AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಲತಡಿ ಮಂಗಳೂರಿನಲ್ಲಿ ಆಹಾರವಿಲ್ಲದೆ ಶ್ವಾನಗಳ ರೋದನೆ

ಮಂಗಳೂರು: ಕೊರೊನಾ ಹೆಮ್ಮಾರಿಯ ಹೊಡೆತಕ್ಕೆ ಸಿಲುಕಿ, ಅನಿವಾರ್ಯವಾಗಿ ಲಾಕ್​​ಡೌನ್ ಕೂಪದಲ್ಲಿ ಬಿದ್ದಿರುವ ಭೂಮಂಡಲ ನಲುಗಿ ಹೋಗಿದೆ. ಅತ್ತ ಕೈಯಲ್ಲಿ ಹಣವಿದ್ದರೂ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಮನುಕುಲಕ್ಕೆ ಎದುರಾಗಿದ್ದರೆ, ಮೂಕ ಪ್ರಾಣಿಗಳ ವೇದನೆ ಹೇಳತೀರದಾಗಿದೆ. ಅನ್ನಕ್ಕಾಗಿ ಸಮುದ್ರ ತೀರಕ್ಕೆ ವಲಸೆ ಬಂದಿರುವ ಶ್ವಾನಗಳು. ಎತ್ತ ಹುಡುಕಿದರೂ ತುತ್ತು ಕೂಳು ಕೂಡ ಸಿಗದೆ ಪರದಾಡುತ್ತಿರುವಂತ ದೃಶ್ಯ ಕಡಲತಡಿ ಮಂಗಳೂರಿನಲ್ಲಿ ಕಂಡುಬಂದಿದೆ. ಲಾಕ್​ಡೌನ್​ನಿಂದ ಜನರು ಹೊರಗೆ ಓಡಾಡ್ತಿಲ್ಲ, ಹೀಗಾಗಿ ನಗರದ ಪ್ರದೇಶದಲ್ಲಿ ವಾಸವಿದ್ದ ಶ್ವಾನಗಳಿಗೆ ಆಹಾರವೇ ಸಿಗದಾಗಿದೆ. ಹೀಗಾಗಿ ಆಹಾರ […]

ಕಡಲತಡಿ ಮಂಗಳೂರಿನಲ್ಲಿ ಆಹಾರವಿಲ್ಲದೆ ಶ್ವಾನಗಳ ರೋದನೆ
ಸಾಧು ಶ್ರೀನಾಥ್​
|

Updated on:Apr 20, 2020 | 11:44 AM

Share

ಮಂಗಳೂರು: ಕೊರೊನಾ ಹೆಮ್ಮಾರಿಯ ಹೊಡೆತಕ್ಕೆ ಸಿಲುಕಿ, ಅನಿವಾರ್ಯವಾಗಿ ಲಾಕ್​​ಡೌನ್ ಕೂಪದಲ್ಲಿ ಬಿದ್ದಿರುವ ಭೂಮಂಡಲ ನಲುಗಿ ಹೋಗಿದೆ. ಅತ್ತ ಕೈಯಲ್ಲಿ ಹಣವಿದ್ದರೂ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಮನುಕುಲಕ್ಕೆ ಎದುರಾಗಿದ್ದರೆ, ಮೂಕ ಪ್ರಾಣಿಗಳ ವೇದನೆ ಹೇಳತೀರದಾಗಿದೆ.

ಅನ್ನಕ್ಕಾಗಿ ಸಮುದ್ರ ತೀರಕ್ಕೆ ವಲಸೆ ಬಂದಿರುವ ಶ್ವಾನಗಳು. ಎತ್ತ ಹುಡುಕಿದರೂ ತುತ್ತು ಕೂಳು ಕೂಡ ಸಿಗದೆ ಪರದಾಡುತ್ತಿರುವಂತ ದೃಶ್ಯ ಕಡಲತಡಿ ಮಂಗಳೂರಿನಲ್ಲಿ ಕಂಡುಬಂದಿದೆ. ಲಾಕ್​ಡೌನ್​ನಿಂದ ಜನರು ಹೊರಗೆ ಓಡಾಡ್ತಿಲ್ಲ, ಹೀಗಾಗಿ ನಗರದ ಪ್ರದೇಶದಲ್ಲಿ ವಾಸವಿದ್ದ ಶ್ವಾನಗಳಿಗೆ ಆಹಾರವೇ ಸಿಗದಾಗಿದೆ. ಹೀಗಾಗಿ ಆಹಾರ ಹುಡುಕಿಕೊಂಡು ಮಂಗಳೂರಿನ ಹೊರವಲಯದ ಬೈಕಂಪಾಡಿ ಬೀಚ್​ಗೂ ನುಗ್ಗಿಬಿಟ್ಟಿವೆ. ಸಿಗುತ್ತಿರುವ ಚೂರೇ ಚೂರು ಆಹಾರಕ್ಕೂ ಪರದಾಡುತ್ತಿವೆ, ಕಿತ್ತಾಡುತ್ತಿವೆ.

ಅತ್ತ ಅಂಗಡಿಯೂ ಇಲ್ಲ, ಇತ್ತ ಆಹಾರವೂ ಸಿಗ್ತಿಲ್ಲ: ಅಂದಹಾಗೆ ಮಹಾಮಾರಿ ಕೊರೊನಾ ಎಂಟ್ರಿ ಕೊಡ್ತಿದ್ದಂತೆ, ಮಾನವರ ಬದುಕಿನ ಮೇಲೆ ಮಾತ್ರ ಪರಿಣಾಮ ಬಿದ್ದಿಲ್ಲ. ಮೂಕ ಪ್ರಾಣಿಗಳ ಬದುಕು ಕೂಡ ಅಧೋಗತಿಯಾಗಿದೆ. ಈ ಹಿಂದೆ ಮಂಗಳೂರಿನಲ್ಲಿನ ಅಂಗಡಿಗಳು, ಇಲ್ಲ ಹೋಟೆಲ್​ಗಳನ್ನ ನಂಬಿಕೊಂಡು ಬದುಕುತ್ತಿದ್ದ ಶ್ವಾನಪಡೆಗೆ ಆಹಾರವೇ ಸಿಗುತ್ತಿಲ್ಲ. ಇದರಿಂದಾಗಿ ನಲುಗಿಹೋಗಿರುವ ನಾಯಿಗಳು ಜೀವ ಉಳಿಸಿಕೊಳ್ಳಲು ಬೀಚ್​ಗೆ ಬಂದಿವೆ. ದಡದಲ್ಲಿ ಸಿಗುವ ಮೀನನ್ನು ತಿಂದು ಜೀವ ಉಳಿಸಿಕೊಳ್ತಿವೆ.

ಒಟ್ನಲ್ಲಿ ಜನರು ರೋಡ್​ಗೆ ಬಾರದಿದ್ದನ್ನ ನೋಡಿ ಮೊದಲು ಕನ್ಫ್ಯೂಸ್ ಆಗಿದ್ದ ಶ್ವಾನಪಡೆಗೆ, ಕ್ರಮೇಣ ತಮಗೆ ಆಹಾರ ಕೂಡ ಸಿಗೋದಿಲ್ಲ ಅನ್ನೋದು ಗೊತ್ತಾಗಿ ಏರಿಯಾ ಬಿಟ್ಟು ವಲಸೆ ಬಂದಿವೆ. ಆಹಾರಕ್ಕಾಗಿ ಮನುಷ್ಯ ಮಾತ್ರ ಗುಳೆ ಹೋಗ್ತಾನೆ ಅಂತೇನಿಲ್ಲ, ಅನಿವಾರ್ಯವಾಗಿ ಶ್ವಾನಗಳು ಕೂಡ ಜೀವ ಉಳಿಸಿಕೊಳ್ಳಲು ಗುಳೆ ಹೊರಟಿವೆ. ಇತ್ತ ಸಂಬಂಧಪಟ್ಟವರು ಗಮನಹರಿಸಿ, ಹಸಿವಿನಿಂದ ಪರದಾಡುತ್ತಿರುವ ಶ್ವಾನಪಡೆಗೆ ಆಹಾರ ಒದಗಿಸಬೇಕಿದೆ.

Published On - 11:37 am, Mon, 20 April 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ