AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂತಾಯಿಗೆ ಚರಗ, ಹೊಲದಲ್ಲೇ ವೆರೈಟಿ ಊಟ: ಎಳ್ಳಮಾವಾಸ್ಯೆ ಬಗ್ಗೆ ನೀವು ತಿದುಕೊಳ್ಳಲೇಬೇಕು

ಎಳ್ಳಮಾವಾಸ್ಯೆಯು ಉತ್ತರ ಕರ್ನಾಟಕ ರೈತರ ಪ್ರಮುಖ ಹಬ್ಬಗಳಲ್ಲಿ ಒಂದು. ಈ ದಿನ ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಸಮೃದ್ಧ ಫಸಲು ನೀಡುವಂತೆ ಪ್ರಾರ್ಥಿಸಲಾಗುತ್ತದೆ. ವಿವಿಧ ಸಿಹಿ ಖಾದ್ಯಗಳನ್ನು ಸಿದ್ಧಪಡಿಸಿ ಹೊಲಗಳಿಗೆ ತೆರಳಿ, ಭೂಮಿಗೆ 'ಚರಗ' ಚೆಲ್ಲಲಾಗುತ್ತದೆ. ಕುಟುಂಬಸ್ಥರು ಒಟ್ಟಾಗಿ ಸೇರಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಹಬ್ಬದ ಫೋಟೋಸ್​ ಇಲ್ಲಿವೆ.

ಅಮೀನ್​ ಸಾಬ್​
| Edited By: |

Updated on: Dec 19, 2025 | 6:19 PM

Share
ಎಳ್ಳಮಾವಾಸ್ಯೆ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಫೇಮಸ್ ಹಬ್ಬ. ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ದೇವಾಲಯಗಳಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ ಎಳ್ಳಮಾವಾಸ್ಯೆ ದಿನ ರೈತಾಪಿ ವರ್ಗ ಭೂ ತಾಯಿಗೆ ಪೂಜೆ ಸಲ್ಲಿಸುತ್ತಾರೆ. ಸಿಹಿ ಖಾದ್ಯಗಳನ್ನ ಸಿದ್ಧಪಡಿಸಿಕೊಂಡು ಹೊಲಕ್ಕೆ ಹೋಗಿ ಚರಗ ಚೆಲ್ಲುವ ಮೂಲಕ ಭೂ ತಾಯಿಗೆ ನಮಿಸುತ್ತಾರೆ.

ಎಳ್ಳಮಾವಾಸ್ಯೆ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಫೇಮಸ್ ಹಬ್ಬ. ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ದೇವಾಲಯಗಳಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ ಎಳ್ಳಮಾವಾಸ್ಯೆ ದಿನ ರೈತಾಪಿ ವರ್ಗ ಭೂ ತಾಯಿಗೆ ಪೂಜೆ ಸಲ್ಲಿಸುತ್ತಾರೆ. ಸಿಹಿ ಖಾದ್ಯಗಳನ್ನ ಸಿದ್ಧಪಡಿಸಿಕೊಂಡು ಹೊಲಕ್ಕೆ ಹೋಗಿ ಚರಗ ಚೆಲ್ಲುವ ಮೂಲಕ ಭೂ ತಾಯಿಗೆ ನಮಿಸುತ್ತಾರೆ.

1 / 6
ಎಳ್ಳಮಾವಾಸ್ಯೆ ಕೃಷಿಕರ ಬಹು ದೊಡ್ಡ ಹಬ್ಬ. ಎಲ್ಲೆಡೆ ಸಮೃದ್ಧ ವೃದ್ಧಿಸಲಿ ಎಂದು ಅನ್ನ ನೀಡುವ ಭೂ ಮಾತೆಗೆ ಪೂಜೆಸಲ್ಲಿಸಿ ನೈವೇದ್ಯ ರೂಪದಲ್ಲಿ ಚರಗ ಚೆಲ್ಲುವ ಹಬ್ಬ. ಆಧುನಿಕತೆಯ ಭರಾಟೆಯಲ್ಲಿಯೂ ಗ್ರಾಮೀಣ ಸೊಗಡಿನ ಹಬ್ಬಗಳು ಅನ್ನದಾತರು ಮರೆತಿಲ್ಲ. ಇತ್ತ ಯಾದಗಿರಿ ತಾಲೂಕಿನ ಹೆಡಗಿಮುದ್ರ ಗ್ರಾಮದಲ್ಲಿ ಎಳ್ಳಮಾವಾಸ್ಯೆಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.

ಎಳ್ಳಮಾವಾಸ್ಯೆ ಕೃಷಿಕರ ಬಹು ದೊಡ್ಡ ಹಬ್ಬ. ಎಲ್ಲೆಡೆ ಸಮೃದ್ಧ ವೃದ್ಧಿಸಲಿ ಎಂದು ಅನ್ನ ನೀಡುವ ಭೂ ಮಾತೆಗೆ ಪೂಜೆಸಲ್ಲಿಸಿ ನೈವೇದ್ಯ ರೂಪದಲ್ಲಿ ಚರಗ ಚೆಲ್ಲುವ ಹಬ್ಬ. ಆಧುನಿಕತೆಯ ಭರಾಟೆಯಲ್ಲಿಯೂ ಗ್ರಾಮೀಣ ಸೊಗಡಿನ ಹಬ್ಬಗಳು ಅನ್ನದಾತರು ಮರೆತಿಲ್ಲ. ಇತ್ತ ಯಾದಗಿರಿ ತಾಲೂಕಿನ ಹೆಡಗಿಮುದ್ರ ಗ್ರಾಮದಲ್ಲಿ ಎಳ್ಳಮಾವಾಸ್ಯೆಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.

2 / 6
ವರ್ಷಕ್ಕೊಮ್ಮೆ ಬರುವ ಎಳ್ಳಮಾವಾಸ್ಯೆಯಂದು ಮಹಿಳೆಯರು ನಸುಕಿನ ಜಾವ ಎದ್ದು ನೈವೇದ್ಯಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳುತ್ತಾರೆ. ವಿವಿಧ ಖಾದ್ಯಗಳನ್ನ ತಯಾರಿಸುತ್ತಾರೆ. ವಿಶೇಷವಾಗಿ ಹೊಳಿಗೆ, ಕಡಬು, ಭರ್ತಿ, ಬಜ್ಜಿ, ಪುಂಡೆ ಪಲ್ಲೆ, ಹಸಿ ಇರುಳ್ಳಿ ಚಟ್ನಿ ಸೇರಿದಂತೆ ನಾನಾ ರೀತಿಯ ತಿಂಡಿತಿನಿಸುಗಳನ್ನ ಸಿದ್ದಪಡಿಸುತ್ತಾರೆ. ಇತ್ತ ಮನೆಯ ಗಂಡು ಮಕ್ಕಳು ತಮ್ಮ ಎತ್ತು ಹಾಗೂ ಎತ್ತಿನ ಬಂಡಿಯನ್ನು ಸಿಂಗರಿಸುತ್ತಾರೆ.

ವರ್ಷಕ್ಕೊಮ್ಮೆ ಬರುವ ಎಳ್ಳಮಾವಾಸ್ಯೆಯಂದು ಮಹಿಳೆಯರು ನಸುಕಿನ ಜಾವ ಎದ್ದು ನೈವೇದ್ಯಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳುತ್ತಾರೆ. ವಿವಿಧ ಖಾದ್ಯಗಳನ್ನ ತಯಾರಿಸುತ್ತಾರೆ. ವಿಶೇಷವಾಗಿ ಹೊಳಿಗೆ, ಕಡಬು, ಭರ್ತಿ, ಬಜ್ಜಿ, ಪುಂಡೆ ಪಲ್ಲೆ, ಹಸಿ ಇರುಳ್ಳಿ ಚಟ್ನಿ ಸೇರಿದಂತೆ ನಾನಾ ರೀತಿಯ ತಿಂಡಿತಿನಿಸುಗಳನ್ನ ಸಿದ್ದಪಡಿಸುತ್ತಾರೆ. ಇತ್ತ ಮನೆಯ ಗಂಡು ಮಕ್ಕಳು ತಮ್ಮ ಎತ್ತು ಹಾಗೂ ಎತ್ತಿನ ಬಂಡಿಯನ್ನು ಸಿಂಗರಿಸುತ್ತಾರೆ.

3 / 6
ಕುಟುಂಬಸ್ಥರೆಲ್ಲಾ ಸೇರಿ ಬನ್ನಿ ಮರ ಹಾಗೂ ಭೂಮಿ ತಾಯಿಗೆ ಪೂಜೆಯನ್ನ ಸಲ್ಲಿಸುತ್ತಾರೆ. ತಾವು ತಂದ ನೈವೆೇದ್ಯವನ್ನು ಅರ್ಪಿಸುತ್ತಾರೆ. ಐದು ಸಣ್ಣ ಕಲ್ಲಿನ ತುಕ್ಕಡಿಗಳನ್ನ ತಂದಿಟ್ಟು ಪಾಂಡವರು ಅಂತ ಭಾವಿಸಿ ವಿಶೇಷ ರೀತಿಯಲ್ಲಿ ಪೂಜೆಯನ್ನ ಸಲ್ಲಿಸುತ್ತಾರೆ. ಬಳಿಕ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳಿಗೆ ನೈವೇದ್ಯ ತಿನ್ನಿಸಲಾಗುತ್ತೆ. ಇದಾದ ಬಳಿಕವೇ ರೈತರು ನೈವೇದ್ಯವನ್ನ ಜಮೀನಿನಲ್ಲಿ ಬೆಳೆಗೆ ಚಲ್ಲುತ್ತಾರೆ ಅದಕ್ಕೆ ಚರಗ ಚೆಲ್ಲುವುದು ಅಂತ ಹೇಳಲಾಗುತ್ತೆ.

ಕುಟುಂಬಸ್ಥರೆಲ್ಲಾ ಸೇರಿ ಬನ್ನಿ ಮರ ಹಾಗೂ ಭೂಮಿ ತಾಯಿಗೆ ಪೂಜೆಯನ್ನ ಸಲ್ಲಿಸುತ್ತಾರೆ. ತಾವು ತಂದ ನೈವೆೇದ್ಯವನ್ನು ಅರ್ಪಿಸುತ್ತಾರೆ. ಐದು ಸಣ್ಣ ಕಲ್ಲಿನ ತುಕ್ಕಡಿಗಳನ್ನ ತಂದಿಟ್ಟು ಪಾಂಡವರು ಅಂತ ಭಾವಿಸಿ ವಿಶೇಷ ರೀತಿಯಲ್ಲಿ ಪೂಜೆಯನ್ನ ಸಲ್ಲಿಸುತ್ತಾರೆ. ಬಳಿಕ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳಿಗೆ ನೈವೇದ್ಯ ತಿನ್ನಿಸಲಾಗುತ್ತೆ. ಇದಾದ ಬಳಿಕವೇ ರೈತರು ನೈವೇದ್ಯವನ್ನ ಜಮೀನಿನಲ್ಲಿ ಬೆಳೆಗೆ ಚಲ್ಲುತ್ತಾರೆ ಅದಕ್ಕೆ ಚರಗ ಚೆಲ್ಲುವುದು ಅಂತ ಹೇಳಲಾಗುತ್ತೆ.

4 / 6
ಚರಗ ಏಕೆ ಚೆಲ್ಲುತ್ತಾರೆ ಅಂದರೆ ಜಮೀನಿನಲ್ಲಿ ಬೆಳೆದ ಬೆಳೆ ಚೆನ್ನಾಗಿ ಫಲ ನೀಡಲಿ ಅಂತ ಭೂ ತಾಯಿಗೆ ಬೇಡಿಕೊಂಡು ಚರಗ ಚೆಲ್ಲಲಾಗುತ್ತೆ. ಚರಗ ಚೆಲ್ಲಿದ ಬಳಿಕ ಕುಟುಂಬಸ್ಥರೆಲ್ಲರು ಸೇರಿ ಒಂದೆಡೆ ಕುಳಿತುಕೊಂಡು ಊಟ ಸವಿಯುತ್ತಾರೆ. ವಿಶೇಷವಾಗಿ ಓದಲು ಅಥವಾ ಕೆಲಸ ಮಾಡಲು ದೂರದ ಊರುಗಳಿಗೆ ಹೋದವರು ಈ ಹಬ್ಬಕ್ಕೆ ತಪ್ಪದೆ ಹಾಜರಾಗುತ್ತಾರೆ. 

ಚರಗ ಏಕೆ ಚೆಲ್ಲುತ್ತಾರೆ ಅಂದರೆ ಜಮೀನಿನಲ್ಲಿ ಬೆಳೆದ ಬೆಳೆ ಚೆನ್ನಾಗಿ ಫಲ ನೀಡಲಿ ಅಂತ ಭೂ ತಾಯಿಗೆ ಬೇಡಿಕೊಂಡು ಚರಗ ಚೆಲ್ಲಲಾಗುತ್ತೆ. ಚರಗ ಚೆಲ್ಲಿದ ಬಳಿಕ ಕುಟುಂಬಸ್ಥರೆಲ್ಲರು ಸೇರಿ ಒಂದೆಡೆ ಕುಳಿತುಕೊಂಡು ಊಟ ಸವಿಯುತ್ತಾರೆ. ವಿಶೇಷವಾಗಿ ಓದಲು ಅಥವಾ ಕೆಲಸ ಮಾಡಲು ದೂರದ ಊರುಗಳಿಗೆ ಹೋದವರು ಈ ಹಬ್ಬಕ್ಕೆ ತಪ್ಪದೆ ಹಾಜರಾಗುತ್ತಾರೆ. 

5 / 6
ಇತ್ತ ಗಡಿ ಜಿಲ್ಲೆ ಬೀದರ್​​ನಲ್ಲೂ ಎಳ್ಳಮಾವಾಸ್ಯೆ ಹಬ್ಬ ಸಡಗರ ಜೋರಾಗಿತ್ತು. ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಉಡಿ ತುಂಬಿದರು.

ಇತ್ತ ಗಡಿ ಜಿಲ್ಲೆ ಬೀದರ್​​ನಲ್ಲೂ ಎಳ್ಳಮಾವಾಸ್ಯೆ ಹಬ್ಬ ಸಡಗರ ಜೋರಾಗಿತ್ತು. ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಉಡಿ ತುಂಬಿದರು.

6 / 6
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ