AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಂಸನೀಯ! ಚಿಕ್ಕಬಳ್ಳಾಪುರದಲ್ಲಿ ಗಂಧದಗುಡಿ ಘಮಲು -ಅಪ್ಪು ಅಭಿಮಾನಿಗಳಿಂದ ಗಂಧದ ಸಸಿ ವಿತರಣೆ

Sandalwood Saplings: ಆಗ ದೇಹದಾನ, ನೇತ್ರದಾನ, ದಾನಗಳಿಗೆ ಮೇಲುಗೈ! ಈಗ ಪರಿಸರ ಕಾಳಜಿಗಾಗಿ ಗಂಧದ ಪರಿಮಳ ಹರಡುತ್ತಿರುವ ಅಪ್ಪು ಅಭಿಮಾನಿಗಳು! ಹುಶಃ ರಾಜ್ಯದಲ್ಲಿ ಇಂತಹ ಪ್ರಯತ್ನ ಇದೊಂದೇ ಆಗಿದೆ.

ಪ್ರಶಂಸನೀಯ! ಚಿಕ್ಕಬಳ್ಳಾಪುರದಲ್ಲಿ ಗಂಧದಗುಡಿ ಘಮಲು -ಅಪ್ಪು ಅಭಿಮಾನಿಗಳಿಂದ ಗಂಧದ ಸಸಿ ವಿತರಣೆ
ಆಗ ದೇಹದಾನ, ನೇತ್ರದಾನ, ದಾನಗಳಿಗೆ ಮೇಲುಗೈ! ಈಗ ಪರಿಸರ ಕಾಳಜಿಗಾಗಿ ಗಂಧದ ಪರಿಮಳ ಹರಡುತ್ತಿರುವ ಅಪ್ಪು ಅಭಿಮಾನಿಗಳು!
TV9 Web
| Edited By: |

Updated on:Oct 28, 2022 | 5:49 PM

Share

ಪವರ್‌ಸ್ಟಾರ್ ಪುನೀತ್‌ ರಾಜಕುಮಾರ್ (Puneeth Rajkumar) ನಟಿಸಿರುವ ಕೊನೆಯ ಸಿನಿಮಾ ಗಂಧದಗುಡಿ (Gandhada Gudi) ಸಾಕ್ಷ್ಯಚಿತ್ರ ರೂಪದಲ್ಲಿ ಇಂದು ತೆರೆಗೆ ಅಪ್ಪಳಿಸುತ್ತಿದ್ದಂತೆ ಅಪ್ಪು ಅಭಿಮಾನಿಗಳ ಸಂತಸ, ಸಂಭ್ರಮ ಮುಗಿಲುಮುಟ್ಟಿದೆ. ಮತ್ತೊಂದಡೆ ಗಂಧದಗುಡಿ ಚಲನಚಿತ್ರ ಪ್ರೇರಣೆಯಿಂದ ಚಲನಚಿತ್ರ ವೀಕ್ಷಿಸಲು ಬಂದವರಿಗೆ ಅಪ್ಪು ಅಭಿಮಾನಿಗಳು ಉಚಿತವಾಗಿ ಗಂಧದ ಸಸಿಗಳನ್ನು (Sandalwood Saplings) ವಿತರಣೆ ಮಾಡಿ ಪರಿಸರ ಕಾಳಜಿ ಮೆರೆದಿದ್ದಾರೆ. ಬಹುಶಃ ರಾಜ್ಯದಲ್ಲಿ ಇಂತಹ ಪ್ರಯತ್ನ ಇದೊಂದೇ ಆಗಿದೆ.

ಗಂಧದಗುಡಿ ಸಾಕ್ಷ್ಯಚಿತ್ರದ ಮೂಲಕ ನಾಡಿನ ನೆಲ, ಜಲ, ಅರಣ್ಯ ಸಂಪತ್ತು ಪ್ರವಾಸಿ ತಾಣಗಳನ್ನು ಕಣ್ಮುಂದೆ ತಂದು ನಿಲ್ಲಿಸಿರುವ ಪವರ್‌ಸ್ಟಾರ್ ಪುನೀತ್‌ ರಾಜಕುಮಾರ್, ಅಭಿಮಾನಿಗಳ ಮನದಲ್ಲಿ ಪರಿಸರ ಕಾಳಜಿ ಬಿತ್ತಿದ್ದಾರೆ. ದಿವಂಗತ ಪವರ್‌ಸ್ಟಾರ್ ಪುನೀತ್‌ ರಾಜಕುಮಾರ್ ನಟಿಸಿರುವ ಗಂಧದಗುಡಿ ಕೊನೆಯ ಚಿತ್ರವನ್ನು ಮುಗಿಬಿದ್ದು ಅವರ ಅಭಿಮಾನಿಗಳು ವೀಕ್ಷಿಸಿದರು. ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಲನಚಿತ್ರ ಮಂದಿರ, ಶಿಡ್ಲಘಟ್ಟದ ವೆಂಕಟೇಶ್ವರ ಚಲನಚಿತ್ರ ಮಂದಿರದಲ್ಲಿ ಫಸ್ಟ್ ಶೋ ಪ್ರದರ್ಶನ ಕಂಡಿತು. ಅಪ್ಪು ಅಭಿಮಾನಿಗಳಂತೂ ಅಪ್ಪು ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಈಡುಗಾಯಿ ಹೊಡೆದು ಚಿತ್ರ ಶತದಿನೋತ್ಸವ ಆಚರಿಸಲೆಂದು ಶುಭ ಕೋರಿದರು.

ಆಗ ದೇಹದಾನ, ನೇತ್ರದಾನ, ದಾನಗಳಿಗೆ ಮೇಲುಗೈ! ಈಗ ಪರಿಸರ ಕಾಳಜಿಗಾಗಿ ಗಂಧದ ಪರಿಮಳ ಹರಡುತ್ತಿರುವ ಅಪ್ಪು ಅಭಿಮಾನಿಗಳು!

Puneeth Rajkumar fans distribute Sandalwood saplings while watching Gandhada Gudi cinema in Chikkaballapur 1

ಇನ್ನು ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಲನಚಿತ್ರ ಮಂದಿರದಲ್ಲಿ ಪರದೆ ಮೇಲೆ ಶೋ ಆರಂಭವಾಗುತ್ತಿದ್ದಂತೆ ಅಪ್ಪು ಅಭಿಮಾನಿಗಳು ಪರದೆಗೆ ಆರತಿ ಎತ್ತಿ, ಕುಂಬಳ ಕಾಯಿಯಿಂದ ದೃಷ್ಟಿ ತೆಗೆದು ಅಪ್ಪು ಚಿತ್ರಕ್ಕೆ ಹೂಮಳೆಗೆರೆದು ಪ್ರದರ್ಶನಕ್ಕೆ ಸ್ವಾಗತ ಕೋರಿದರು. ಸಾಕ್ಷ್ಯ ಚಿತ್ರದಲ್ಲಿ ಅಪ್ಪು ಕಾಡಿನಲ್ಲಿ ನಡೆದಾಡುವ ದೃಶ್ಯಗಳನ್ನು ಕಂಡು ಪುನೀತರಾದರು. ಚಿತ್ರದಲ್ಲಿ ಪರಿಸರ ಪ್ರೇಮ ತೊರೆದ ಕಾರಣ ಇದರಿಂದ ಪ್ರೇರಣೆಗೊಂಡ ಅವರ ಅಭಿಮಾನಿಗಳು ಚಲನಚಿತ್ರ ವೀಕ್ಷಣೆ ಮಾಡಲು ಬಂದ ಪ್ರೇಕ್ಷಕರಿಗೆ ಪ್ರತಿಯೊಬ್ಬರಿಗೂ ಗಂಧದ ಸಸಿಗಳನ್ನು ವಿತರಿಸಿ, ಪರಿಸರ ಪ್ರೇಮ ಮೆರೆದರು. ಇನ್ನು ಕೆಲವರು ಅಪ್ಪು ಸ್ಮರಣೆಯಲ್ಲಿ ಶ್ರೀಗಂಧದ ಸಸಿಗಳನ್ನು ಹೊತ್ತು ನೃತ್ಯ ಮಾಡಿದರು. (ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ )

ಒಟ್ನಲ್ಲಿ ನಿಜ ಜೀವನದಲ್ಲಿ ಸಮಾಜ ಪರಿಸರ ಸೇವೆ ದೀನ ದಲಿತ ಸೇವೆ ಮಾಡುವುದರ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ದಿವಂಗತ ನಟ ಪುನೀತ್ ರಾಜಕುಮಾರ್, ತಮ್ಮ ಕೊನೆ ಚಲನಚಿತ್ರ ಗಂಧದ ಗುಡಿಯಲ್ಲೂ ಪರಿಸರ ಪ್ರೇಮ ಮೆರೆದ ಕಾರಣ ಅವರ ಹಾದಿಯಲ್ಲೆ ಅವರ ಅಭಿಮಾನಿಗಳು ವಿವಿಧೆಡೆ ವಿವಿಧ ಸಾಮಾಜಿಕ ಕೈಕಾರ್ಯಗಳನ್ನು ಕೈಗೊಂಡಿರುವುದು ಪ್ರಶಂಸನೀಯ.

Published On - 5:47 pm, Fri, 28 October 22

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?