ಯುವಕರೇ ಎಚ್ಚರ! ಕೊರೊನಾ ನನ್ನ ಬಳಿ ಸುಳಿಯಲ್ಲ ಎಂದು ನಿರ್ಲಕ್ಷಿಸಬೇಡಿ

ಬೆಂಗಳೂರು: ಯುವಕ, ಯುವತಿಯರೇ ಎಚ್ಚರ! ಕೊರೊನಾದಿಂದ ವೃದ್ಧರಿಗೆ ಅಪಾಯ, ನಮಗೆ ಏನಾಗಲ್ಲ ಅನ್ಕೊಂಡ್ರಾ? ಕೊರೊನಾ ನನ್ನ ಹತ್ತಿರ ಸುಳಿಯಲ್ಲ ಅನ್ಕೊತಿದೀರಾ? ನಿಮ್ಮ ನಿರ್ಲಕ್ಷ್ಯವೇ ರಾಜ್ಯವನ್ನ ಅಪಾಯಕ್ಕೆ ತಳ್ಳುತ್ತಿದೆ! ರಾಜ್ಯದಲ್ಲಿ ವೃದ್ಧರು ಮಾತ್ರವಲ್ಲ, ಯುವಕರಿಂದಲೇ ಕೊರೊನಾ ಕೇಸ್ ಹೆಚ್ಚಳವಾಗಿದೆ. ಇಲ್ಲಿವರೆಗೆ ವೃದ್ಧರಲ್ಲಿ ಮಾತ್ರ ಕೊರೊನಾ ಹೆಚ್ಚಾಗಿ ಕಾಣಿಸಿಕೊಳ್ತಿದೆ ಎನ್ನಲಾಗ್ತಿತ್ತು. ಆದ್ರೀಗ ಆರೋಗ್ಯ ಇಲಾಖೆಯ ವರದಿ ಆತಂಕ ಮೂಡಿಸಿದೆ. ಯುವ ಸಮುದಾಯದಲ್ಲೇ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಇಮ್ಯೂನಿಟಿ ಪವರ್ ಹೆಚ್ಚಾಗಿದ್ರೂ ಯುವಕರಿಗೆ ಸೋಂಕು ಹರಡುತ್ತಿದೆ. 20-30 ವರ್ಷದ 203 ಜನರಲ್ಲಿ […]

ಯುವಕರೇ ಎಚ್ಚರ! ಕೊರೊನಾ ನನ್ನ ಬಳಿ ಸುಳಿಯಲ್ಲ ಎಂದು ನಿರ್ಲಕ್ಷಿಸಬೇಡಿ
ಸಾಧು ಶ್ರೀನಾಥ್​

Updated on: May 10, 2020 | 5:48 PM

ಬೆಂಗಳೂರು: ಯುವಕ, ಯುವತಿಯರೇ ಎಚ್ಚರ! ಕೊರೊನಾದಿಂದ ವೃದ್ಧರಿಗೆ ಅಪಾಯ, ನಮಗೆ ಏನಾಗಲ್ಲ ಅನ್ಕೊಂಡ್ರಾ? ಕೊರೊನಾ ನನ್ನ ಹತ್ತಿರ ಸುಳಿಯಲ್ಲ ಅನ್ಕೊತಿದೀರಾ? ನಿಮ್ಮ ನಿರ್ಲಕ್ಷ್ಯವೇ ರಾಜ್ಯವನ್ನ ಅಪಾಯಕ್ಕೆ ತಳ್ಳುತ್ತಿದೆ! ರಾಜ್ಯದಲ್ಲಿ ವೃದ್ಧರು ಮಾತ್ರವಲ್ಲ, ಯುವಕರಿಂದಲೇ ಕೊರೊನಾ ಕೇಸ್ ಹೆಚ್ಚಳವಾಗಿದೆ.

ಇಲ್ಲಿವರೆಗೆ ವೃದ್ಧರಲ್ಲಿ ಮಾತ್ರ ಕೊರೊನಾ ಹೆಚ್ಚಾಗಿ ಕಾಣಿಸಿಕೊಳ್ತಿದೆ ಎನ್ನಲಾಗ್ತಿತ್ತು. ಆದ್ರೀಗ ಆರೋಗ್ಯ ಇಲಾಖೆಯ ವರದಿ ಆತಂಕ ಮೂಡಿಸಿದೆ. ಯುವ ಸಮುದಾಯದಲ್ಲೇ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಇಮ್ಯೂನಿಟಿ ಪವರ್ ಹೆಚ್ಚಾಗಿದ್ರೂ ಯುವಕರಿಗೆ ಸೋಂಕು ಹರಡುತ್ತಿದೆ.

20-30 ವರ್ಷದ 203 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ರೆ, 30-40 ವರ್ಷದ ವಯಸ್ಸಿನವರಲ್ಲಿ 191 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇನ್ನು 40-50 ವರ್ಷದ 115 ಜನರಿಗೆ ಕೊರೊನಾ ಅಟ್ಯಾಕ್ ಆಗಿದ್ದು, 50-60 ವರ್ಷದ 83 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 60 ವರ್ಷ ಮೇಲ್ಪಟ್ಟ 115 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು ಆರೋಗ್ಯ ಇಲಾಖೆಯ ಈ ವರದಿ ಆತಂಕ ಮೂಡಿಸಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us