AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಾರ್ದನರೆಡ್ಡಿ ಮತ್ತು ನನ್ನದು ರಾಜಕೀಯಕ್ಕೂ ಮೀರಿದ ಸಂಬಂಧ: ಶ್ರೀರಾಮುಲು ಸ್ಪಷ್ಟನೆ

ಸಚಿವ ಶ್ರೀರಾಮುಲು, ಜನಾರ್ದನರೆಡ್ಡಿ ಮತ್ತು ನನ್ನದು ರಾಜಕೀಯ ಹೊರತುಪಡಿಸಿದ ಸ್ನೇಹ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ಜನಾರ್ದನರೆಡ್ಡಿ ಮತ್ತು ನನ್ನದು ರಾಜಕೀಯಕ್ಕೂ ಮೀರಿದ ಸಂಬಂಧ: ಶ್ರೀರಾಮುಲು ಸ್ಪಷ್ಟನೆ
ಸಾರಿಗೆ ಸಚಿವ ಶ್ರೀರಾಮುಲು
TV9 Web
| Edited By: |

Updated on:Dec 06, 2022 | 9:04 PM

Share

ಚಿತ್ರದುರ್ಗ: ಬಿಜೆಪಿ (BJP) ಮಾಜಿ ಸಚಿವ ಜನಾರ್ದನರೆಡ್ಡಿ (G. Janardhana Reddy) ಮತ್ತು ಸಾರಿಗೆ ಸಚಿವ ಶ್ರೀರಾಮುಲು (B. Sriramulu) ಮಧ್ಯೆ ಬಿರುಕು ಮೂಡಿದೆ ಎಂದು ಕೇಳಿಬುರತ್ತಿತ್ತು. ಈ ವಿಚಾರವಾಗಿ ಮಾತನಾಡಿದ ಸಚಿವ ಶ್ರೀರಾಮುಲು, ಜನಾರ್ದನರೆಡ್ಡಿ ಮತ್ತು ನನ್ನದು ರಾಜಕೀಯ ಹೊರತುಪಡಿಸಿದ ಸ್ನೇಹ. ನಾನು ನಮ್ಮ ಸ್ನೇಹಕ್ಕೆ ಪ್ರಾಣ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಹಿರಿಯೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಬಿ.ಶ್ರೀರಾಮುಲು ನನಗೆ ನಮ್ಮ ಪಕ್ಷ ತಾಯಿ ಸಮಾನವಿದ್ದಂತೆ. ಸ್ನೇಹ ಹಾಗೂ ಪಕ್ಷವನ್ನ ಸಮಾನವಾಗಿ ತೆಗೆದುಕೊಂಡು ಹೋಗುತ್ತೇನೆ. ಸ್ನೇಹವೂ ಬಿಡಲ್ಲ, ಪಕ್ಷವನ್ನೂ ಬಿಡುವುದಿಲ್ಲ. ಪಕ್ಷಕ್ಕೆ ಯಾವುದೇ ಮುಜುಗರವಾಗದಂತೆ ಪರಿಹಾರ ಕಂಡುಕೊಳ್ಳುತ್ತೇವೆ. ಪಕ್ಷದ ವರಿಷ್ಠರು ಜನಾರ್ದನ ರೆಡ್ಡಿ ಅವರ ಜೊತೆ ಮಾತನಾಡುತ್ತಿದ್ದಾರೆ. ನಾನು ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿ ಎಲ್ಲಾ ವಿಚಾರ ತಿಳಿಸಿದ್ದೇನೆ. ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಕುತಂತ್ರ ರಾಜಕಾರಣದಿಂದಲೇ ರೆಡ್ಡಿ & ಯಡ್ಡಿಯೂರಪ್ಪ ಜೈಲುಪಾಲಾಗಿದ್ದರು: ಶ್ರೀರಾಮುಲು ಸ್ಫೋಟಕ ಹೇಳಿಕೆ

ವಿಪಕ್ಷ ನಾಯಕ‌ ಸಿದ್ಧರಾಮಯ್ಯ ಅಂತರ್ ಪಿಶಾಚಿಯಂತೆ ತಿರುಗುತ್ತಿದ್ದಾರೆ

ವಿಪಕ್ಷ ನಾಯಕ‌ ‌ಸಿದ್ಧರಾಮಯ್ಯಗೆ ಸ್ಪರ್ಧಿಸಲು ಕ್ಷೇತ್ರವಿಲ್ಲವಾಗಿದೆ. ಹೀಗಾಗಿ ಅಂತರ್ ಪಿಶಾಚಿಯಂತೆ ತಿರುಗುತ್ತಿದ್ದಾರೆ. ವಿ.ಎಸ್.ಉಗ್ರಪ್ಪ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲಿ ಬೇಡ ಅನ್ನಲ್ಲ ಎಂದು ಹೇಳದರು. ಎಂಎಲ್​ಸಿ ಎಚ್.ವಿಶ್ವನಾಥ್, ಸಿದ್ಧರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ ಅವರು ಯಾವ ಕಾರಣಕ್ಕೆ ಭೇಟಿ ಆಗಿದ್ದಾರೆಂಬುದು ಗೊತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ವಿಶ್ವನಾಥ್ ಪ್ರಮುಖ ಪಾತ್ರವಹಿಸಿದ್ದರು. ನಾನು ಎಚ್.ವಿಶ್ವನಾಥ್ ಭೇಟಿಯಾಗಿ ವಿಚಾರಿಸಿ ಪ್ರತಿಕ್ರಿಯಿಸುವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:02 pm, Tue, 6 December 22