ಹಾಸನದಲ್ಲಿ ಗ್ರಾಮೀಣ ಕ್ರೀಡೆಗಳ ರಂಗು, ಹುಬ್ಬಳ್ಳಿಯಲ್ಲಿ ಮಿಸೆಸ್ ಇಂಡಿಯಾ ಸೊಬಗು

ಬಿಂದಿಗೆ ಹೊತ್ಕೊಂಡು ಓಡೋದೇನು… ಗೋಣಿಚೀಲದಲ್ಲಿ ಜಂಪ್ ಮಾಡ್ಕೊಂಡು ನುಗ್ಗೋದೇನು.. ಮೂರು ಕಾಲಲ್ಲಿ ಓಡೋಕೂ ಸೈ… ಹೂ ಕಟ್ಟೋಕೂ ಜೈ… ಮಡಿಕೆ ಒಡೆಯೋದ್ರಲ್ಲಿ ಕಮ್ಮಿಯಿಲ್ಲ… ನಿಂಬೆಹಣ್ಣಿನ ಆಟದಲ್ಲೂ ಹಿಂದೆ ಉಳೀತಿಲ್ಲ… ಒಬ್ಬರಿಗಿಂತ ಒಬ್ಬರು ಸೂಪರೋ ಸೂಪರ್. ಹಾಸನ: ಸರ್ಕಾರಿ ಮಹಿಳೆಯರ ಪ್ರಥಮ ದರ್ಜೆ ಕಾಲೇಜಲ್ಲಿಂದು ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹಳ್ಳಿ ಕ್ರೀಡೆಗಳನ್ನ ಉಳಿಸೋ ಸಲುವಾಗಿ ಗ್ರಾಮೀಣ ಕಲರವ ಅನ್ನೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸದಾ ಕ್ಲಾಸ್, ಇಂಟರ್​ನಲ್ಸ್ ಅಂತಾ ಬ್ಯುಸಿ ಇರ್ತಿದ್ದ ಹುಡುಗಿಯರೆಲ್ಲಾ ಗ್ರಾಮೀಣ ಕ್ರೀಡೆಗಳಲ್ಲಿ ಭಾಗಿಯಾಗಿ ಖುಷಿಪಟ್ರು. […]

ಹಾಸನದಲ್ಲಿ ಗ್ರಾಮೀಣ ಕ್ರೀಡೆಗಳ ರಂಗು, ಹುಬ್ಬಳ್ಳಿಯಲ್ಲಿ ಮಿಸೆಸ್ ಇಂಡಿಯಾ ಸೊಬಗು
ಸಾಧು ಶ್ರೀನಾಥ್​

Updated on: Feb 11, 2020 | 12:19 PM

ಬಿಂದಿಗೆ ಹೊತ್ಕೊಂಡು ಓಡೋದೇನು… ಗೋಣಿಚೀಲದಲ್ಲಿ ಜಂಪ್ ಮಾಡ್ಕೊಂಡು ನುಗ್ಗೋದೇನು.. ಮೂರು ಕಾಲಲ್ಲಿ ಓಡೋಕೂ ಸೈ… ಹೂ ಕಟ್ಟೋಕೂ ಜೈ… ಮಡಿಕೆ ಒಡೆಯೋದ್ರಲ್ಲಿ ಕಮ್ಮಿಯಿಲ್ಲ… ನಿಂಬೆಹಣ್ಣಿನ ಆಟದಲ್ಲೂ ಹಿಂದೆ ಉಳೀತಿಲ್ಲ… ಒಬ್ಬರಿಗಿಂತ ಒಬ್ಬರು ಸೂಪರೋ ಸೂಪರ್.

ಹಾಸನ: ಸರ್ಕಾರಿ ಮಹಿಳೆಯರ ಪ್ರಥಮ ದರ್ಜೆ ಕಾಲೇಜಲ್ಲಿಂದು ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹಳ್ಳಿ ಕ್ರೀಡೆಗಳನ್ನ ಉಳಿಸೋ ಸಲುವಾಗಿ ಗ್ರಾಮೀಣ ಕಲರವ ಅನ್ನೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸದಾ ಕ್ಲಾಸ್, ಇಂಟರ್​ನಲ್ಸ್ ಅಂತಾ ಬ್ಯುಸಿ ಇರ್ತಿದ್ದ ಹುಡುಗಿಯರೆಲ್ಲಾ ಗ್ರಾಮೀಣ ಕ್ರೀಡೆಗಳಲ್ಲಿ ಭಾಗಿಯಾಗಿ ಖುಷಿಪಟ್ರು.

ತಲೆ ಮೇಲೊಂದು ಸೊಂಟದ ಮೇಲೊಂದು ಬಿಂದಿಗೆ ಹೊತ್ಕೊಂಡು ಓಡೋದು ನೋಡೋಕೆ ಸಖತ್ ಆಗಿತ್ತು. ಇನ್ನು ಕುಂಟೆಬಿಲ್ಲೆ, ಚಮಚ-ನಿಂಬೆಹಣ್ಣು, ನಡೀತಾನೆ ಸೂಜಿಗೆ ದಾರ ಪೋಣಿಸೋದು, ಕಾಳು ಬೇರ್ಪಡಿಸೋದು ಹೀಗೆ ಹಲವು ಆಟಗಳನ್ನ ಆಡಿ ಹಳ್ಳಿ ಗಮ್ಮತ್ತಲ್ಲಿ ತೇಲಾಡಿದ್ರು. ಅದ್ರಲ್ಲೂ ಇಡೀ ಕಾಲೇಜು ಹುಡುಗಿಯರೆಲ್ಲಾ ರೆಡ್ ರೆಡ್ ಕಲರ್ ಡ್ರೆಸ್ ಹಾಕಿದ್ದು ಗ್ರಾಮೀಣ ಕಲರವವನ್ನ ಕಲರ್​ಫುಲ್ ಮಾಡಿತ್ತು.








ಹುಬ್ಬಳ್ಳಿ: ಇಲ್ಲೂ ಸಹ ಬ್ಯೂಟಿಗಳ ಫ್ಯಾಷನ್ ಶೋ ಕಿಕ್ಕೇರಿಸಿತ್ತು. ಮಿಸೆಸ್ ಇಂಡಿಯಾ ಕರ್ನಾಟಕ ಫ್ಯಾಷನ್ ಶೋ ಗ್ರ್ಯಾಂಡ್ ಫಿನಾಲೆಯಲ್ಲಿ ನಾರಿಯರು ಕ್ಯಾಟ್ ವಾಕ್ ಮಾಡಿ ಸೈ ಎನ್ನಿಸಿಕೊಂಡ್ರು. ಮದ್ವೆಯಾದ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡೋ ನಿಟ್ಟಿನಲ್ಲಿ ಶೋ ನಡೆಸಲಾಗಿತ್ತು. ರಾಜ್ಯದ ಹಲವೆಡೆ ಆಡಿಷನ್ ನಡೆಸಿ 38 ಸ್ಪರ್ಧಿಗಳನ್ನ ಫಿನಾಲೆಗೆ ಆಯ್ಕೆ ಮಾಡಲಾಗಿತ್ತು. ಇವರೆಲ್ಲರೂ ಱಂಪ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಹುಬ್ಬೇರಿಸಿದ್ರು.

ಒಟ್ನಲ್ಲಿ ಒಂದ್ಕಡೆ ಕಾಲೇಜು ಹುಡುಗಿಯರೆಲ್ಲಾ ಗ್ರಾಮೀಣ ಕಲರವದಲ್ಲಿ ಮಿಂದೆದ್ರೆ, ಮತ್ತೊಂದೆಡೆ ಸದಾ ಮನೇಲಿ ಇರ್ತಿದ್ದ ಮಹಿಳೆಯರೆಲ್ಲಾ ಮಾಡೆಲ್​ಗಳ ರೇಂಜ್​ಗೆ ಕ್ಯಾಟ್ ವಾಕ್ ಮಾಡಿ ಟ್ಯಾಲೆಂಟ್ ಪ್ರದರ್ಶಿಸಿದ್ರು.








Published On - 12:15 pm, Tue, 11 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us