ಧಾರವಾಡ: ತುರ್ತು ಕಾಮಗಾರಿ, ಈ ಎಲ್ಲಾ ಭಾಗದಲ್ಲಿ ಡಿಸೆಂಬರ್ 15 ರಂದು ವಿದ್ಯುತ್ ವ್ಯತ್ಯಯ

ಮೃತ್ಯುಂಜಯನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿಸೆಂಬರ್ 15 ರಂದು  ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಇವರು 3ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದೆ. ಈ ಹಿನ್ನಲೆ ಈ ಸ್ಥಳಗಳಲ್ಲಿ ಅಂದು ವಿದ್ಯುತ್​ ವ್ಯತ್ಯಯವಾಗಲಿದೆ.

ಧಾರವಾಡ: ತುರ್ತು ಕಾಮಗಾರಿ, ಈ ಎಲ್ಲಾ ಭಾಗದಲ್ಲಿ ಡಿಸೆಂಬರ್ 15 ರಂದು ವಿದ್ಯುತ್ ವ್ಯತ್ಯಯ
ಸಾಂದರ್ಭಿಕ ಚಿತ್ರ
Edited By: ಕಿರಣ್ ಹನುಮಂತ್​ ಮಾದಾರ್

Updated on: Dec 13, 2023 | 7:41 PM

ಧಾರವಾಡ, ನ.24: ಉಪವಿಭಾಗ ವ್ಯಾಪ್ತಿಯಲ್ಲಿ ಬರುವ 110 ಕೆ.ವಿ. ಮೃತ್ಯುಂಜಯನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿಸೆಂಬರ್ 15 ರಂದು  ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಇವರು 3ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದೆ. ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಡಿಸೆಂಬರ್ 15 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ  ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಪ್ರದೇಶಗಳು

11ಕೆವಿ ಮಾರ್ಗಗಳಲ್ಲಿರುವ ಮುರುಘಾಮಠ, ಮದಿಹಾಳ, ಪತ್ರೇಶ್ವರ ನಗರ, ರಾಜನಗರ, ಹಾವೇರಿಪೇಟ, ನಿಜಾಮುದ್ದಿನ್ ಕಾಲೋನಿ, ಸವದತ್ತಿ ರೋಡ್, ಕಾಮನಕಟ್ಟಿ, ಚರಂತಿಮಠ ಗಾರ್ಡನ್, ಹೆಬ್ಬಳ್ಳಿ ಅಗಸಿ, ಮನಕಿಲ್ಲಾ, ಕಾರ್ಪೋರೇಶನ್ ಸರ್ಕಲ್, ಗಾಂಧಿಚೌಕ, ಸೂಪರ್ ಮಾರ್ಕೆಟ್, ಸುಭಾಶ್ ರೋಡ್, ಶಿವಾಜಿ ರೋಡ್, ಮರಾಠ ಕಾಲೋನಿ, ಜುಬ್ಲೀ ಸರ್ಕಲ್, ಭಾರತ ಹೈಸ್ಕೂಲ್, ಮಾರ್ಕೆಟ್, ಕಮಲಾಪುರ, ಕಲಾಭವನ, ಕರಡಿಗುಡ್ಡ, ವಿದ್ಯಾರಣ್ಯ, ಮರೇವಾಡ ಜಿನ್ನಿಂಗ್ ಫ್ಯಾಕ್ಟರಿ, ವನಹಳ್ಳಿ, ಕವಲಗೇರಿ, ಮಂಗಳಗಟ್ಟಿ, ಅಮ್ಮಿನಭಾವಿ, 33ಕೆವಿ ಉಪ್ಪಿನ ಬೆಟಗೇರಿ, 33ಕೆವಿ ಕುಡಿಯುವ ನೀರಿನ ಸರಬರಾಜು ಘಟಕ, ಮುಕ್ತಿಧಾಮ, ಕೊಳಿಕೇರಿ, ಪೆಂಡಾರ ಓಣಿ, ದರ್ಗಾ ಓಣಿ, ರವಿವಾರ ಪೇಟ, ಶುಕ್ರವಾರ ಪೇಟ, ಅಷ್ಟಗಿ ಜಿನ್ನಿಂಗ್ ಫ್ಯಾಕ್ಟರಿ, ಬಾರಾ ಇಮಾಮ್ ಗಲ್ಲಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಲಿದೆ.

ಇದನ್ನೂ ಓದಿ:KPTCL ಸಹಾಯಕ ಇಂಜಿನಿಯರ್ ನೇಮಕಾತಿ ವಿಳಂಬ, ಖನ್ನಿತೆಗೆ ಒಳಗಾಗಿ ಇಬ್ಬರು ಸಾವು, ಕಚೇರಿಗೆ ಮುತ್ತಿಗೆ ಹಾಕಿದ ಹುದ್ದೆ ಆಕಾಂಕ್ಷಿಗಳು

ಕಂಪ್ಲಿ ಬಸವೇಶ್ವರ ನಗರ, ಮಂಗಳವಾರ ಪೇಟ, ಗೋವನಕೊಪ್ಪ ಐ.ಪಿ ಏರಿಯಾ, ಕೆಲಗೇರಿ ಐ.ಪಿ ಏರಿಯಾ, ವಿನಾಯಕ ನಗರ, ಶಾಂತಿ ಕಾಲೋನಿ, ಎಲ್‍ಇಎ ಕ್ಯಾಂಟೀನ್, ಜಿಲ್ಲಾಸ್ಪತ್ರೆ , ಶಾಸ್ತ್ರಿನಗರ, ಎನ್‍ಎಂಆರ್ ಸ್ಕ್ಯಾನ್ ಸೆಂಟರ್, ಹೆಚ್‍ಡಿಎಂಸಿ, ಜಿಲ್ಲಾ ನ್ಯಾಯಾಲಯ, ಜುಬ್ಲಿ ಸರ್ಕಲ್, ಲೈನ್ ಬಜಾರ್, ಕೆಂಪಗೇರಿ, ವನಿತಾ ಸೇವಾ ಸಮಾಜ, ರಾಮನಗರ, ಮಾರುತಿ ದೇವಸ್ಥಾನ, ಕಿಟಲ್ ಕಾಲೇಜ್, ಕಾಸ್ಮೋಸ್ ಕ್ಲಬ್, ಜನ್ನತ್ ನಗರ, ಆಜಾದ ಪಾರ್ಕ ರೋಡ್, ಸೌಧಾಗರ ಚಾಳ, ಹಳೇ ಬಸ್ಟ್ಯಾಂಡ್, ಸಿ.ಬಿ.ಟಿ, ವಿಜಯಾ ಟಾಕೀಸ್, ಅಂಜುಮನ್ ಕಾಲೇಜ್, ಲಕಮಾಪುರ, ಮುಳಮುತ್ತಲ, ಮರೇವಾಡ, ತಿಮ್ಮಾಪುರ, ಕವಲಗೇರಿ, ಚಂದನಮಟ್ಟಿ, ಕನಕೂರ, ತಲವಾಯಿ, ವನಹಳ್ಳಿಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್​ ಕಟ್​ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us