AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾ ಬಾಸ್ಕೆಟ್​ ಬಾಲ್​ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಭಾರತೀಯ ಎಂಎಲ್​ಸಿ ಡಾ ಕೆ ಗೋವಿಂದರಾಜ್​

ಪ್ರತಿಷ್ಠಿತ ಫೆಡರೇಶನ್​ ಆಫ್ ಇಂಟರ್​ನ್ಯಾಷನಲ್​ ಬಾಸ್ಕೆಟ್​ ಬಾಲ್​ ಅಸೋಸಿಯೇಷನ್​ ಏಷ್ಯಾ ಅಧ್ಯಕ್ಷರಾಗಿ ಕನ್ನಡಿಗ, ವಿಧಾನ ಪರಿಷತ್​ ಸದಸ್ಯ ಮತ್ತು ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್​ (Dr K Govindaraj) ಆಯ್ಕೆ ಆಗಿದ್ದಾರೆ.

ಏಷ್ಯಾ ಬಾಸ್ಕೆಟ್​ ಬಾಲ್​ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಭಾರತೀಯ ಎಂಎಲ್​ಸಿ ಡಾ ಕೆ ಗೋವಿಂದರಾಜ್​
ಡಾ ಕೆ ಗೋವಿಂದರಾಜು ಮತ್ತು ಇತರರು
ಗಂಗಾಧರ​ ಬ. ಸಾಬೋಜಿ
|

Updated on:Aug 23, 2023 | 10:17 PM

Share

ಬೆಂಗಳೂರು, ಆಗಸ್ಟ್​ 23: ಪ್ರತಿಷ್ಠಿತ ಫೆಡರೇಶನ್​ ಆಫ್ ಇಂಟರ್​ನ್ಯಾಷನಲ್​ ಬಾಸ್ಕೆಟ್​ ಬಾಲ್​ ಅಸೋಸಿಯೇಷನ್​ ಏಷ್ಯಾ ಅಧ್ಯಕ್ಷರಾಗಿ ಕನ್ನಡಿಗ, ವಿಧಾನ ಪರಿಷತ್​ ಸದಸ್ಯ ಮತ್ತು ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್​ (Dr K Govindaraj) ಆಯ್ಕೆ ಆಗಿದ್ದಾರೆ. ಆ ಮೂಲಕ ಫಿಬಾಗೆ ಸೇರ್ಪಡೆಗೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಡಾ.ಕೆ.ಗೋವಿಂದರಾಜ್ ಪಾತ್ರರಾಗಿದ್ದಾರೆ. ಇಂಟರ್​ನ್ಯಾಷನಲ್​ ಬಾಸ್ಕೆಟ್​ ಬಾಲ್​ ಅಸೋಸಿಯೇಷನ್​ ಸದ್ಯ ವಿಶ್ವ ಆಡಳಿತ ಮಂಡಳಿಯಾಗಿದೆ. 2023-27ರ ವರೆಗೆ ಡಾ.ಕೆ.ಗೋವಿಂದರಾಜ್ ಅಧಿಕಾರಾವಧಿ ಇರಲಿದೆ.

ಈ ವರ್ಷ ಫೆಡರೇಶನ್​ ಆಫ್ ಇಂಟರ್​ನ್ಯಾಷನಲ್​ ಬಾಸ್ಕೆಟ್​ ಬಾಲ್​ ಅಸೋಸಿಯೇಷನ್​​ಗೆ ಡಾ.ಕೆ.ಗೋವಿಂದರಾಜ್ ಅವರ ಹೆಸರನ್ನು ನಾಮನಿರ್ದೇಶನ ಮಾಡಲಾಗಿತ್ತು. ಬಳಿಕ ಇತ್ತೀಚೆಗೆ ನಡೆದ ವಾರ್ಷಿಕ ಸಭೆಯಲ್ಲಿ ವಿವಿಧ ಪದಾಧಿಕಾರಿಗಳನ್ನು ಸಹ ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: ಅಕ್ರಮ ಕೇಬಲ್​ಗಳ ತೆರವಿಗೆ ಮುಂದಾದ ಬೆಸ್ಕಾಂ: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಇಂಟರ್ನೆಟ್ ಸ್ಥಗಿತ ಸಾಧ್ಯತೆ

ಕತಾರ್​ನ ಶೇಕ್​ ಸೌದ್​ ಅಲಿ ಅಲ್ತಾನಿ ಅವರಿಂದ ತೆರವಾಗಿದ್ದ ಹುದ್ದೆಯನ್ನು ಕನ್ನಡಿಗ ಡಾ.ಕೆ.ಗೋವಿಂದರಾಜ್ ಅವರು ಅಲ್ಲಂಕರಿಸಿದ್ದಾರೆ. ಫೆಡರೇಶನ್​ ಆಫ್ ಇಂಟರ್​ನ್ಯಾಷನಲ್​ ಬಾಸ್ಕೆಟ್​ ಬಾಲ್​ ಅಸೋಸಿಯೇಷನ್​ ಏಷ್ಯಾ ಅಧ್ಯಕ್ಷರಾಗಿ ಡಾ. ಕೆ ಗೋವಿಂದರಾಜ್ ಆಯ್ಕೆಯಾದ ಬಳಿಕ ಫಿಬಾ ಪ್ರಧಾನ ಕಾರ್ಯದರ್ಶಿ ಆಂಡ್ರಿಯಾಸ್ ಜಾಗ್ಲಿಸ್, ಕಾರ್ಯನಿರ್ವಾಹಕ ನಿರ್ದೇಶಕ ಹಗೋಪ್ ಖಾಜಿರಿಯನ್ ಮತ್ತು ಇತರ ಹಲವಾರು ಉನ್ನತ ಫಿಬಾ ​​ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದಾರೆ.

ಫೆಡರೇಶನ್​ ಆಫ್ ಇಂಟರ್​ನ್ಯಾಷನಲ್​ ಬಾಸ್ಕೆಟ್​ ಬಾಲ್​ ಅಸೋಸಿಯೇಷನ್​​ನ ಏಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಡಾ.ಕೆ ಗೋವಿಂದರಾಜ್, ಫಿಬಾ ಕೇಂದ್ರ ಮಂಡಳಿಯ ಭಾಗವಾಗಿರುವುದು ಖುಷಿಯ ವಿಚಾರ. ಅದಕ್ಕಿಂತ ಮುಖ್ಯವಾಗಿ ಏಷ್ಯಾದ ಲಕ್ಷಾಂತರ ಯುವಕರಿಗೆ ಬ್ಯಾಸ್ಕೆಟ್‌ ಬಾಲ್ ತಲುಪಿಸುವ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:10 pm, Wed, 23 August 23

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ