AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಲತಡಿ ಮಂಗಳೂರಿನಲ್ಲಿ ಆಹಾರವಿಲ್ಲದೆ ಶ್ವಾನಗಳ ರೋದನೆ

ಮಂಗಳೂರು: ಕೊರೊನಾ ಹೆಮ್ಮಾರಿಯ ಹೊಡೆತಕ್ಕೆ ಸಿಲುಕಿ, ಅನಿವಾರ್ಯವಾಗಿ ಲಾಕ್​​ಡೌನ್ ಕೂಪದಲ್ಲಿ ಬಿದ್ದಿರುವ ಭೂಮಂಡಲ ನಲುಗಿ ಹೋಗಿದೆ. ಅತ್ತ ಕೈಯಲ್ಲಿ ಹಣವಿದ್ದರೂ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಮನುಕುಲಕ್ಕೆ ಎದುರಾಗಿದ್ದರೆ, ಮೂಕ ಪ್ರಾಣಿಗಳ ವೇದನೆ ಹೇಳತೀರದಾಗಿದೆ. ಅನ್ನಕ್ಕಾಗಿ ಸಮುದ್ರ ತೀರಕ್ಕೆ ವಲಸೆ ಬಂದಿರುವ ಶ್ವಾನಗಳು. ಎತ್ತ ಹುಡುಕಿದರೂ ತುತ್ತು ಕೂಳು ಕೂಡ ಸಿಗದೆ ಪರದಾಡುತ್ತಿರುವಂತ ದೃಶ್ಯ ಕಡಲತಡಿ ಮಂಗಳೂರಿನಲ್ಲಿ ಕಂಡುಬಂದಿದೆ. ಲಾಕ್​ಡೌನ್​ನಿಂದ ಜನರು ಹೊರಗೆ ಓಡಾಡ್ತಿಲ್ಲ, ಹೀಗಾಗಿ ನಗರದ ಪ್ರದೇಶದಲ್ಲಿ ವಾಸವಿದ್ದ ಶ್ವಾನಗಳಿಗೆ ಆಹಾರವೇ ಸಿಗದಾಗಿದೆ. ಹೀಗಾಗಿ ಆಹಾರ […]

ಕಡಲತಡಿ ಮಂಗಳೂರಿನಲ್ಲಿ ಆಹಾರವಿಲ್ಲದೆ ಶ್ವಾನಗಳ ರೋದನೆ
ಸಾಧು ಶ್ರೀನಾಥ್​
|

Updated on:Apr 20, 2020 | 11:44 AM

Share

ಮಂಗಳೂರು: ಕೊರೊನಾ ಹೆಮ್ಮಾರಿಯ ಹೊಡೆತಕ್ಕೆ ಸಿಲುಕಿ, ಅನಿವಾರ್ಯವಾಗಿ ಲಾಕ್​​ಡೌನ್ ಕೂಪದಲ್ಲಿ ಬಿದ್ದಿರುವ ಭೂಮಂಡಲ ನಲುಗಿ ಹೋಗಿದೆ. ಅತ್ತ ಕೈಯಲ್ಲಿ ಹಣವಿದ್ದರೂ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಮನುಕುಲಕ್ಕೆ ಎದುರಾಗಿದ್ದರೆ, ಮೂಕ ಪ್ರಾಣಿಗಳ ವೇದನೆ ಹೇಳತೀರದಾಗಿದೆ.

ಅನ್ನಕ್ಕಾಗಿ ಸಮುದ್ರ ತೀರಕ್ಕೆ ವಲಸೆ ಬಂದಿರುವ ಶ್ವಾನಗಳು. ಎತ್ತ ಹುಡುಕಿದರೂ ತುತ್ತು ಕೂಳು ಕೂಡ ಸಿಗದೆ ಪರದಾಡುತ್ತಿರುವಂತ ದೃಶ್ಯ ಕಡಲತಡಿ ಮಂಗಳೂರಿನಲ್ಲಿ ಕಂಡುಬಂದಿದೆ. ಲಾಕ್​ಡೌನ್​ನಿಂದ ಜನರು ಹೊರಗೆ ಓಡಾಡ್ತಿಲ್ಲ, ಹೀಗಾಗಿ ನಗರದ ಪ್ರದೇಶದಲ್ಲಿ ವಾಸವಿದ್ದ ಶ್ವಾನಗಳಿಗೆ ಆಹಾರವೇ ಸಿಗದಾಗಿದೆ. ಹೀಗಾಗಿ ಆಹಾರ ಹುಡುಕಿಕೊಂಡು ಮಂಗಳೂರಿನ ಹೊರವಲಯದ ಬೈಕಂಪಾಡಿ ಬೀಚ್​ಗೂ ನುಗ್ಗಿಬಿಟ್ಟಿವೆ. ಸಿಗುತ್ತಿರುವ ಚೂರೇ ಚೂರು ಆಹಾರಕ್ಕೂ ಪರದಾಡುತ್ತಿವೆ, ಕಿತ್ತಾಡುತ್ತಿವೆ.

ಅತ್ತ ಅಂಗಡಿಯೂ ಇಲ್ಲ, ಇತ್ತ ಆಹಾರವೂ ಸಿಗ್ತಿಲ್ಲ: ಅಂದಹಾಗೆ ಮಹಾಮಾರಿ ಕೊರೊನಾ ಎಂಟ್ರಿ ಕೊಡ್ತಿದ್ದಂತೆ, ಮಾನವರ ಬದುಕಿನ ಮೇಲೆ ಮಾತ್ರ ಪರಿಣಾಮ ಬಿದ್ದಿಲ್ಲ. ಮೂಕ ಪ್ರಾಣಿಗಳ ಬದುಕು ಕೂಡ ಅಧೋಗತಿಯಾಗಿದೆ. ಈ ಹಿಂದೆ ಮಂಗಳೂರಿನಲ್ಲಿನ ಅಂಗಡಿಗಳು, ಇಲ್ಲ ಹೋಟೆಲ್​ಗಳನ್ನ ನಂಬಿಕೊಂಡು ಬದುಕುತ್ತಿದ್ದ ಶ್ವಾನಪಡೆಗೆ ಆಹಾರವೇ ಸಿಗುತ್ತಿಲ್ಲ. ಇದರಿಂದಾಗಿ ನಲುಗಿಹೋಗಿರುವ ನಾಯಿಗಳು ಜೀವ ಉಳಿಸಿಕೊಳ್ಳಲು ಬೀಚ್​ಗೆ ಬಂದಿವೆ. ದಡದಲ್ಲಿ ಸಿಗುವ ಮೀನನ್ನು ತಿಂದು ಜೀವ ಉಳಿಸಿಕೊಳ್ತಿವೆ.

ಒಟ್ನಲ್ಲಿ ಜನರು ರೋಡ್​ಗೆ ಬಾರದಿದ್ದನ್ನ ನೋಡಿ ಮೊದಲು ಕನ್ಫ್ಯೂಸ್ ಆಗಿದ್ದ ಶ್ವಾನಪಡೆಗೆ, ಕ್ರಮೇಣ ತಮಗೆ ಆಹಾರ ಕೂಡ ಸಿಗೋದಿಲ್ಲ ಅನ್ನೋದು ಗೊತ್ತಾಗಿ ಏರಿಯಾ ಬಿಟ್ಟು ವಲಸೆ ಬಂದಿವೆ. ಆಹಾರಕ್ಕಾಗಿ ಮನುಷ್ಯ ಮಾತ್ರ ಗುಳೆ ಹೋಗ್ತಾನೆ ಅಂತೇನಿಲ್ಲ, ಅನಿವಾರ್ಯವಾಗಿ ಶ್ವಾನಗಳು ಕೂಡ ಜೀವ ಉಳಿಸಿಕೊಳ್ಳಲು ಗುಳೆ ಹೊರಟಿವೆ. ಇತ್ತ ಸಂಬಂಧಪಟ್ಟವರು ಗಮನಹರಿಸಿ, ಹಸಿವಿನಿಂದ ಪರದಾಡುತ್ತಿರುವ ಶ್ವಾನಪಡೆಗೆ ಆಹಾರ ಒದಗಿಸಬೇಕಿದೆ.

Published On - 11:37 am, Mon, 20 April 20

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ