Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಡಿಗೆರೆ ಬಳಿ ಭೂಕಂಪನದ ಅನುಭವ; ಆತಂಕ ವ್ಯಕ್ತಪಡಿಸಿದ ಗ್ರಾಮಸ್ಥರು

‘ಜೋರಾಗಿ ಮಳೆ ಬಂದು ಹೋಗಿದ್ದರಿಂದ ನಾನು ಆಗಷ್ಟೇ ಮಲಗಲು ತೆರಳುತ್ತಿದ್ದೆ, ಈ ವೇಳೆ ಭೂಮಿಯೊಳಗೆ ವೈಬ್ರೆಷನ್ ಆದಹಾಗೆ ಆಗಿ ಒಂದು ರೀತಿಯ ವಿಚಿತ್ರ ಶಬ್ಧ ಕಿವಿಗೆ ಬಡಿಯಿತು’ ಎಂದು ಕಡಿದಾಳು ಗ್ರಾಮದ ಸುಂದರೇಶ್ ತಿಳಿಸಿದ್ದಾರೆ.

ಮೂಡಿಗೆರೆ ಬಳಿ ಭೂಕಂಪನದ ಅನುಭವ; ಆತಂಕ ವ್ಯಕ್ತಪಡಿಸಿದ ಗ್ರಾಮಸ್ಥರು
ಸಾಂಕೇತಿಕ ಚಿತ್ರ
Follow us
guruganesh bhat
|

Updated on:May 08, 2021 | 7:54 PM

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಸವಳಲು, ದಾರದಹಳ್ಳಿ, ಬಿಳ್ಳೂರು, ಕಡಿದಾಳು ಸೇರಿದಂತೆ ಹಲವೆಡೆ ನಿನ್ನೆ ಮಧ್ಯರಾತ್ರಿಯ ವೇಳೆಯಲ್ಲಿ ಭೂಕಂಪನದ ಅನುಭವ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.  ನಿನ್ನೆ ಮಧ್ಯರಾತ್ರಿ 1.50ರ ಸಮಯದಲ್ಲಿ ಸುಮಾರು 15  ಸೆಕೆಂಡುಗಳ ಕಾಲ ಭೂಮಿ ಕಂಪಿಸಿರುವ ಬಗ್ಗೆ ಸ್ಥಳೀಯರು ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ನಿನ್ನೆ ಗುಡುಗು-ಸಿಡಿಲಿನ ಆರ್ಭಟದ ಜೊತೆಗೆ ಮಳೆಯೂ ಇದ್ದಿದ್ದರಿಂದ ಆ ವೇಳೆಯಲ್ಲಿ ಭೂಕಂಪನದ ಅನುಭವ ಜನರ ಗಮನಕ್ಕೆ ಬಂದರೂ ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಇದು ಕೇವಲ ನಮಗೆ ಮಾತ್ರ ಅನುಭವ ಆಗಿದ್ದು ಇರಬೇಕು ಅಂತ ಎಲ್ಲರೂ ತಮ್ಮ ಪಾಡಿಗೆ ತಾವು ಸುಮ್ಮನಾಗಿದ್ದಾರೆ. 

ಈ ಅನುಭವ ಈ ಭಾಗದ ಹಲವು ಜನರಿಗಾಗಿದೆ. ಭೂಮಿ ಒಳಗೆ ವಿಚಿತ್ರ ಶಬ್ದದ ಜೊತೆಗೆ ನೆಲ ಕಂಪಿಸುವುದನ್ನು ಕಂಡು ಎಚ್ಚರವಿದ್ದವರು ಹೆದರಿಕೊಂಡಿದ್ದಾರೆ. ಇದು ಕೇವಲ ನಮಗೆ ಮಾತ್ರ ಅನುಭವ ಆಗಿದ್ದು ಇರಬೇಕು ಅಂತ ಎಲ್ಲರೂ ತಮ್ಮ ಪಾಡಿಗೆ ತಾವು ಸುಮ್ಮನಾಗಿದ್ದಾರೆ. ಆದರೆ ಇಂದು ಬೆಳಗ್ಗೆ ಜನರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡಾಗ, ಹೌದು ನಮ್ಮೂರಲ್ಲೂ ಭೂಮಿ ಅಲುಗಾಡಿದ ಹಾಗಾಯ್ತು ಎಂದು ಎಂಬುದು ಬೆಳಕಿಗೆ ಬಂದಿದೆ. ಐದಾರು ಗ್ರಾಮದ ಜನರು ಭೂಮಿ ಕಂಪಿಸಿದ ಅನುಭವ ಹಂಚಿಕೊಂಡಿದ್ದಾರೆ.   ಅಂದಹಾಗೆ 2019ರ ಅಗಸ್ಟ್​ನ ಮಹಾಮಳೆಯ ಸಂದರ್ಭದಲ್ಲಿ ಇದೇ ರೀತಿಯ ಭೂ ಕಂಪನ, ವಿಚಿತ್ರ ಶಬ್ಧದ ಅನುಭವವನ್ನು ಈ ಭಾಗದ ಜನರು ಎದುರಿಸಿದ್ದರು.  ಆದರೆ, ಈ ಬಾರಿ ಮಳೆಗಾಲಕ್ಕೂ ಮುಂಚೆಯೇ ಭೂಮಿ ಕಂಪಿಸಿದ್ದು, ವಿಚಿತ್ರ ಶಬ್ಧದ ಅನುಭವ ಜನರಲ್ಲಿ ಆತಂಕ ಮೂಡಿಸಿದೆ.

‘ಜೋರಾಗಿ ಮಳೆ ಬಂದು ಹೋಗಿದ್ದರಿಂದ ನಾನು ಆಗಷ್ಟೇ ಮಲಗಲು ತೆರಳುತ್ತಿದ್ದೆ, ಈ ವೇಳೆ ಭೂಮಿಯೊಳಗೆ ವೈಬ್ರೆಷನ್ ಆದಹಾಗೆ ಆಗಿ ಒಂದು ರೀತಿಯ ವಿಚಿತ್ರ ಶಬ್ಧ ಕಿವಿಗೆ ಬಡಿಯಿತು’ ಎಂದು ಕಡಿದಾಳು ಗ್ರಾಮದ ಸುಂದರೇಶ್ ತಿಳಿಸಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಮೂಡಿಗೆರೆ ವಾಸಿ ನಳಂದ ಗಣೇಶ್, ‘ರಾತ್ರಿ 1.50ರ ವೇಳೆಯಲ್ಲಿ ನಾನು ಎಚ್ಚರವಾಗಿದ್ದೆ, ಆಗ ಸುಮಾರು 15 ಸೆಕೆಂಡುಗಳ ಕಾಲ ಭೂಮಿ ಅಲುಗಾಡಿದ್ದನ್ನು ಕಂಡು ಭಯಗೊಂಡೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆಮ್ಲಜನಕ ಪೂರೈಕೆ, ಉಪಚುನಾವಣೆ ಮತ್ತು ಕೊವಿಡ್​ ನಿರ್ವಹಣೆ; ಬೊಮ್ಮಾಯಿ ಮತ್ತು ವಿಜಯೇಂದ್ರರಿಂದ ವರದಿ ಪಡೆದ ಅಮಿತ್ ಶಾ

ಚಿಕ್ಕಮಗಳೂರು: ಒಂದೇ ಗ್ರಾಮದ 31 ಜನರಿಗೆ ಕೊರೊನಾ ಪಾಸಿಟಿವ್, 48 ಪೊಲೀಸ್​ ಸಿಬ್ಬಂದಿಗೂ ಸೋಂಕು ದೃಢ

(Earthquake near mudigere near Chikmagalur villagers who expressed concern)

Published On - 7:48 pm, Sat, 8 May 21

ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​