
ಕೋಲಾರ: ಮಹಾಮಾರಿ ಕೊರೊನಾದ ಎರಡನೇ ಅಲೆಯ ಆರ್ಭಟ ಜೋರಾಗಿದೆ. ತಿಂಗಳಿಂದ ತಿಂಗಳಿಗೆ ಬಲಿಷ್ಠವಾಗಿ ವೈರಸ್ ಬೆಳೆಯುತ್ತಿದೆ. ಅಲ್ಲದೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಕೊರೊನಾ ಗೈಡ್ ಲೈನ್ಸ್ ನೀಡಿದ್ದು ಜನ ಮಾತ್ರ ಭಾರಿ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಸಾಮಾಜಿಕ ಅಂತರವಾಗಲಿ, ಮಾಸ್ಕ್ ಆಗಲಿ ಧರಿಸದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಇದರ ನಡುವೆಯೇ ಕೋಲಾರ ನಗರದ ಅಮ್ಮವಾರಿ ಪೇಟೆಯ ಗಂಗಮ್ಮ ದೇವಾಲಯದಲ್ಲಿ ಜನ ಜಂಗುಳಿ ಕಂಡು ಬಂದಿದೆ.
ಯುಗಾದಿ ಹಬ್ಬದ ಮಾರನೆ ದಿನವಾದ ಇಂದು ವರ್ಷ ತೊಡಕಿನಂದು ಕೋಳಿ, ಕುರಿ ಬಲಿಕೊಟ್ಟು ತಮ್ಮ ಹರಕೆ ತೀರಿಸಲು ದೇವಾಲಯಕ್ಕೆ ಭಕ್ತರು ಮುಗಿಬಿದ್ದಿದ್ದಾರೆ. ಪುಟ್ಟ ಪುಟ್ಟ ಮಕ್ಕಳೊಂದಿಗೆ ದೇವಾಲಯಗಳಿಗೆ ಬಂದಿದ್ದಾರೆ. ದೇವರಿಗೆ ಹರಕೆ ತೀರಿಸುವ ಭರದಲ್ಲಿ ಕೊರೊನಾವನ್ನೇ ಮರೆತಿದ್ದಾರೆ. ನೂರಾರು ಸಂಖ್ಯೆಯಲ್ಲಿ ದೇವಾಲಯ ತುಂಬೆಲ್ಲ ಜನ ತುಂಬಿಕೊಂಡಿದ್ದಾರೆ. ಭಕ್ತಿ ಪರವಶರಾಗಿ ರಕ್ಕಸ ಕೊರೊನಾ ವೈರಸನ್ನು ನಿರ್ಲಕ್ಷ್ಯಿಸಿದ್ದಾರೆ.
ಗಂಗಮ್ಮ ದೇವಾಲಯದಲ್ಲಿ ಜನ ಜಂಗುಳಿ
ಜನ ಜಂಗುಳಿ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯ
ಇಂದು ದೇವಾಲಯಕ್ಕೆ ಭಕ್ತರು ಹೆಚ್ಚಾಗಿ ಬರುವ ಸಾಧ್ಯತೆ ಬಗ್ಗೆ ಗೊತ್ತಿದ್ದರೂ ಅಗತ್ಯ ಕ್ರಮ ಕೈಗೊಂಡಿಲ್ಲ. ಸಾಮಾಜಿಕ ಅಂತರವಾಗಲಿ, ಮಾಸ್ಕ್ ಧರಿಸುವುದಾಗಲಿ ಯಾವುದೂ ಇಲ್ಲಿ ಪಾಲಿಸಲಾಗುತ್ತಿಲ್ಲ. ಕೊರೊನಾ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಹೊಸ ತೊಡಕಿನ ಸಂಭ್ರಮದಲ್ಲಿರುವ ಜನ ಕೊರೊನಾವನ್ನು ಮರೆತಿದ್ದಾರೆ. ಸದ್ಯ ಈಗ ಬಂದಿರುವ ಭಕ್ತರಲ್ಲಿ ಯಾರಿಗಾದರೂ ಕೊರೊನಾ ಬಂದಿದ್ದರೆ ಇದರಿಂದ ಮುಂದೆ ಭಾರಿ ಅನಾಹುತ ಸಂಭವಿಸಲಿದೆ.
ಗಂಗಮ್ಮ ದೇವಾಲಯದಲ್ಲಿ ಜನ ಜಂಗುಳಿ
ಗಂಗಮ್ಮ ದೇವಾಲಯದಲ್ಲಿ ಜನ ಜಂಗುಳಿ
ಗಂಗಮ್ಮ ದೇವಾಲಯದಲ್ಲಿ ಜನ ಜಂಗುಳಿ
ಗಂಗಮ್ಮ ದೇವಾಲಯದಲ್ಲಿ ಜನ ಜಂಗುಳಿ
(Corona Rules Violate in Kolar Devotees Rush to Gangamma Temple Over Hosa Todaku)
ಇದನ್ನೂ ಓದಿ: ಮಹಾಮಾರಿ ಕೊರೊನಾ ನಿವಾರಣೆಗಾಗಿ ದೇವಾಲಯದಲ್ಲಿ ಹೋಮ-ಹವನ