AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನ ಪ್ರತಿಷ್ಠಿತ ವ್ಯಕ್ತಿಯಿಂದ ರಾಜೀವ್​​ ಗೌಡಗೆ ಆಶ್ರಯ: ಆರೋಪಿ ಎಸ್ಕೇಪ್​​ ಆಗಿದ್ದೆಲ್ಲಿಗೆ?

ಮಂಗಳೂರಿನ ಪ್ರತಿಷ್ಠಿತ ವ್ಯಕ್ತಿಯಿಂದ ರಾಜೀವ್​​ ಗೌಡಗೆ ಆಶ್ರಯ: ಆರೋಪಿ ಎಸ್ಕೇಪ್​​ ಆಗಿದ್ದೆಲ್ಲಿಗೆ?

ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Jan 26, 2026 | 2:42 PM

Share

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ವಿಚಾರವಾಗಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರಾಜೀವ್​​ ಗೌಡ ಎಸ್ಕೇಪ್​​ ಆಗಿದ್ದ. ನ್ಯಾಯಾಲಯ ಕೂಡ ಜಾಮೀನು ನಿರಾಕರಿಸಿರುವ ಹಿನ್ನೆಲೆ ತಲೆಮರೆಸಿಕೊಂಡು ಆರೋಪಿ ಓಡಾಡುತ್ತಿದ್ದು, ಆತ ಮಂಗಳೂರಿನಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಸಹೋದರಿಗೆ ರಾಜೀವ್​​ ಗೌಡ ಕರೆ ಮಾಡಿದ್ದ ಹಿನ್ನೆಲೆ ಆಕೆಯ ವಿಚಾರಣೆಯನ್ನೂ ಪೊಲೀಸರು ನಡೆಸಿದ್ದರು. ಆರೋಪಿ ಮನೆಯಲ್ಲಿಯೂ ಶೋಧ ನಡೆದಿತ್ತು. ಆದ್ರೆ ಈತನಿಗೆ ತಲೆ ಮರೆಸಿಕೊಳ್ಳಲು ನೆರವಾಗಿದ್ದು ಮಂಗಳೂರಿನ ಪ್ರತಿಷ್ಠಿತ ವ್ಯಕ್ತಿ ಎಂಬ ಆಘಾತಕಾರಿ ವಿಚಾರವೀಗ ಬಯಲಾಗಿದೆ.

ಮಂಗಳೂರು, ಜನವರಿ 26: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ ಸಂಬಂಧ ಆರೋಪಿ ರಾಜೀವ್​​ ಗೌಡ ತಲೆಮರೆಸಿಕೊಂಡಿದ್ದು, ಪೊಲೀಸರ ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ. ಖಾಕಿ ತನಿಖೆ ವೇಳೆ ಆರೋಪಿ ಮಂಗಳೂರಿನಲ್ಲಿದ್ದ ಎನ್ನುವ ಮಾಹಿತಿ ಸಿಕ್ಕಿತ್ತಾದರೂ ಅದಾಗಲೇ ಆತ ಅಲ್ಲಿಂದಲೂ ಎಸ್ಕೇಪ್​​ ಆಗಿದ್ದ. ಕೇರಳ ಅಥವಾ ಗೋವಾಗೆ ರಾಜೀವ್​​ ಗೌಡ ಎಸ್ಕೇಪ್​​ ಅಗಿರಬಹುದು ಎನ್ನಲಾಗಿದ್ದು, ಈ ನಡುವೆ ಆರೋಪಿಗೆ ಆಶ್ರಯ ಕೊಟ್ಟಿದ್ದು ಓರ್ವ ಪ್ರತಿಷ್ಠಿತ ವ್ಯಕ್ತಿ ಎಂಬ ವಿಚಾರ ಗೊತ್ತಾಗಿದೆ. ರಾಜೀವ್​​ ಗೌಡ ಪಕ್ಕದ ರಾಜ್ಯಕ್ಕೆ ಎಸ್ಕೇಪ್​​ ಆಗಲು ಕೂಡ ಅವರೇ ನೆರವಾಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.