
ಮೈಸೂರು: ಹುಣಸೂರು ತಾಲೂಕಿನ ಮುದ್ದನಹಳ್ಳಿ ಮೀಸಲು ಅರಣ್ಯದಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಮೃತ ದುರ್ದೈವಿ ಕಾಳಬೋಚನಹಳ್ಳಿಯ ಶಿವಣ್ಣ ನಾಯ್ಕ್ ಎಂದು ತಿಳಿದು ಬಂದಿದೆ.
2020ರ ಡಿ.23ರಂದು ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆಂದು ತೆರಳಿದ್ದ ಶಿವಣ್ಣ ನಾಪತ್ತೆಯಾಗಿದ್ದ. ಇದೀಗ, ಮುದ್ದನಹಳ್ಳಿ ಮೀಸಲು ಅರಣ್ಯದಲ್ಲಿ ಶಿವಣ್ಣನ ಶವ ಪತ್ತೆಯಾಗಿದೆ. ವಿಚಾರ ತಿಳಿದು ಹುಣಸೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.
ವಿಜಯಪುರ: ಕಪಾಲಿ ಹೋಟೆಲ್ ಎದುರು ಅಪರಿಚಿತ ಯುವಕನ ಶವ ಪತ್ತೆ