ವೆಂಟಿಲೇಟರ್‌, ಬೆಡ್​ಗಳಿಗೆ ಪರದಾಟ; ಆಸ್ಪತ್ರೆ ಅಲೆದು ಮನೆಯಲ್ಲೇ ನರಳುತ್ತಿರುವ ಸೋಂಕಿತೆ

ದೇವನಹಳ್ಳಿ: ಕರ್ನಾಟಕದಲ್ಲಿ ವೆಂಟಿಲೇಟರ್‌, ಬೆಡ್ಗಳ ಸಮಸ್ಯೆ ಹೆಚ್ಚಿದೆ. ಅನೇಕ ಕಡೆ ಇವುಗಳ ಸಮಸ್ಯೆಯಿಂದಲೇ ಸೋಂಕಿತರು ನರಳಿ ನರಳಿ ಸಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದು ಕಡೆ ವೆಂಟಿಲೇಟರ್‌, ಬೆಡ್‌ ಸಿಗದೆ ಸೋಂಕಿತೆ ನರಳಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕೆಂಪೇಗೌಡ ನಗರದಲ್ಲಿ ನಡೆದಿದೆ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಿನ್ನೆ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದರಿಂದ ನಿನ್ನೆ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಹಲವು ಸರ್ಕಾರಿ, ಖಾಸಗಿ ಆಸ್ಪತ್ರೆಗಳನ್ನು ಸುತ್ತಾಡಿದ್ದಾರೆ. ಆದ್ರೆ […]

ವೆಂಟಿಲೇಟರ್‌, ಬೆಡ್​ಗಳಿಗೆ ಪರದಾಟ; ಆಸ್ಪತ್ರೆ ಅಲೆದು ಮನೆಯಲ್ಲೇ ನರಳುತ್ತಿರುವ ಸೋಂಕಿತೆ
ಸಂಗ್ರಹ ಚಿತ್ರ

Updated on: Apr 27, 2021 | 12:30 PM

ದೇವನಹಳ್ಳಿ: ಕರ್ನಾಟಕದಲ್ಲಿ ವೆಂಟಿಲೇಟರ್‌, ಬೆಡ್ಗಳ ಸಮಸ್ಯೆ ಹೆಚ್ಚಿದೆ. ಅನೇಕ ಕಡೆ ಇವುಗಳ ಸಮಸ್ಯೆಯಿಂದಲೇ ಸೋಂಕಿತರು ನರಳಿ ನರಳಿ ಸಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದು ಕಡೆ ವೆಂಟಿಲೇಟರ್‌, ಬೆಡ್‌ ಸಿಗದೆ ಸೋಂಕಿತೆ ನರಳಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕೆಂಪೇಗೌಡ ನಗರದಲ್ಲಿ ನಡೆದಿದೆ.

ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಿನ್ನೆ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದರಿಂದ ನಿನ್ನೆ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಹಲವು ಸರ್ಕಾರಿ, ಖಾಸಗಿ ಆಸ್ಪತ್ರೆಗಳನ್ನು ಸುತ್ತಾಡಿದ್ದಾರೆ. ಆದ್ರೆ ಎಲ್ಲೂ ಅವರಿಗೆ ಬೆಡ್ ಸಿಕ್ಕಿಲ್ಲ. ಹೀಗಾಗಿ ಅಲೆದು ಅಲೆದು ಕಂಗಾಲಾಗಿ ಮನೆಗೆ ವಾಪಸಾಗಿದ್ದಾರೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ ಸಿಗದ ಹಿನ್ನೆಲೆಯಲ್ಲಿ ಮನೆಯಲ್ಲೇ ಕೊರೊನಾ ಸೋಂಕಿತ ಮಹಿಳೆ ಉಳಿದುಕೊಂಡಿದ್ದಾರೆ. ಸೋಂಕಿತೆ ಇರುವ ಮನೆಯಲ್ಲಿ ನಾಲ್ವರು ಕುಟುಂಬ ಸದಸ್ಯರಿದ್ದಾರೆ. ಹೀಗಾಗಿ ಆತಂಕ ಹೆಚ್ಚಿದ್ದು ಅವರಿಗೂ ಕೊರೊನಾ ತಗುಲುವ ಸಾಧ್ಯತೆ ಇದೆ.

ಇನ್ನು ಈ ಬಗ್ಗೆ ತಿಳಿಸಲು ಅಧಿಕಾರಿಗಳಿಗೆ ಕರೆ ಮಾಡಿದ್ರೆ ಯಾರೂ ಕೂಡ ಸ್ಪಂದಿಸುತ್ತಿಲ್ಲ. ದಿನೇ ದಿನೇ ಮಹಿಳೆ ಸ್ಥಿತಿ ಹಾಳಾಗುತ್ತಿದೆ. ಯಾವುದೇ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆ ಕುಟುಂಬಸ್ಥರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಖಾಸಗಿ ಆ್ಯಂಬುಲೆನ್ಸ್‌ಗಳಲ್ಲಿ ತಂದ ಶವಗಳಿಗೂ ಅಂತ್ಯಕ್ರಿಯೆ, ಮೇಡಿ ಅಗ್ರಹಾರ ಚಿತಾಗಾರದಲ್ಲಿ ಇಂದಿನಿಂದ ಮತ್ತೊಂದು ರೂಲ್ಸ್