AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಕ್ತಿ ಯೋಜನೆಯಲ್ಲಿ ಹುಬ್ಬಳ್ಳಿ-ಧಾರವಾಡದ ಚಿಗರಿ ಬಸ್​ನಲ್ಲೂ ಫ್ರೀ ಪ್ರಯಾಣಕ್ಕೆ ಬೇಡಿಕೆ

ಒಂದು ಕಡೆ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆ ಮಾಡಿದೆ. 5 ಯೋಜನೆಗೆ ದಿನಕ್ಕೊಂದು ಷರತ್ತು ಹಾಕುತ್ತಿದೆ. ಅದರಂತೆ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಬಸ್ ಫ್ರೀ ಎಂದು ಘೋಷಣೆ ಮಾಡಲಾಗಿತ್ತು. ನಂತರ ಅದಕ್ಕೆ ಕೆಲವೊಂದು ಷರತ್ತು ಹಾಕಿ ಇದೇ ತಿಂಗಳು 11ರಿಂದ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು‌. ಆದ್ರೆ, ಸರ್ಕಾರಕ್ಕೆ ಹುಬ್ಬಳ್ಳಿ ಧಾರವಾಡದ BRTS ಸಾರಿಗೆ ವ್ಯಾಪ್ತಿಯ ಚಿಗರಿ ಬಸ್ ಟೆನ್ಶನ್ ತಂದಿಟ್ಟಿದೆ. ಅಷ್ಟಕ್ಕೂ ಏನಿದು ಚಿಗರಿ ಬಸ್​ ಟೆನ್ಶನ್ ಅಂತೀರಾ? ಇಲ್ಲಿದೆ ನೋಡಿ.

ಶಕ್ತಿ ಯೋಜನೆಯಲ್ಲಿ ಹುಬ್ಬಳ್ಳಿ-ಧಾರವಾಡದ ಚಿಗರಿ ಬಸ್​ನಲ್ಲೂ ಫ್ರೀ ಪ್ರಯಾಣಕ್ಕೆ ಬೇಡಿಕೆ
ಹುಬ್ಬಳ್ಳಿ ಧಾರವಾಡ ಚಿಗರಿ ಬಸ್​ಲ್ಲೂ ಉಚಿತ ಪ್ರಯಾಣಕ್ಕೆ ಮಹಿಳೆಯರಿಂದ ಬೇಡಿಕೆ
ಕಿರಣ್ ಹನುಮಂತ್​ ಮಾದಾರ್
|

Updated on: Jun 09, 2023 | 10:45 AM

Share

ಹುಬ್ಬಳ್ಳಿ ಧಾರವಾಡ: ಈ ಅವಳಿ ನಗರದಲ್ಲಿ ನಿತ್ಯ ನೂರಾರು ಚಿಗರಿ ಬಸ್​ಗಳು ಓಡಾಡುತ್ತವೇ. ಹುಬ್ಬಳ್ಳಿ(Hubballi)ಯ ಬಿಆರ್​ಟಿಸಿ (BRTS) ಸಾರಿಗೆ ವ್ಯಾಪ್ತಿಯ ಚಿಗರಿ ಬಸ್(Chigari Bus) ಹವಾನಿಯಂತ್ರಿತ ಬಸ್ ಆಗಿದೆ. ಅವಳಿ ನಗರದಲ್ಲಿ ಬಹುತೇಕ ಜನ ಇದೇ ಬಸ್​ನಲ್ಲಿ ಪ್ರಯಾಣ ಮಾಡ್ತಾರೆ. ಆದ್ರೆ, ಸರ್ಕಾರದ ಆದೇಶದಲ್ಲಿ ಹವಾನಿಯಂತ್ರಿತ, ರಾಜಹಂಸ ಸೇರಿ ಕೆಲ ಬಸ್​ನಲ್ಲಿ ಉಚಿತ ಪ್ರಯಾಣ ಇಲ್ಲ. ಆದ್ರೆ, ಇದೀಗ ಹುಬ್ಬಳ್ಳಿ ಧಾರವಾಡ ಜನ ಚಿಗರಿ ಬಸ್​​ ಸೇರಿದಂತೆ ಎಲ್ಲ ಬಸ್​ಗೂ ಫ್ರೀ ಬಿಡಬೇಕು ಎನ್ನುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದ ನಡುವೆ ಸುಮಾರು 96 ಚಿಗರಿ ಬಸ್ ಗಳಿವೆ. ನಿತ್ಯ 80 ಸಾವಿರ ಪ್ರಯಾಣಿಕರು ಓಡಾಡುತ್ತಾರೆ. ಸಹಜವಾಗಿ ಸರ್ಕಾರದ ಫ್ರೀ ಯೋಜನೆಯಲ್ಲಿ ಚಿಗರಿ ಬಸ್ ತರಬೇಕು ಅನ್ನೋದು‌ ಮಹಿಳೆಯರ ವಾದವಾಗಿದೆ.

ಇದು ಸಹಜವಾಗಿ ಸರ್ಕಾರ ಮತ್ತು BRTS ಸಾರಿಗೆ ಅಧಿಕಾರಿಗಳಿಗೆ ಟೆನ್ಶನ್ ತಂದಿಟ್ಟಿದೆ. ಅಕಸ್ಮಾತ್ ಚಿಗರಿ ಬಸ್​ಗೆ ಅನುಮತಿ ನೀಡಿದ್ರೆ, ಸಿದ್ದು ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದಂತಾಗತ್ತೆ. ಯಾಕಂದ್ರೆ ಮತ್ತೆ BMTC ಬಸ್​ನಲ್ಲೂ ಉಚಿತ ಪ್ರಯಾಣದ ಕೂಗು ಕೇಳಿ ಬರಲಿದೆ. ಆದ್ರೆ, ಹುಬ್ಬಳ್ಳಿ ಜನ ಮಾತ್ರ ನಮಗೆ ಚಿಗರಿ ಬಸ್​ನಲ್ಲೂ ಫ್ರೀ ಬಿಡಬೇಕು ಎನ್ನುತ್ತಿದ್ದಾರೆ. BRTS ವ್ಯಾಪ್ತಿಯ ಚಿಗರಿ ಬಸ್ ಹವಾನಿಯಂತ್ರಿತ ಬಸ್ ಆಗಿದ್ದು, ಮಾಹಿತಿ ಪ್ರಕಾರ ಈಗಾಗಲೇ ತಿಂಗಳಿಗೆ 2 ಕೋಟಿಯಷ್ಟು BRTS ಲಾಸ್​ನಲ್ಲಿದೆ. ಅಕಸ್ಮಾತ್ ಇದೀಗ ಶಕ್ತಿ ಯೋಜನೆಯಲ್ಲಿ ಚಿಗರಿ ಬಸ್ ಬಂದ್ರೆ, ಮತ್ತಷ್ಟು ದೋಖಾ ಆಗಲಿದೆ. ಇದೇ ಕಾರಣಕ್ಕೆ ಇದುವರೆಗೂ ಚಿಗರಿ ಬಸ್​ಗೆ ಉಚಿತ ಪ್ರಯಾಣದ ಅನುಮತಿ ಕೊಟ್ಟಿಲ್ಲ.

ಇದನ್ನೂ ಓದಿ:Hubli News: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ; ಜೂನ್ 20 ರಂದು ಮಹಾಪೌರ, ಉಪ ಮಹಾಪೌರ ಚುನಾವಣೆ

ಆದರೀಗ ಜನರ ಬೇಡಿಕೆಯಾಗಿರೋ ಕಾರಣಕ್ಕೆ BRTC ಎಮ್.ಡಿ ಭರತ್ ಈಗಾಗಲೇ ಸರ್ಕಾರಕ್ಕೆ ಅನುಮತಿ ಕೋರಿ ಪತ್ರ ಬರೆದಿದ್ದಾರೆ‌. ಶಕ್ತಿ ಯೋಜನೆಯಲ್ಲಿ ಚಿಗರಿ ಬಸ್ ತರಲು ಅನುಮತಿ ಕೊಡಿ ಎಂದು ಭರತ್ ಮನವಿ ಮಾಡಿಕೊಂಡಿದ್ದಾರೆ. ಆದ್ರೆ, ಸರ್ಕಾರ ಇದುವರೆಗೂ ಯಾವುದೇ ಪ್ರತಿಕ್ರೀಯೆ ನೀಡಿಲ್ಲ. ನಿತ್ಯ ಹೆಚ್ಚು ಕಡಿಮೆ 80 ಸಾವಿರ ಪ್ರಯಾಣಿಕರು ಬಸ್​ನಲ್ಲಿ ಓಡಾಡುತ್ತಿದ್ದಾರೆ. ಬಹುತೇಕ ಮಹಿಳೆಯರು ಕೆಲಸಕ್ಕೆಂದು ಹೋಗುವವರು ಚಿಗರಿ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅವಳಿ ನಗರದ ಮದ್ಯೆ ಚಿಗರಿ ಬಸ್​ಗೆ ಅವಲಂಬಿತವಾಗಿರೋರೆ ಹೆಚ್ಚು, ಇದೀಗ ಶಕ್ತಿ ಯೋಜನೆ ಸರ್ಕಾರಕ್ಕೆ ಹೊಸ ಚಿಂತೆ ಶುರು ಮಾಡಿದೆ.

ಒಟ್ಟಾರೆ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿಗಳು ಇದುವರೆಗೂ ಜನರನ್ನು ತಲುಪಿಲ್ಲ. ಜೂನ್ ಒಂದರಿಂದ ಗ್ಯಾರಂಟಿ ಕೊಡ್ತೀವಿ ಅಂದ ಸರ್ಕಾರ ಇದೀಗ ದಿನಕ್ಕೊಂದು ಷರತ್ತು ಹಾಕುತ್ತಿದೆ. ಇತ್ತ ಸರ್ಕಾರ ಘೋಷಣೆ ಮಾಡಿರೋ ಯೋಜನೆಗಳು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದಂತೂ ಸತ್ಯ.

ಶಿವಕುಮಾರ್​ ಪತ್ತಾರ್​ ಟಿವಿ9 ಹುಬ್ಬಳ್ಳಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!