Gadag News: ಹಗಲು ಕೆಇಬಿಯಲ್ಲಿ ದಿನಗೂಲಿ ಕೆಲಸ; ರಾತ್ರಿ ರೈತರ ಜಮೀನುಗಳಲ್ಲಿ ವಿದ್ಯುತ್ ತಂತಿ ಕಳ್ಳತನ; ಮೂವರ ಬಂಧನ

|

Updated on: Jun 23, 2023 | 5:17 PM

ಹಗಲಿನಲ್ಲಿ ಕೆಇಬಿ ಕೆಲಸ ಮಾಡಿ, ರಾತ್ರಿ ವೇಳೆ ರೈತರ ಜಮೀನುಗಳಲ್ಲಿ ಅಳವಡಿಸಿದ್ದ ಬೆಲೆ ಬಾಳುವ ಅಲ್ಯೂಮಿನಿಯಂ ತಂತಿಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸಿದ್ದಾರೆ.

Gadag News: ಹಗಲು ಕೆಇಬಿಯಲ್ಲಿ ದಿನಗೂಲಿ ಕೆಲಸ; ರಾತ್ರಿ ರೈತರ ಜಮೀನುಗಳಲ್ಲಿ ವಿದ್ಯುತ್ ತಂತಿ ಕಳ್ಳತನ; ಮೂವರ ಬಂಧನ
ಆರೋಪಿಗಳ ಬಂಧನ
Follow us on

ಗದಗ: ಹಗಲು ಕೆಇಬಿ(KEB)ಯಲ್ಲಿ ಕೆಲಸ ಮಾಡಿ, ರಾತ್ರಿ ಹೊತ್ತು ರೈತರ ಜಮೀನುಗಳಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿಗಳನ್ನ ಕಳ್ಳತನ(Theft) ಮಾಡುತ್ತಿದ್ದ ಮೂವರು ಕಳ್ಳರನ್ನ ಇದೀಗ ಲಕ್ಷ್ಮೇಶ್ವರ(Laxmeshwar) ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ ಶೆಟ್ಟಣ್ಣನವರ್​(31), ಜಗದೀಶ್​ ಹನಮಂತಪ್ಪ ಕನಕಮ್ಮನವರ(22), ತಿಪ್ಪಣ್ಣ ಮಲಕಪ್ಪ ಕಾಳೆ(31) ಬಂಧಿತ ಆರೋಪಿಗಳು. ಹೌದು ತಾಲೂಕಿನ ರೈತರ ಜಮೀನುಗಳಲ್ಲಿ ಹಾಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಲ್ಯೂಮಿನಿಯಂ ವಿದ್ಯುತ್ ತಂತಿಯನ್ನ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸುವ ಮೂಲಕ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ರೈತರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೆಲ ದಿನಗಳಿಂದ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ರೈತರ ಭೂಮಿಗಳಲ್ಲಿನ ಬೆಲೆಬಾಳುವ ಕೇಬಲ್, ವೈರ್‌ಗಳು ಕಳ್ಳತನವಾಗುತ್ತಿರುವ ಕುರಿತು ಹಲವು ದೂರುಗಳು ಬಂದಿದ್ದವು. ಈ ಹಿನ್ನಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಿಪಿಐ ಮಾರ್ಗದರ್ಶನದಲ್ಲಿ ಪಟ್ಟಣದ ಪಿಎಸ್‌ಐ ಯೊಸೆಫ್ ಜಮೂಲಾ, ವ್ಹಿ ಜಿ ಪವಾರ ನೇತೃತ್ವದ ಪೊಲೀಸರ ತಂಡ ಕಳ್ಳರ ಚಲನವಲನವನ್ನ ಪತ್ತೆ ಮಾಡಿ, ಅವರನ್ನು ಬಂಧಿಸುವಲ್ಲಿ ಇದೀಗ ಯಶಸ್ವಿಯಾಗಿದೆ.

ಇದನ್ನೂ ಓದಿ:Bengaluru News: ಬೈಕ್​ ಕಳ್ಳತನ ಮಾಡ್ತಿದ್ದ ಐವರ ಬಂಧನ; 20 ಲಕ್ಷ ರೂ. ಮೌಲ್ಯದ 22 ಬೈಕ್, ಒಂದು ಆಟೋ ಜಪ್ತಿ

ಮೂವರ ಕಳ್ಳರು ಬಂಧನ

ಖಚಿತ ಮಾಹಿತಿ ಮೇರೆಗೆ ಎಎಸ್‌ಐ ಎನ್​. ಎ ಮೌಲ್ವಿ, ಸಿಬ್ಬಂದಿಗಳಾದ ಎಂ ಡಿ ಲಮಾಣಿ, ಡಿ ಎಸ್ ನಧಾಪ್, ಜಿ ಆರ್ ಗ್ರಾಮಪುರೋಹಿತ ಅವರು ಹೂವಿನಶಿಗ್ಲಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಮೂವರು ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 880 ಕೆಜಿ ತೂಕದ ಅಂದಾಜು 2ಲಕ್ಷ 47 ಸಾವಿರ ರೂ ಬೆಲೆಬಾಳುವ ಅಲ್ಯೂಮಿನಿಯಂ ತಂತಿ ಮತ್ತು ಕೃತ್ಯಕ್ಕೆ ಬಳಸಿದ ಸುಮಾರು 2 ಲಕ್ಷ 50 ಸಾವಿರ ರೂಪಾಯಿಯ ಟಾಟಾ ಏಸ್ ವಾಹನವನ್ನ ಜಪ್ತಿ ಮಾಡಿದ್ದಾರೆ. ಇನ್ನು ತನಿಖೆ ವೇಳೆ ಇವರು ‘ ಜಿಲ್ಲೆಯ ಸಮೀಪದ ನಾರಾಯಣಪೂರ, ಸುಗ್ನಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ಕೃತ್ಯವನ್ನು ನಡೆಸಿರುವ ಬಗ್ಗೆ ತಿಳಿದು ಬಂದಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ