AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sarbananda Sonowal Speech: ಕರ್ನಾಟಕದಲ್ಲಿ ಬಂದರು ಸುಧಾರಣೆಗೆ 15 ಸಾವಿರ ಕೋಟಿ ಮೊತ್ತದ ಯೋಜನೆ; ಸರ್ಬಾನಂದ ಸೋನಾವಾಲ

ಬ್ಲೂ ಸೂಪರ್​ ಆಗುವತ್ತ ಭಾರತ ದಾಪುಗಾಲು ಹಾಕುತ್ತಿದೆ. ಭಾರತದ ಕಂಟೇನರ್​ ನಿರ್ವಹಣೆ ಸಾಮರ್ಥ್ಯವೂ ವೃದ್ಧಿಗೊಂಡಿದೆ ಎಂದು ನುಡಿದರು.

Sarbananda Sonowal Speech: ಕರ್ನಾಟಕದಲ್ಲಿ ಬಂದರು ಸುಧಾರಣೆಗೆ 15 ಸಾವಿರ ಕೋಟಿ ಮೊತ್ತದ ಯೋಜನೆ; ಸರ್ಬಾನಂದ ಸೋನಾವಾಲ
ಮಂಗಳೂರಿನಲ್ಲಿ ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ ಮಾತನಾಡಿದರು.
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Sep 02, 2022 | 3:39 PM

Share

ಮಂಗಳೂರು: ಭಾರತದ ಆರ್ಥಿಕ ಪ್ರಗತಿಗೆ ಕರ್ನಾಟಕವು ತನ್ನದೇ ಆದ ಕೊಡುಗೆ ನೀಡುತ್ತಿದೆ. ಕರ್ನಾಟಕದಲ್ಲಿ ಬಂದರು ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ ಎಂದು ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನಾವಾಲ (Sarbanand Sonavala) ಹೇಳಿದರು. ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸಾಗರಮಾಲ ಯೋಜನೆಯಡಿ ಕರ್ನಾಟಕದಲ್ಲಿ 55 ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ₹ 15 ಸಾವಿರ ಅಂದಾಜುವೆಚ್ಚದ ಈ ಯೋಜನೆಗಳು 2025ರ ಹೊತ್ತಿಗೆ ಪೂರ್ಣಗೊಳ್ಳಲಿವೆ ಎಂದರು. ಕರ್ನಾಟಕದಲ್ಲಿ ಈಗಾಗಲೇ ₹ 4 ಸಾವಿರ ಕೋಟಿ ವೆಚ್ಚದ 18 ಯೋಜನೆಗಳು ಪೂರ್ಣಗೊಂಡಿವೆ ಎಂದು ವಿವರಿಸಿದರು.

‘ನಮಸ್ಕಾರ, ಓಂ ಗಣಪತಯೇ ನಮಃ’ ಎಂದು ಸೋನಾವಾಲ ಭಾಷಣ ಆರಂಭಿಸಿದರು. ತಕ್ಷಣವೇ ನೆರೆದಿದ್ದ ಜನರು ಕೈಗಳನ್ನು ಬೀಸಿ ‘ಮೋದಿ ಮೋದಿ’ ಎಂದು ಕೂಗಲು ಆರಂಭಿಸಿದರು. ಸೋನಾವಲ ಅವರು ಮಾತು ಮುಂದುವರಿಸಿ, ‘ನಮ್ಮ ದೇಶದ ಅತಿಪ್ರಿಯ ನೇತಾರರಾದ ನರೇಂದ್ರ ಮೋದಿ ಜಿ’ ಎಂದು ಕರೆದರು. ಈ ಮಾತಿಗೂ ಜನರು ಖುಷಿಯಿಂದ ಹರ್ಷೋದ್ಗಾರ ಮಾಡಿದರು.

ನಂತರ ಮಾತು ಮುಂದುವರಿಸಿದ ಸೋನಾವಾಲ, ಇಂದು ಗಣೇಶನ ಹಬ್ಬದ ಸಂಭ್ರಮದಲ್ಲಿ ಕರಾವಳಿಯಲ್ಲಿ ನರೇಂದ್ರ ಮೋದಿ ಅವರು ಸುಮಾರು 4 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಮಂಗಳೂರು ಬಂದರು ಪ್ರಾಧಿಕಾರವು ‘ಮರಿಟೈಮ್ ಇಂಡಿಯಾ ವಿಷನ್ 2030’ರ ಆಶಯಕ್ಕೆ ಅನುಗುಣವಾಗಿ ಯಾಂತ್ರೀಕರಣಗೊಳ್ಳುತ್ತಿದೆ. ಪ್ರಧಾನಿ ಅವರ ಶೂನ್ಯ ಮಾಲಿನ್ಯ ಕರೆಗೆ ಪೂರಕವಾಗಿ ಮಂಗಳೂರು ಬಂದರು ಪ್ರಾಧಿಕಾರವು ಸೌರಶಕ್ತಿಯನ್ನು ಅಳವಡಿಸಿಕೊಂಡಿದೆ ಎಂದರು.

ಮಂಗಳೂರು ಬಂದರು ಸಂಪೂರ್ಣ ಗಣಕೀರಣವಾಗಿದೆ (ಡಿಜಿಟಲೈಸ್). ಬಂದರು ಪರಿಸರ ಸ್ನೇಹಿ ನೀರು ನಿರ್ವಹಣೆಯಿಂದಲೂ ಗಮನ ಸೆಳೆಯುತ್ತಿದೆ. ಇದು ವಿದ್ಯುತ್ ಹಾಗೂ ನೀರಿನ ವಿಚಾರದಲ್ಲಿ ಸ್ವಾವಲಂಬಿಯಾಗಿದೆ. ಈ ಸಾಧನೆಗಾಗಿ ಹಲವು ಪುರಸ್ಕಾರಗಳೂ ಸಂದಿವೆ ಎಂದು ಹೇಳಿದರು.

ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಕಳೆದ 8 ವರ್ಷಗಳಲ್ಲಿ ಸರ್ವಾಂಗೀಣ ಪ್ರಗತಿ ಸಾಧಿಸಿದೆ. ಬಂದರು ಕ್ಷೇತ್ರದಲ್ಲಿ ಸಾಗರಮಾಲೆ ಯೋಜನೆಯಡಿ 802 ಪ್ರಾಜೆಕ್ಟ್​ಗಾಗಿ 5.4 ಲಕ್ಷ ರೂಪಾಯಿ ಅನುದಾನ ಘೋಷಿಸಲಾಗಿದೆ. 1.12 ಲಕ್ಷ ಕೋಟಿ ಮೊತ್ತದ 217 ಯೋಜನೆಗಳು ಪೂರ್ಣಗೊಂಡಿವೆ. ಗತಿಶಕ್ತಿ ಯೋಜನೆಯಡಿ ದೇಶೀಯ ಜಲ ಸಾರಿಗೆಗೆ ಒತ್ತು ನೀಡಲಾಗುತ್ತಿದೆ. ಸಾಗರ ಆಧರಿತ ಆರ್ಥಿಕತೆಯಲ್ಲಿಯೂ ಭಾರತವು ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಶೀಘ್ರದಲ್ಲಿಯೇ ಬ್ಲೂ ಸೂಪರ್​ ಆಗುವತ್ತ ಭಾರತ ದಾಪುಗಾಲು ಹಾಕುತ್ತಿದೆ. ಭಾರತದ ಕಂಟೇನರ್​ ನಿರ್ವಹಣೆ ಸಾಮರ್ಥ್ಯವೂ ವೃದ್ಧಿಗೊಂಡಿದೆ ಎಂದು ನುಡಿದರು.

ಜಲ ಮಾರ್ಗ ವಿಕಾಸ ಯೋಜನೆಗಳು ದೇಶಕ್ಕೆ ಸಮೃದ್ಧಿ ತಂದುಕೊಡುತ್ತಿದೆ. ದೇಶೀಯ ಜಲಮಾರ್ಗಗಳಲ್ಲಿಯೂ ಸರಕುಸಾಗಣೆ ಪ್ರಮಾಣ ಹೆಚ್ಚಾಗುತ್ತಿದೆ. ಇಂದು ಲೋಕಾರ್ಪಣೆಯಾದ ಐಎನ್​ಎಸ್​ ವಿಕ್ರಾಂತ್​ ಭಾರತದ ಸ್ವಾವಲಂಬಿಯಾಗುವ ವಿಚಾರದಲ್ಲಿ ಇರಿಸಿರುವ ದೃಢ ನಿರ್ಧಾರದ ದ್ಯೋತಕವಾಗಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕದ ಕೊಡುಗೆ ದೊಡ್ಡದು ಎಂದು ಶ್ಲಾಘಿಸಿದರು.

Published On - 3:39 pm, Fri, 2 September 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?