Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಯನ್ನು ನೋಡಿದ್ದಕ್ಕೆ ಮಚ್ಚಿನಿಂದ ಹಲ್ಲೆ; ಆರೋಪಿಗಳನ್ನು ಬಂಧಿಸದೆ ಸೆಟಲ್ಮೆಂಟ್​ಗೆ ಪೊಲೀಸರ ಒತ್ತಡ

Chikkamagaluru News: ತಾಯಿಯನ್ನು ನೋಡಿದ ಎಂಬ ಕಾರಣಕ್ಕೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿದೇ ಹಲ್ಲೆಗೊಳಗಾದ ಕುಟುಂಬಸ್ಥರನ್ನು ಒಪ್ಪಂದಕ್ಕೆ ಪೊಲೀಸರು ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಚಿಕ್ಕಮಗಳೂರಿನಲ್ಲಿ ಕೇಳಿಬಂದಿದೆ.

ತಾಯಿಯನ್ನು ನೋಡಿದ್ದಕ್ಕೆ ಮಚ್ಚಿನಿಂದ ಹಲ್ಲೆ; ಆರೋಪಿಗಳನ್ನು ಬಂಧಿಸದೆ ಸೆಟಲ್ಮೆಂಟ್​ಗೆ ಪೊಲೀಸರ ಒತ್ತಡ
ಹಲ್ಲೆಕೋರರನ್ನು ಬಂಧಿಸದ ಪೊಲೀಸರ ವಿರುದ್ಧ ಗಾಯಾಳು ಕುಟುಂಬಸ್ಥರ ಆಕ್ರೋಶ
Follow us
Rakesh Nayak Manchi
|

Updated on: May 21, 2023 | 2:44 PM

ಚಿಕ್ಕಮಗಳೂರು: ತಾಯಿಯನ್ನು ನೋಡಿದ ಎಂಬ ಕಾರಣಕ್ಕೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿದೇ ಹಲ್ಲೆಗೊಳಗಾದ (Assault) ಕುಟುಂಬಸ್ಥರನ್ನು ಒಪ್ಪಂದಕ್ಕೆ ಪೊಲೀಸರು ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಚಿಕ್ಕಮಗಳೂರು ನಗರದಲ್ಲಿ ಕೇಳಿಬಂದಿದೆ. ಆರೋಪಿಗಳನ್ನು ಬಂಧಿಸದ ಹಿನ್ನೆಲೆ ಗಾಯಾಳು ಯುವಕನ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಅಲ್ಲದೆ, ಆಂಬುಲೆನ್ಸ್​ನಲ್ಲಿ ಯುವಕನನ್ನು ನಗರದ ಡಿವೈಎಸ್​ಪಿ (DYSP) ಕಚೇರಿ ಕರೆತಂದು ಆಕ್ರೋಶ ಹೊರಹಾಕಿದ್ದಾರೆ.

ತನ್ನ ತಾಯಿಯನ್ನು ನೋಡಿದ ಎಂಬ ಕಾರಣಕ್ಕೆ ಟೀಪು ನಗರದ ರಿಯಾನ್, ಫಾಜಿಲ್, ಮುಜುಬ್ ಎಂಬವರು ಮುಜೀಬ್ ಎಂಬ ಯುವಕನ ಮೇಲೆ ಮಚ್ಚಿನಿಂದ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಮುಜೀಬ್ ಕುಟುಂಬಸ್ಥರು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಮಾತ್ರ ಆರೋಪಿಗಳನ್ನು ಬಂಧಿಸದೇ ಒಪ್ಪಂದಕ್ಕೆ ಒತ್ತಡ ಹಾಕುತ್ತಿದ್ದಾರೆ ಎಂದು ಮುಜೀಬ್ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: Viral Video: ಕೆನಡಾದಲ್ಲಿ ಬೀದಿ ಜಗಳ, ತಾನು ಸಾಕಿದ ಹೆಬ್ಬಾವಿನಿಂದ ಅಪರಿಚಿತ ವ್ಯಕ್ತಿಗೆ ಹಲ್ಲೆ

ಇಂದು ಕುಟುಂಬಸ್ಥರು ಮುಜೀಬ್​ನನ್ನು ಆಂಬುಲೆನ್ಸ್ ಮೂಲಕ ನಗರ ಡಿವೈಎಸ್​ಪಿ ಕಚೇರಿ ಮುಂದೆ ಕರೆತಂದು ಆಕ್ರೋಶ ಹೊರಹಾಕಿದ್ದು, ಮೂರು ದಿನದ ಹಿಂದೆ ಟಿಪ್ಪು ನಗರದಲ್ಲಿ ಮಚ್ಚಿನಿಂದ ಹಲ್ಲೆ ಮಾಡಲಾಗಿತ್ತು. ಈವರೆಗೆ ಆರೋಪಿಗಳನ್ನು ಯಾಕೆ ಬಂಧಿಸಿಲ್ಲ ಎಂದು ಪೊಲೀಸರನ್ನು ಪ್ರಶ್ನಿಸುತ್ತಿದ್ದಾರೆ. ಇದೇ ವೇಳೆ ನಗರ ಪೋಲಿಸ್ ಠಾಣೆಯ ಸಿಬ್ಬಂದಿಗಳು ಆರೋಪಿಗಳ ಜೊತೆ ಸೆಟಲ್ಮೆಂಟ್​ಗೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ