ಕಾಂಗ್ರೆಸ್​ ಪರ ಇರುವ ಮತದಾರರ ಹೆಸರನ್ನ ಡಿಲೀಟ್​ ಮಾಡಲಾಗುತ್ತಿದೆ, ಇದರಲ್ಲಿ ಬಿಜೆಪಿ ನಾಯಕರ ಕೈವಾಡವಿದೆ – ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

ಕಾಂಗ್ರೆಸ್​ ಪರ ಇರುವ ಮತದಾರರ ಹೆಸರನ್ನ ಡಿಲೀಟ್​ ಮಾಡಲಾಗುತ್ತಿದ್ದು, ಇದರಲ್ಲಿ ಬಿಜೆಪಿ ನಾಯಕರ ಕೈವಾಡವಿದೆ ಎಂದು ಇಂದು(ಫೆ.11) ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ.

ಕಾಂಗ್ರೆಸ್​ ಪರ ಇರುವ ಮತದಾರರ ಹೆಸರನ್ನ ಡಿಲೀಟ್​ ಮಾಡಲಾಗುತ್ತಿದೆ, ಇದರಲ್ಲಿ ಬಿಜೆಪಿ ನಾಯಕರ ಕೈವಾಡವಿದೆ - ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಬಿಜೆಪಿ ವಿರುದ್ದ ಗಂಭೀರ ಆರೋಪ ಮಾಡಿದ ಪ್ರಿಯಾಂಕಾ ಖರ್ಗೆ
Edited By:

Updated on: Feb 11, 2023 | 1:19 PM

ಕಲಬುರಗಿ: ಕಾಂಗ್ರೆಸ್​ ಪರ ಇರುವ ಮತದಾರರ ಹೆಸರನ್ನು ಡಿಲೀಟ್ ಮಾಡಲು ಮೊಬೈಲ್ ನಂಬರ್​​ನಿಂದ ಬಿಹಾರ, ರಾಜಸ್ಥಾನ, ಗುಜರಾತ್​​ ಮೂಲದ ವ್ಯಕ್ತಿಗಳಿಂದ ರಿಕ್ವೆಸ್ಟ್​​ ಕಳುಹಿಸಲಾಗುತ್ತಿದೆ. ಇದರ ಹಿಂದೆ ಬಿಜೆಪಿ ನಾಯಕರ ಕೈವಾಡ ಇರುವ ಬಗ್ಗೆ ಅನುಮಾನವಿದ್ದು, ಈ ಹಿಂದೆ ಬೆಂಗಳೂರಲ್ಲಿ ಚಿಲುಮೆ ಸಂಸ್ಥೆ ಇದೇ ರೀತಿ ಕೆಲಸ ಮಾಡಿತ್ತು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಜೆಪಿ ಕೈವಾಡವಿದೆ. ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಅಮಿತ್ ಶಾ ತಂತ್ರ ಮಾಡ್ತಿದ್ದು, ಬಿಜೆಪಿ ಸೋಲಿನ ಭಯದಿಂದ ಈ ರೀತಿ ವಾಮಮಾರ್ಗ ಅನುಸರಿಸುತ್ತಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ನಗರದಲ್ಲಿ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇನ್ನು ಇದರ ಜೊತೆಗೆ ಪ್ರಜಾಧ್ವನಿ ಯಾತ್ರೆಯಿಂದ ಬಿಜೆಪಿ ನಾಯಕರು ಹತಾಶರಾಗಿದ್ದಾರೆ. ಪ್ರಧಾನಿ ಮೋದಿಗೆ ಮತ್ತೊಮ್ಮೆ ರಾಜ್ಯಕ್ಕೆ ಬನ್ನಿ ಎಂದು ಬಿಜೆಪಿ ನಾಯಕರು ಮನವಿ ಮಾಡ್ತಿದ್ದಾರೆ. ಮೊದಲು ಬಿಜೆಪಿ ನಾಯಕರು ತಮ್ಮ ಮನೆಯನ್ನು ಸರಿಮಾಡಿಕೊಳ್ಳಲಿ. ಎಲ್ಲರೂ ಗೆಲ್ಲುವುದಕ್ಕೆ ಚುನಾವಣೆಯಲ್ಲಿ ಕಣಕ್ಕಿಳಿಯುವುದು, ಸೋಲು ಗೆಲುವಿನ ಬಗ್ಗೆ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್​​ ವಕ್ತಾರ ಪ್ರಿಯಾಂಕ್​ ಖರ್ಗೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಅನೇಕ ಮತದಾರರ ಹೆಸರು ಡಿಲಿಟ್ ಮಾಡೋ ತಂತ್ರ ನಡೆಯುತ್ತಿದೆ ಎಂದು ಮಾಜಿ ಶಾಸಕ ಬಿ.ಆರ್ ಪಾಟೀಲ್ ಆರೋಪ

ಕಲಬುರಗಿ: ನಗರದಲ್ಲಿ ಅನೇಕ ಮತದಾರರ ಹೆಸರು ಡಿಲಿಟ್ ಮಾಡೋ ತಂತ್ರ ನಡೆಯುತ್ತಿದೆ. ಮತದಾರರು ರಿಕ್ವೆಸ್ಟ್ ಹಾಕದೇ ಇದ್ದರು, ಬಿಎಲ್​ಓ ಗಳಿಗೆ ಮತದಾರರ ಹೆಸರು ಡಿಲಿಟ್​ಗೆ ರಿಕ್ವೆಸ್ಟ್ ಬಂದಿವೆ. ಕಾಂಗ್ರೆಸ್ ಬೆಂಬಲಿಗರಿಗೆ ಜಿಲ್ಲೆಯ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಒಂದರಲ್ಲೇ 6670 ಜನರ ಓಟರ್​ಗಳ ಹೆಸರು ಡಿಲಿಟ್​ಗೆ ರೆಕ್ವೆಸ್ಟ್ ಬಂದಿದೆ. ಕೆಲವರು ಗುತ್ತಿಗೆ ಪಡೆದು ಈ ದಂಧೆ ಮಾಡುತ್ತಿದ್ದಾರೆ. ಬಿಜೆಪಿಯವರು ವ್ಯವಸ್ಥಿತವಾಗಿ ಇಂತಹದೊಂದು ಕೆಲಸ ಮಾಡು ಮಾಡುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಆದರೆ ರಿಕ್ವೆಸ್ಟ್ ಹೋದವರನ್ನು ವಿಚಾರಿಸಿದಾಗ ತಮಗೆ ಗೊತ್ತಿಲ್ಲಾ ಎಂದು ಹೇಳಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್ ಪಾಟೀಲ್ ಆರೋಪಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ