ಐಟಿ ಕೆಲಸ ಬಿಟ್ಟು ‘ಸ್ಟಾರ್ಟ್ ಅಪ್’ ಆರಂಭಿಸಿ ಬಾತ್ ರೂಂ ಸಿಂಗರ್ಸ್​​​ಗೆ ಹಾಡುಗಾರಿಕೆ ಕಲಿಸಿದ ಸುನಿಲ್ ಕೋಶಿ

ಹುಟ್ಟಿದ ಊರು ಕೇರಳ. ದುಬೈನಲ್ಲಿ ಶಿಕ್ಷಣ ಪಡೆದು ಕರ್ನಾಟಕದ ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಮುಗಿಸಿ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಸುನಿಲ್ ಕೋಶಿ ಸಂಗೀತಲೋಕಕ್ಕೆ ಹೊರಳಿದರ ಹಿಂದೆ ಒಂದು ಕತೆಯಿದೆ. ಹಾಡುಗಳಲ್ಲಿ ಅತೀವ ಆಸಕ್ತಿ ಇದ್ದ ಸುನಿಲ್, ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗ ಕನ್ನಡ ಹಾಡುಗಳತ್ತ ಆಕರ್ಷಿತರಾದರು. ಆಮೇಲೆ ಸಂಗೀತ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾದ ಸುನಿಲ್- ಅರ್ಚನಾ ದಂಪತಿಯ ಸಾಧನೆಯ ಕತೆ ಇಲ್ಲಿದೆ.

ಐಟಿ ಕೆಲಸ ಬಿಟ್ಟು 'ಸ್ಟಾರ್ಟ್ ಅಪ್' ಆರಂಭಿಸಿ ಬಾತ್ ರೂಂ ಸಿಂಗರ್ಸ್​​​ಗೆ ಹಾಡುಗಾರಿಕೆ ಕಲಿಸಿದ ಸುನಿಲ್ ಕೋಶಿ
ಸುನಿಲ್ ಕೋಶಿ
Follow us
|

Updated on: Jun 10, 2024 | 1:22 PM

ಎಲ್ಲರಿಗೂ ಹಾಡಬಹುದಾ? ಎಂದು ಕೇಳಿದರೆ ಹೌದು ಅಂತಾರೆ ಸುನಿಲ್ ಕೋಶಿ (Sunil Koshy). ಎಲ್ಲರಲ್ಲೂ ಒಂದೊಂದು ಕಲೆ ಅಡಗಿರುತ್ತದೆ. ಅದನ್ನು ಗುರುತಿಸಿ ಹೊರತರಬೇಕು, ಪಾಲಿಶ್ ಮಾಡಬೇಕು. ಅದು ಆ ವ್ಯಕ್ತಿಗಳಲ್ಲಿ ಆತ್ಮ ವಿಶ್ವಾಸವನ್ನು ಹುಟ್ಟು ಹಾಕುತ್ತದೆ. ನಮ್ಮಲ್ಲಿ ಹೆಚ್ಚಿನವರಿಗೆ ಹಾಡಬೇಕು ಎಂದು ಇರುತ್ತದೆ. ಮನೆಯಲ್ಲಿ ಅದೂ ಬಾತ್ ರೂಮಿನಲ್ಲಿ ಹಾಡಿದವರೇ ಹೆಚ್ಚು. ಅಳುಕು ಒಂದೆಡೆಯಾದರೆ ನಾವು ಹಾಡುವುದನ್ನು ಕೇಳಿ ಜನ ಏನಂತಾರೋ ಎಂಬ ಭಯ. ಹೀಗೆ ಅಂಜಿಕೆಯಿಂದಾಗಿಯೇ ಎಷ್ಟೋ ಪ್ರತಿಭೆಗಳು ಎಲೆ ಮರೆ ಕಾಯಿಯಂತೆ ಇದ್ದು ಬಿಡುತ್ತವೆ. ನಿಮಗೂ ಹಾಡಬಹುದು ಎಂದು ಅವರಲ್ಲಿ ಹುರುಪು ತುಂಬಿದರೆ ಮಾತ್ರ ಅವರ ಪ್ರತಿಭೆಯನ್ನು ಹೊರ ತರಲು ಸಾಧ್ಯ. ನಾನು ಹಾಡಬಲ್ಲೆ, ನಿಮಗೂ ಅದು ಸಾಧ್ಯ ಎಂಬ ಪಾಸಿಟಿವ್ ಸಂದೇಶವನ್ನು ನೀಡುವ ಉದ್ದೇಶದಿಂದಲೇ ಈ From Mug to Mike ಎಂಬ ಸ್ಟಾರ್ಟ್ ಅಪ್ ಶುರು ಮಾಡಿದ್ದು ಎಂದು ಸುನಿಲ್ ಕೋಶಿ ಮಾತು ಶುರು ಮಾಡಿದರು. ಏನಿದು ಫ್ರಂ ಮಗ್ ಟು ಮೈಕ್ ಸ್ಟಾರ್ಟ್ ಅಪ್? ಸುನಿಲ್ ಕೋಶಿಯೆಂಬ ಟೆಕ್ಕಿ ಈ ಸ್ಟಾರ್ಟ್ ಅಪ್ ಮೂಲಕ ಹಾಡುಗಾರಿಕೆಯಲ್ಲಿ ‘ಕ್ರಾಂತಿ’ ಮಾಡಿದ್ದು ಹೇಗೆ? ಇಲ್ಲಿದೆ ಅವರ ಸಾಧನೆಯ ಕತೆ.

ಹುಟ್ಟಿದ ಊರು ಕೇರಳ. ದುಬೈನಲ್ಲಿ ಶಿಕ್ಷಣ ಪಡೆದು ಕರ್ನಾಟಕದ ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಮುಗಿಸಿ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಸುನಿಲ್ ಕೋಶಿ ಸಂಗೀತಲೋಕಕ್ಕೆ ಹೊರಳಿದರ ಹಿಂದೆ ಒಂದು ಕತೆಯಿದೆ. ಹಾಡುಗಳಲ್ಲಿ ಅತೀವ ಆಸಕ್ತಿ ಇದ್ದ ಸುನಿಲ್, ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗ ಕನ್ನಡ ಹಾಡುಗಳತ್ತ ಆಕರ್ಷಿತರಾದರು. ಅಲ್ಲಿ ಕನ್ನಡ ಹಾಡುಗಳನ್ನು ಹಾಡಿ ಬಹುಮಾನವನ್ನೂ ಗಿಟ್ಟಿಸಿಕೊಂಡಿದ್ದರು. ಕಾಲೇಜು ಶಿಕ್ಷಣ ಮುಗಿದು ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಇಂಟೆಲ್​​ನಲ್ಲಿ ಕೆಲಸವೂ ಸಿಕ್ಕಿತು. ಆದರೆ ಸಂಗೀತ ಕ್ಷೇತ್ರದತ್ತ ಇದ್ದ ಒಲವು ಕಡಿಮೆ ಆಗಿರಲಿಲ್ಲ. ಗುರುಕುಲಗಳಲ್ಲಿ ಕಲಿಯಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಂಗೀತಗಾರರ ಬಗ್ಗೆ ಓದಿ ತಿಳಿದಿದ್ದ ಸುನಿಲ್ ಅವರು ಅದರತ್ತ ಆಕರ್ಷಿತರಾದರು. ಕಲಿಕೆಯ ಹಸಿವು ಅದೆಷ್ಟು ತೀವ್ರವಾಗಿತ್ತು ಎಂದರೆ ಕೈ ತುಂಬಾ ಸಂಬಳ ಬರುತ್ತಿದ್ದ ಕೆಲಸಕ್ಕೆ ಸುನಿಲ್ ರಾಜೀನಾಮೆ ಕೊಟ್ಟುಬಿಟ್ಟರು. ಮುಂದಿನ ಎರಡು ವರ್ಷಗಳ ಕಾಲ ಸಂಗೀತ ಕಲಿಕೆ. ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ಅವರಿಂದ ಕಲಿತ ನಂತರ ಚೆನ್ನೈನ ಗುರುಕುಲಂಗೆ ತೆರಳಿ ಅಲ್ಲಿ ವಿದ್ವಾನ್ ಶಶಿಕಿರಣ್ ಅವರ ಬಳಿಯೂ ಸಂಗೀತ ಕಲಿಕೆ ಮುಂದುವರಿಸಿದರು.

ಇದಾದ ನಂತರ 2012ರಲ್ಲಿ ರೀಬೂಟ್ ಎಂಬ ಆಡಿಯೊ ಆಲ್ಬಂ ಹೊರತಂದರು. ಸಂಗೀತದ ಮೂಲಕ ಟೆಕ್ಕಿಯೊಬ್ಬರ ಕತೆಯನ್ನು ಹೇಳುವ ಮ್ಯೂಸಿಕಲ್ ಆಲ್ಬಂ ಆಗಿತ್ತು  ಅದು. ಈ ಆಲ್ಬಂ ಚಲನಚಿತ್ರೇತರ ವಿಭಾಗದಲ್ಲಿ ಅತ್ಯುತ್ತಮ Male Singerಗೆ ನೀಡುವ ಕನ್ನಡ ಅಂತರರಾಷ್ಟ್ರೀಯ ಸಂಗೀತ ಪ್ರಶಸ್ತಿಯನ್ನು ಗೆದ್ದಿತ್ತು. ಇದಾದ ನಂತರ ದಿ ಬಾತ್‌ರೂಮ್ ಸಿಂಗರ್ಸ್ ಆಂಥೆಮ್ ಮಾಡಿದ್ದು ಹಿಟ್ ಆಗಿತ್ತು. ಹೀಗೆ ಹಲವು ಮ್ಯೂಸಿಕಲ್ ವಿಡಿಯೊ ಮಾಡಿದ್ದ ಸುನಿಲ್, ಕನ್ನಡ ಸಿನಿಮಾಕ್ಕೂ ಸಂಗೀತ ನಿರ್ದೇಶನ ಮಾಡಿದ್ದಾರೆ.

ಫ್ರಂ ಮಗ್ ಟು ಮೈಕ್​​ನಿಂದ ಇಲ್ಲಿವರೆಗಿನ ಪಯಣ

2013ರಲ್ಲಿ ಸುನಿಲ್ ಕೆಲಸ ಬಿಟ್ಟಿದ್ದರು. ಆಮೇಲೆ ಅವರ ಪತ್ನಿ ಅರ್ಚನಾ ಅವರೊಂದಿಗೆ ಫ್ರಂ ಮಗ್ ಟು ಮೈಕ್ ಎಂಬ ಸ್ಟಾರ್ಟಪ್ ಶುರು ಮಾಡಿದ್ದು. ಈ ಸ್ಟಾರ್ಟ್ ಅಪ್​​ಗೆ ಫ್ರಂ ಮಗ್ ಟು ಮೈಕ್ ಎಂದು ಹೆಸರು ಸೂಚಿಸಿದ್ದು ಕೂಡಾ ಅರ್ಚನಾ ಅವರೇ. ಬೆಂಗಳೂರಿನಲ್ಲಿ ಕಳೆದ 11 ವರ್ಷಗಳಲ್ಲಿ ಸುನಿಲ್ ಮತ್ತು ಅವರ ಪತ್ನಿ 10,000 ಕ್ಕೂ ಹೆಚ್ಚು ಜನರಿಗೆ ಉತ್ತಮವಾಗಿ ಹಾಡಲು ತರಬೇತಿ ನೀಡಿದ್ದಾರೆ. “ನಮ್ಮಲ್ಲಿ ಸಂಗೀತ ಕಲಿಯಲು ಬಂದವರಲ್ಲಿ ವೈದ್ಯರು, ವ್ಯವಸ್ಥಾಪಕರು, ಪ್ರಾಧ್ಯಾಪಕರು, ಗೃಹಿಣಿಯರು ಮತ್ತು ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿ ವಯಸ್ಸಿನ ಮಿತಿಯಿಲ್ಲ. ನಿಮಗೆ ಹಾಡಿನ ಮೇಲೆ ಪ್ರೀತಿ ಇದ್ದರೆ, ಹಾಡಲು ಬಯಸುವವರಾದರೆ ಎಲ್ಲರಿಗೂ ಇಲ್ಲಿ ಬರಬಹುದು. ಇಲ್ಲಿ ವರ್ಕ್ ಶಾಪ್ ನಡೆಸಿದ ನಂತರ ಸ್ಟುಡಿಯೊದಲ್ಲಿ ಹಾಡುವ ಅವಕಾಶವನ್ನು ನೀಡುತ್ತೇವೆ. ಅವರ ದನಿಯನ್ನು, ಹಾಡನ್ನು ಹೇಗೆ ಫೈನ್ ಟ್ಯೂನ್ ಮಾಡಬಹುದು ಎಂಬುದರ ಬಗ್ಗೆ ಸಲಹೆ ನೀಡುತ್ತೇವೆ ಅಂತಾರೆ ಸುನಿಲ್.

ಗಾಯಕಿ ಚಿತ್ರಾ ಮತ್ತು ಹರಿಹರನ್ ಅವರ ಜತೆ ಸುನಿಲ್ ಕೋಶಿ

ಕೆಎಸ್ ಚಿತ್ರ, ಹರಿಹರನ್, ಕುಮಾರ್ ಸಾನು ಮತ್ತು ಪಿ ಶ್ರೀನಿವಾಸ್ ಮೊದಲಾದ ಸಂಗೀತಕ್ಷೇತ್ರದ ಮಹಾನ್ ಕಲಾವಿದರೊಂದಿಗೆ ಸುನಿಲ್ ಯುಗಳ ಗೀತೆ ಹಾಡಿದ್ದಾರೆ. ಈ ಸಂಗೀತ ಪಯಣದ ಬಗ್ಗೆ ಹೇಳುವಾಗ, ನಾವು ಸಂಗೀತ ಕ್ಷೇತ್ರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಲು ಪ್ರಯತ್ನಿಸಿದ್ದೇವೆ ಅಂತಾರೆ ಸುನಿಲ್.  ವಿಶ್ವ ಸಂಗೀತ ದಿನದಂದು ಸುನಿಲ್ ಅವರು ‘ಸುರ್ ಮೇ ರಂಗೀನ್ ಹುಯೀ’ ಎಂಬ ಗೀತೆಯನ್ನು ಸಂಯೋಜಿಸಿ ಹಾಡಿದ್ದಾರೆ. ಸಾಫ್ಟ್‌ವೇರ್ ವೃತ್ತಿಪರರು, ಬ್ಯಾಂಕ್ ಮ್ಯಾನೇಜರ್ ಮತ್ತು ದಂತವೈದ್ಯರು ಸೇರಿದಂತೆ ಏಳು ಜನರು ಈ ಹಾಡು ಹಾಡಿದ್ದಾರೆ.  ಈ ಹಾಡು ಫ್ರಂ ಮಗ್‌ ಟು ಮೈಕ್‌ನ ಯೂಟ್ಯೂಬ್ ಚಾನೆಲ್‌ನಲ್ಲಿದೆ. ಅಷ್ಟೇ ಅಲ್ಲದೆ ಆಂತಾರಾಷ್ಟ್ರೀಯ ಮಹಿಳಾ ದಿನ, ಅಂಗವಿಕಲರ ದಿನ ಮತ್ತು ವಿಶ್ವ ಸಂಗೀತ ದಿನದಂತಹ ವಿಶೇಷ ದಿನಗಳಲ್ಲಿ ನಿರ್ದಿಷ್ಟ ವಿಷಯದ ಬಗ್ಗೆ ಇವರು ಹಾಡು ಬಿಡುಗಡೆ ಮಾಡಿದ್ದಾರೆ. ಫ್ರಂ ಮಗ್ ಟು ಮೈಕ್ ಮೂಲಕ ಬೆಳಕಿಗೆ ಬಂದ ದೇಶದಾದ್ಯಂತವಿರುವ ಆಯ್ದ ಗಾಯಕ/ಗಾಯಕಿಯರನ್ನು ಒಳಗೊಂಡಿರುವ ಹಾಡುಗಳಾಗಿವೆ ಇವೆಲ್ಲವೂ.

ಮುಂಬೈ, ಚೆನ್ನೈ, ಬೆಂಗಳೂರು, ಕೊಚ್ಚಿ ಸೇರಿದಂತೆ ದೇಶಾದ್ಯಂತ ಮತ್ತು ದುಬೈ ಮತ್ತು ಅಬುಧಾಬಿಯಲ್ಲಿಯೂ ಸುನಿಲ್ ವರ್ಕ್ ಶಾಪ್ ಮಾಡಿದ್ದಾರೆ. ಹಾಡಲು ಬಯಸುವವರಿಗೆ ಸ್ಫೂರ್ತಿ ತುಂಬುವುದೇ ಈ ಕಾರ್ಯಾಗಾರದ ಉದ್ದೇಶ. ಹೆಚ್ಚಿನವರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಕ್ಕಿರುವುದಿಲ್ಲ ಅಥವಾ ಮುಂದೆ ಬಂದು ಹಾಡಲು ಆತ್ಮವಿಶ್ವಾಸದ ಕೊರತೆ ಇರುತ್ತದೆ. ಇದನ್ನೆಲ್ಲ ಮೀರಿ ನಿಲ್ಲಲು ವರ್ಕ್ ಶಾಪ್ ನಲ್ಲಿ ನಾವು ಸಹಾಯ ಮಾಡುತ್ತೇವೆ ಅಂತಾರೆ ಅರ್ಚನಾ. ಈ ರೀತಿ ವರ್ಕ್ ಶಾಪ್​​ನಲ್ಲಿ ಭಾಗವಹಿಸವವರಲ್ಲಿ ನಿವೃತ್ತರಾದವರು ಇರುತ್ತಾರೆ. ಹೆಚ್ಚಿನವರು 30ರ ಹರೆಯದವರು. ಇಲ್ಲಿ ನಾವು ಯಾರನ್ನೂ ಯಾರೊಂದಿಗೂ ಹೋಲಿಸುವುದಿಲ್ಲ. ಇಲ್ಲಿ ಸ್ಪರ್ಧೆಗಳಿಲ್ಲ. ಹಾಡುಗಾರಿಕೆಯನ್ನು  ಉತ್ತಮ ಪಡಿಸುವುದಕ್ಕೆ ಏನೇನು ಮಾಡಬಹುದು? ಯಾವ ರೀತಿಯ ಹಾಡುಗಳು ನಿಮ್ಮ ದನಿಗೆ ಹೊಂದುತ್ತವೆ? ಸ್ವರ, ರಾಗ, ತಾಳ, ಲಯದ ಬಗ್ಗೆ ಮಾಹಿತಿ ನೀಡುವುದಲ್ಲದೆ ಅವರನ್ನು ವೇದಿಕೆಗೆ ಹತ್ತಿ ಹಾಡುವಂತೆ ಪ್ರೋತ್ಸಾಹಿಸುವುದೇ ನಮ್ಮ ಉದ್ದೇಶ. ಹೆಚ್ಚಿನವರಿಗೆ ಹಾಡುವುದು ಗೊತ್ತು, ಅವರಿಗೆ ಚಿಕ್ಕದೊಂದು ಪುಶ್ ಅಥವಾ ಪ್ರೋತ್ಸಾಹವಷ್ಟೇ ಬೇಕಿರುತ್ತದೆ. ಅದನ್ನು ನಾವು ಕೊಡುತ್ತಿದ್ದೇವೆ.ಯಾಕೆಂದರೆ ಪ್ರತಿಯೊಬ್ಬ ಮನುಷ್ಯನಲ್ಲಿ ಒಂದು ಕಲೆ ಅಡಗಿರುತ್ತದೆ ಎಂಬ ನಂಬಿಕೆಯುಳ್ಳವನು ನಾನು ಎಂದು ಸುನಿಲ್ ಕೋಶಿ ಹೇಳುತ್ತಾರೆ.

ನಮ್ಮ ವರ್ಕ್ ಶಾಪ್ ನಲ್ಲಿ ಮೂರು ಹಂತಗಳಿವೆ: ಪ್ರೈಮರ್, ಅಡ್ವಾನ್ಸ್ಡ್ ಮತ್ತು ಸ್ಟೇಜ್ ಶೋ ಪ್ರಿಪರೇಟರಿ. ಮೊದಲನೇ ಹಂತದಲ್ಲಿ ಮೊದಲ ಬಾರಿ ಹಾಡುವವರಿಗೆ ಅವಕಾಶ, ಎರಡನೆಯದ್ದು ಅಲ್ಲಿ ಪಾಲಿಶ್ಡ್ ಆಗಿ ಬಂದ ಗಾಯಕರು ಅಥವಾ ಈಗಾಗಲೇ ಒಂದಷ್ಟು ಹಾಡುಗಾರಿಕೆಯಲ್ಲಿ ತೊಡಗಿರುವವರಿಗೆ. ಮೂರನೆಯದ್ದು ವೇದಿಕೆಯಲ್ಲಿ ಪ್ರದರ್ಶನ ನೀಡಲು ಬಯಸುವವರಿಗಾಗಿ ಇರುವಂಥದ್ದು.

ಸ್ಟುಡಿಯೊದಲ್ಲಿ ಹಾಡಬೇಕೆ?

ಗಾಯಕರು ಸ್ಟುಡಿಯೊದಲ್ಲಿ ಹಾಡುವುದನ್ನು ನೋಡಿರುತ್ತೀರಿ, ಅದೇ ರೀತಿ ನಾನೂ ಹಾಡಬೇಕು ಎಂಬ ಹಲವರ ಕನಸನ್ನು ಸುನಿಲ್ ಕೋಶಿ ನನಸು ಮಾಡಿದ್ದಾರೆ. ವರ್ಕ್ ಶಾಪ್ ನಂತರ ನಮ್ಮಿಷ್ಟದ ಹಾಡುಗಳನ್ನು ಸ್ಟುಡಿಯೊದಲ್ಲಿ ಹಾಡಿ ರೆಕಾರ್ಡಿಂಗ್ ಮಾಡುವ ಅವಕಾಶ ಇಲ್ಲಿರುತ್ತದೆ. ಅದಕ್ಕಾಗಿ ಸುನಿಲ್ ಮತ್ತು ಅರ್ಚನಾ ವಿವಿಧ ನಗರಗಳಲ್ಲಿನ ಹಲವಾರು ಸ್ಟುಡಿಯೋಗಳೊಂದಿಗೆ ಸಂಪರ್ಕದಲ್ಲಿದ್ದಾರೆ.  ಸ್ಟುಡಿಯೊಗಳು ವೃತ್ತಿಪರರಿಗೆ ಮಾತ್ರ ಅಲ್ಲ, ನಾವೂ ಹಾಡಬಲ್ಲೆವು ಎಂಬ ಆತ್ಮವಿಶ್ವಾಸವನ್ನು ನಾವು ಈ ಮೂಲಕ ತುಂಬಿದ್ದೇವೆ. ವೃತ್ತಿಪರ ಗಾಯನದ ಸೂಕ್ಷ್ಮ ವ್ಯತ್ಯಾಸಗಳನ್ನು ಅವರಿಗೆ ಹೇಳಿ ಕೊಡುತ್ತೇವೆ. ರೆಕಾರ್ಡಿಂಗ್‌ ಮುಗಿದ ನಂತರ ಅಲ್ಲಿ ಹಾಡಿದವರು ನಮ್ಮ ಬಳಿಗೆ ಬಂದು, ಇಂಥಾ ಸೂಕ್ಷ್ಮಗಳು ನಮಗೆ ಗೊತ್ತಿರಲಿಲ್ಲ. ತಿದ್ದಿದ್ದಕ್ಕೆ ಥ್ಯಾಂಕ್ಸ್ ಅಂತಾರೆ. ಅವರು ಮತ್ತಷ್ಟು ಚೆನ್ನಾಗಿ ಹಾಡಲು ಸಿದ್ಧತೆ ಮಾಡುತ್ತಾರೆ. ರೆಕಾರ್ಡಿಂಗ್ ಸೆಷನ್‌ ಮುಗಿದ ನಂತರ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಲು ನಾವು ಎರಡು ಮೂರು ದಿನಗಳನ್ನು ತೆಗೆದುಕೊಳ್ಳುತ್ತೇವೆ. ಅದರ ನಂತರ, ನಾವು ಭಾಗವಹಿಸಿದವರಿಗೆ ವಿವರವಾದ ಮತ್ತು ವಿಮರ್ಶಾತ್ಮಕ ವಿಶ್ಲೇಷಣೆಯನ್ನು ಕಳುಹಿಸುತ್ತೇವೆ. ಅವರ ಸಾಮರ್ಥ್ಯಗಳು ಏನು? ಏನು ಸುಧಾರಣೆ ಮಾಡಬೇಕು ಎಂಬುದನ್ನು ಅವರಿಗೆ ನೋಟ್ ಮಾಡಿ ಕಳುಹಿಸುತ್ತೇವೆ. ಹೆಚ್ಚಿನ ಬಾತ್ರೂಮ್ ಗಾಯಕರು ಸಾಂಪ್ರದಾಯಿಕ ಸಂಗೀತಕ್ಕಿಂತ ಹೆಚ್ಚಾಗಿ ಚಲನಚಿತ್ರ ಗೀತೆಗಳಿಗೆ ಆದ್ಯತೆ ನೀಡುವುದರಿಂದ, ಅದನ್ನು ಕಲಿಸುವತ್ತ ಗಮನ ಹರಿಸಲಾಗಿದೆ ಅಂತಾರೆ ಈ ದಂಪತಿ.

ತಾಜಾ ಸುದ್ದಿ
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ
ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ
‘ಸೂಪರ್​ ಆಗಿದೆ’: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ನೋಡಿ ಕನ್ನಡಿಗರು ಖುಷ್
‘ಸೂಪರ್​ ಆಗಿದೆ’: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ನೋಡಿ ಕನ್ನಡಿಗರು ಖುಷ್