Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಲೇ ಚಿತ್ರದುರ್ಗ! ಅಚ್ಚುಮೆಚ್ಚಿನ ಅಂಬಾರಿ ಆನೆ ಅರ್ಜುನನನ್ನು ಹೀಗೂ ಚಿರಸ್ಥಾಯಿಯಾಗಿ ನೆನಪು ಮಾಡಿಕೊಳ್ಳಬಹುದು

ಕೋಟೆನಾಡು ಚಿತ್ರದುರ್ಗದಲ್ಲಿ ಅಂಬಾರಿ ಆನೆ ಅರ್ಜುನ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಯುವಪಡೆ ವಿಶೇಷ ಗೌರವ ಸಲ್ಲಿಸಿದೆ.

ಭಲೇ ಚಿತ್ರದುರ್ಗ! ಅಚ್ಚುಮೆಚ್ಚಿನ ಅಂಬಾರಿ ಆನೆ ಅರ್ಜುನನನ್ನು ಹೀಗೂ ಚಿರಸ್ಥಾಯಿಯಾಗಿ ನೆನಪು ಮಾಡಿಕೊಳ್ಳಬಹುದು
ಅಚ್ಚುಮೆಚ್ಚಿನ ಅಂಬಾರಿ ಆನೆ ಅರ್ಜುನನನ್ನು ಹೀಗೂ ಚಿರಸ್ಥಾಯಿಯಾಗಿ ನೆನಪು ಮಾಡಿಕೊಳ್ಳಬಹುದು
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಸಾಧು ಶ್ರೀನಾಥ್​

Updated on: Dec 22, 2023 | 12:52 PM

ವಿಶ್ವ ವಿಖ್ಯಾತ ಮೈಸೂರು ದಸರಾ ಅಂದಾಕ್ಷಣ ಅಂಬಾರಿ ಆನೆ ಅರ್ಜುನ ನೆನಪಾಗದೆ ಇರದು. ಇತ್ತೀಚೆಗೆ ಅರ್ಜುನ ಆನೆ ದಾರುಣ ಸಾವಿಗೀಡಾಗಿದ್ದು ನಾಡಿನ ಜನರ ಮನ ಮಿಡಿದಿದೆ. ಇದೇ ವೇಳೆ ಕೋಟೆನಾಡಿನಲ್ಲಿ ಅಂಬಾರಿ ಆನೆ ಅರ್ಜುನ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಸ್ಮರಿಸಿ ಗೌರವಿಸಲಾಗಿದೆ. ಈ ಕುರಿತು ವರದಿ.

ಇಲ್ಲಿದೆ. ಕೋಟೆನಾಡಿನಲ್ಲಿ ಅಂಬಾರಿ ಆನೆ ಅರ್ಜುನ ಹೆಸರಿನಲ್ಲಿ ಕ್ರಿಕೆಟ್ ಆಯೋಜನೆಯಾಗಿತ್ತು. ಕ್ರಿಕೆಟ್ ಪಂದ್ಯಾವಳಿಯಲ್ಲಿ ನಾಡಿನ ವಿವಿಧೆಡೆಯಿಂದ ತಂಡಗಳು ಭಾಗಿಯಾಗಿದ್ದವು. ಹೊನಲು-ಬೆಳಕಿನ ಪಂದ್ಯ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಜಮಾಯಿಸಿದ್ದರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ. ಹೌದು, ಕೋಟೆನಾಡಿನ ಜನರು ಮಾಜಿ ನಗರಸಭೆ ಅಧ್ಯಕ್ಷ ಬಿ. ಕಾಂತರಾಜ್ ನೇತೃತ್ವದಲ್ಲಿ ಅಂಬಾರಿ ಆನೆ ಅರ್ಜುನ ಕಪ್ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಅಂಬಾರಿ ಆನೆ ಅರ್ಜುನನ ಸ್ಮರಿಸಿ ಗೌರವ ಸಲ್ಲಿಸಿದ್ದಾರೆ.

ಇನ್ನು ಅಂಬಾರಿ ಆನೆ ಅರ್ಜುನ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 35 ತಂಡಗಳು ಭಾಗಿ ಆಗಿವೆ. ಚಿತ್ರದುರ್ಗ ಜಿಲ್ಲೆಯ 19 ತಂಡಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ 16 ತಂಡಗಳು ಭಾಗಿ ಆಗಿವೆ. ಅಂಬಾರಿ ಆನೆ ಅರ್ಜುನ್ ಕಪ್ ವಿನ್ನರ್ ಟೀಮ್ ಗೆ 2ಲಕ್ಷ ರೂಪಾಯಿ ಮತ್ತು ಪಾರಿತೋಷಕ ಹಾಗೂ ರನ್ನರ್ ಅಪ್ ಗೆ ಒಂದೂವರೆ ಲಕ್ಷ ರೂಪಾಯಿ ಮತ್ತು ಪಾರಿತೋಷಕ ನೀಡಲಾಗುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಾಳೆ ಸಂಜೆ ನಡೆಯಲಿದೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಅಂಬಾರಿ ಆನೆ ಅರ್ಜುನ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಯುವಪಡೆ ವಿಶೇಷ ಗೌರವ ಸಲ್ಲಿಸಿದೆ. ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಬಂದ ಅನೇಕರು ಯುವಕರ ಈ ವಿಶೇಷ ಪ್ರಯತ್ನಕ್ಕೆ ಭೇಷ್ ಎನ್ನುತ್ತಿದ್ದಾರೆ.

ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೆಂಡತಿಯ ಪೋಸ್ಟಿಂಗ್​ಗಾಗಿ ಪಟ್ಟ ಪಡಿಪಾಟಲು ಹೇಳಿಕೊಂಡ: ಶರಣು ಸಲಗರ
ಹೆಂಡತಿಯ ಪೋಸ್ಟಿಂಗ್​ಗಾಗಿ ಪಟ್ಟ ಪಡಿಪಾಟಲು ಹೇಳಿಕೊಂಡ: ಶರಣು ಸಲಗರ
ಶ್ರೇಯಸ್ ಡ್ಯಾನ್ಸ್, ರಾಹುಲ್ ಗಿಫ್ಟ್; ಭಾರತದ ಸಂಭ್ರಮಾಚರಣೆಯ ಝಲಕ್ ಇಲ್ಲಿದೆ
ಶ್ರೇಯಸ್ ಡ್ಯಾನ್ಸ್, ರಾಹುಲ್ ಗಿಫ್ಟ್; ಭಾರತದ ಸಂಭ್ರಮಾಚರಣೆಯ ಝಲಕ್ ಇಲ್ಲಿದೆ
ಕಾಪು ಹೊಸ ಮಾರಿಯಮ್ಮ ಸನ್ನಿಧಾನಕ್ಕೆ ನಟ ರಕ್ಷಿತ್ ಶೆಟ್ಟಿ ಭೇಟಿ
ಕಾಪು ಹೊಸ ಮಾರಿಯಮ್ಮ ಸನ್ನಿಧಾನಕ್ಕೆ ನಟ ರಕ್ಷಿತ್ ಶೆಟ್ಟಿ ಭೇಟಿ
ಜಲ್ಲಿಕಟ್ಟು ಸ್ಪರ್ಧೆ ವೇಳೆ ಮೇಲೆರಗಿದ ಗೂಳಿ: 30ಕ್ಕೂ ಹೆಚ್ಚು ಜನಕ್ಕೆ ಗಾಯ
ಜಲ್ಲಿಕಟ್ಟು ಸ್ಪರ್ಧೆ ವೇಳೆ ಮೇಲೆರಗಿದ ಗೂಳಿ: 30ಕ್ಕೂ ಹೆಚ್ಚು ಜನಕ್ಕೆ ಗಾಯ
ಶಾಮೀಲಾಗಿರುವ ಸಚಿವರ ಹೆಸರುಗಳು ಸಿಎಂಗೆ ಮೊದಲು ಗೊತ್ತಾಗುತ್ತದೆ: ವಿಜಯೇಂದ್ರ
ಶಾಮೀಲಾಗಿರುವ ಸಚಿವರ ಹೆಸರುಗಳು ಸಿಎಂಗೆ ಮೊದಲು ಗೊತ್ತಾಗುತ್ತದೆ: ವಿಜಯೇಂದ್ರ
ಕಾಂಗ್ರೆಸ್ ಅಧಿಕಾರದಲ್ಲಿ ಅಪರಾಧಗಳ ಸಂಖ್ಯೆ ಅಪರಿಮಿತವಾಗಿದೆ: ರವಿ
ಕಾಂಗ್ರೆಸ್ ಅಧಿಕಾರದಲ್ಲಿ ಅಪರಾಧಗಳ ಸಂಖ್ಯೆ ಅಪರಿಮಿತವಾಗಿದೆ: ರವಿ
ಸದನದಲ್ಲಿ ಬಿಬಿಎಂಪಿಯ ಬೆಳವಣಿಗೆ ವಿವರಿಸಿದ ಶಿವಕುಮಾರ್
ಸದನದಲ್ಲಿ ಬಿಬಿಎಂಪಿಯ ಬೆಳವಣಿಗೆ ವಿವರಿಸಿದ ಶಿವಕುಮಾರ್
ಮಧ್ಯವರ್ತಿಗಳ ಮಾತುಕೇಳಿ ದಾರಿ ತಪ್ಪಿದ್ದೆವು ಎಂದ ದಂಪತಿ
ಮಧ್ಯವರ್ತಿಗಳ ಮಾತುಕೇಳಿ ದಾರಿ ತಪ್ಪಿದ್ದೆವು ಎಂದ ದಂಪತಿ
ರನ್ಯಾಗೆ ಯಾಕೆ ಪ್ರೊಟೋಕಾಲ್ ವಿಸ್ತರಿಸಲಾಗುತ್ತಿದೆ: ಸುನೀಲ ಕುಮಾರ
ರನ್ಯಾಗೆ ಯಾಕೆ ಪ್ರೊಟೋಕಾಲ್ ವಿಸ್ತರಿಸಲಾಗುತ್ತಿದೆ: ಸುನೀಲ ಕುಮಾರ
ಬ್ಯಾರಿ ಸಮುದಾಯದ ಬಗ್ಗೆ ಸ್ಪೀಕರ್ ಕೇಳಿದ ಪ್ರಶ್ನೆಗೆ ನಿರುತ್ತರನಾದ ಜಮೀರ್
ಬ್ಯಾರಿ ಸಮುದಾಯದ ಬಗ್ಗೆ ಸ್ಪೀಕರ್ ಕೇಳಿದ ಪ್ರಶ್ನೆಗೆ ನಿರುತ್ತರನಾದ ಜಮೀರ್