AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶೇಷ ಚೇತನನಾದರೂ ಕೃಷಿಯಲ್ಲಿ ಸಾಧನೆ, ಕುದುರೆ ಹತ್ತಿ ಜಮೀನಿಗೆ ಭೇಟಿ ಕೊಡುವ ಚಿತ್ರದುರ್ಗದ ಮಾದರಿ ಕೃಷಿಕ

ಬೋರಯ್ಯ ತಮ್ಮಲ್ಲಿರುವ ಜಮೀನಿನಲ್ಲೇ ಮೆಕ್ಕೆಜೋಳ, ಸಜ್ಜೆ, ಹುರುಳಿ ವಿವಿಧ ಮಿಶ್ರ ಬೆಳೆ ಬೆಳೆದು ಗ್ರಾಮಸ್ಥರಿಂದ ಭೇಷ್ ಅನಿಸಿಕೊಂಡಿದ್ದಾರೆ. ಅಲ್ಲದೇ ಈ ಮಿಶ್ರ ಕೃಷಿಯಿಂದ ಬೋರಯ್ಯಗೆ ಸರಿ ಸುಮಾರು ವರ್ಷಕ್ಕೆ 5 ಲಕ್ಷ ಆದಾಯ ಬರ್ತಿದ್ಯಂತೆ.

ವಿಶೇಷ ಚೇತನನಾದರೂ ಕೃಷಿಯಲ್ಲಿ ಸಾಧನೆ, ಕುದುರೆ ಹತ್ತಿ ಜಮೀನಿಗೆ ಭೇಟಿ ಕೊಡುವ ಚಿತ್ರದುರ್ಗದ ಮಾದರಿ ಕೃಷಿಕ
ಪಿ. ಬೋರಯ್ಯ
TV9 Web
| Updated By: ಆಯೇಷಾ ಬಾನು|

Updated on:Nov 08, 2021 | 10:24 AM

Share

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಅಂದಾಕ್ಷಣ ನೆನಪಿಗೆ ಬರೋದು ಬರದ ನಾಡು ಅಂತ. ಅಕಾಲಿಕ ಮಳೆಯಿಂದಾಗಿ ಎಷ್ಟೋ ಮಂದಿ ಕೃಷಿ ಕಾಯಕದಿಂದಲೇ ದೂರು ಹೋಗ್ತಾರೆ. ಆದ್ರೆ ಇಲ್ಲೋರ್ವ ವಿಶೇಷ ಚೇತನ, ತನ್ನ ಅಂಗವೀಕಲತೆಯನ್ನ ಮೆಟ್ಟಿ ನಿಂತು, ಮಾದರಿ ಕೃಷಿಕನಾಗಿದ್ದಾನೆ. ಈ ಕುರಿತ ಇಂಟ್ರಸ್ಟಿಂಗ್ ವರದಿ ಇಲ್ಲಿದೆ ಓದಿ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ನಿವಾಸಿಯಾಗಿರುವ ಪಿ. ಬೋರಯ್ಯ ವಿಶೇಷ ಚೇತನನಾದ್ರೂ ಕೃಷಿಯಲ್ಲಿ ಮಹತ್ತರ ಸಾಧನೆ ಮಾಡಿದ್ದಾನೆ. ಪಿಯುಸಿ ಓದಿರುವ ಬೋರಯ್ಯ ತಮ್ಮಲ್ಲಿರುವ ಜಮೀನಿನಲ್ಲೇ ಮೆಕ್ಕೆಜೋಳ, ಸಜ್ಜೆ, ಹುರುಳಿ ವಿವಿಧ ಮಿಶ್ರ ಬೆಳೆ ಬೆಳೆದು ಗ್ರಾಮಸ್ಥರಿಂದ ಭೇಷ್ ಅನಿಸಿಕೊಂಡಿದ್ದಾರೆ. ಅಲ್ಲದೇ ಈ ಮಿಶ್ರ ಕೃಷಿಯಿಂದ ಬೋರಯ್ಯಗೆ ಸರಿ ಸುಮಾರು ವರ್ಷಕ್ಕೆ 5 ಲಕ್ಷ ಆದಾಯ ಬರ್ತಿದ್ಯಂತೆ.

ctr farming

ವಿಶೇಷ ಚೇತನನಾದರೂ ಕೃಷಿಯಲ್ಲಿ ಸಾಧನೆ ಮಾಡಿರುವ ಬೋರಯ್ಯ

ಇನ್ನು ಬೋರಯ್ಯಗೆ ಸಾಕು ಪ್ರಾಣಿಗಳೆಂದರೇ ಪ್ರಾಣ. ಹೀಗಾಗಿ ತಮ್ಮ ಮನೆಯಲ್ಲಿ ದನ, ಕರು, ಮೇಕೆ, ಕುರಿ, ನಾಯಿ ಕೂಡ ಸಾಕಿದ್ದಾರಂತೆ. ಅಲ್ಲದೇ ಜಮೀನಿಗೆ ಓಡಾಡುವುದಕ್ಕಾಗಿ ಬೋರಯ್ಯ ಕುದುರೆ ಸಾಕಿದ್ದಾರಂತೆ. ಒಮ್ಮೊಮ್ಮೆ ಊರುಗೋಲಿನ ಸಹಾಯದಿಂದ ಹೊಲಕ್ಕೆ ತೆರಳಿ ಕೆಲಸ ಮಾಡ್ತಿದ್ದಾರೆ.

ಇನ್ನು ಬೋರಯ್ಯನ ಸಾಧನೆ ಕಂಡು ಈ ಭಾಗದ ಅನೇಕ ರೈತರು ಜಮೀನಿಗೆ ಭೇಟಿ ನೀಡಿ, ಮಿಶ್ರ ಕೃಷಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಯಾರ ಹಂಗಿಲ್ಲದೇ ಬೆಳೆಯಬೇಕು ಅಂತ ಪಣ ತೊಟ್ಟಿರುವ ಬೋರಯ್ಯ ರೈತಾಪಿ ವರ್ಗಕ್ಕೆ ಮಾದರಿ. ಈ ಮೂಲಕ ಅಂಗವೀಕಲತೆ ದೇಹಕ್ಕೆ ಹೊರತು. ಸಾಧನೆಗೆ ಅಲ್ಲ ಅನ್ನೋದನ್ನ ಸಾಬೀತು ಮಾಡಿದ್ದಾರೆ.

ವರದಿ: ಬಸವರಾಜ ಮುದನೂರ್, ಟಿವಿ9 ಚಿತ್ರದುರ್ಗ

ಇದನ್ನೂ ಓದಿ: ಕೃಷಿ ಸಮಸ್ಯೆಗಳ ಬಗ್ಗೆ ನಾನು ಏನಾದರೂ ಹೇಳಿದರೆ ಅದು ವಿವಾದವಾಗುತ್ತದೆ: ಸತ್ಯಪಾಲ್ ಮಲಿಕ್

Published On - 10:20 am, Mon, 8 November 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ