ಕಿರುಕುಳ ಆರೋಪ: ಜೈಲರ್​ಗೆ ಶೋಕಾಸ್ ನೋಟಿಸ್​ ನೀಡಿದ ದಾವಣಗೆರೆ ಜಿಲ್ಲಾ ಕೋರ್ಟ್​​

| Updated By: ವಿವೇಕ ಬಿರಾದಾರ

Updated on: Dec 13, 2023 | 12:55 PM

ಚಿತ್ರದುರ್ಗಾ ಜಿಲ್ಲಾ ಕಾರಾಗೃಹದ ಜೈಲರ್ ಶ್ರೀಮಂತ ಗೌಡ ಪಾಟೀಲ್​ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಜೈಲರ್​ಗೆ ಶೋಕಾಸ್ ನೋಟಿಸ್​ ನೀಡಿದೆ.

ಕಿರುಕುಳ ಆರೋಪ: ಜೈಲರ್​ಗೆ ಶೋಕಾಸ್ ನೋಟಿಸ್​ ನೀಡಿದ ದಾವಣಗೆರೆ ಜಿಲ್ಲಾ ಕೋರ್ಟ್​​
ಜೈಲರ್ ಶ್ರೀಮಂತ ಗೌಡ ಪಾಟೀಲ್, ನೋಟಿಸ್​​
Follow us on

ಚಿತ್ರದುರ್ಗ, ಡಿಸೆಂಬರ್​​ 13: ಜಿಲ್ಲಾ ಕಾರಾಗೃಹದ (Central Jail) ಜೈಲರ್ ಶ್ರೀಮಂತ ಗೌಡ ಪಾಟೀಲ್​ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ (Davangere) ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಜೈಲರ್​ಗೆ ಶೋಕಾಸ್ ನೋಟಿಸ್​ ನೀಡಿದೆ. ನ್ಯಾಮತಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ಹೊನ್ನಾಳಿ ತಾಲೂಕಿನ ಚಿಲೂರು ಗ್ರಾಮದ ಚಂದ್ರಪ್ಪ ಎಂಬ ಆರೋಪಿಯ ಬಂಧನವಾಗಿದೆ. ಆರೋಪಿಯನ್ನು ದಾವಣಗೆರೆ ಜೈಲಿಂದ ಚಿತ್ರದುರ್ಗ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಚಿತ್ರದುರ್ಗ ಜೈಲಿನ ಜೈಲರ್​​ ಶ್ರೀಮಂತ ಗೌಡ ಪಾಟೀಲ್ ತನಗೆ (ಆರೋಪಿ ಚಂದ್ರಪ್ಪ) ಜಾತಿ ಆಧರಿತ ಹಿಂಸೆ ನೀಡಿದ್ದು ಮತ್ತು ಥಳಿತಿಳಿಸಿದ್ದಾರೆ ಎಂದು ವಕೀಲರ ಮೂಲಕ ಕೋರ್ಟ್​​ಗೆ ಲಿಖಿತ ದೂರು ನೀಡಿದ್ದಾರೆ. ಅಲ್ಲದೆ ಚಿತ್ರದುರ್ಗ ಜೈಲಿನಿಂದ ದಾವಣಗೆರೆ ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೈದಿಗಳಿಗೆ ಕಾರಾಗೃಹದಲ್ಲಿ ಕಂಪ್ಯೂಟರ್ ಶಿಕ್ಷಣ; ವಿನೂತನ ಪ್ರಯತ್ನಕ್ಕೆ ಮುಂದಾದ ಚಾಮರಾಜನಗರ ಜಿಲ್ಲಾ ಕಾರಾಗೃಹ

ಆರೋಪಿ ಚಂದ್ರಪ್ಪ ನೀಡಿರುವ ದೂರು ಆಧರಿಸಿ ನ್ಯಾಯಾಲಯ ನೋಟಿಸ್​ ನೀಡಿದೆ. ನೋಟಿಸ್ ತಲುಪಿದ ಒಂದು ವಾರದೊಳಗೆ ಜೈಲರ್​ ಶ್ರೀಮಂತ ಗೌಡ ಪಾಟೀಲ್​ ಖುದ್ದಾಗಿ ಹಾಜರಾಗಿ ಉತ್ತರಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ