ಬೈಕ್ ಸರ್ವಿಸ್​ ಮಾಡಲು.. ಟ್ರಾನ್ಸ್​ಫಾರ್ಮರ್​ ಕೆಳಗೆ ಪೆಟ್ರೋಲ್ ಟ್ಯಾಂಕ್​ ತೆಗೆದಿಟ್ಟರು, ಮುಂದೇನಾಯ್ತು?

ಬೈಕ್​ನ​ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ನಾಲ್ವರಿಗೆ ಗಾಯಗಳಾಗಿರುವ ಘಟನೆ ಚೋಳರಪಾಳ್ಯದ ಗ್ಯಾರೇಜ್​ ಬಳಿ ನಡೆದಿದೆ.

ಬೈಕ್ ಸರ್ವಿಸ್​ ಮಾಡಲು.. ಟ್ರಾನ್ಸ್​ಫಾರ್ಮರ್​ ಕೆಳಗೆ ಪೆಟ್ರೋಲ್ ಟ್ಯಾಂಕ್​ ತೆಗೆದಿಟ್ಟರು, ಮುಂದೇನಾಯ್ತು?
ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡ ಸ್ಥಳ

Updated on: Jan 10, 2021 | 10:20 PM

ಬೆಂಗಳೂರು: ಬೈಕ್​ನ​ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ನಾಲ್ವರಿಗೆ ಗಾಯಗಳಾಗಿರುವ ಘಟನೆ ಚೋಳರಪಾಳ್ಯದ ಗ್ಯಾರೇಜ್​ ಬಳಿ ನಡೆದಿದೆ.

ಬೈಕ್ ಸರ್ವಿಸ್​ ಮಾಡಲು ಮುಂದಾದ ಮೆಕ್ಯಾನಿಕ್​ಗಳು ಅದರ ಪೆಟ್ರೋಲ್ ಟ್ಯಾಂಕ್​ ತೆಗೆದಿಟ್ಟಿದ್ದರು. ಪೆಟ್ರೋಲ್ ಟ್ಯಾಂಕ್​ನ ಟ್ರಾನ್ಸ್​ಫಾರ್ಮರ್​ ಕೆಳಗೆ ಇರಿಸಿದ್ದರು. ಆದರೆ, ಟ್ಯಾಂಕ್ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ.

ಹೀಗಾಗಿ, ಸ್ಫೋಟದಲ್ಲಿ ಪುನೀತ್, ನಂಜುಂಡ, ಅಣ್ಣಾಮಲೈ ಹಾಗೂ ವಿಶ್ವನಾಥ್​ಗೆ ಗಾಯಗಳಾಗಿದೆ. ನಾಲ್ವರು ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕ ಎಂದು ತಿಳಿದುಬಂದಿದೆ. ಸದ್ಯ, ಎಲ್ಲರಿಗೂ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಣ್ಣೆನಗರಿಯಲ್ಲಿ.. 2 ತಲೆಯ ಹಾವುಗಳನ್ನು ಮಾರಲು ಯತ್ನಿಸಿದ ಕಿರಾತಕರು ಅಂದರ್​