AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಡಿಗೆರೆ ಬಳಿ ಭೂಕಂಪನದ ಅನುಭವ; ಆತಂಕ ವ್ಯಕ್ತಪಡಿಸಿದ ಗ್ರಾಮಸ್ಥರು

‘ಜೋರಾಗಿ ಮಳೆ ಬಂದು ಹೋಗಿದ್ದರಿಂದ ನಾನು ಆಗಷ್ಟೇ ಮಲಗಲು ತೆರಳುತ್ತಿದ್ದೆ, ಈ ವೇಳೆ ಭೂಮಿಯೊಳಗೆ ವೈಬ್ರೆಷನ್ ಆದಹಾಗೆ ಆಗಿ ಒಂದು ರೀತಿಯ ವಿಚಿತ್ರ ಶಬ್ಧ ಕಿವಿಗೆ ಬಡಿಯಿತು’ ಎಂದು ಕಡಿದಾಳು ಗ್ರಾಮದ ಸುಂದರೇಶ್ ತಿಳಿಸಿದ್ದಾರೆ.

ಮೂಡಿಗೆರೆ ಬಳಿ ಭೂಕಂಪನದ ಅನುಭವ; ಆತಂಕ ವ್ಯಕ್ತಪಡಿಸಿದ ಗ್ರಾಮಸ್ಥರು
ಸಾಂಕೇತಿಕ ಚಿತ್ರ
guruganesh bhat
|

Updated on:May 08, 2021 | 7:54 PM

Share

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಸವಳಲು, ದಾರದಹಳ್ಳಿ, ಬಿಳ್ಳೂರು, ಕಡಿದಾಳು ಸೇರಿದಂತೆ ಹಲವೆಡೆ ನಿನ್ನೆ ಮಧ್ಯರಾತ್ರಿಯ ವೇಳೆಯಲ್ಲಿ ಭೂಕಂಪನದ ಅನುಭವ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.  ನಿನ್ನೆ ಮಧ್ಯರಾತ್ರಿ 1.50ರ ಸಮಯದಲ್ಲಿ ಸುಮಾರು 15  ಸೆಕೆಂಡುಗಳ ಕಾಲ ಭೂಮಿ ಕಂಪಿಸಿರುವ ಬಗ್ಗೆ ಸ್ಥಳೀಯರು ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ನಿನ್ನೆ ಗುಡುಗು-ಸಿಡಿಲಿನ ಆರ್ಭಟದ ಜೊತೆಗೆ ಮಳೆಯೂ ಇದ್ದಿದ್ದರಿಂದ ಆ ವೇಳೆಯಲ್ಲಿ ಭೂಕಂಪನದ ಅನುಭವ ಜನರ ಗಮನಕ್ಕೆ ಬಂದರೂ ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಇದು ಕೇವಲ ನಮಗೆ ಮಾತ್ರ ಅನುಭವ ಆಗಿದ್ದು ಇರಬೇಕು ಅಂತ ಎಲ್ಲರೂ ತಮ್ಮ ಪಾಡಿಗೆ ತಾವು ಸುಮ್ಮನಾಗಿದ್ದಾರೆ. 

ಈ ಅನುಭವ ಈ ಭಾಗದ ಹಲವು ಜನರಿಗಾಗಿದೆ. ಭೂಮಿ ಒಳಗೆ ವಿಚಿತ್ರ ಶಬ್ದದ ಜೊತೆಗೆ ನೆಲ ಕಂಪಿಸುವುದನ್ನು ಕಂಡು ಎಚ್ಚರವಿದ್ದವರು ಹೆದರಿಕೊಂಡಿದ್ದಾರೆ. ಇದು ಕೇವಲ ನಮಗೆ ಮಾತ್ರ ಅನುಭವ ಆಗಿದ್ದು ಇರಬೇಕು ಅಂತ ಎಲ್ಲರೂ ತಮ್ಮ ಪಾಡಿಗೆ ತಾವು ಸುಮ್ಮನಾಗಿದ್ದಾರೆ. ಆದರೆ ಇಂದು ಬೆಳಗ್ಗೆ ಜನರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡಾಗ, ಹೌದು ನಮ್ಮೂರಲ್ಲೂ ಭೂಮಿ ಅಲುಗಾಡಿದ ಹಾಗಾಯ್ತು ಎಂದು ಎಂಬುದು ಬೆಳಕಿಗೆ ಬಂದಿದೆ. ಐದಾರು ಗ್ರಾಮದ ಜನರು ಭೂಮಿ ಕಂಪಿಸಿದ ಅನುಭವ ಹಂಚಿಕೊಂಡಿದ್ದಾರೆ.   ಅಂದಹಾಗೆ 2019ರ ಅಗಸ್ಟ್​ನ ಮಹಾಮಳೆಯ ಸಂದರ್ಭದಲ್ಲಿ ಇದೇ ರೀತಿಯ ಭೂ ಕಂಪನ, ವಿಚಿತ್ರ ಶಬ್ಧದ ಅನುಭವವನ್ನು ಈ ಭಾಗದ ಜನರು ಎದುರಿಸಿದ್ದರು.  ಆದರೆ, ಈ ಬಾರಿ ಮಳೆಗಾಲಕ್ಕೂ ಮುಂಚೆಯೇ ಭೂಮಿ ಕಂಪಿಸಿದ್ದು, ವಿಚಿತ್ರ ಶಬ್ಧದ ಅನುಭವ ಜನರಲ್ಲಿ ಆತಂಕ ಮೂಡಿಸಿದೆ.

‘ಜೋರಾಗಿ ಮಳೆ ಬಂದು ಹೋಗಿದ್ದರಿಂದ ನಾನು ಆಗಷ್ಟೇ ಮಲಗಲು ತೆರಳುತ್ತಿದ್ದೆ, ಈ ವೇಳೆ ಭೂಮಿಯೊಳಗೆ ವೈಬ್ರೆಷನ್ ಆದಹಾಗೆ ಆಗಿ ಒಂದು ರೀತಿಯ ವಿಚಿತ್ರ ಶಬ್ಧ ಕಿವಿಗೆ ಬಡಿಯಿತು’ ಎಂದು ಕಡಿದಾಳು ಗ್ರಾಮದ ಸುಂದರೇಶ್ ತಿಳಿಸಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಮೂಡಿಗೆರೆ ವಾಸಿ ನಳಂದ ಗಣೇಶ್, ‘ರಾತ್ರಿ 1.50ರ ವೇಳೆಯಲ್ಲಿ ನಾನು ಎಚ್ಚರವಾಗಿದ್ದೆ, ಆಗ ಸುಮಾರು 15 ಸೆಕೆಂಡುಗಳ ಕಾಲ ಭೂಮಿ ಅಲುಗಾಡಿದ್ದನ್ನು ಕಂಡು ಭಯಗೊಂಡೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆಮ್ಲಜನಕ ಪೂರೈಕೆ, ಉಪಚುನಾವಣೆ ಮತ್ತು ಕೊವಿಡ್​ ನಿರ್ವಹಣೆ; ಬೊಮ್ಮಾಯಿ ಮತ್ತು ವಿಜಯೇಂದ್ರರಿಂದ ವರದಿ ಪಡೆದ ಅಮಿತ್ ಶಾ

ಚಿಕ್ಕಮಗಳೂರು: ಒಂದೇ ಗ್ರಾಮದ 31 ಜನರಿಗೆ ಕೊರೊನಾ ಪಾಸಿಟಿವ್, 48 ಪೊಲೀಸ್​ ಸಿಬ್ಬಂದಿಗೂ ಸೋಂಕು ದೃಢ

(Earthquake near mudigere near Chikmagalur villagers who expressed concern)

Published On - 7:48 pm, Sat, 8 May 21

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ