Dharwad Power Cut: ಧಾರವಾಡದ ಹಲವೆಡೆ ಬುಧವಾರ ವಿದ್ಯುತ್ ವ್ಯತ್ಯಯ; ಇಲ್ಲಿದೆ ವಿವರ

ತುರ್ತು ಕಾಮಗಾರಿಗಳ ಕಾರಣ ಧಾರವಾಡ ನಗರದ ಹಲವೆಡೆಯಲ್ಲಿ ಜೂನ್ 7ರಂದು ಬುಧವಾರ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತಿಳಿಸಿದೆ. ಎಲ್ಲೆಲ್ಲಿ ಪವರ್ ಕಟ್ ಎಂಬ ವಿವರ ಇಲ್ಲಿದೆ.

Dharwad Power Cut: ಧಾರವಾಡದ ಹಲವೆಡೆ ಬುಧವಾರ ವಿದ್ಯುತ್ ವ್ಯತ್ಯಯ; ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Edited By:

Updated on: Jun 06, 2023 | 5:21 PM

ಧಾರವಾಡ: ತುರ್ತು ಕಾಮಗಾರಿಗಳ ಕಾರಣ ಧಾರವಾಡ ನಗರದ ಹಲವೆಡೆಯಲ್ಲಿ ಜೂನ್ 7ರಂದು ಬುಧವಾರ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತಿಳಿಸಿದೆ. 110 ಕೆವಿ, ಕೆ.ಯು.ಡಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 1ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ವಿದ್ಯುತ್‌ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿದ್ಯುತ್‌ ನಿಲುಗಡೆಯ ಪ್ರದೇಶಗಳು ಯಾವುವೆಲ್ಲ?

ನೆಹರು ನಗರ, ಬಸವ ನಗರ, ಹೊಯ್ಸಳ ನಗರ, ಕಲ್ಯಾಣ ನಗರ, ವಿಜಯಾನಂದ ನಗರ, ಶ್ರೀನಗರ, ಮಹಾಂತ ನಗರ, ಮಂಜುನಾಥ ಕಾಲೋನಿ, ಕೆಲಗೇರಿ ರೋಡ್, ಸಿಲ್ವರ್ ಆರ್ಚಡ್, ಸಾಯಿ ನಗರ, ರೆವಿನ್ಯೂ ಕಾಲೋನಿ, ಸಿಬಿ ನಗರ, ಯುಸಿಬಿ ನಗರ, ಮಿಚಿಗನ್’ ಕಂಪೌಂಡ್, ಚೈತನ್ಯ ನಗರ, ಚನ್ನಬಸವೇಶ್ವರ ನಗರ, ವಿನಾಯಕ ನಗರ, ಶಿವಗಿರಿ, ಪಾವಟಿ ನಗರ, ಕೆಯುಡಿ, ಬಾರಾ ಕೊಟ್ರಿ, ಡಿಸಿ ಕಂಪೌಂಡ್, ಮಾಳಮಡ್ಡಿ, ಸರೋವರ ನಗರ, ಲೋಟಸ್‌ ಪಾರ್ಕ್‌, ಬನಶಂಕರಿ ನಗರ, ಕಸುಮ ನಗರ. ಸಪ್ತಾಪೂರ, ಕೆ.ಸಿ.ಡಿ, ‘ಜಯನಗರ, ಪಾವಟಿನಗರ, ನವೋದಯ ನಗರ, ಸಲಕಿನಕೊಪ್ಪ, ಮುಗದ, ಬಸವೇಶ್ವರ, ರಾಮಾಪುರ (NY), ಕಾರಕೊಪ್ಪ, ಹುಲಕಟ್ಟಿ, ಮುಗದ, ಕಲ್ಲಾಪೂರ, ಓಸ್ವಾಲ್, ದಡ್ಡಿ ಕಮಲಾಪುರ, ರಾಮಾಪುರ, ವೀರಾಪುರ, ರವೀಂದ್ರ ನಗರ, ನಿರ್ಮಲ ನಗರ, ಜಾಂಬವಂತ ನಗರ, ಕೇಶವ ನಗರ, ಕೆಲಗೇರಿ, ಆಂಜನೇಯ ನಗರ, ಗಾಯತ್ರಿಪುರಂ, ಸರೋವರ ನಗರ, ಆದಿತ್ಯ ಪಾರ್ಕ್‌, ಆಶೋಕ ನಗರ, ಪವನ ಪಾರ್ಕ್, ಸಂಪಿಗೆ ನಗರ, ಶಾಂಭವಿ ನಗರ, ಕೆ.ಐ.ಎ.ಡಿ.ಬಿ ಲೇಔಟ್, ತಪೋವನ ನಗರ, ಆತ್ಮಾನಂದ ಲೇಔಟ್, ಗಣೇಶ ನಗರ, ಹನುಮಂತ ನಗರ, ಕಲ್ಯಾಣ: 1-8 ಕ್ರಾಸ್, ನಿಸರ್ಗ ಲೇಔಟ್, ಅತ್ತಿಕೊಳ್ಳ, ದಾನವ ನಗರ, ಯಲಿಗಾರ ಲೇಔಟ್, ಕಲ್ಯಾಣ ನಗರ 10-15″ ಕ್ರಾಸ್, ಮಹಾಮನೆ ಬಡಾವಣೆ, ಮಿಚಿಗನ್ ಲೇಔಟ್, ಉದಯ ಸರ್ಕಲ್‌, ಯುಬಿ ಹಿಲ್, ಕೆಸಿಡಿ-ಬಲ್ಲ ಸರ್ಕಲ್ ರೋಡ್, ಸಪ್ತಾಪೂರ ಭಾವಿ, ಭಾರತಿ ನಗರ, ಮಿಚಿಗನ್ ಕಂಪೌಂಡ್, ರಾಧಾಕೃಷ್ಣ ನಗರ, ಜಲದರ್ಶಿನಿ ನಗರ, ರಾಣಿ ಚೆನ್ನಮ್ಮ ನಗರ. ಕೃಷಿ ನಗರ, ಶ್ರೀಪಾದ ನಗರ, ಐಶ್ವರ್ಯ ಲೇಔಟ್, ಭಾವಿಕಟ್ಟಿ ಪ್ಲಾಟ್, ಕೆಲಗೇರಿ ರೋಡ್, ಮಂಜುನಾಥ ಕಾಲೋನಿ ಮತ್ತು ಕೋರ್ಟ್ ಸರ್ಕಲ್‌ನಿಂದ ಜುಲ್ಲಿ ಸರ್ಕಲ್‌ವರೆಗೆ ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:20 pm, Tue, 6 June 23

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us