ನ ಮೆಡಿಕಲ್ ಕಾಲೇಜು ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.. ಯುವತಿ ಹತ್ಯೆಯನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಹತ್ತಾರು ದೃಷ್ಟಿಕೋನದಲ್ಲಿ ತನಿಖೆ ನಡೆಸುತ್ತಿದ್ದಾರೆ.

ವರದಿ: ಭೀಮಪ್ಪ ಪಾಟೀಲ್, ಟಿವಿ9 ಚಿಕ್ಕಬಳ್ಳಾಫುರ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:58 pm, Tue, 8 November 22

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!