AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi in Mangalore: ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಶಿಲಾನ್ಯಾಸ ಮಾಡಿದ ನಾನಾ ಅಭಿವೃದ್ಧಿ ಯೋಜನೆಗಳ ಪಕ್ಷಿ ನೋಟ ಇಲ್ಲಿದೆ

PM Modi in Mangaluru: ಗೋಲ್ಡ್ ​ಫಿಂಚ್​​ ಸಿಟಿ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದ ವೇಳೆ ಒಟ್ಟು 3,700 ಕೋಟಿ ರೂ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ಇಂದು ಲೋಕಾರ್ಪಣೆಗೊಂಡ ನಾನಾ ಯೋಜನೆಗಳ ವಿವರ ಹೀಗಿದೆ:

PM Modi in Mangalore: ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಶಿಲಾನ್ಯಾಸ ಮಾಡಿದ ನಾನಾ ಅಭಿವೃದ್ಧಿ ಯೋಜನೆಗಳ ಪಕ್ಷಿ ನೋಟ ಇಲ್ಲಿದೆ
ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಶಿಲಾನ್ಯಾಸ ಮಾಡಿದ ನಾನಾ ಅಭಿವೃದ್ಧಿ ಯೋಜನೆಗಳ ಪಕ್ಷಿ ನೋಟ ಇಲ್ಲಿದೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 02, 2022 | 4:18 PM

ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಶುಕ್ರವಾರ ಬಂಗ್ರಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ (Goldfinch city ground) ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು, ಅನೇಕ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ (PM Modi in Mangalore). ಸಮಾವೇಶದಲ್ಲಿ ರಾಜ್ಯದ ಸಚಿವರು, ಗಣ್ಯ ವ್ಯಕ್ತಿಗಳು ಮತ್ತು ಕೇಂದ್ರದ ಕೆಲ ಸಚಿವರು ಉಪಸ್ಥಿತರಿದ್ದರು.

ಗೋಲ್ಡ್ ​ಫಿಂಚ್​​ ಸಿಟಿ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದ ವೇಳೆ ಒಟ್ಟು 3,700 ಕೋಟಿ ರೂ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ಇಂದು ಲೋಕಾರ್ಪಣೆಗೊಂಡ ನಾನಾ ಯೋಜನೆಗಳ ವಿವರ ಹೀಗಿದೆ:

  1. 1. ಕಂಟೇನರ್‍ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ • 2,200 ಜನರಿಗೆ ಉದ್ಯೋಗಾವಕಾಶಗಳು • ಸಾಮಥ್ರ್ಯ ಹೆಚ್ಚಳ ಹಾಗೂ ಕಾರ್ಯನಿರ್ವಹಣಾ ಸಮಯದಲ್ಲಿ 35% ಉಳಿತಾಯ • ಬಂದರು ಕಡಲತೀರ ಹಾಗೂ ಪರಿಸರ ವ್ಯವಸ್ಥೆಗಳಿಗೆ ಪರಿಸರ ಸಂರಕ್ಷಣೆಯ ಲಾಭಗಳು • ಯೋಜನೆ ವೆಚ್ಚ: ರೂ.281 ಕೋಟಿ • 6.02 ಎಂಟಿಪಿಎರಷ್ಟು ಹೆಚ್ಚುವರಿ ಸಾಮರ್ಥ್ಯ
  2. 2. ಬಿಎಸ್ ಜಿI ಉನ್ನತೀಕರಣ ಯೋಜನೆ • ಬಿಎಸ್ ಗಿI ಶ್ರೇಣಿ ಇಂಧನಗಳ ಉತ್ಪಾದನೆ • ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ • ಯೋಜನೆ ವೆಚ್ಚ: ರೂ.1,829 ಕೋಟಿ
  3. 3. ಸಮುದ್ರ ನೀರಿನ ನಿರ್ಲವಣೀಕರಣ ಘಟಕ • ಶುದ್ಧ ನೀರಿನ ಸಂರಕ್ಷಣೆ • 30 ಎಂಎಲ್‍ಡಿ ನಿರ್ಲವಣೀಕರಣ ಸಾಮಥ್ರ್ಯದೊಂದಿಗೆ ಸುಸ್ಥಿರತೆಗೆ ಉತ್ತೇಜನ • ಯೋಜನೆ ವೆಚ್ಚ: ರೂ.677 ಕೋಟಿ
  4. ಶಿಲಾನ್ಯಾಸ ಯೋಜನೆಗಳ ಮಾಹಿತಿ:
  5. 4. ಎನ್‍ಎಂಪಿಯಲ್ಲಿ ಸಮಗ್ರ ಎಲ್‍ಪಿಜಿ ಹಾಗೂ ಬೃಹತ್ ಪಿಓಎಲ್ ಸೌಲಭ್ಯ ಸ್ಥಾಪನೆ • 2,200 ಜನರಿಗೆ ಉದ್ಯೋಗಾವಕಾಶಗಳು • ದ್ರವರೂಪದ ಸರಕುಗಳ ಅನ್‍ಲೋಡಿಂಗ್ ಸಮಯದಲ್ಲಿ ಉಳಿತಾಯ • ಎಲ್‍ಪಿಜಿಯ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ • ಪಿಎಂ ಉಜ್ವಲಾ ಯೋಜನೆಗೆ ನೇರ ಬೆಂಬಲ • ಯೋಜನೆ ವೆಚ್ಚ: ರೂ.500 ಕೋಟಿ • ಸಾಮರ್ಥ್ಯ ಹೆಚ್ಚಳ: 200 ಎಂಟಿಪಿಎ
  6. 5. ಎನ್‍ಎಂಪಿಯಲ್ಲಿ ಶೇಖರಣಾ ಟ್ಯಾಂಕ್‍ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ • ಖಾದ್ಯ ತೈಲದ ದೋಣಿಗಳ ಓಡಾಟದಲ್ಲಿ ಸುಧಾರಣೆ • ಖಾದ್ಯ ತೈಲದ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ • ದರ-ಸಾಮರ್ಥ್ಯ ಸುಧಾರಣೆ • 700 ಜನರಿಗೆ ಉದ್ಯೋಗಾವಕಾಶಗಳು • ಯೋಜನೆ ವೆಚ್ಚ: ರೂ.100 ಕೋಟಿ • ಎಂಟಿಪಿಎ ಸಾಮರ್ಥ್ಯ: 0.30
  7. 6. ಎನ್‍ಎಂಪಿಯಲ್ಲಿ ಬಿಟುಮೆನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ • ಬಿಟುಮೆನ್ ಸಾಗಣೆಯಲ್ಲಿ ಸುಧಾರಣೆ • ಬಿಟುಮೆನ್‍ನ ಒಟ್ಟಾರೆ ದರದಲ್ಲಿ ಇಳಿಕೆ • ಪಿಎಂ ಗತಿ ಶಕ್ತಿ ಯೋಜನೆಗೆ ನೇರ ಬೆಂಬಲ • 275 ಜನರಿಗೆ ಉದ್ಯೋಗಾವಕಾಶಗಳು • ಯೋಜನೆ ವೆಚ್ಚ: ರೂ.100 ಕೋಟಿ • ಎಂಟಿಪಿಎ ಸಾಮರ್ಥ್ಯ: 40,000 ಎಂಟಿ/ ಬಿಟುಮೆನ್ ದ್ರವರೂಪದ ಸರಕು
  8. 7. ಎನ್‍ಎಂಪಿಯಲ್ಲಿ ಬಿಟುಮೆನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್‍ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ • ಖಾದ್ಯ ತೈಲ ಮತ್ತು ಬಿಟುಮೆನ್‍ನ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ • ದರ-ಸಾಮರ್ಥ್ಯ ಸುಧಾರಣೆ • 275 ಜನರಿಗೆ ಉದ್ಯೋಗಾವಕಾಶಗಳು • ಯೋಜನೆ ವೆಚ್ಚ: ರೂ.100 ಕೋಟಿ • ಎಂಟಿಪಿಎ ಸಾಮರ್ಥ್ಯ: ಪ್ರತಿ ಎಕರೆಗೆ ವಾರ್ಷಿಕ 8,000 ಟನ್‍ಗಳ ಎಂಜಿಟಿ8. ಭೂಮಿ ಪೂಜೆ: ಕುಲೈನಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ • 8,500 ಜನರಿಗೆ ಉದ್ಯೋಗಾವಕಾಶಗಳು ಕರಾವಳಿ ಮೀನುಗಾರಿಕಾ ಸಮುದಾಯದವರಿಗೆ ಸುಮಾರು ರೂ.192 ಕೋಟಿ ವಾರ್ಷಿಕ ಆದಾಯ • ಯೋಜನೆ ವೆಚ್ಚ: ರೂ.196.51 ಕೋಟಿ.
  9. ಕರ್ನಾಟಕ ಸರ್ಕಾರದ: ಬಂದರುಗಳು ಹಾಗೂ ಒಳನಾಡು ಜಲಸಾರಿಗೆ ಅಭಿವೃದ್ಧಿಗೆ ಮಹತ್ವದ ಕ್ರಮಗಳು ಕುರಿತು ಮಾಹಿತಿ.
  10. • ಪಿಎಂ ಮತ್ಸ್ಯ ಸಂಪದ ಯೋಜನೆಯಡಿ (ಪಿಎಂಎಂಎಸ್‍ವೈ) ರೂ.120 ಕೋಟಿ ವೆಚ್ಚದಲ್ಲಿ ಮೀನು ಉತ್ಪಾದನೆ, ರಫ್ತು ಸಾಮಥ್ರ್ಯ ವೃದ್ಧಿ ಹಾಗೂ ಉದ್ಯೋಗಗಳ ಸೃಷ್ಟಿಗಾಗಿ 100 ಆಳ ಸಮುದ್ರ ದೋಣಿಗಳಿಗೆ ಅನುಮೋದನೆ ನೀಡಲಾಗಿದೆ.
  11. • ಉತ್ತರ ಕನ್ನಡ ಜಿಲ್ಲೆಯ ಮಜಲಿಯಲ್ಲಿ ಭಾರತ ಸರ್ಕಾರ (ಸಾಗರಮಾಲ ಹಾಗೂ ಪಿಎಂಎಂಎಸ್‍ವೈ ಯೋಜನೆಗಳಡಿ) ಹಾಗೂ ಕರ್ನಾಟಕ ಸರ್ಕಾರದ ವತಿಯಿಂದ ಒಟ್ಟು ಅಂದಾಜು ರೂ.250 ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕೆ ಬಂದರು ಅಭಿವೃದ್ಧಿ.
  12. • ಕಾರವಾರ ಬಂದರಿನಲ್ಲಿ, ಕೇಂದ್ರದ ಸಾಗರಮಾಲಾ ಕರಾವಳಿ ಬರ್ತ್ ಯೋಜನೆಯಡಿ ರೂ.276 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಯೋಜನೆಗಳು ಅನುಷ್ಠಾನದಲ್ಲಿವೆ.
  13. • ಹಳೆ ಮಂಗಳೂರಿನಲ್ಲಿ ಅಂದಾಜು ರೂ.65 ಕೋಟಿ ವೆಚ್ಚದಲ್ಲಿ, ಲಕ್ಷದ್ವೀಪ ದ್ವೀಪಗಳೊಂದಿಗೆ ಐತಿಹಾಸಿಕ ವ್ಯಾಪಾರ ಒಪ್ಪಂದಗಳನ್ನು ಪುನರುಜ್ಜೀವನಗೊಳಿಸಲು ಪೂರಕ ಮೂಲಭೂತಸೌಕರ್ಯಗಳು ಹಾಗೂ ಹಡಗು ಟರ್ಮಿನಲ್ ಸಹಿತ ಸಮರ್ಪಿತ ಜೆಟ್ಟಿ ಅಭಿವೃದ್ಧಿ.
  14. • ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ (ಪಿಪಿಪಿ) ಅಂದಾಜು ರೂ.5,000 ಕೋಟಿ ವೆಚ್ಚದಲ್ಲಿ ಕೇನಿಯಲ್ಲಿ 30 ಎಂಟಿಪಿಎ ಆಳ ನೀರು ಸರ್ವಋತು ಗ್ರೀನ್‍ಫೀಲ್ಡ್ ಬಂದರು ಅಭಿವೃದ್ಧಿ.
  15. • ಮೀನುಗಾರಿಕೆ ದೋಣಿಗಳ ಸುಗಮ ಹಾಗೂ ವೇಗದ ಓಡಾಟಕ್ಕಾಗಿ ರೂ.20 ಕೋಟಿ ವೆಚ್ಚದಲ್ಲಿ 8 ಮೀನುಗರಿಕಾ ಬಂದರುಗಳಲ್ಲಿ ಜಲಸಂಚಾರ ಮಾರ್ಗಗಳಲ್ಲಿ ಹೂಳೆತ್ತುವಿಕೆ.
  16. • ಹಳೆ ಮಂಗಳೂರು ಬಂದರಿನಲ್ಲಿ ಅಂದಾಜು ರೂ.65 ಕೋಟಿ ವೆಚ್ಚದಲ್ಲಿ 350 ಮೀ. ಕರಾವಳಿ ಬರ್ತ್ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದೆ.
  17. • ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ, ಕರ್ನಾಟಕದ ಕರಾವಳಿ ಭಾಗಗಳಲ್ಲಿ ವಾಸಿಸುತ್ತಿರುವ ಯುವಜನರಿಗಾಗಿ ಉದ್ಯೋಗ ಸೃಷ್ಟಿಸಲು ಮತ್ತು ಕೈಗಾರಿಕೆಗೆ ಬೇಕಾದಂತಹ ಕೌಶಲ್ಯಗಳನ್ನು ಒದಗಿಸಲು ಅಂದಾಜು ರೂ.30.35 ಕೋಟಿ ವೆಚ್ಚದಲ್ಲಿ ಸಮುದ್ರಯಾನ ತರಬೇತಿ ಸಂಸ್ಥೆ ಸ್ಥಾಪನೆ.
  18. • ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ (ಪಿಪಿಪಿ), ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಂದರಿನಲ್ಲಿ ರೂ.600 ಕೋಟಿ ಹೂಡಿಕೆಯ 5 ದಶಲಕ್ಷ ಎಂಟಿಪಿಎ ಬಂದರು ಅಭಿವೃದ್ಧಿಪಡಿಸಲಾಗುತ್ತಿದೆ.
  19. • ಹೊನ್ನಾವರ ತಾಲ್ಲೂಕಿನ ಪವಿನಕುರ್ವೆಯಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ (ಪಿಪಿಪಿ) ಅಂದಾಜು ರೂ.2,000 ಕೋಟಿ ವೆಚ್ಚದಲ್ಲಿ 12 ಎಂಟಿಪಿಎ ಆಳ ನೀರು ಸರ್ವಋತು ಗ್ರೀನ್‍ಫೀಲ್ಡ್ ಬಂದರು ಅಭಿವೃದ್ಧಿ.

Published On - 4:16 pm, Fri, 2 September 22

ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ