AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿನಾಡಲ್ಲಿ ಸಂಗೀತದ ಝೇಂಕಾರ: ಮನರಂಜನೆ ಉಣಬಡಿಸಿದ ಸೆಲೆಬ್ರಿಟಿಗಳಿಗೆ ಜೈಕಾರ!

ಚಿಕ್ಕಮಗಳೂರು: ಇಳಿಸಂಜೆಯಲ್ಲಿ ಸಂಗೀತದ ಝೇಂಕಾರ. ಮನರಂಜನೆ ಉಣಬಡಿಸಿದ ಸೆಲೆಬ್ರಿಟಿಗಳಿಗೆ ಪ್ರೇಕ್ಷಕರ ಜೈಕಾರ. ರಂಗು ರಂಗಿನ ಬೆಳಕಿನಲ್ಲಿ ರಂಗೋಲಿ ಚಿತ್ತಾರ. ಮ್ಯೂಸಿಕಲ್ ನೈಟ್​ಗೆ ಸಾಕ್ಷಿಯಾದ ಜನಸಾಗರ. ಮಲೆನಾಡಿನ ಮಂಜಿನಲ್ಲಿ ಹಾಡು ಗುನುಗಿದ್ರೆ ಹೇಗಿರುತ್ತೆ.. ಹಾಡಿನ ಜೊತೆ ಡ್ಯಾನ್ಸ್ ಮಾಡಿದ್ರೆ ಕೇಳ್ಬೇಕಾ.. ಕಾಫಿನಾಡು ಚಿಕ್ಕಮಗಳೂ ಜಿಲ್ಲೆಯಲ್ಲಿ ಎರಡನೇ ದಿನವೂ ಜಾನಪದ ಹಬ್ಬ ರಂಗೇರಿತ್ತು. ಗಾಯಕಿ ಕಲಾವತಿ ಹೇಳಿದ ಕೋಳಿಕೆ ರಂಗ ಕಾಫಿನಾಡಿನಲ್ಲಿ ಹೈವೋಲ್ಟೇಜ್ ಪವರ್ ಹೊತ್ತಿಸಿತ್ತು. ಅಜಯ್ ವಾರಿಯರ್-ಜೋಗಿ ಸುನೀತಾ ಜುಗಲ್ ಬಂಧಿ ಸಾಂಗ್​ಗೆ ಎಲ್ರೂ ಕಳೆದೋದ್ರು. ಹೇಮಂತ್- ಶಮಿತಾ […]

ಕಾಫಿನಾಡಲ್ಲಿ ಸಂಗೀತದ ಝೇಂಕಾರ: ಮನರಂಜನೆ ಉಣಬಡಿಸಿದ ಸೆಲೆಬ್ರಿಟಿಗಳಿಗೆ ಜೈಕಾರ!
ಸಾಧು ಶ್ರೀನಾಥ್​
|

Updated on: Mar 01, 2020 | 5:28 PM

Share

ಚಿಕ್ಕಮಗಳೂರು: ಇಳಿಸಂಜೆಯಲ್ಲಿ ಸಂಗೀತದ ಝೇಂಕಾರ. ಮನರಂಜನೆ ಉಣಬಡಿಸಿದ ಸೆಲೆಬ್ರಿಟಿಗಳಿಗೆ ಪ್ರೇಕ್ಷಕರ ಜೈಕಾರ. ರಂಗು ರಂಗಿನ ಬೆಳಕಿನಲ್ಲಿ ರಂಗೋಲಿ ಚಿತ್ತಾರ. ಮ್ಯೂಸಿಕಲ್ ನೈಟ್​ಗೆ ಸಾಕ್ಷಿಯಾದ ಜನಸಾಗರ.

ಮಲೆನಾಡಿನ ಮಂಜಿನಲ್ಲಿ ಹಾಡು ಗುನುಗಿದ್ರೆ ಹೇಗಿರುತ್ತೆ.. ಹಾಡಿನ ಜೊತೆ ಡ್ಯಾನ್ಸ್ ಮಾಡಿದ್ರೆ ಕೇಳ್ಬೇಕಾ.. ಕಾಫಿನಾಡು ಚಿಕ್ಕಮಗಳೂ ಜಿಲ್ಲೆಯಲ್ಲಿ ಎರಡನೇ ದಿನವೂ ಜಾನಪದ ಹಬ್ಬ ರಂಗೇರಿತ್ತು. ಗಾಯಕಿ ಕಲಾವತಿ ಹೇಳಿದ ಕೋಳಿಕೆ ರಂಗ ಕಾಫಿನಾಡಿನಲ್ಲಿ ಹೈವೋಲ್ಟೇಜ್ ಪವರ್ ಹೊತ್ತಿಸಿತ್ತು. ಅಜಯ್ ವಾರಿಯರ್-ಜೋಗಿ ಸುನೀತಾ ಜುಗಲ್ ಬಂಧಿ ಸಾಂಗ್​ಗೆ ಎಲ್ರೂ ಕಳೆದೋದ್ರು. ಹೇಮಂತ್- ಶಮಿತಾ ಮಲ್ನಾಡ್ ಹೇಳಿದ ಗೀತೆಗಳು ಕಿವಿಗೆ ಇಂಪು ನೀಡಿದ್ರೆ, ಲೈವ್​ ಆಗಿ ಸಾಂಗ್ ಕೇಳಿ ಪ್ರೇಕ್ಷಕರು ಕಳೆದೋದ್ರು.

ಕಾಫಿನಾಡಿನಲ್ಲಿ ರಂಗೇರಿದ್ದ ಜಾನಪದ ಹಬ್ಬ: ಇನ್ನು, ಭಾರ್ಗವಿ ತಂಡದ ದೀಪ ನೃತ್ಯ ಸೇರಿ ಭರತನಾಟ್ಯ ಪ್ರೇಕ್ಷರನ್ನ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಈ ಮಧ್ಯೆ ಸ್ಟನ್ನಿಂಗ್ ಎಂಟ್ರಿಕೊಟ್ಟ ಮಿಮಿಕ್ರಿ ದಯಾನಂದ ಮಾತಿನ ಕಚಗುಳಿ ಇಟ್ರು. ಕಲಾವಿದರು ಒಂದ್ಕಡೆ ತಮ್ಮ ಟ್ಯಾಲಂಟ್​ ತೋರಿಸ್ತಿದ್ರೆ, ನಾನೇನು ಕಡಿಮೆಯಿಲ್ಲ ಅಂತಾ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಜಾನಪದ ಹಾಡಿಗೆ ದನಿಯಾದರು. ಕಾರ್ಯಕ್ರಮದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಸೇರಿ ಹಲವು ಗಣ್ಯರು ಭಾಗಿಯಾಗಿದ್ರು.

ತಂಪಾದ ಸಂಜೆಯಲ್ಲಿ ಶುರುವಾದ ಸಂಗೀತ ಕಲರವ ಮಧ್ಯರಾತ್ರಿವರೆಗೂ ಜಬರ್​ದಸ್ತ್​ ಆಗಿ ನಡೀತು. ಚುಮು ಚುಮು ಚಳಿ ನಡುವೆ ಗಾಯಕರು, ನೃತ್ಯಪಟುಗಳು ವೇದಿಕೆಯಲ್ಲಿ ಅಬ್ಬರಿಸ್ತಿದ್ರೆ, ಕಾಫಿನಾಡಿನ ಜನ ಹುಚ್ಚೆದ್ದು ಕುಣಿದ್ರು. ಸಚಿವ ಸಿ.ಟಿ.ರವಿ ಪತ್ನಿ ಕೂಡ ಮಸ್ತ್ ಸ್ಪೆಪ್ ಹಾಕಿದ್ರು. ಒಟ್ನಲ್ಲಿ ಕಾಫಿನಾಡಲ್ಲಿ 2 ನೇ ದಿನವೂ ನಡೆದ ಜಾನಪದ ಹಬ್ಬ ಜನರಿಗೆ ಸಂಗೀತದ ರಸದೌತಣದ ಉಣ ಬಡಿಸಿದಂತು ಸುಳ್ಳಲ್ಲ.

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ