ದಿಢೀರ್ ಹರಿದ ಹೈವೋಲ್ಟೇಜ್ ವಿದ್ಯುತ್​ಗೆ 20 ಕ್ಕೂ ಹೆಚ್ಚು ಟಿವಿ, ಇನ್ನಿತರ ವಸ್ತುಗಳು ಬ್ಲಾಸ್ಟ್ 

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 01, 2023 | 3:58 PM

ನಿನ್ನೆ(ಸೆ.30) ರಾತ್ರಿ ಮನೆಯಲ್ಲಿ ಟಿವಿ ನೋಡುತ್ತಿರುವಾಗ ಇದ್ದಕ್ಕಿದ್ದಂತೆ ಹೈವೋಲ್ಟೇಜ್ ವಿದ್ಯುತ್ ಬಂದಿದ್ದು, ಇದರಿಂದ ಟಿವಿಗಳು ಸೇರಿದಂತೆ ಇನ್ನಿತರ ವಸ್ತುಗಳು ಬ್ಲಾಸ್ಟ್ ಆದ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯಲ್ಲಿ ನಡೆದಿದೆ.

ದಿಢೀರ್ ಹರಿದ ಹೈವೋಲ್ಟೇಜ್ ವಿದ್ಯುತ್​ಗೆ 20 ಕ್ಕೂ ಹೆಚ್ಚು ಟಿವಿ, ಇನ್ನಿತರ ವಸ್ತುಗಳು ಬ್ಲಾಸ್ಟ್ 
ಹೈವೋಲ್ಟೇಜ್ ವಿದ್ಯುತ್​ಗೆ 20 ಕ್ಕೂ ಹೆಚ್ಚು ಟಿವಿ ಬ್ಲಾಸ್ಟ್​
Follow us on

ಗದಗ, ಅ.01: ದಿಢೀರ್ ಹೈವೋಲ್ಟೇಜ್ ವಿದ್ಯುತ್(High-Voltage Power) ಹರಿದ ಪರಿಣಾಮ 20 ಕ್ಕೂ ಹೆಚ್ಚು ಟಿವಿಗಳು, ಹಾಗೂ ಹಲವಾರು ಗೃಹೋಪಯೋಗಿ ವಸ್ತುಗಳು ಹಾಳಾಗಿರುವ ಘಟನೆ ಗದಗ(Gadag) ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯಲ್ಲಿ ನಡೆದಿದೆ. ನಿನ್ನೆ(ಸೆ.30) ರಾತ್ರಿ ಮನೆಯಲ್ಲಿ ಟಿವಿ ನೋಡುತ್ತಿರುವಾಗ ಇದ್ದಕ್ಕಿದ್ದಂತೆ ಹೈವೋಲ್ಟೇಜ್ ವಿದ್ಯುತ್ ಬಂದಿದೆ. ಇದರಿಂದ ಟಿವಿಗಳು ಸೇರಿದಂತೆ ಇನ್ನಿತರ ವಸ್ತುಗಳು ಬ್ಲಾಸ್ಟ್ ಆಗಿವೆ. ಇನ್ನು ಟಿವಿ ಬ್ಲಾಸ್ಟ್ ಆಗುತ್ತಿದ್ದಂತೆ ಮನೆ ಮಂದಿಯೆಲ್ಲಾ ಭಯಭೀತರಾಗಿ ಹೊರಗಡೆ ಓಡಿ ಬಂದಿದ್ದಾರೆ. ಮನೆಯಲ್ಲಿ ಕತ್ತಲು ಆವರಿಸಿ ಹೊಗೆಯಿಂದ ತುಂಬಿದ್ದು, ಹೀಗೆ ಹಲವಾರು ಮನೆಗಳಲ್ಲಿ ಈ ರೀತಿ ಅವಘಡ ಸಂಭವಿಸಿದೆ.

ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ

ಇನ್ನು ಈ ಘಟನೆಯಿಂದ ಆಕ್ರೋಶಗೊಂಡ ಮನೆ ಮಾಲೀಕರು, ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ‌ ಅವಘಡಕ್ಕೆ ಹೆಸ್ಕಾಂ ಅವರೇ ನೇರ ಹೊಣೆಯಾಗಿದ್ದು, ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ, ಹಾಳಾಗಿರುವ ಗೃಹೋಪಯೋಗಿ ವಸ್ತುಗಳ ರಿಪೇರಿಗಾಗಿ ಪರಿಹಾರ ಒದಗಿಸಬೇಕು.‌ಇಲ್ಲದೇ ಇದ್ದರೆ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ ಘಟನೆ ನಡೆದಿದ್ದು, ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕುಸಿದ ವಿದ್ಯುತ್‌ ಉತ್ಪಾದನೆ; ಇಂಧನ ಇಲಾಖೆಯ ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

ವಿದ್ಯುತ್ ತಂತಿ ತಗುಲಿ ರೈತ ದಂಪತಿಗಳಿಬ್ಬರ ಸಾವು

ಬೀದರ್: ಇನ್ನು ಬೀದರ್​ ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ರೈತ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಮಲ್ಲಿಕಾರ್ಜುನ (61) ಹಾಗೂ ಶರಣಮ್ಮ (50) ಸಾವಿಗೀಡಾದ ದಂಪತಿಗಳು. ಇವರು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕೈಗೆ ತಗಲುವ ಹಾಗೆ  ವಿದ್ಯುತ್ ತಂತಿ ಜೋತುಬಿದ್ದಿದ್ದೆ. ಇದನ್ನು ಗಮನಿಸಿದೆ ವಿದ್ಯುತ್ ತಂತಿ ತಗುಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ