
ಹಾಸನ: ಶಾಲಾ ಕಾಲೇಜು ಓಪನ್ ಮಾಡೋ ಮೊದಲು ಖಾಸಗಿ ಶಾಲೆ ಮತ್ತು ಕಾಲೇಜುಗಳನ್ನು ಮಟ್ಟ ಹಾಕಿ. ಒಂದೊಂದು ಶಾಲೆ ಹಾಗೂ ಕಾಲೇಜು 50 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಫೀಸ್ ತಗೊಂಡಿದ್ದಾರೆ ಎಂದು ಮಾಜಿ ಸಚಿವ H.D.ರೇವಣ್ಣ ಹೇಳಿದ್ದಾರೆ.
ಖಾಸಗಿ ಶಾಲೆಗಳ ಗೊಡ್ಡು ಬೆದರಿಕೆಗೆ ಹೆದರ ಬೇಡಿ ಎಂದು ಜಿಲ್ಲೆಯಲ್ಲಿ ಭಾರಿ ಶುಲ್ಕ ವಸೂಲಿಗೆ ಇಳಿದ ಶಾಲೆಗಳ ವಿರುದ್ಧ ರೇವಣ್ಣ ಕಿಡಿಕಾರಿದ್ದಾರೆ. ಶಾಲಾ, ಕಾಲೇಜು ಮತ್ತು ಅರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ಕೊಡಿ ಎಂದು ಈ ಮೂಲಕ, ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿಯದೆ ಸರ್ಕಾರಿ ಶಾಲೆ ಸ್ಥಾಪಿಸಿ ಎಂದು ರೇವಣ್ಣ ಸಲಹೆ ಕೊಟ್ಟಿದ್ದಾರೆ.
‘ಬ್ರಿಟಿಷರ ಕಾಲದ ಕಾಮಗಾರಿಗೂ ತಡೆ ನೀಡಲಾಗಿದೆ’
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಮೈತ್ರಿ ಸರ್ಕಾರ ಮಂಜೂರು ಮಾಡಿದ್ದ ಎಲ್ಲಾ ಕಾಮಗಾರಿಗಳನ್ನು ತಡೆಹಿಡಿಯಲಾಗಿದೆ. ಜಿಲ್ಲೆಯಲ್ಲಿ 6 ಜನ JDS ಶಾಸಕರಿರೋ ಕಾರಣಕ್ಕೆ ಎಲ್ಲಾ ಕಾಮಗಾರಿ ತಡೆಹಿಡಿಯಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ರೇವಣ್ಣ ವಾಗ್ದಾಳಿ ನಡೆಸಿದರು.
ಬ್ರಿಟಿಷರ ಕಾಲದಲ್ಲಿ ಭೂಸ್ವಾಧೀನ ಆದ ವಿಮಾನ ನಿಲ್ದಾಣದ ಕಾಮಗಾರಿಗೂ ತಡೆ ನೀಡಲಾಗಿದೆ. ಇದಲ್ಲದೆ, ಹಾಸನದ ಆಲೂರು, ಚಿಕ್ಕಮಗಳೂರಿನ ಬೇಲೂರು ಹಾಸನ ರೈಲ್ವೇ ಮಾರ್ಗದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಕುಮಾರಸ್ವಾಮಿ ಸಿಎಂ ಆಗಿದ್ದ ಕಾಲದಲ್ಲಿ 462 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು ಎಂದು ಮಾಜಿ ಸಚಿವ ರೇವಣ್ಣ ತೀವ್ರ ಆಕ್ರೋಶ ವ್ಯಕಪಡಿಸಿದರು.
ಹಾಸನದ ಚನ್ನಪಟ್ಟಣದಲ್ಲಿ ಕೆರೆ ಅಭಿವೃದ್ಧಿಗೆ ಸ್ಥಳೀಯ ಶಾಸಕ ಪತ್ರಕೊಟ್ಟು ತಡೆ ನೀಡಿದ್ದಾರೆ. ತೋಟಗಾರಿಕೆ ಕಾಲೇಜು ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ, ಹಾಸನ ಬಂಧಿಖಾನೆ ಯೋಜನೆ ಸ್ಥಗಿತಗೊಂಡಿದೆ. ಹಾಗಾಗಿ, ನಾವು ಸಿಎಂ ಮನೆ ಮುಂದೆ ಧರಣಿಮಾಡಲು ತೀರ್ಮಾನ ಮಾಡಿದ್ದೇವೆ. ಜಿಲ್ಲೆಯ 6 ಜನ ಶಾಸಕರು ಈ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ರೇವಣ್ಣ ಹೇಳಿದರು.
‘1 ರೂಪಾಯಿ ತಗೊಂಡಿಲ್ಲ, ಆದ್ರೂ ಟ್ರಾನ್ಸ್ಫರ್ ಮಾಡಿಕೊಟ್ಟೆ.. ಈಗ ಕೋಟಿ ಲೆಕ್ಕದಲ್ಲಿ ಕೊಟ್ಟು ಬರ್ತಿದಾರೆ’