AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಕೊಡದೆ ನಿರ್ಗತಿಕರ ಹೊಟ್ಟೆ ತುಂಬಿಸಲು ಹೊಸ ಐಡಿಯಾ.. ‘ಡಿಎಫ್’ ಫುಡ್ ಕಾರ್ಡ್ ಕೊಟ್ಟರೆ ಊಟ ಉಚಿತ

ಇತ್ತೀಚಿನ ದಿನಗಳಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ದಂಧೆಗೂ ಇಳಿದಿದ್ದಾರೆ. ಹೀಗಾಗಿ ಸಾಕಷ್ಟು ಜನ ಭಿಕ್ಷೆ ಹಾಕುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಇದರಿಂದ ನಿಜವಾಗೂ ಹಸಿದವರು ಪರದಾಡುವಂತಾಗಿದೆ. ಇದನ್ನರಿತ ಅದೊಂದು ಯುವ ಪಡೆ ಹೊಸದೊಂದು ಐಡಿಯಾ ಮಾಡಿ ಹಸಿದವರಿಗೆ ಅನ್ನ ನೀಡುವ ಕೆಲಸ ಮಾಡ್ತಿದೆ.

ಹಣ ಕೊಡದೆ ನಿರ್ಗತಿಕರ ಹೊಟ್ಟೆ ತುಂಬಿಸಲು ಹೊಸ ಐಡಿಯಾ.. ‘ಡಿಎಫ್’ ಫುಡ್ ಕಾರ್ಡ್ ಕೊಟ್ಟರೆ ಊಟ ಉಚಿತ
‘ಡಿಎಫ್’ ಫುಡ್ ಕಾರ್ಡ್ ಪಡೆದು ಉಚಿತ ಊಟ ಸೇವಿಸಿದ ಮಹಿಳೆಯರು
ಆಯೇಷಾ ಬಾನು
|

Updated on:Jan 29, 2021 | 7:06 AM

Share

ಬೆಳಗಾವಿ: ಈ ನಾಲ್ವರು ಯುವಕರ ತಂಡ ಭಿಕ್ಷುಕರ ಬಳಿ, ಅನಾಥರ ಬಳಿ ಹೋಗಿ ಹಣವನ್ನೋ ಅಥವಾ ಊಟವನ್ನೋ ಕೊಡುವುದನ್ನ ಬಿಟ್ಟು ಎಟಿಎಂ ಮಾದರಿಯ ಕಾರ್ಡ್ ಕೊಡ್ತಿದ್ದಾರೆ. ಈ ಕಾರ್ಡ್​ನಿಂದ ಊಟದ ಪ್ಯಾಕೆಟ್ ಅಥವಾ ಹಣ ಕೊಡುವುದು ತಪ್ಪಲಿದೆ. ಹಾಗೇ ಅಸಹಾಯಕರು ಹೋಟೆಲ್​ನಲ್ಲಿ ಬೇಕಾದ ತಿಂಡಿಯನ್ನ, ಯಾವಾಗ ಬೇಕಾದ್ರೂ ತಿನ್ನಲು ಅನುಕೂಲವಾಗುತ್ತಿದೆ.

ಇದೇ ಉದ್ದೇಶದಿಂದ ಡಿಎಫ್ ಪೌಂಡೇಷನ್ ಹೆಸರಿನ ಕಾರ್ಡ್ ಕೊಡ್ತಿದ್ದಾರೆ. ಕಾರ್ಡ್ ಹೆಸ್ರು ಡಿಯರ್ ಹುಡ್ ಪುಡ್ ಕಾರ್ಡ್ ಅಂತಾ. ಕಾರ್ಡ್ ಬೆಲೆ 10 ರೂಪಾಯಿ. ಕಾರ್ಡ್​ನ ಭಿಕ್ಷುಕರು, ವಯಸ್ಸಾದವರು ಹಾಗೂ ಊಟಕ್ಕೆ ಪರದಾಡುವವರಿಗೆ ನೀಡಲಾಗುತ್ತದೆ. ಹೀಗೆ ಕುಂದಾನಗರಿಯಲ್ಲಿ ಹಸಿದವರಿಗೆ ಹೊಟ್ಟೆ ತುಂಬಾ ಅನ್ನ ಸಿಗುತ್ತಿದೆ. ಹೊಸ ಬದಲಾವಣೆಗೆ ಈ ಯುವಪಡೆ ಇದೀಗ ನಾಂದಿ ಹಾಡಿದೆ.

ಭಿಕ್ಷುಕರ ಹೊಟ್ಟೆ ತುಂಬಿಸೋ ಕಾರ್ಡ್ ಜನವರಿ ಮೊದಲ ವಾರದಿಂದ ಕಾರ್ಡ್ ಸಿಸ್ಟಮ್ ಊಟ ವಿತರಣೆ ಆರಂಭವಾಗಿದೆ. ಬೆಳಗಾವಿಯ ಬಹುತೇಕ ಹೋಟೆಲ್​ಗಳೊಂದಿಗೆ ಟೈಯಪ್ ಆಗಿರುವ ಇವರು ಡಿಎಫ್ ಕಾರ್ಡ್ ತೆಗೆದುಕೊಂಡು ಬಂದರೆ ಅಂತವರಿಗೆ ಊಟ ನೀಡುವಂತೆ ಹೇಳಿದ್ದಾರೆ. ಗುರುತಿಗಾಗಿ ಹೋಟೆಲ್ ಮುಂಭಾಗದಲ್ಲಿ ತಮ್ಮದೊಂದು ಸ್ಟಿಕ್ಕರ್ ಅಂಟಿಸಿರುತ್ತಾರೆ. ಇಪ್ಪತ್ತು ಜನರಿರುವ ತಂಡ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ.

ಬೇರೊಬ್ಬರಿಗೆ ಸಹಾಯ ಮಾಡುವ ಮನಸ್ಸಿದ್ದರೂ 1 ರೂಪಾಯಿ ಕೊಡಲು ಹಿಂದೆ ಮುಂದೆ ನೋಡುವ ಸ್ಥಿತಿ ಇದೆ. ಆದ್ರೆ ಸಹಾಯ ಮಾಡಲೇಬೇಕು ಅನ್ನುವವರು ಈ ರೀತಿ ಹೋಟೆಲ್​ಗೆ ಹೋಗಿ ಅಲ್ಲಿ ಕಾರ್ಡ್​ನ್ನ ಖರೀದಿಸಿ ನಂತರ ಭೀಕ್ಷುಕರಿಗೆ ಅದನ್ನ ನೀಡಬಹುದು. ಕಾರ್ಡ್ ಮೂಲಕ ಇಷ್ಟವಾದ ಆಹಾರವನ್ನ ಅವರು ತಿನ್ನುವಂತಾಗುತ್ತದೆ. ಒಟ್ನಲ್ಲಿ ಇದೊಂದು ಡಿಫರೆಂಟ್ ಐಡಿಯಾ ಆಗಿದ್ದು, ಈಗಾಗಲೇ ಕುಂದಾನಗರಿಯಲ್ಲಿ ಸಕ್ಸಸ್ ಕಾಣುತ್ತಿದೆ.

ಬಡ ವಿದ್ಯಾರ್ಥಿಗಳಿಗೆ ಮಿಡಿದ ವಿದ್ಯಾರ್ಥಿ ಜೀವ: 106 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ

Published On - 7:03 am, Fri, 29 January 21

ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!