AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರ ಅದೂ-ಇದೂ ಫ್ರೀ ಅಂತಿದೆ, ಮೊದ್ಲು ಕುಡಿಯೋಕೆ ನೀರು ಕೊಡ್ಲಿ ಸಾಕು ಎಂದ ಮಹಿಳೆಯರು ಮತ್ತು ಪೊಲೀಸ್ ಅಧಿಕಾರಿ ನಡುವೆ ವಾಗ್ವಾದ, ಎಲ್ಲಿ?

ಗದಗ: ಮಳೆಗಾಲ ಶುರುವಾಗಿದೆ. ಆದ್ರೂ ಆ ಅವಳಿ ನಗರದಲ್ಲಿ ಜನರು ಹನಿ ನೀರಿಗಾಗಿ ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳಿಗೆ ನೀರು‌ ಕೊಡಿ ನೀರು ಕೊಡಿ ಅಂತ ಬೇಡಿಕೊಂಡ್ರು ಕ್ಯಾರೇ ಎಂದಿಲ್ಲ. ಹೀಗಾಗಿ ರೊಚ್ಚಿಗೆದ್ದ ಮಹಿಳೆಯರು ಖಾಲಿ‌ ಕೊಡಗಳ ಸಮೇತ ಬೀದಿಗಿಳಿದಿದ್ರು. ಆದ್ರೆ, ನೀರು ಕೇಳಿದ ಮಹಿಳೆಯರಿಗೆ ಪೊಲೀಸ್ರು ಅವಾಜ್ ಹಾಕಿದ್ದು, ಅವಳಿ ನಗರದ ಜನ್ರ ಕೋಪಕ್ಕೆ ಕಾರಣವಾಗಿದೆ...

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Jun 20, 2023 | 7:25 AM

Share
ಗದಗ: ಮಳೆಗಾಲ ಶುರುವಾಗಿದೆ. ಆದ್ರೂ ಆ ಅವಳಿ ನಗರದಲ್ಲಿ ಜನರು ಹನಿ ನೀರಿಗಾಗಿ ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳಿಗೆ ನೀರು‌ ಕೊಡಿ ನೀರು ಕೊಡಿ ಅಂತ ಬೇಡಿಕೊಂಡ್ರು ಕ್ಯಾರೇ ಎಂದಿಲ್ಲ. ಹೀಗಾಗಿ ರೊಚ್ಚಿಗೆದ್ದ ಮಹಿಳೆಯರು ಖಾಲಿ‌ ಕೊಡಗಳ ಸಮೇತ ಬೀದಿಗಿಳಿದಿದ್ರು. ಆದ್ರೆ, ನೀರು ಕೇಳಿದ ಮಹಿಳೆಯರಿಗೆ ಪೊಲೀಸ್ರು ಅವಾಜ್ ಹಾಕಿದ್ದು, ಅವಳಿ ನಗರದ ಜನ್ರ ಕೋಪಕ್ಕೆ ಕಾರಣವಾಗಿದೆ...

ಗದಗ: ಮಳೆಗಾಲ ಶುರುವಾಗಿದೆ. ಆದ್ರೂ ಆ ಅವಳಿ ನಗರದಲ್ಲಿ ಜನರು ಹನಿ ನೀರಿಗಾಗಿ ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳಿಗೆ ನೀರು‌ ಕೊಡಿ ನೀರು ಕೊಡಿ ಅಂತ ಬೇಡಿಕೊಂಡ್ರು ಕ್ಯಾರೇ ಎಂದಿಲ್ಲ. ಹೀಗಾಗಿ ರೊಚ್ಚಿಗೆದ್ದ ಮಹಿಳೆಯರು ಖಾಲಿ‌ ಕೊಡಗಳ ಸಮೇತ ಬೀದಿಗಿಳಿದಿದ್ರು. ಆದ್ರೆ, ನೀರು ಕೇಳಿದ ಮಹಿಳೆಯರಿಗೆ ಪೊಲೀಸ್ರು ಅವಾಜ್ ಹಾಕಿದ್ದು, ಅವಳಿ ನಗರದ ಜನ್ರ ಕೋಪಕ್ಕೆ ಕಾರಣವಾಗಿದೆ...

1 / 7
ಕುಡಿಯುವ ನೀರಿಗಾಗಿ ಖಾಲಿ‌ ಕೊಡಗಳ ಸಮೇತ ನೀರೆಯರ ಹೋರಾಟ. ರಸ್ತೆಯಲ್ಲಿ ಖಾಲಿ‌ ಕೊಡಗಳನ್ನು ಮತ್ತು ಕಲ್ಲುಗಳನ್ನಿಟ್ಟು ಮಹಿಳೆಯರು ಪ್ರತಿಭಟನೆ‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರ ಪ್ರತಿಭಟನೆಗೆ ಪೊಲೀಸರಿಂದ ತಡೆ. ಆ ವೇಳೆ ಪೊಲೀಸ್ರು, ಮಹಿಳೆಯರ ನಡುವೆ ವಾಗ್ವಾದ. ಸರ್ ನೀರು ಕೊಟ್ರೆ ನಾವ್ಯಾಕೇ ಬೀದಿಗೆ ಬರ್ತೀವಿ ಅಂತ ಮಹಿಳೆಯರ ಆಕ್ರೋಶ. ಎಸ್ ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ ನಗರದ ಚೆನ್ನಮ್ಮ ಸರ್ಕಲ್ ನಲ್ಲಿ.

ಕುಡಿಯುವ ನೀರಿಗಾಗಿ ಖಾಲಿ‌ ಕೊಡಗಳ ಸಮೇತ ನೀರೆಯರ ಹೋರಾಟ. ರಸ್ತೆಯಲ್ಲಿ ಖಾಲಿ‌ ಕೊಡಗಳನ್ನು ಮತ್ತು ಕಲ್ಲುಗಳನ್ನಿಟ್ಟು ಮಹಿಳೆಯರು ಪ್ರತಿಭಟನೆ‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರ ಪ್ರತಿಭಟನೆಗೆ ಪೊಲೀಸರಿಂದ ತಡೆ. ಆ ವೇಳೆ ಪೊಲೀಸ್ರು, ಮಹಿಳೆಯರ ನಡುವೆ ವಾಗ್ವಾದ. ಸರ್ ನೀರು ಕೊಟ್ರೆ ನಾವ್ಯಾಕೇ ಬೀದಿಗೆ ಬರ್ತೀವಿ ಅಂತ ಮಹಿಳೆಯರ ಆಕ್ರೋಶ. ಎಸ್ ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ ನಗರದ ಚೆನ್ನಮ್ಮ ಸರ್ಕಲ್ ನಲ್ಲಿ.

2 / 7
ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ತಿಂಗಳುಗಳು ಕಳೆದ್ರೂ ಕುಡಿಯುವ ನೀರು ಪೂರೈಕೆ ಆಗ್ತಾಯಿಲ್ಲ. ಬಹತೇಕ ವಾರ್ಡ್ ಗಳಲ್ಲಿ‌ ನೀರಿನ ಬವಣೆಗೆ ಜನ್ರು ಹೈರಾಣಾಗಿದ್ದಾರೆ. ಇಂದು 33ನೇ ವಾರ್ಡ್ ಜನ್ರು ದಿಢೀರ್ ಖಾಲಿ ಕೊಡಗಳ ಸಮೇತ ಬೀದಿಗಿಳಿದು ಪ್ರತಿಭಟನೆ‌ ಮಾಡಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್ ಬಂದಿದ್ದು, ಪ್ರತಿಭಟನಾಕಾರರು ಆ್ಯಂಬುಲೆನ್ಸ್ ಗೆ ದಾರಿ ಬಿಟ್ಟಿದ್ದಾರೆ. ಆದ್ರೆ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ದರ್ಪಕ್ಕೆ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ನೀರು ಕೊಟ್ರೆ ನಾವ್ಯಾಕೇ ರಸ್ತೆ ತಡೆ ಮಾಡ್ತೀವಿ. ಪೊಲೀಸ್ ಅಧಿಕಾರಿ ದರ್ಪಕ್ಕೆ ಮಹಿಳೆಯರು ಕೆಂಡಾಮಂಡಲವಾಗಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ತಿಂಗಳುಗಳು ಕಳೆದ್ರೂ ಕುಡಿಯುವ ನೀರು ಪೂರೈಕೆ ಆಗ್ತಾಯಿಲ್ಲ. ಬಹತೇಕ ವಾರ್ಡ್ ಗಳಲ್ಲಿ‌ ನೀರಿನ ಬವಣೆಗೆ ಜನ್ರು ಹೈರಾಣಾಗಿದ್ದಾರೆ. ಇಂದು 33ನೇ ವಾರ್ಡ್ ಜನ್ರು ದಿಢೀರ್ ಖಾಲಿ ಕೊಡಗಳ ಸಮೇತ ಬೀದಿಗಿಳಿದು ಪ್ರತಿಭಟನೆ‌ ಮಾಡಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್ ಬಂದಿದ್ದು, ಪ್ರತಿಭಟನಾಕಾರರು ಆ್ಯಂಬುಲೆನ್ಸ್ ಗೆ ದಾರಿ ಬಿಟ್ಟಿದ್ದಾರೆ. ಆದ್ರೆ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ದರ್ಪಕ್ಕೆ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ನೀರು ಕೊಟ್ರೆ ನಾವ್ಯಾಕೇ ರಸ್ತೆ ತಡೆ ಮಾಡ್ತೀವಿ. ಪೊಲೀಸ್ ಅಧಿಕಾರಿ ದರ್ಪಕ್ಕೆ ಮಹಿಳೆಯರು ಕೆಂಡಾಮಂಡಲವಾಗಿದ್ದಾರೆ.

3 / 7
ಸರ್ಕಾರ ಬಸ್ ಫ್ರೀ, ಅಕ್ಕಿ ಫ್ರೀ ಅಂತಿದೆ. ಮೊದ್ಲು ನಮಗೆ ಕುಡಿಯೋಕೆ ನೀರು ಕೊಡ್ಲಿ ಸಾಕು ಅಂತ ನಾರಿಯರು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸ್ ದರ್ಪಕ್ಕೆ ಮಹಿಳೆಯರು ಗರಂ ಆಗಿದ್ದಾರೆ. ಗದಗ ನಗರಸಭೆ ಅಧಿಕಾರಿಗಳಿಗೆ ಹೇಳೋರೋ‌ ಕೇಳೋರು ಇಲ್ಲದಂತಾಗಿದೆ. ಕುಡಿಯುವ ನೀರು ಕೊಡಿ ಅಂತ ಅಧಿಕಾರಿಗಳು, ಸದಸ್ಯರಿಗೆ ಜನ್ರು ಮನವಿ ಮಾಡಿದ್ರೂ ಕ್ಯಾರೇ ಎಂದಿಲ್ಲ.

ಸರ್ಕಾರ ಬಸ್ ಫ್ರೀ, ಅಕ್ಕಿ ಫ್ರೀ ಅಂತಿದೆ. ಮೊದ್ಲು ನಮಗೆ ಕುಡಿಯೋಕೆ ನೀರು ಕೊಡ್ಲಿ ಸಾಕು ಅಂತ ನಾರಿಯರು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸ್ ದರ್ಪಕ್ಕೆ ಮಹಿಳೆಯರು ಗರಂ ಆಗಿದ್ದಾರೆ. ಗದಗ ನಗರಸಭೆ ಅಧಿಕಾರಿಗಳಿಗೆ ಹೇಳೋರೋ‌ ಕೇಳೋರು ಇಲ್ಲದಂತಾಗಿದೆ. ಕುಡಿಯುವ ನೀರು ಕೊಡಿ ಅಂತ ಅಧಿಕಾರಿಗಳು, ಸದಸ್ಯರಿಗೆ ಜನ್ರು ಮನವಿ ಮಾಡಿದ್ರೂ ಕ್ಯಾರೇ ಎಂದಿಲ್ಲ.

4 / 7
ಹೀಗಾಗಿ ಕೋಪಗೊಂಡ‌ ಮಹಿಳೆಯರು ರಸ್ತೆ ಇಳಿದು ಹೋರಾಟ ಮಾಡಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಒಂದು ತಿಂಗಳಿಂದ ಕುಡಿಯುವ ನೀರು ಪೂರೈಕೆ ಇಲ್ಲದೇ 33ನೇ ವಾರ್ಡ್ ಜನ್ರು ಕಂಗಾಲಾಗಿದ್ದಾರೆ. ನೀರು ಕೇಳಲು ಬಂದ ಮಹಿಳೆಯರಿಗೆ ಪೊಲೀಸ್ ಅಧಿಕಾರಿಗಳು ಅವಾಜ್ ಹಾಕಿದ್ದಾರೆ. ಗದಗ ಶಹರ್ ಪೊಲೀಸ್ ಠಾಣೆ ಸಿಪಿಐ ಜಯಂತ್ ಗೌಳಿ ಇನ್ಮೊಮ್ಮೆ ಬೀದಿಗೆ ಬಂದ್ರೆ ನೀರು ತರುವ ಗಾಡಿಗಳು ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳ ವರ್ತನೆ ಅವಳಿ ನಗರದ ಜನ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಹೀಗಾಗಿ ಕೋಪಗೊಂಡ‌ ಮಹಿಳೆಯರು ರಸ್ತೆ ಇಳಿದು ಹೋರಾಟ ಮಾಡಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಒಂದು ತಿಂಗಳಿಂದ ಕುಡಿಯುವ ನೀರು ಪೂರೈಕೆ ಇಲ್ಲದೇ 33ನೇ ವಾರ್ಡ್ ಜನ್ರು ಕಂಗಾಲಾಗಿದ್ದಾರೆ. ನೀರು ಕೇಳಲು ಬಂದ ಮಹಿಳೆಯರಿಗೆ ಪೊಲೀಸ್ ಅಧಿಕಾರಿಗಳು ಅವಾಜ್ ಹಾಕಿದ್ದಾರೆ. ಗದಗ ಶಹರ್ ಪೊಲೀಸ್ ಠಾಣೆ ಸಿಪಿಐ ಜಯಂತ್ ಗೌಳಿ ಇನ್ಮೊಮ್ಮೆ ಬೀದಿಗೆ ಬಂದ್ರೆ ನೀರು ತರುವ ಗಾಡಿಗಳು ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳ ವರ್ತನೆ ಅವಳಿ ನಗರದ ಜನ್ರ ಅಸಮಾಧಾನಕ್ಕೆ ಕಾರಣವಾಗಿದೆ.

5 / 7
ಸರ್ಕಾರ ಅದೂ-ಇದೂ ಫ್ರೀ ಅಂತಿದೆ, ಮೊದ್ಲು ಕುಡಿಯೋಕೆ ನೀರು ಕೊಡ್ಲಿ ಸಾಕು ಎಂದ ಮಹಿಳೆಯರು ಮತ್ತು ಪೊಲೀಸ್ ಅಧಿಕಾರಿ ನಡುವೆ ವಾಗ್ವಾದ, ಎಲ್ಲಿ?

6 / 7
ನೀರು ಇಲ್ಲಾ ಅಂತ ರಸ್ತೆ ತಡೆ ಮಾಡಿದ್ದೇವೆ. ಆದ್ರೆ, ನೀರು ಕೇಳಿದ್ರೆ ಪೊಲೀಸ್ರು ಅವಾಜ್ ಹಾಕ್ತಾರೆ. ಇನ್ನೂ ಚುನಾವಣೆಯಲ್ಲಿ ಕೈ ಮುಗಿದು ಮತ ಕೇಳಿದ್ರು. ಆದ್ರೆ ಈಗ ನಮಗೆ ನೀರು ಕೊಡ್ತಿಲ್ಲ ಅಂತ ಮಹಿಳೆಯರ ಕಿಡಿಕಾರಿದ್ದಾರೆ.‌ ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನಗರಸಭೆ ಆಡಳಿತಕ್ಕೆ ಬಿಸಿ ಮುಟ್ಟಿಸಿ ಜನ್ರಿಗೆ ನೀರು‌ ಕೊಡಿಸುವಂತೆ ಮಾಡಲಿ ಅಂತ ಮಹಿಳೆಯರು ಒತ್ತಾಯಿಸಿದ್ದಾರೆ.

ನೀರು ಇಲ್ಲಾ ಅಂತ ರಸ್ತೆ ತಡೆ ಮಾಡಿದ್ದೇವೆ. ಆದ್ರೆ, ನೀರು ಕೇಳಿದ್ರೆ ಪೊಲೀಸ್ರು ಅವಾಜ್ ಹಾಕ್ತಾರೆ. ಇನ್ನೂ ಚುನಾವಣೆಯಲ್ಲಿ ಕೈ ಮುಗಿದು ಮತ ಕೇಳಿದ್ರು. ಆದ್ರೆ ಈಗ ನಮಗೆ ನೀರು ಕೊಡ್ತಿಲ್ಲ ಅಂತ ಮಹಿಳೆಯರ ಕಿಡಿಕಾರಿದ್ದಾರೆ.‌ ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನಗರಸಭೆ ಆಡಳಿತಕ್ಕೆ ಬಿಸಿ ಮುಟ್ಟಿಸಿ ಜನ್ರಿಗೆ ನೀರು‌ ಕೊಡಿಸುವಂತೆ ಮಾಡಲಿ ಅಂತ ಮಹಿಳೆಯರು ಒತ್ತಾಯಿಸಿದ್ದಾರೆ.

7 / 7
Sanjeev Pandre
Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Follow Us
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು